ಮನೆ Latest News ಬಿಜೆಪಿ ಬೆಂಗಳೂರು ದಕ್ಷಿಣ ವತಿಯಿಂದ‌ ಸಂಸತ್ ಧ್ವನಿ ಕಾರ್ಯಕ್ರಮ; ಸಂಸತ್ ಧ್ವನಿ ಕಾರ್ಯಕ್ರಮದಲ್ಲಿ ವಕ್ಪ್ ಅಮೆಂಡ್‌ಮೆಂಟ್...

ಬಿಜೆಪಿ ಬೆಂಗಳೂರು ದಕ್ಷಿಣ ವತಿಯಿಂದ‌ ಸಂಸತ್ ಧ್ವನಿ ಕಾರ್ಯಕ್ರಮ; ಸಂಸತ್ ಧ್ವನಿ ಕಾರ್ಯಕ್ರಮದಲ್ಲಿ ವಕ್ಪ್ ಅಮೆಂಡ್‌ಮೆಂಟ್ ಆ್ಯಕ್ಟ್ 2025 ಕುರಿತು ಸಂವಾದ

0

ಬೆಂಗಳೂರು; ಬಿಜೆಪಿ ಬೆಂಗಳೂರು ದಕ್ಷಿಣ ವತಿಯಿಂದ‌ ಸಂಸತ್ ಧ್ವನಿ ಕಾರ್ಯಕ್ರಮ ನಡೆಯಿತು. ಸಂಸತ್ ಧ್ವನಿ ಕಾರ್ಯಕ್ರಮದಲ್ಲಿ ವಕ್ಪ್ ಅಮೆಂಡ್‌ಮೆಂಟ್ ಆ್ಯಕ್ಟ್ 2025 ಕುರಿತು ಸಂವಾದ ನಡೆಯಿತು. ಜೆಪಿ ನಗರದ ಆರ್‌.ವಿ ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಸುಧ್ದಾಂಶು ತ್ರಿವೇದಿ, ಶಾಸಕರಾದ ಸಿ.ಕೆ ರಾಮಮೂರ್ತಿ, ರವಿ ಸುಬ್ರಮಣ್ಯ ಸೇರಿದಂತೆ ಹಲವರ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಯಾವ ಹಾವ ಭವ್ಯ ಭಾರತ‌ದ ನಿರ್ಮಾಣದ ಕೆಲಸ‌ ಆಗಬೇಕಿತ್ತೋ  ಅದೆಲ್ಲದು‌ ಕಳೆದ ಹತ್ತು ವರ್ಷದಲ್ಲಿ‌ ನಾವು ನೋಡ್ತಿದ್ದೇವೆ. ಜಾಯಿಂಟ್ ಪಾರ್ಲಿಮೆಂಟ್‌ರಿ ಕಮೀಟಿಯಲ್ಲಿ ನನ್ನನ್ನು ಆಯ್ಕೆ‌ ಮಾಡಿದ್ರು. ಈ ಅವಕಾಶ ಬೆಂ.ದಕ್ಷಿಣದ ಮತದಾರರು ನನಗೆ ಕೊಟ್ಟಿರೋದು. 1995-2013 ರಲ್ಲಿ ಯುಪಿಎ ಸರ್ಕಾರ ವಕ್ ಆ್ಯಕ್ಟ್ ಗೆ ತಿದ್ದುಪಡಿ ತಂದ್ರು. ವಕ್ಪ್ ಎನ್ನುವಂತದಹದು ಅಲ್ಲಾ‌ ಹೆಸರಲ್ಲಿ ಮುಸ್ಲಿಂರು ಮಾಡುವ ದಾನ . ದೇಶದ ಎಲ್ಲಾ ಭಾಗದಲ್ಲಿರುವ ಮುಸ್ಲಿಂ ಅವರ ದೇವರ ಹೆಸರಿನಲ್ಲಿ 4 ಜನ ಬಡವರಿಗೆ ಒಳ್ಳೆದಾಗಲಿ ಎನ್ನುವ ಉದ್ದೇಶದಿಂದ ಮಾಡುವ ದಾನವೇ ವಕ್ಪ್. ಬ್ರಿಟಿಷರು ವಕ್ಪ್ ಕಾನೂನನ್ನ ತಂದಿದ್ದರು. ಬಹಳ ಸಂಕ್ಷಿಪ್ತವಾಗಿರುವ ಕಾನೂನು ಅದು.ಯಾರು ದಾನ ಮಾಡ್ತಿದ್ದಾರೋ ಅವರು ಮಾಲೀಕರಾಗಿರಬೇಕು ಎನ್ನುವ ಕಾನೂನಿತ್ತು. ದೇಶದ ಎಷ್ಟೋ ಸಮಸ್ಯೆಗೆ ಗಂಗೋತ್ರಿಯಂತಿರುವ ನೆಹರು  ಆಡಳಿತಕ್ಕೆ ಬಂದಾಗ ವಕ್ಪ್ ಗೆ ಸಡಿಲಿಕೆಗೊಳಿಸುವ ತಿದ್ದುಪಡಿ ತಂದ್ರು. ಕಾಂಗ್ರೆಸ್ 2013ರಲ್ಲಿಯೂ ತಿದ್ದುಪಡಿ ತಂದಿತು ಎಂದ್ರು.

2013ರಲ್ಲಿ ವಕ್ಪ್‌‌ನಲ್ಲಿ ಸೆಕ್ಷನ್ 40 ಕಾನೂನು‌ ತಂದ್ರು. ವಕ್ಪ್ ಯಾವುದೇ ಜಮೀನನ್ನು ನನ್ನದು ಎನ್ನೋದನ್ನ‌ ಕ್ಲೈಮ್ ಮಾಡಿಕೊಳ್ಳ ಬಹುದು ಎನ್ನುವ ರೀತಿ . ಮತ್ತೊಂದು ವಕ್ಪ್ ಸೆಕ್ಷನ್ 5 ತಂದ್ರು. ರೈತೆ ಡೆಲಿಘೇಷನ್ ನಮ್ಮನ್ನ ಹೈದರಾಬಾದ್‌ನಲ್ಲಿ ಭೇಟಿ ಮಾಡಿತು. ಔರಂಗಜೇಬನ ಭೂತ ನಮ್ಮ‌ ವಕ್ಪ್ ಜಮೀನನ್ನ ಕಬ್ಜ ಮಾಡ್ತಿದೆ ಎಂದರು. ಬಿಜಾಪುರದಲ್ಲಿ 15 ಸಾವಿರ ಎಕರೆ ಒಂದೇ ಜಿಲ್ಲೆಯಲ್ಲಿ ತಲಾ ತಲಾಂತದರದಲ್ಲಿ ಉಳುಮೆ ಮಾಡ್ಕೊಂಡು ಬಂದವರ ಭೂಮಿ ಅದು. ವಕ್ಫ್ ಡಿಕ್ಲರೇಶನ್ ಮಾಡ್ತು. ರಾತ್ರೋ‌ ರಾತ್ರಿ ನೀವು ನಿಮ್ಮ ಭೂಮಿಯಲ್ಲಿ ಒತ್ತುವರಿದಾರರಾಗ್ತೀರಾ . 1995ರಲ್ಲಿ ವಕ್ಪ್‌ಗೆ ಟ್ರೀಬ್ಯೂನಲ್ ತಂದರು. ಅಫೀಲ್ ಪ್ರಾವಿಜನ್ ಅನ್ನೇ ತೆಗೆದು ಹಾಕಿದ್ರು.ನೀವು ಹೈಕೋರ್ಟ್‌ನಲ್ಲಿಯೂ ಕೂಡ ಪ್ರಶ್ನೆ ಮಾಡುವ ಹಾಗಿಲ್ಲ.ವಕ್ಪ್ ನಿಮ್ಮ‌ಜಾಗ ಕ್ಲೈಮ್‌ಮಾಡಿದ್ರೆ ನೀವು ಕೋರ್ಟ್‌ಗೆ ಹೋದರೆ 1 ವರ್ಷ ಮಾತ್ರ ಟೈಮ್ .ಅದರೆ ವಕ್ಪ್ ನಿಮ್ಮ ಭೂಮಿ ಕ್ಲೈಮ್ ಮಾಡಲು ಲಿಮಿಟೇಷನ್ ಇರಲಿಲ್ಲ.500 ವರ್ಷದ ಹಿಂದೆ ಯಾರೋ ದಾನ ಮಾಡಿದ್ರು ಎಂದು ಬೇಕಾದರೂ ಹೇಳಬಹುದು.ಪ್ರಪಂಚದ ಯಾವ ದೇಶದಲ್ಲಿಯೂ ಈ ರೀತಿಯ ವಕ್ಪ್ ಬಾಡಿ ಇರಲಿಲ್ಲ.ಪಾಕಿಸ್ತಾನ, ಸಿರಿಯಾ ಯಾವ ದೇಶದಲ್ಲಿಯೂ ಇಂತಹ ವಕ್ಪ್ ಬಾಡಿ ಇರಲಿಲ್ಲ ಎಂದ್ರು.

ಕಾಂಗ್ರೆಸ್ ಸರ್ಕಾರ ಎರಡು ಬಾರಿ ವಕ್ಫ್ ಕಾಯ್ದೆಗೆ ತಿದ್ದುಪಡಿ ಮಾಡಿತು. 2013 ರಲ್ಲಿ ಸೆಕ್ಷನ್ 40ನ್ನು ವಕ್ಫ್ ಬೋರ್ಡ್ ಗೆ ಸೇರಿಸಿತು.ಇದರ ಪ್ರಕಾರ ಯಾವ್ದೇ ಜಮೀನನ್ನಾದ್ರೂ ವಕ್ಫ್ ಅಂತ ಘೋಷಿಸಿಸುವ ಅಧಿಕಾರ ನೀಡಲಾಯ್ತು. ಸೆಕ್ಷನ್ 40 ಜೊತೆಗೆ, ಸೆಕ್ಷನ್ 5 ಕಾನೂನು ಬಂತು ಸೆಕ್ಷನ್ 40, ವಕ್ಫ್ ಆಸ್ತಿ ಅಂತ ಯಾವ್ದೇ ಜಾಗವನ್ನ ಘೋಷಿಸುವ ಅಧಿಕಾರ. ಸೆಕ್ಷನ್ 5, ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡುವುದು.ವಕ್ಫ್ ಬೋರ್ಡ್ ಯಾವ್ದೆಲ್ಲ ಆಸ್ತಿ ವಕ್ಫ್ ಅಂತ ಘೋಷಿಸುತ್ತೋ ಅದಕ್ಕೆ ಸಂಬಂಧಪಟ್ಟಂತೆ ದಾಖಲೆಗಳ ಪರಿಶೀಲನೆ ಮಾಡುವುದು. ಸಿರಿಯಾ, ಇರಾನ್, ಇರಾಕ್, ಪಾಕಿಸ್ತಾನದಲ್ಲೂ ಮಾಡದಂತಹ ನಿಯಮಗಳನ್ನ ಕಾಂಗ್ರೆಸ್ ಸರ್ಕಾರ ಭಾರತದಲ್ಲಿ ಮಾಡಿತು. ೧೦ ವರ್ಷದಲ್ಲಿ ೨೧ ಲಕ್ಷ ಎಕರೆ ಜಾಗ ವಕ್ಫ್ ಗೆ ಹೋಯಿತು. ಕಾಂಗ್ರೆಸ್ ನವರು ಸಿಕ್ಕಿದ್ರೆ ರಸ್ತೆ ರಸ್ತೆಯಲ್ಲಿ ನಿಲ್ಲಿಸಿ ಕೇಳಬೇಕು. ಭಾರತವನ್ನ ಪಾಕಿಸ್ತಾನ ಮಾಡಲು ಹೊರಟಿದ್ದಿರಾ ಅಂತಾ.ಯಾವ್ದೇ ಜಮೀನುನ್ನ ರೈತರಿಂದ ಕಿತ್ತುಕೊಳ್ಳೋಕೆ ಅವಕಾಶ ಇಲ್ಲ. ಈ ಹೊಸ ತಿದ್ದುಪಡಿಯಿಂದ ವಕ್ಫ್ ಬೋರ್ಡ್ ನ ನಿರ್ಧಾರಗಳನ್ನ ಹೈಕೋರ್ಟ್ ನಲ್ಲಿ ಪ್ರಶ್ನಿಸುವ ಸಾಂವಿಧಾನಿಕ ಅವಕಾಶ ನೀಡಲಾಗಿದೆ.ದೇಶದಲ್ಲಿರುವ ಎಲ್ಲಾ ವಕ್ಫ್ ಆಸ್ತಿ ಆನ್ ಲೈನ್ ಪೋರ್ಟಲ್ ನಲ್ಲಿ ನೋಂದಣಿಯಾಗಬೇಕು ಎಂದ್ರು.

ಇವತ್ತು ನಾವು ಈ ಕಾನುನಿಗೆ ಪುಲ್ ಸ್ಟಾಪ್ ಹಾಕಿದ್ದೇವೆ. ಸೆಕ್ಷನ್ 40 ತೆಗೆದು ಹಾಕಲಾಗಿದೆ. ಮುಸ್ಲಿಂರದ್ದು ಯಾವುದಿದೆಯೋ ಒಂದಿಂಚು ಜಾಗವನ್ನ‌ ಸರ್ಕಾರ ತೆಗೆದುಕೊಳ್ಳಲ್ಲ. ನಮಗೆ ಅದರ ಅವಶ್ಯಕತೆ ಇಲ್ಲ.ನಾವು ಲಿಮಿಟೇಷನ್ ವಕ್ಪ್‌ಗೂ ಅಪ್ಲೈ ಆಗೋತರ ತಂದಿದ್ದೇವೆ .ಹೈಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶ ಕೊಟ್ಟಿದ್ದೇವೆ. ಆನ್‌ಲೈನ್ ‌ಪೋರ್ಟಲ್ ‌ನಲ್ಲಿ ವಕ್ಪ್ ಆಸ್ತಿಯ ವಿವರಣೆ ಇರಬೇಕು. ವಕ್ಪ್ ಬೋರ್ಡ್ ಮ್ಯಾನೇಜ್ಮೆಂಟ್‌ನಲ್ಲಿ ಬದಲಾವಣೆ ಮಾಡಿದ್ದೇವೆ.ಮುಸ್ಲಿಂಯೇತರ ಸದಸ್ಯರನ್ನ‌ ಹಾಕಬೇಕು ಎನ್ನುವುದಾಗಿದೆ. ದೇವಸ್ಥಾನ ಕಮೀಟಿಲಿ ಮುಸ್ಲಿಂ  ಯಾಕೆ‌ ಹಾಕ್ತಿಲ್ಲ‌ ಎಂದು ಪ್ರಶ್ನೆ ಮಾಡ್ತಿದ್ದಾರೆ. ಹಿಂದೂ ದೇವಸ್ಥಾನದೊಂದಿಗೆ ಹೋಲಿಕೆ ಮಾಡ್ತಿದ್ದಾರೆ. ಹಿಂದೂ ದೇವಸ್ಥಾನದ ಆಸ್ತಿ ಸರ್ಕಾರದ ಕೈಯಲ್ಲಿದೆ.ಸರ್ಕಾರದ ಅಧಿಕಾರಿ ಬಳಿ ನಿರ್ಣಯ ತೆಗೆದುಕೊಳ್ಳಬೇಕಿದೆ.ಕರಗ ಮಾಡಬೇಕಾದರೆ ಸರ್ಕಾರದ ಕೈ ಕಟ್ಟಿ‌ ನಿಲ್ಲಬೇಕಿದೆ, ಪರ್ಮಿಷನ್ ಸಿಗ್ತಿಲ್ಲ ಎಂದರು.