ಮನೆ Latest News ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಬದಲಾಗದೆ ಇದ್ರೆ ಪಕ್ಷಕ್ಕೆ ಸಂಕಷ್ಟ ಬರಲಿದೆ; ಬೆಂಗಳೂರಿನಲ್ಲಿ‌ ಕುಮಾರ್ ಬಂಗಾರಪ್ಪ ಹೇಳಿಕೆ

ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಬದಲಾಗದೆ ಇದ್ರೆ ಪಕ್ಷಕ್ಕೆ ಸಂಕಷ್ಟ ಬರಲಿದೆ; ಬೆಂಗಳೂರಿನಲ್ಲಿ‌ ಕುಮಾರ್ ಬಂಗಾರಪ್ಪ ಹೇಳಿಕೆ

0

ಬೆಂಗಳೂರು: ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಇಂದು ತಮ್ಮ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ವಿಜಯೇಂದ್ರ ಅಧ್ಯಕ್ಷಸ್ಥಾನದಿಂದ ಬದಲಾಗಬೇಕು ಅನ್ನೋದಕ್ಕೆ ಇನ್ನು ಬದ್ಧರಾಗಿದ್ದೇವೆ. ಬದಲಾಗದೆ ಇದ್ರೆ ಪಕ್ಷಕ್ಕೆ ಸಂಕಷ್ಟ ಬರಲಿದೆ ಎಂದರು.
ವಿಜಯೇಂದ್ರ ನಾಯಕತ್ವ ಒಪ್ಪದ ನಾಯಕರ ಜೊತೆ ಸೋಮಣ್ಣ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಧ್ಯಕ್ಷಸ್ಥಾನ ಬದಲಾವಣೆಗೆ ಬಗ್ಗೆ ಅಂತಿಮವಾಗಿ ವರಿಷ್ಠರು ನಿರ್ಧಾರ ಮಾಡಲಿದ್ದಾರೆ. ವ್ಯವಸ್ಥೆ ಬದಲಾಗಬೇಕು ಅನ್ನೋದು ಕಾರ್ಯಕರ್ತರ ಅಭಿಪ್ರಾಯ. ನಮ್ಮ ಹೋರಾಟದ ಉದ್ಧೇಶದಿಂದ ಹಿಂದೆ ಸರಿಯಲ್ಲ. ಮುಂಡಾ ವಿರುದ್ಧದ ಹೋರಾಟ ಸೀಮಿತವಾಗಿತ್ತು. ಎಲ್ಲಾ ಜಿಲ್ಲೆಗಳಲ್ಲೂ ಸೈಟ್ ಹಂಚಿಕೆ ವಿಚಾರದಲ್ಲೂ ಅಕ್ರಮವಾಗಿದೆ. ಅದರ ಬಗ್ಗೆ ಹೋರಾಟ ಮಾಡಲಿಲ್ಲ. ಹನಿಟ್ರ್ಯಾಪ್ ವಿಚಾರವಾಗಿಯೂ ಹೋರಾಟ ಮಾಡಲಿಲ್ಲ. ಒಳ ಒಪ್ಪಂದದ ರಾಜಕಾರಣ ಮಾಡಿ ಹೋರಾಟ ಮಾಡಿಲ್ಲ. ಈ ತರದ ರಾಜಕಾರಣಕ್ಕೆ ನಮ್ಮ ವಿರೋಧ. ನಾವು ಹೋರಾಟ ಮಾಡಿದ್ರೆ ನಮ್ಮ ಮೇಲೆ ಕೇಸ್ ಹಾಕಿಸ್ತಾರೆ. ನುಸುಳುಕೋರರ ವಿರುದ್ಧ ಹೋರಾಟ ಮಾಡಬೇಕಿತ್ತು ಮಾಡಲಿಲ್ಲ. ನೇರವಾದದಂತಹ ಹೋರಾಟ ಮಾಡುತ್ತಿಲ್ಲ. ಜನರ ಭಾವನೆಯಂತೆ ಪಕ್ಷ ಹೋರಾಟ ಮಾಡುತ್ತಿಲ್ಲ. ಹೈಕಮಾಂಡ್ ನಾಯಕರಿಗೆ ನಮ್ಮ ವಿಚಾರ ಮುಟ್ಟಿಸಿದ್ದೇವೆ. ಮುಂದೆ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ ಎಂದು ವಿಜಯೇಂದ್ರ ನಾಯಕತ್ವವನ್ನು ಕುಮಾರ್ ಬಂಗಾರಪ್ಪ ಮತ್ತೆ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಪ್ರಯತ್ನದಲ್ಲಿದ್ದಾರಾಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರ್ ಬಂಗಾರಪ್ಪ ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕ. ಅವರ ಅನುಭಕ್ಕೆ ಕೇಂದ್ರದ ಮಂತ್ರಿಗಳಾಗಿದ್ದಾರೆ. ರಾಜ್ಯಕ್ಕೆ ಬರಬೇಕು ಅನ್ನೋದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ. ನೀವೇ ಅಧ್ಯಕ್ಷರಾಗಿ ಎಂದು ನಾವೇನು ಒತ್ತಾಯ ಹಾಕಿಲ್ಲ. ನನಗೆ ಸಪೋರ್ಟ್ ಮಾಡಿ ಎಂಸು ಅವರೇನು ಒತ್ತಡ ಹಾಕಿಲ್ಲ ಎಂದರು. ಇದೇ ವೇಳೆ ಮಾತನಾಡಿದ ಅವರು ಬಿಎಸ್ ವೈ ಕಚೇರಿಗೆ ಬರುತ್ತಿರುವುದು ಒಳ್ಳೆಯ ಬೆಳವಣಿಗೆ.ವಿಜಯೇಂದ್ರ ಅನುಭವದ ಕೊರೆತೆ ಬಿಎಸ್ ವೈಗೆ ಗೊತ್ತಾಗಿರಬೇಕು. ಸಂಘಟನೆಯಲ್ಲಿ ಕೊರೆತೆಯಾಗಿದೆ ಎಂದು ಅನ್ನಿಸಿರಬೇಕು . ಹಾಗಾಗಿಯೇ ಬಿಎಸ್ ವೈ ಬಿಜೆಪಿ ಕಚೇರಿಗೆ ಬರುತ್ತಿದ್ದಾರೆ .ಅಮಿತ್ ಶಾ ಅವರು ದಾವಣಗೆರೆ ವಿಚಾರವನ್ನು ಪ್ರಸ್ತಾಪ‌ ಮಾಡಿದ್ದಾರೆ. ಅಮಿತ್ ಶಾ ಪ್ರಸ್ತಾಪ ಮಾಡಿದ್ದಾರೆ ಅಂದ್ರೆ ನಮ್ಮ ವಿಚಾರ ರೈಟ್ ಪಾಥ್ ನಲ್ಲಿದೆ ಎಂದು ಗೊತ್ತಾಗಿದೆ ಎಂದರು.
ಕರ್ನಾಟಕ ಸರಕಾರ ನಡವಳಿಕೆಯೇ ದುರಂತ. ಐಪಿಎಲ್ ದುರಂತಕ್ಕೆ‌ ಒಳಗಾದ ಕುಟುಂಬಗಳು ಸಂಕಷ್ಟದಲ್ಲಿವೆ. ಸರಿಯಾದ ಪರಿಹಾರ ಸಿಕ್ಕಿಲ್ಲ, ಸರಿಯಾಗಿ ತನಿಖೆ ಕೂಡ ನಡೆಯುತ್ತಿಲ್ಲ. ಕೆಲವು ಪೊಲೀಸರ ವಿರುದ್ಧ ಕ್ರಮ ಬಿಟ್ಟರೆ ಇನ್ನೇನು ಆಗಿಲ್ಲ.ಬೇರೆ ಇಲಾಖೆಯವರ ತಪ್ಪಿದ್ದರು ಕ್ರಮ ಆಗಿಲ್ಲ. ಡಿಪಿಎಆರ್ ಕಾರ್ಯದರ್ಶಿ ವಿರುದ್ಧವೂ ಕ್ರಮ ಆಗಿಲ್ಲ. ಮಂತ್ರಿಗಳ ವಿರುದ್ಧವೂ ಯಾವುದೇ ಕ್ರಮ ಆಗಿಲ್ಲ. ಕಪ್ ಮುದ್ದಾಡಿದ, ಹೆಚ್ ಎ ಎಲ್‌ಗೆ ಹೋಗಿದ್ದ ಮಂತ್ರಿ ವಿರುದ್ಧ ಕ್ರಮ ಆಗಿಲ್ಲ. ಸ್ವಾರ್ಥಕ್ಕೋಸ್ಕರ ಕಾರ್ಯಕ್ರಮ ಬಳಸಿಕೊಂಡಿದ್ದು ತಪ್ಪು. ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇತ್ತು ಎಂದು ತಿಳಿಸಿದ್ರು.
ಬಿ.ಆರ್ ಪಾಟೀಲ್‌, ಹೆಚ್.ಕೆ ಪಾಟೀಲ್ ಆರೋಪ ವಿಚಾರದ ಬಗ್ಗೆ ಮಾತನಾಡಿ ಸರಕಾರ ಹಳಿ ತಪ್ಪಿದೆ ಎನ್ನುವುದಕ್ಕೆ ಇದೆ ಸಾಕ್ಷಿ. ಗ್ರಾಮ ಪಂಚಾಯ್ತಿಗಳುಗೆ ನಯಾಪೈಸೆ ಕೊಟ್ಟಿಲ್ಲ. ಸಮರ್ಪಕವಾಗಿ ಸರಕಾರದಲ್ಲಿ ಕೆಲಸಗಳು ನಡೆಯುತ್ತಿಲ್ಲ. ಶಿಕ್ಷಣ ಇಲಾಖೆ‌ ಯರ್ರಾಬಿರ್ರಿಯಾಗಿ ಎಲ್ಲೆಲ್ಲೋ ಹೋಗಿದೆ. ವಿದ್ಯಾರ್ಥಿಗಳ ಸಾಧನೆಯನ್ನು ತನ್ನದೆ ಸಾಧನೆ ಅಂತ ಕ್ರೆಡಿಟ್ ತೆಗದುಕೊಳ್ಳುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್ ಸರಕಾರದಲ್ಲಿ ಹಗರಣಗಳೆ ಸಾಧನೆಯಾಗಿದೆ . ಇಸ್ರೆಲ್ ಹಾಗೂ ಇರಾನ್ ಯುದ್ಧದ‌ ಪರಿಣಾಮ ಭಾರತದ ಮೇಲೂ ಬೀರಲಿದೆ. ರಪ್ತು ಮತ್ತು ಆಮದು ವಿಚಾರದಲ್ಲಿ ಭಾರತಕ್ಕೆ ನಷ್ಟವಾಗಲಿದೆ. ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಿದರು.