ಮನೆ Latest News ಜೈಲಿನಲ್ಲಿ ದಾಸನನ್ನು ಭೇಟಿಯಾದ ಪತ್ನಿ, ಮಗ; ಗೆಳೆಯನಿಗಾಗಿ ಓಡೋಡಿ ಬಂದ ವಿನೋದ್ ಪ್ರಭಾಕರ್

ಜೈಲಿನಲ್ಲಿ ದಾಸನನ್ನು ಭೇಟಿಯಾದ ಪತ್ನಿ, ಮಗ; ಗೆಳೆಯನಿಗಾಗಿ ಓಡೋಡಿ ಬಂದ ವಿನೋದ್ ಪ್ರಭಾಕರ್

0

ಬೆಂಗಳೂರು; ತನ್ನ ಅಭಿಮಾನಿ ರೇಣುಕಾಸ್ವಾಮಿಯನ್ನು ಕೊಲೆಗೈದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ಅವರ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ಭೇಟಿಯಾದರು. ಪರಪ್ಪನ ಜೈಲು ಸೇರಿದಾಗಿನಿಂದ  ಮೌನಕ್ಕೆ ಜಾರಿರುವ ನಟ ದರ್ಶನ್ ಪತ್ನಿ ಹಾಗೂ  ಪುತ್ರನನ್ನು ನೋಡಿ ಭಾವುಕರಾಗಿದ್ದಾರೆ ಎನ್ನಲಾಗಿದೆ.

ಪುತ್ರ ವಿನೀಶ್ ನನ್ನು ನೋಡುತ್ತಿದ್ದಂತೆ ಆತನನ್ನು ಬಿಗಿದಪ್ಪಿಕೊಂಡ ದಾಸ ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಕೆಲ ಹೊತ್ತು ಮಾತನಾಡಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ ಬಾಸ್ ಪತ್ನಿ ಜೊತೆ ಕೆಲ ಹೊತ್ತು ಮಾತನಾಡಿದ್ದು ಈ ವೇಳೆ ಭಾವುಕರಾಗಿದ್ದರು ಎನ್ನಲಾಗಿದೆ.ಸುಮಾರು  ಅರ್ಧ ಗಂಟೆಗಳ ಕಾಲ ದರ್ಶನ್ ಪತ್ನಿ ಹಾಗೂ ಮಗನ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ. ಮಗನೊಂದಿಗೆ ಮಾತನಾಡುತ್ತಾ ಹೆಚ್ಚು ಸಮಯ ಕಳೆದಿದ್ದಾರೆ ಎನ್ನಲಾಗಿದೆ,

ಗೆಳೆಯನಿಗಾಗಿ ಓಡೋಡಿ ಬಂದ ವಿನೋದ್ ಪ್ರಭಾಕರ್

ಇನ್ನು ನಟ ದರ್ಶನ್ ಅವರನ್ನು ನೋಡಲು ನಟ ವಿನೋದ್ ಪ್ರಭಾಕರ್ ಕೂಡ ಇಂದು ಜೈಲಿಗೆ ಆಗಮಿಸಿದ್ದರು. ದರ್ಶನ್ ಭೇಟಿಯ ಬಳಿಕ ಮಾತನಾಡಿದ ಅವರು ದರ್ಶನ್ ಮೌನವಾಗಿದ್ರು…ಏನ್ ಟೈಗರ್ ಅಂತ ಹೇಳಿದ್ರು.ಅಷ್ಟೇ ಅವರು ನನ್ನ ಬಳಿ ಮಾತಾನಾಡಿದ್ದು ಎಂದಿದ್ದಾರೆ, ಅವರಿಗೆ ಶೇಕ್ ಹ್ಯಾಂಡ್ ಮಾಡಿ ಬಂದೆ ಎಂದು ಹೇಳಿದ್ದಾರೆ,

ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ.ಈ ಪ್ರಕರಣ ಬಹಳ ಗಂಭೀರವಾಗಿದೆ.ಏನು ಮಾತನಾಡಬೇಕು ಎನ್ನುವ ಕ್ಲಾರಿಟಿ ನನಗಿಲ್ಲ.ಯಾರಿಗೆ ಸಾಂತ್ವನ ಹೇಳಬೇಕು ಅಂತ ತಿಳಿಯಲಿಲ್ಲ.ನನ್ನ ಪ್ರಕಾರ ಎಲ್ಲರಿಗೂ ಒಳ್ಳೆಯದು ಆಗುತ್ತೆ ಎಂದು ವಿನೋದ್ ಹೇಳಿದ್ದಾರೆ.

ಡಿ ಬಾಸ್ ಭೇಟಿಗೆ ಬಂದ ಮಂಗಳಮುಖಿ ನಕ್ಷತ್ರ

ನಮ್ಮನೆ ಸುಮ್ಮನೆ ಆಶ್ರಮದ ಟ್ರಸ್ಟಿ ಮಂಗಳಮುಖಿ ನಕ್ಷತ್ರ ಅವರು ಕೂಡ ಇಂದು ದರ್ಶನ್ ಅವರ ಭೇಟಿಗಾಗಿ ಪರಪ್ಪನ ಅಗ್ರಹಾರ ಜೈಲಿನ ಬಳಿ ಬಂದಿದ್ದರು. ಈ ವೇಳೆ ಮಾತನಾಡಿದ ಅವರು ದರ್ಶನ್ ಅಣ್ಣ ನಮಗೆ ಅನ್ನ ನೀಡಿದ್ದಾರೆ.ನಮ್ಮ ಆಶ್ರಮಕ್ಕೆ ರೇಷನ್‌ನಿಂದ ಹಿಡಿದು ಬಹಳಷ್ಟು ಸಹಾಯ ಮಾಡಿದ್ದಾರೆ.ನಮಗೆ ಕಷ್ಟದ ಸಮಯದಲ್ಲಿ ದರ್ಶನಣ್ಣ ನೆರವಾಗಿದ್ದಾರೆ.ಹಾಗಾಗಿ ಅವರ ಭೇಟಿಗೆ ಬಂದಿದ್ದೇವೆ ಎಂದರು,ಆಶ್ರಮದ ಕಟ್ಟಡ ನಿರ್ಮಾಣಕ್ಕೆ ದರ್ಶನ್ ಆರ್ಥಿಕ ನೆರವು ನೀಡಿದ್ದಾರೆ.ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ.ಆದರೆ ಯಾವತ್ತೂ ಯಾರ ಮನೆ ಅನ್ನ ತಿಂದರೂ ಮರೆಯಬಾರದು ಎಂದು ಅವರು ಹೇಳಿದ್ದಾರೆ.