ಮನೆ Latest News ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸವಾಲು ಹಾಕಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸವಾಲು ಹಾಕಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

0

ಬೆಂಗಳೂರು;ಬಾಬಾ ಸಾಹೇಬ್ ರನ್ನ ಸಾವರ್ಕರ್ ಅವರು ಸೋಲಿಸಿದ್ರು ಅಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು. ನಾನು ಅವರಿಗೆ ಚಾಲೆಂಜ್ ಮಾಡ್ತೇನೆ. ಈ ಆರೋಪವನ್ನ ಪ್ರೂವ್ ಮಾಡಿದ್ರೆ, ನಾನು ರಾಜಕೀಯ ನಿವೃತ್ತಿ ಜೊತೆಗೆ ವಿಪಕ್ಷ ನಾಯಕರ ಸ್ಥಾನಕ್ಕೂ ರಾಜೀನಾಮೆ ಕೊಡ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು  ಇಲ್ಲ ಅಂದ್ರೆ ನೀವು ನಿಮ್ಮ ಮಗ ,ಸಿದ್ದರಾಮಯ್ಯ, ಜಯರಾಂ ರಮೇಶ್ ರಾಜೀನಾಮೆ ನೀಡಬೇಕು. ರಾಜಕೀಯ ನಿವೃತ್ತಿ ಆಗಬೇಕು. ಈ ಆರೋಪವನ್ನ ಪ್ರೂವ್ ಮಾಡಿದ್ದೇ ಆದಲ್ಲಿ ಒಂದು ಲಕ್ಷ ಬಹುಮಾನ ಕೊಡ್ತೇನೆ. ಅದು ನನ್ನ ಸ್ವಂತ ದುಡಿಮೆಯ ಹಣದಿಂದ.  ಅಂಬೇಡ್ಕರ್ ಗೆ ಮೋಸ ಮಾಡಿದ್ರೆ ಅದು ಕಾಂಗ್ರೆಸ್ .ನೀವು ವಿಧಾನಸೌಧಕ್ಕೆ ಈ ದಾಖಲೆ ತಗೊಂಡು ಬನ್ನಿ. ಅಲ್ಲಿ ಜನರೆದುರು ಅವರ ಬಗ್ಗೆ ಚರ್ಚೆ ಮಾಡೋಣ. ಅಲ್ಲಿ ನಿಮ್ಮ ಮಾತನ್ನ ಪ್ರೂವ್ ಮಾಡಿದ್ರೆ ನಾನು ನಿಮಗೆ ಅಲ್ಲೇ ಕಾಲು ಮುಗಿದು ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದಿದ್ದಾರೆ. ದಲಿತರ ಅಗ್ರಗಣ್ಯ ನಾಯಕ ಅಂತಹ ಕರೆಸಿಕೊಳ್ಳೋ ಮಲ್ಲಿಕಾರ್ಜುನ ಖರ್ಗೆ ರಬ್ಬರ್ ಸ್ಟ್ಯಾಂಪ್ ಆಗಿ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಪ್ರಿಯಾಂಕ ಖರ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಡಬಲ್ ಇಂಜಿನ್ ಸುಳ್ಳುಗಾರರು. ಎಲ್ಲಾ ದಲಿತರ ಕಣಜ ನಿಮ್ಮ ಬಳಿಯೇ ಇದೆಯಲ್ಲ. ಸಿದ್ದರಾಮಯ್ಯ ನವರೇ, ವಿಧಾನಸೌಧದ ಮೆಟ್ಟಿಲುಗಳ ಮುಂದೆ ಪೆಂಡಾಲ್ ಹಾಕಿ ಜನರ ಕರೆಯಿರಿ. ಆ ಪತ್ರ ಇಂಗ್ಲಿಷ್ ನಲ್ಲಿದೆ ನಾನು‌ ತಗೊಂಡು ಬರುತ್ತೇನೆ, ನೀವು ತಗೊಂಡು ಬನ್ನಿ ಚರ್ಚೆ ಮಾಡೋಣ. ಇದನ್ನು ನೀವು ಸಾಬೀತು ಪಡಿಸಿದ್ರೆ ಅವತ್ತೇ ನಿಮ್ಮ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳಿ ಬರುತ್ತೇನೆ ಎಂದ ಅವರು  ಮಂಗಳೂರಲ್ಲಿ ಮತ್ತೊಬ್ಬ ಹಿಂದು ಮುಖಂಡನ ಹತ್ಯೆ ಬಗ್ಗೆ ಫೋಸ್ಟ್ ವಿಚಾರದ ಬಗ್ಗೆ ಮಾತನಾಡಿ ಇದೊಂದು ಸರ್ಕಾರದ ದೊಡ್ಡ ವೈಫಲ್ಯ.ಸುಹಾಸ್ ಹತ್ಯೆ ಬಗ್ಗೆ ಮೊದಲೇ ಪೊಲೀಸರಿಗೆ ಗೊತ್ತಿತ್ತಲ್ಲ. ಅವರಿಗೆ ರಕ್ಷಣೆ ಕೊಡಬಹುದಿತ್ತಲ್ಲ. ಇವಾಗ ಇನ್ನಿಬ್ಬರನ್ನು ಟಾರ್ಗೆಟ್ ಮಾಡಿದ್ದೀವಿ ಅಂತಾ ಪೋಸ್ಟ್ ಹಾಕಿದ್ದಾರೆ. ಸರ್ಕಾರದ ಕುಮ್ಮಕ್ಕಿನಿಂದಲೇ ಹಿಂದು ಕಾರ್ಯಕರ್ತರ ಹತ್ಯೆ ಯಾಗ್ತಿದೆ. ಲಾಂಡ್ ಆರ್ಡರ್ ಕರ್ನಾಟಕದಲ್ಲಿ ಬಿಗ್ ಝೀರೋ ಆಗಿದೆ. ಪೊಲಿಸ್ ಇಲಾಖೆಯೇ ಸರ್ಕಾರದ ಕಂಟ್ರೋಲ್ ನಲ್ಲಿ ಇಲ್ಲ. ಅತೀಕ್ ರವರಿಗೆ ಮುಖ್ಯಮಂತ್ರಿ ಸ್ಥಾನ ವನ್ನು ಕೊಟ್ಟು ಬಿಡಿ. ಎಲ್ಲದರಲ್ಲೂ ಅವರು ಮೂಗು ತೋರಿಸೋದು ನಿಲ್ಲುತ್ತೆ. ಪೋಸ್ಟ್ ಹಾಕಿರೋರ ಮನೆಗೆ ನುಗ್ಗಿ ಅವರನ್ನು ಅರೆಸ್ಟ್ ಮಾಡಬೇಕು. ಪಾಕಿಸ್ತಾನ ಭಯೋತ್ಪಾದಕರು 28 ಜನರ ಜೀವ ತೆಗೆದಿದ್ದಾರೆ. ಅದಕ್ಕಾಗಿ ಇಡೀ ದೇಶವೇ ಪಾಕಿಸ್ತಾನದ ವಿರುದ್ಧ ರೋಷಗೊಂಡಿದೆ. ಹಾಗೇ ನೀವು ರೋಷಗೊಂಡು ಪೋಸ್ಟ್ ಹಾಕಿದವರ ತಕ್ಕ ಶಾಸ್ತ್ಯ ಮಾಡಬೇಕು.ಮಾಡಿ ಇಲ್ಲವಾದಲ್ಲಿ ಅಧಿಕಾರ ಬಿಟ್ಟು ತೊಲಗಿ ಎಂದಿದ್ದಾರೆ,

ಪಾಝಿಲ್ ಕುಟುಂಬವನ್ನು ಸ್ಪೀಕರ್ ಯು.ಟಿ ಖಾದರ್ ಗೆ  ಸಮರ್ಥನೆ ವಿಚಾರದ ಬಗ್ಗೆ ಮಾತನಾಡಿ ಸ್ಪೀಕರ್ ಗೆ ಹೇಳಿಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಖಾದರ್ ಅವರಿಗೆ ಕಮಿಷನರೇ ಕಪಾಳಮೊಕ್ಷ ಮಾಡಿದ್ದಾರೆ. ಸುಪಾರಿಗೆ ಅಡ್ವಾನ್ಸ್ 5 ಲಕ್ಷ ಹಣ ಕೊಟ್ಟಿದೆ. ಖಾದರ್ ಡಿಫೆಂಡ್ ಮಾಡ್ಲಿಕೆ ಹೋಗಿ, ತಾವೇ ಬೆತ್ತಲಾಗಿದ್ದಾರೆ. ತಕ್ಷಣವೇ ಖಾದರ್ ರಾಜೀನಾಮೆ ಕೊಡಬೇಕು. ಕೇಸ್ ಮುಚ್ಚಿ ಹಾಕಲು ಖಾದರ್ ಹೋಗಿದ್ರು, ಆದರೆ ಇವರಿಗೆ ಸತ್ಯ ಗೊತ್ತಾಗಿದೆ ಎಂದಿದ್ದಾರೆ.