ಬೆಂಗಳೂರು: ಆರ್ ಸಿಬಿ ಡ್ರೆಸ್ ಕಂಡರೆ ಭಯ ಪಡುವಂತಾಗಿದೆ, ರೆಡ್ ಡ್ರೆಸ್ ನೋಡಿದ್ರೆ ಓಡುವಂತಾಗಿದೆ ಎಂದು ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕಾಲ್ತುಳಿತ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರ ಆಗಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್ಡಿಕೆ ಟ್ವೀಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಸಿಎಂ ಅವರಿಗೇನೆ ಈ ಘಟನೆ ಗೊತ್ತಾಗಿಲ್ಲ. ಸಂಜೆ 5:30ರ ಸುಮಾರಿಗೆ ನಡೆದಿದೆ. ಪೊಲೀಸ್ ಅಧಿಕಾರಿಗಳು ಇದರ ಬಗ್ಗೆ ಮಾಹಿತಿ ನೀಡಬೇಕಿತ್ತು. ಸಂಜೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.
ಸಿಎಂ ನಾಳೆ ದೆಹಲಿಗೆ ಪ್ರಯಾಣ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಲ್ತುಳಿತ ಪ್ರಕರಣದ ವಿವರಣೆ ನೀಡಲು ಸಿಎಂ ಹೋಗ್ತಿರಬಹುದು. ಹೈಕಮಾಂಡ್ ಗೆ ವಿವರಣೆ ನೀಡೋದು ಸಿಎಂ ಡ್ಯೂಟಿ . ಘಟನೆ ಬಗ್ಗೆ ವಿಸ್ತಾರವಾಗಿ ವರದಿ ನೀಡಬೇಕು, ಯಾರಾದ್ರೂ ವರದಿ ನೀಡಬೇಕು . ಜೆಡಿಎಸ್, ಬಿಜೆಪಿ, ಸಾರ್ವಜನಿಕರು ಒಂದು ಹೇಳ್ತಾರೆ ಹಾಗಾಗಿ ಸರ್ಕಾರ ತನಿಖೆಗೆ ನೇಮಿಸಿದೆ. ಈ ಘಟನೆಯಲ್ಲಿ ಸಿಎಂಗೆ ಸರಿಯಾದ ಮಾಹಿತಿ ನೀಡಿಲ್ಲ ಎಂಬ ಮಾತಿದೆ .ಹಾಗಾಗಿ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ.ದಯಾನಂದ್ ಒಳ್ಳೆಯ ಅಧಿಕಾರಿ ಎಂದು ಬೆಂಗಳೂರು ಆಯುಕ್ತರನ್ನಾಗಿ ನೇಮಕ ಮಾಡಿದ್ರು ಎಂದರು.
ಮುಂಚೆಯೇ ಗೊತ್ತಾಗಿದ್ರೆ ಸಿಎಂ ಹೋಗ್ತಿರಲಿಲ್ಲ. ಪೊಲೀಸರ ಲ್ಯಾಪ್ಸ್ ಯಾರದ್ದು ತಿಳಿಸಬೇಕು. ಕಮೀಷನರ್ ಗೆ ಹೇಗೆ ಗೊತ್ತಾಗುತ್ತದೆ?. ಕೆಳಗಿನನವರು ಅವರಿಗೆ ಹೇಳಿದ್ರೆ ತಾನೇ ಗೊತ್ತಾಗೋದು. ಬೆಳಗ್ಗೆ 10 ಗಂಟೆಗೆ ಸರ್ಕಾರ ಆದೇಶ ಮಾಡಿದೆ. ಕಾರ್ಯಕ್ರಮ ಮಾಡೋಕೆ ಅವಕಾಶ ನೀಡಿದೆ ಎಂದ್ರು. ಹೋಂ ಮಿನಿಸ್ಟರ್ ಗೂ ಗೊತ್ತಿರಲಿಲ್ಲವೆಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಳಗ್ಗೆ 10ಕ್ಕೆ ಡಿಪಿಆರ್ ನಿಂದ ಆದೇಶ ಆನಂತರ ಪೊಲೀಸ್ ಇಲಾಖೆಗೆ ತಿಳಿಸಬೇಕಿತ್ತು. ಗೃಹ ಸಚಿವರಿಗೆ ಪೊಲೀಸರು ಹೇಳಬೇಕಿತ್ತು. ನಮಗೆ ಘಟನೆಯಿಂದ ಕೆಟ್ಟ ಹೆಸರು ಬಂದಿದೆ. ಯಾರು ಮುಂದೆ ಮಾಡೋಕೆ ಹೋದ್ರು ಗೊತ್ತಿಲ್ಲ. ಯಾವುದಾದ್ರೂ ಏಜೆನ್ಸಿ ಹೇಳಬೇಕಲ್ಲ, ತನಿಖೆ ಮಾಡಿ ಹೇಳಬೇಕಲ್ಲ. ಸಿಎಂ ಅವರಿಗೆ ಹೇಳೋರು ಯಾರು?ಪೊಲೀಸರು ಅವರಿಗೆ ಹೇಳಬೇಕಲ್ವಾ?. ಸಿಎಂ ಅವರಿಗೆ ಗೊತ್ತಾಗಿದ್ದು 5:30ಕ್ಕೆ ಮೊದಲೇ ಗೊತ್ತಾಗಿದ್ರೆ ಕ್ರಮ ಕೈಗೊಳ್ತಿದ್ರು. ಪ್ರಕರಣದಿಂದ ಪಕ್ಷದಲ್ಲಿ ಏನೂ ಬೆಳವಣಿಗೆ ಆಗಲ್ಲ. ಯಾರು ಕ್ರೆಡಿಟ್ ತೆಗೆದುಕೊಳ್ಳೋಕೆ ಹೋದ್ರು?. ಡಿಕೆಶಿ ಬೆಂಗಳೂರು ಉಸ್ತುವಾರಿ ಸಚಿವರು ಆಟಗಾರರನ್ನ ವೆಲ್ ಕಂ ಮಾಡಲು ಹೋಗಿದ್ದಾರೆ. ಸಿಎಂ ಕ್ರಿಕೆಟ್ ನೊಡೋರು ಅಷ್ಟೇ ಅವರು ಆಡೋರು ಅಲ್ಲ ಡಿಸಿಎಂ ಆಡಬಹುದು. 15 ದಿನದಲ್ಲಿ ವರದಿ ಕೊಡಬಹುದು. ವರದಿ ಬಂದ ನಂತರ ಕ್ರಮ ಆಗುತ್ತೆ .ಏನಾಗಿದೆ ಗೊತ್ತಾಗುತ್ತದೆ. ವರದಿಯನ್ನ ಕೋರ್ಟಿಗೆ ಕೊಡಬೇಕಾಗುತ್ತದೆ. ಏನೇನಾಗಿದೆ ಅವರಿಗೆ ಹೇಳಬೇಕಾಗುತ್ತದೆ ಎಂದರು.
ಇನ್ನು ಇದೇ ವೇಳೆ ಮಾತನಾಡಿದ ಅವರು ಆರ್ ಸಿಬಿ ಡ್ರೆಸ್ ಕಂಡರೆ ಭಯ ಪಡುವಂತಾಗಿದೆ. ರೆಡ್ ಡ್ರೆಸ್ ನೋಡಿದ್ರೆ ಓಡುವಂತಾಗಿದೆ. ನಮ್ಮ ಪರಿಸ್ಥಿತಿ ಹಾಗಾಗಿದೆ. ಸದ್ಯಕ್ಕೆ ರೆಡ್ ಡ್ರೆಸ್ ನಿಂದ ದೂರ ಉಳಿಯಬೇಕು. ಸಿನಿಮಾದ ರೀತಿ ರೆಡ್ ಡ್ರೆಸ್ ಕಂಡ್ರೆ ಗೂಳಿ ಓಡುತ್ತಿದೆ. ವಿಪಕ್ಷಗಳ ಹೇಳಿಕೆ, ಆರೋಪಗಳ ಬಳಿಕ ನಾವು ನಿಟ್ಟುಸಿರು ಬಿಡಬಹುದು ಎಂದರು.