ಮನೆ Latest News ಶೀಘ್ರವೇ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುತ್ತೇವೆ: ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್...

ಶೀಘ್ರವೇ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುತ್ತೇವೆ: ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ಶೀಘ್ರವೇ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುತ್ತೇವೆ  ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು  ಸುಹಾಸ್ ಶೆಟ್ಟಿಯನ್ನು ನಿನ್ನೆ ರಾತ್ರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. 8.30ಕ್ಕೆ ಈ ಹತ್ಯೆ ನಡೆದಿದೆ. ಈಗಾಗಲೇ ನಾವು ಆಕ್ಷನ್ ತೆಗೆದುಕೊಂಡಿದ್ದೇವೆ. ಯಾರು ಈ ಕೆಲಸ ಮಾಡಿದ್ದಾರೆ ಕಾನೂನು ಕ್ರಮ ಆಗಲಿದೆ. ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ನಾಲ್ಕು ತಂಡ ರಚನೆ ಮಾಡಿ ಕಳುಹಿಸಿದ್ದೇವೆ. ಈ ರೀತಿ ಘಟನೆ ಆಗೋದಕ್ಕೆ ಬಿಡಲ್ಲ. ಮಂಗಳೂರು ಜನ ಶಾಂತಿ ಕಾಪಾಡಿ, ಸರ್ಕಾರ ನಿಮ್ಮ ಜೊತೆ ಇರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಗೆ ತಿಳಿಸಿದ್ದೇವೆ. ತನಿಖೆ ಮುಂದುವರೆದಿದೆ, ಯಾರೇ ಆಗಿದ್ದರೂ ಕಠಿಣ ಕ್ರಮ ಆಗಲಿದೆ.ಇದು ಯಾವುದೇ ಕಾರಣಕ್ಕೂ ಬೆಳೆಯಲು ಬಿಡಲ್ಲ. ಯಾವುದೇ ಪಕ್ಷದರಾಗಿದ್ದರೂ ಬಿಡಲ್ಲ.ಅದು ಯಾರೇ ಆಗಿದ್ದರೂ ಕೂಡ ಕಠಿಣ ಕ್ರಮ ಆಗಲಿದೆ ಎಂದಿದ್ದಾರೆ

ಯಾವುದೇ ಅಹಿತಕರ ಘಟನೆ ಈ ಕಾರಣಕ್ಕೆ ಆಗಬಾರದು. ಹಾಗಾಗಿ ಎಕ್ಸ್ಟಾ ಕೇರ್ ತೆಗೆದುಕೊಂಡಿದ್ದೇವೆ. ಈಗಾಗಲೇ ವರದಿ ಕೇಳಿದ್ದೇನೆ. ಈ ರೀತಿ ಘಟನೆ ನಡೆಯಲು ಅವರನ್ನ ಹತ್ತಿಕ್ಕಲು ಕ್ರಮ ವಹಿಸುತ್ತೇವೆ. ಈ ಪಕ್ಷ, ಆ ಪಕ್ಷ ಅಂತ ಏನಿಲ್ಲ. ಶಾಂತಿ ಕಾಪಾಡಲು ಕ್ರಮ ವಹಿಸುತ್ತೇವೆ. ನಾವು ಕೊಲೆ ಆಗಬೇಕು ಅಂತ ಬಯಸಲ್ಲ.ಯಾವುದೇ ಸರ್ಕಾರ ಆದರೂ ಶಾಂತಿ ಕಾಪಾಡಲಿ ಅನ್ನುತ್ತದೆ. ಆ ಜವಬ್ದಾರಿಯಿಂದ ನುಣುಚಿಕೊಳ್ಳಲು ಅದನ್ನ ಯಾವ ರೀತಿ ನಿಭಾಯಿಸಬೇಕು, ಯಾವ ರೀತಿ ಕ್ರಮ ಆಗಬೇಕು ಅಂತ ನೋಡ್ತಾ ಇದ್ದೀವಿ. ಆರೋಪಿಗಳು ಯಾರು ಇದ್ದಾರೆ ಅವರನ್ನ ಕಾನೂನಿನಲ್ಲಿ ತರಲು ಮುಂದಾಗುತ್ತೇವೆ. ಶೀಘ್ರವಾಗಿ ಆರೋಪಿಗಳನ್ನ ಹಿಡಿಯುತ್ತೇವೆ. ನಾವೆಲ್ಲರೂ ಹಿಂದುಗಳೇ. ಕೊಲೆ ಆಗಿದೆ ಕೊಲೆ ಮಾಡಿದವರನ್ನ ಹಿಡಿಯುತ್ತೇವೆ.ಅದಕ್ಕೆ ಈ ರೀತಿ ಹೇಳೋದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಯಾರೇ ಆದರೂ ಕ್ರಮ ಆಗಲಿದೆ, ಹಿಂದೆಯೂ ಕಠಿಣ ಕ್ರಮ ಆಗಿದೆ. ಈಗಲೂ ಕೂಡ ಅದು ಆಗುತ್ತದೆ, ಕಾಂಗ್ರೆಸ್ ನಲ್ಲಿ ಹಿಂದುಗಳು ಇಲ್ವಾ. ನಾವ್ಯಾರು ಹಿಂದುಗಳು ಅಲ್ವಾ?. ಇದಕ್ಕೆ ಈ ರೀತಿ ವಿಶ್ಲೇಷಣೆ ಮಾಡೋದು ಸರಿ ಅಲ್ಲ ಎಂದು ಆಕ್ರೋಶ ಹೊರ ಹಾಕಿದ್ರು.

ಕೇಂದ್ರದಿಂದ ಜಾತಿಜನಗಣತಿ ನಡೆಸುವ ವಿಚಾರದ ಬಗ್ಗೆ ಮಾತನಾಡಿ 1931 ರಲ್ಲಿ ಜಾತಿ ಜನಗಣತಿ ಆಗಿದೆ. ಅದಾದ ಬಳಿಕ ನಮ್ಮ ಪೂರ್ವಜರು ಏನು ಯೋಚನೆ ಮಾಡಿದ್ದರೋ ಗೊತ್ತಿಲ್ಲ. ಜಾತಿ ಹೋಗಬೇಕು ಅಂತ ಕಲ್ಪನೆಯಲ್ಲಿ ಗಣತಿ ಮಾಡಬಾರದು ಅಂತ ಬಿಟ್ಟಿದ್ದರು ಅನ್ನಿಸುತ್ತೆ. ಈಗ ಜಾತಿ ಜನಗಣತಿ ಮಾಡಲು ನಾವು ಕರ್ನಾಟಕದಲ್ಲಿ ಮುಂದಾದ್ವಿ. ಉದ್ದೇಶ ಅಂದ್ರೆ ಹಿಂದುಳಿದವರನ್ನ ಮುಖ್ಯ ವಾಹಿನಿಗೆ ತರೋದಕ್ಕೆ ಮಾತ್ರ. ಅದನ್ನ ಮಾಡುವಾಗ ಎಷ್ಟು ಜನ ಯಾವ ಸಮುದಾಯ ಇದೆ ಅಂತ. ಕೇಂದ್ರದ ನಿರ್ಧಾರ ಸ್ವಾಗತಾರ್ಹ ಎಂದು ತಿಳಿಸಿದ್ರು.

ರಾಹುಲ್ ಗಾಂಧಿ ಬಹಳ ದಿನದಿಂದ ಹೇಳ್ತಾ ಇದ್ರು. ಹಾಗಂತ ಅವರು ಹೇಳಿದಾರೆ ಅಂತ ಅನ್ನೋದಕ್ಕಿಂತ ಆಡಳಿತ ಪಕ್ಷಕ್ಕೆ ಇದರ ಅಗತ್ಯ ಇದೆ ಅನ್ನೋದು ತಿಳಿದಿದೆ.ನಮ್ಮ ಗಣತಿ ವರದಿ ಸಪೋರ್ಟಿವ್ ಆಗಲಿದೆ. ಇದು ಮೂಲೆಗುಂಪು ಆಗುತ್ತೆ ಅಂತ ಅಂದುಕೊಳ್ಳೋದು ಬೇಡ. ಒಂದಕಿ ಕಡಿಮೆ ಆಗಬಹುದು ಅಥವಾ ಜಾಸ್ತಿ ಆಗಬಹುದು. ಆದರೆ ನಮ್ಮ ವರದಿ ಸ್ಟ್ರೆಂತ್ ಆನ್ ಆಗಲಿದೆ ಎಂದು ತಿಳಿಸಿದರು.