ಬೆಂಗಳೂರು; ನಟ ದರ್ಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಬೆನ್ನಲ್ಲೇ ಮಾಜಿ ಸಂಸದೆ ಸುಮಲತಾ ಅಂಬರೀಶ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಾನೂನು ವ್ಯವಸ್ಥೆಯಲ್ಲಿ ಏನೇನು ಕ್ರಮ ಆಗಬೇಕೋ ಅದು ಆಗಲಿ.ನಾನು ನನ್ನ ಫೋಸ್ಟ ನಲ್ಲಿ ಕ್ಲಾರಿಟಿ ಕೊಟ್ಟಿದ್ದೇನೆ.ನಾನು ಏನೇ ಮಾತಾಡಿದ್ರು ಪರ್ಸನಲ್ ಆಗಿ ಹಂಚಿಕೊಂಡ ವಿಷಯ ಅದು.ನಾನು ಪಾರ್ಟಿ ಪರವಾಗಿ ಮಾತಾಡಿದ್ದಲ್ಲ.ದರ್ಶನ್ ತಾಯಿ, ತಮ್ಮ, ಪತ್ನಿಯಾಗಲಿ, ಅವರು ಯಾವ ರೀತಿ ಕುಗ್ಗಿದ್ದಾರೆ ಎಂದು ಗೊತ್ತಿದೆ.ಅವರ ಜೊತೆಗೆ ನಾನು ಮಾತಾಡಿದ್ದೇನೆ.ಇದೆಲ್ಲವನ್ನು ಪಬ್ಲಿಕ್ ನಲ್ಲಿ ಮಾತಾಡಬಾರದು.ಆದರೆ ನನ್ನ ಮೌನವನ್ನು ಕೆಲವರೇ ಗೊಂದಲ ಮೂಡಿಸ್ತಿದ್ರು. ಅದಕ್ಕಾಗಿ ನನ್ನ ನಿಲುವು ಏನೆಂದು ಇಂದು ಹಂಚಿಕೊಂಡಿದ್ದೇನೆ ಎಂದಿದ್ದಾರೆ.
ಕೋರ್ಟ್ ನಲ್ಲಿರುವ ವಿಷಯದ ಬಗ್ಗೆ ನಾವು ಯಾರು ಮಾತಾಡಬಾರದು.ಕಾನೂನಿಗಿಂತ ನಾವು ಯಾರು ದೊಡ್ಡವರಲ್ಲ.ಕಾನೂನಿಗೆ ಎಲ್ಲರೂ ತಲೆಬೇಕಾಗುತ್ತದೆ.ಆದರೆ ನಾನು ನೋಡಿರುವ ದರ್ಶನ್ ಬಗ್ಗೆ ಹೇಳಿದ್ದೇನೆ.ದರ್ಶನ್ ಮಾಡಿರುವ ಸಹಾಯದ ಬಗ್ಗೆ ನಾನು ನೋಡಿದ್ದೇನೆ.ಆದರೆ ಬೇರೆ ರೀತಿಯ ಬಗ್ಗೆ ನನಗೆ ಗೊತ್ತಿಲ್ಲ.ದರ್ಶನ್ ನನ್ನು ಮಗನಾಗಿ ನಾನು ತಾಯಿಯಾಗಿ ನೋಡಿದ್ದೇನೆ.ಸತ್ಯ ಹೊರಗೆ ಬರುವವರೆಗೆ ಕಾಯಬೇಕು.ಆರೋಪಿಯಾಗಿ ಅಪರಾಧಿಯಾಗಿ ನೋಡಬಾರದು.ಏನ್ ಮಾಡಿದ್ದಾರೆ ಏನ್ ಮಾಡಿಲ್ಲ ಎಂದು ಅಧಿಕೃತವಾಗಿ ಬರಲಿ.ಕಾನೂನಿನ ವಿರುದ್ಧವಾಗಿ ಮಾಡಲಿ ಎಂದು ನಾನು ಎಲ್ಲಿಯೂ ಹೇಳಿಲ್ಲ.ಮುಂದೆ ಕಾನೂನು ಏನು ಹೇಳುತ್ತೋ ಅದರಂತೆ ನಾವು ನಡೆಯಬೇಕು.ಒಬ್ಬ ತಾಯಿಯಾಗಿ ರೇಣುಕಾಸ್ವಾಮಿ ಪತ್ನಿ, ತಾಯಿ ಪರಿಸ್ಥಿತಿ ಕಂಡು ನನಗೂ ನೋವು ಆಗಿದೆಆದರೆ ಇದರಲ್ಲಿ ಯಾರು ಏನೇನು ಮಾಡಿದ್ದಾರೆ ಎಂದು ಮುಂದೆ ಗೊತ್ತಾಗಬೇಕು.ಪೊಲೀಸ್ ಹಾಗೂ ಕಾನೂನಿನ ಮೇಲೆ ನನಗೆ ನಂಬಿಕೆ ಇದೆ.ನನ್ನ ಫೋಸ್ಟ್ ನಲ್ಲೂ ಅಭಿಮಾನಿ ಗಳಿಗೆ ಮನವಿ ಮಾಡಿದ್ದೇನೆ.ಯಾರಿಗೂ ಯಾರು ನೋಯಿಸುವ ರೀತಿ ಮಾತಾಡಬಾರದು.ನಮ್ಮಲ್ಲಿ ನಾವೇ ಧೈರ್ಯ ತುಂಬಿಕೊಂಡು ನಾನು ಬರಲೇಬೇಕಾಗಿತ್ತು.ನನಗೆ ಹತ್ತಿರವಾದ ವ್ಯಕ್ತಿ ಬಗ್ಗೆ ನಾನು ಮಾತಾಡಲೇಬೇಕಾಗಿತ್ತು.ಇದು ಆಗಬಾರದಿತ್ತು, ಘಟನೆ ನಡೆದು ಹೋಗಿದೆ ಎಂದು ಸುಮಲತಾ ಹೇಳಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆ ಪರಪ್ಪರ ಅಗ್ರಹಾರದಲ್ಲಿದ್ದ ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿದ್ದ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಎಸ್ ಪಿಪಿ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡುವಂತೆ ಎಸ್ ಪಿಪಿ ರಿಮ್ಯಾಂಡ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಅದರಂತೆ ನ್ಯಾಯಾಧೀಶರು ಆರೋಪಿಗಳಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಹಾಗಾಗಿ ಸದ್ಯಕ್ಕಂತೂ ಆರೋಪಿಗಳಿಗೆ ಜೈಲೇ ಗತಿ ಎಂಬಂತಾಗಿದೆ.