ಬೆಂಗಳೂರು;ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಹಾಸ್ ಶೆಟ್ಟಿ ನಿವಾಸಕ್ಕೆ ಸರ್ಕಾರದ ಕಡೆಯಿಂದ ಯಾರೂ ಭೇಟಿ ನೀಡಿ, ಸಾಂತ್ವನ ಹೇಳದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಇದು ಒಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿ ಮೇಲೂ ಕೇಸ್ ಗಳಿವೆ, ಐದು ಕೇಸ್ಗಳು ಅವರ ಮೇಲಿವೆ. ಹಾಗಾಗಿ ನಾವು ಹಾಗೂ ಭೇಟಿ ಕೊಟ್ಟಿಲ್ಲ. ಆದ್ರೆ ಸುಹಾಸ್ ಶೆಟ್ಟಿ ಮನೆಗೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದ ಎಂದರು. ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧಿತರು ನಿಜವಾದ ಆರೋಪಿಗಳಾ ಎಂಬ ಅನುಮಾನ ವ್ಯಕ್ತವಾಗ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರನ್ನೋ ಹೇಗೆ ಆರೋಪಿ ಅಂತ ಹೇಳಲು ಆಗುತ್ತಾ?. ಕೊಲೆ ಪ್ರಕರಣದಲ್ಲಿ ಯಾರ್ಯಾರನ್ನೋ ಬಂಧಿಸಲು ಆಗಲ್ಲ. ಎಂದಿದ್ದಾರೆ.
ಮುಸ್ಲಿಂ ಮುಖಂಡರು ಪರಮೇಶ್ವರ್ ರನ್ನು ಪರಮೇಶ್ವರ್ ಭೇಟಿ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ನಿನ್ನೆ ಮುಸ್ಲಿಮ್ ಸಮುದಾಯದ ಪ್ರಮುಖರು ಅವರೇ ಬಂದು ನನ್ನ ಭೇಟಿ ಮಾಡಿದ್ರು. ಬರೋರಿಗೆ ಬೇಡ ಅನ್ನೋಕ್ಕಾಗುತ್ತಾ? . ಬೇರೆ ಸಮುದಾಯದವರೂ ಬರಬಹುದಿತ್ತು, ಯಾರೂ ಬರಲಿಲ್ಲ ಎಂದಿದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ವಹಿಸಲು ಬಿಜೆಪಿ ಒತ್ತಾಯದ ಬಗ್ಗೆ ಮಾತನಾಡಿದ ಅವರು ಅದು ಬಿಜೆಪಿಯವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡ್ತಾ ಇದೆ. ಎಂಟು ಜನರನ್ನ ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿ ಈ ಪ್ರಕರಣ ಎನ್ಐಎ ಗೆ ಕೊಟ್ಟಿಲ್ಲ.ಆ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡ್ತೇವೆ.ಬಿಜೆಪಿ ಆರೋಪ ಸರಿಯಲ್ಲ, ಬಿಜೆಪಿಯವರ ಕಾಲದಲ್ಲೂ ಮರ್ಡರ್ ಗಳು ಆಗಿವೆ ಎಂದಿದ್ದಾರೆ.
ರಾಜ್ಯದ ಬೇರೆ ಬೇರೆ ಕಡೆಗಳಲ್ಲೂ ಕೊಲೆ ಪ್ರಕರಣ ವಿಚಾರದ ಬಗ್ಗೆ ಮಾತನಾಡಿ ನಾವು ಎಲ್ಲಾ ರೀತಿಯ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದೇವೆ. ಮರ್ಡರ್ ಆಗುತ್ತೆ ಎಂದು ಕ್ಲೂ ಸಿಕ್ಕಿದರೂ ಅಲರ್ಟ್ ಮಾಡಿ ತಡೆಯುವ ಕೆಲಸ ಆಗ್ತಿದೆ. ಕೊಲೆ ನಂತರವೂ ಆರೋಪಿಗಳನ್ನು ಬಂಧಿಸಲಾಗ್ತಿದೆ. ಎಲ್ಲಾ ಎಚ್ಚರಿಕೆಗಳನ್ನೂ, ಸೂಚನೆಗಳನ್ನ ಎಸ್ಪಿಗಳಿಗೆ ಕೊಟ್ಟಿದ್ದೇವೆ ಎಂದ್ರ. ಕೇವಲ ಮುಸ್ಲಿಂ ಸಮುದಾಯದ ಜೊತೆ ಮೀಟಿಂಗ್ ಮಾಡಿದ ವಿಚಾರದ ಬಗ್ಗೆ ಮಾತನಾಡಿ ನಾವು ಮೀಟಿಂಗ್ ಕರೆದಿಲ್ಲಾ ರಿ..ಅವರಾಗಿ ಬಂದಿದ್ದರು. IBಗೆ ಬಂದಾಗ ಬೇಡ ಎನ್ನಲು ಆಗುತ್ತಾ…?. ಬೇರೆ ಸಮುದಾಯದವರು ಬರಬೇಕಿತ್ತು. ನಮ್ಮ ಕಾಂಗ್ರೆಸ್ ನಾಯಕ ರಮಾನಾಥ್ ರೈ ಬಂದಿದ್ರು. ರಮಾನಾಥ್ ರೈ ಹಿಂದೂ ಅಲ್ವಾ..?. ಬೇರೆ ಬೇರೆ ನಾಯಕರು ಬಂದಿದ್ರು ಮಾತನಾಡಿದೆ. ಸಾಂತ್ವನ ಹೇಳಲು ಹೋಗಬೇಡಿ ಅಂತ ನಮಗೆ ಯಾರು ಹೇಳಿಲ್ಲ. ಆಡಿಯೋ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಹೆಚ್.ಎಸ್. ಆರ್ ಲೇಔಟ್ ನಲ್ಲಿ ಯುವತಿ ನಗ್ನವಾಗಿ ಓಡಾಡಿದ ವಿಚಾರದ ಬಗ್ಗೆ ಮಾತನಾಡಿ ಅನಧಿಕೃತ ಪಿಜಿಗಳು ಬೆಂಗಳೂರಿನಲ್ಲಿ ಹೆಚ್ಚಾಗಿವೆ. ಆ ಘಟನೆ ಬಗ್ಗೆ ಸೂಚನೆ ನೀಡಿದ್ದೇನೆ. ಯಾವ ಯಾವ ಕಡೆ ಅನಧಿಕೃತ, ಅಧಿಕೃತ ಪಿಜಿಗಳು ಎಷ್ಟಿವೆ ಅಂತ ವರದಿ ನೀಡಲು ಹೇಳಿದ್ದೇನೆ. ಮಾಹಿತಿ ಬಂದ ಮೇಲೆ ಏನು ಕ್ರಮ ಅಂತ ಗೊತ್ತಾಗುತ್ತದೆ.ಯಾರು ಇವರಿಗೆ ಪರ್ಮಿಷನ್ ಕೊಟ್ರು, ಪರ್ಮಿಷನ್ ಹೇಗೆ ನಡೆಸುತ್ತಿದ್ದಾರೆ ಅಂತ ಬಿಬಿಎಂಪಿ ನೋಡಬೇಕಾಗುತ್ತದೆ. ಫಸ್ಟ್ ಇನ್ಫಾರ್ಮೇಶನ್ ಬಂದ ಮೇಲೆ ಕ್ರಮ ಆಗಲಿದೆ ಎಂದಿದ್ದಾರೆ.