ಬೆಂಗಳೂರು; ನಾನಿನ್ನೂ ಕುಮಾರಸ್ವಾಮಿ ಚರಿತ್ರೆ ಬಿಚ್ಚಿಟ್ಟಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಮಾತನಿದ ಅವರುನಿಮ್ಮ ಅಣ್ಣ ತಮ್ಮಂದಿರ ಆಸ್ತಿ ಎಷ್ಟಿದೆ ಅಂತ ಬಿಚ್ಚಿಟ್ಟಿಲ್ಲ. ಟನ್ ಗಟ್ಟಲೆ ದಾಖಲೆ ಇದೆಯಂತೆ ಕುಮಾರಸ್ವಾಮಿ ಹತ್ರ ನನ್ನದು. ನಮ್ಮ ಹುಡುಗ್ರು ಲಾರಿ ಕಳಿಸಿದ್ರು ಕಳಿಸಬೇಕಿತ್ತು ಡಾಕ್ಯುಮೆಂಟ್ ನಾ?. ನಮ್ಮ ಆಸ್ತಿ ಪಾಸ್ತಿ ಎಷ್ಟಿದೆ ಎಲ್ಲ ಸರ್ಕಾರ ನೋಡಿಕೊಳ್ಳುತ್ತದೆ. ಅವನ್ಯಾರೋ ಒಬ್ಬ ಚೆಂಗ್ಲು ಹೋಗಿ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ ಎಂದು ಲೇವಡಿ ಮಾಡಿದ್ರು.
ನಮ್ಮದು ರೈತರು, ಕಾರ್ಮಿಕರ ಪರ ಸರ್ಕಾರ. ಎಲ್ಲಾ ವರ್ಗಗಳ ಪರವಾಗಿರುವ ಸರ್ಕಾರ. ಹಾಲಿನ ದರ ರೈತರಿಗೆಗಾಗಿ ೪ ರೂ ಮಾಡಿದ್ದೇವೆ. ಹರ್ಯಾಣ, ಅಸ್ಸಾಂ, ಮಧ್ಯಪ್ರದೇಶ, ಪಂಜಾಬ್ ಯುಪಿಯಲ್ಲಿ ಹಾಲಿನ ದರ 55, 56, 57 ರೂ ಇದೆ. ಆದರೆ ನಮ್ಮಲ್ಲಿ ಹಾಲಿನ ದರ ಕಡಿಮೆ ಇದೆ. ರೈತರಿಗಾಗಿ ನಾವು ೪ ರೂ ಮಾಡಿದ್ದೇವೆ. ಟೂತ್ ಪೇಸ್ಟ್ ೫ ರೂ ಇದ್ಧದ್ದು ೧೫ ರೂ ಆಗಿದೆ. ಎಲ್ಲ ಬೆಲೆಯನ್ನ ಜಾಸ್ತಿ ಮಾಡಿದ್ದಾರೆ. ಹೆಣ್ಣುಮಕ್ಕಳು ಮಾಂಗಲ್ಯ ಸರ ಕಟ್ಟಲಾಗ್ತಿಲ್ಲ. ೧೦ ಸಾವಿರ ಮೊಬೈಲ್ ೩೦ ಸಾವಿರ ಆಗಿದೆ. ೨೬೮ ರೂ ಇದ್ದ ಸಿಮೆಂಟ್ ೪೬೦ ರೂ ಆಗಿದೆ. ಇನ್ನೊವಾ ಕಾರು ೧೨ ರೂ ಇದ್ದಿದ್ದು ೩೦ ಲಕ್ಷ ಆಗಿದೆ. ಟೂತ್ ಪೇಸ್ಟ್ ೧೫ ರಿಂದ ೬೦ ರೂ ಆಗಿದೆ. ಇದನ್ನ ಗಮನದಲ್ಲಿಟ್ಟುಕೊಂಡೇ ಹೋರಾಟ ಎಂದ್ರು.
ರಾಹುಲ್ಗಾಂಧಿ ಭಾರತ್ ಜೊಡೋ ಮಾಡಿದ್ರು. ನಾನು ೧೩೬ ಸೀಟು ಅಂತ ಹೇಳಿದ್ದೆ .ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ನಾವೇ ಗೆಲ್ತೇವೆ ಅಂದ್ವಿ. ಮಾಜಿ ಸಿಎಂ ಅವರನ್ನೇ ಸೋಲಿಸಿದ್ರು. ಕುಮಾರಸ್ವಾಮಿ ಲಾರಿ ಇಲ್ಲ ದಾಖಲೆ ಕಳಿಸೋಕೆ ಅಂದ್ರು. ಮಿಸ್ಟರ್ ಕುಮಾರ ಸ್ವಾಮಿ ಕಳಿಸಬೇಕಿತ್ತು ಲಾರಿ ಲೋಡು. ನಿಮ್ಮ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ನಿಮ್ಮ ಚರಿತ್ರೆಯನ್ನ ನಾನು ಬಿಚ್ಚಿಲ್ಲ. ನಿಮ್ಮಅಣ್ಣ ತಮ್ಮಂದಿರ ಆಸ್ತಿ ಬೆಲೆ ಬಿಚ್ಚಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಡಿಕೆಶಿ ವಾಗ್ದಾಳಿ ಮಾಡಿದ್ದಾರೆ.
ಯಾರೋ ಒಬ್ಬ ಚೆಂಗ್ಲು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ. ನಾನು ಯಾವುದಕ್ಕೂ ಹೆದರೋನಲ್ಲ. ಮತ್ತೆಯೂ ನಮ್ಮದೇ ಸರ್ಕಾರ ಬರುತ್ತದೆ. ಜನರ ಆಕ್ರೋಶ ತುಂಬಿ ತುಳುಕುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ಹೊರ ಹಾಕಿದ್ರು.
ಇನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ ಮಹಾತ್ಮ ಗಾಂಧಿ ಅವರು ಬೆಳಗಾವಿ ಗೆ ಬಂದಿದ್ದರು. ರಾಜ್ಯ ನಾಯಕರಿಗೆ ನಾನು ದೊಡ್ಡ ಟಾರ್ಗೆಟ್ ನೀಡಿದ್ದೇನೆ. ಕರ್ನಾಟಕ ದಲ್ಲಿ ೧೦೦ ಕಚೇರಿ ಕಟ್ಟೋದಕ್ಕೆ ಹೇಳಿದ್ದೇವೆ. ಅದನ್ನ ರಾಜ್ಯ ಕಾಂಗ್ರೆಸ್ ಮಾಡೋದನ್ನ ಮಾಡುತ್ತದೆ ಎಂದ್ರು. ಸಿಎಂ-ಡಿಸಿಎಂ ಒಗ್ಗಟ್ಟಾಗಿ ಇರಬೇಕು, ಬಿಜೆಪಿಯವರು ಸರ್ಕಾರ ಬೀಳಿಸಿಬಿಡ್ತಾರೆ ಎಂಬ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದು ಸತ್ಯ. ಬಿಜೆಪಿಯವರು ಅವರು ಮಾಡುತ್ತಿರೋದು ಸತ್ಯ. ಕ್ರಿಮಿನಲ್ ಕೇಸ್ ಹಾಕಿ ನಮ್ಮನ್ನ ಕಟ್ಟಿಹಾಕೋ ಕೆಲಸ ಮಾಡುತ್ತಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರನ್ನ ಕಟ್ಟಿಹಾಕುತ್ತಾರೆ. ನಮ್ಮದು ಕಾರ್ಯಕರ್ತರ ಪಾರ್ಟಿ, ಅವರೇ ನಮ್ಮ ಶಕ್ತಿ ಎಂದ್ರು.