ಬೆಂಗಳೂರು; ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಡಾ. ಅಂಬೇಡ್ಕರ್ ಭೇಟಿ ನೀಡಿ ನೂರು ವರ್ಷಗಳು ಸಂದ ಹಿನ್ನೆಲೆ ಬಿಜೆಪಿಯಿಂದ ಭೀಮ ಹೆಜ್ಜೆ-ಶತಮಾನದ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಂಗಳೂರಿನಿಂದ ನಿಪ್ಪಾಣಿಗೆ ರಥಯಾತ್ರೆ ಮತ್ತು ಬೈಕ್ ರ್ಯಾಲಿ ಆಯೋಜನೆ ಮಾಡಲಾಗಿದ್ದು ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ರಥಯಾತ್ರೆಗೆ ಚಾಲನೆ ನೀಡಲಾಯಿತು.
ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ. ಮೋಹನ್, ಶಾಸಕರಾದ ಸಿ.ಕೆ. ರಾಮಮೂರ್ತಿ, ಧೀರಜ್ ಮುನಿರಾಜು, ಸಿಮೆಂಟ್ ಮಂಜುನಾಥ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಮಾಜಿ ಸಂಸದ ಎಸ್. ಮುನಿಸ್ವಾಮಿ ಉಪಸ್ಥಿತರಿದ್ದರು.
ಏಪ್ರಿಲ್ 15 ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಪಕ್ಷಕ್ಕೆ ಯಾವ ರೀತಿಯ ದುರಂಹಕಾರ, ಅಂಬೇಡ್ಕರ್ ಬಗ್ಗೆ ತಿರಸ್ಕಾರ ಭಾವನೆ ಇದೆ ಅಂತಾ ಗೊತ್ತಾಗುತ್ತದೆ. ಇತ್ತೀಚೆಗೆ ಒರಿಜಿನಲ್ ಗಾಂಧಿ ಬೆಳಗಾವಿಗೆ ಬಂದಿದ್ದಕ್ಕೆ ನಕಲಿ ಗಾಂಧಿಗಳು ತಮ್ಮ ಕಾರ್ಯಕ್ರಮ ಮಾಡಿಕೊಂಡರು.ಅಂಬೇಡ್ಕರ್ ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಬಂದು ನೂರು ವರ್ಷ ಆಗಿದೆ. ಸರ್ವ ಪಕ್ಷ ಸಮಿತಿ ರಚನೆ ಮಾಡಿ ಎರಡು ದಿನಗಳ ಕಾರ್ಯಕ್ರಮ ಮಾಡಲು ಇವರಿಗೆ ಏನಾಗಿತ್ತು?. ಅಂಬೇಡ್ಕರ್ ಅವರನ್ನು ಮರೆಯಬೇಕು ಅಂತಾ ನೂರು ವರ್ಷದ ಕಾರ್ಯಕ್ರಮ ಮಾಡಲಿಲ್ಲ ದೇಶದ ಬಗ್ಗೆ, ಸಮಾಜದ ಬಗ್ಗೆ ನಿಷ್ಠೆ ಕಮ್ಮಿ ಇರುವವರು ಕಮ್ಯುನಿಸ್ಟರು. ಅಂಬೇಡ್ಕರ್ ಯಾವ ಕ್ಷೇತ್ರಗಳಿಂದ ಅಸೆಂಬ್ಲಿಗೆ ಬಂದಿದ್ದರೋ ಆ ಕ್ಷೇತ್ರಗಳು ಹಿಂದೂ ಬಾಹುಳ್ಯವಾಗಿದ್ದವು. ಅಂಬೇಡ್ಕರ್ ಆಯ್ಕೆ ಅನೂರ್ಜಿತವಾಗಬೇಕು ಎಂದು ಅಂದು ಆ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟರು.ಅಂಬೇಡ್ಕರ್ ಶಾಸನಸಭೆಯಲ್ಲಿ ಇರಬಾರದು ಅಂತಾ ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲಾಯಿತು ಎಂದ್ರು.
ಬಹಳ ಜವಾಬ್ದಾರಿಯಿಂದ ನಾನು ಈ ಆರೋಪ ಮಾಡುತ್ತಿದ್ದೇನೆ. ದಲಿತರಿಗೆ ಮೀಸಲಾತಿ ಕೊಡದಂತೆ ದೇಶದ ಎಲ್ಲಾ ಸಿಎಂಗಳಿಗೆ ಪತ್ರ ಬರೆದ ಕಾಂಗ್ರೆಸ್ ನಾಯಕ ನೆಹರು. ಅದೇ ರಕ್ತ ಕಾಂಗ್ರೆಸ್ ನವರಲ್ಲಿಯೂ ಬಂದಿದೆ.ಎಸ್ ಸಿ, ಎಸ್ಟಿ ಗಳಿಗೆ ಸ್ಥಾನ ಮೀಸಲಿಡಬೇಕು ಅಂತಾದಾಗ ಕಾಂಗ್ರೆಸ್ ವಿರೋಧ ಮಾಡಿತ್ತು. ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ವಿಧಾನಸಭೆಯಲ್ಲಿ ಹೇಳಿದರೂ ಸರ್ಕಾರ ಕಾರ್ಯಕ್ರಮ ಮಾಡಿಲ್ಲ .ಇನ್ನು ಕಾಂಗ್ರೆಸ್ ದಲಿತರಿಗೆ ನ್ಯಾಯ ಕೊಡಲು ಸಾಧ್ಯವೇ. ಕಾಂಗ್ರೆಸ್ ನವರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಡಾ. ಅಂಬೇಡ್ಕರ್ ಭೇಟಿ ನೀಡಿ ನೂರು ವರ್ಷ ಹಿನ್ನೆಲೆ, ಬೆಂಗಳೂರಿನಿಂದ ನಿಪ್ಪಾಣಿವರೆಗೆ ರಥ ಯಾತ್ರೆ ಮತ್ತು ಬೈಕ್ ರ್ಯಾಲಿ; ಮಾದಾವರದಲ್ಲಿ ಬೈಕ್ ರ್ಯಾಲಿಗೆ ಛಲವಾದಿ ನಾರಾಯಣಸ್ವಾಮಿ ಚಾಲನೆ
ತುಮಕೂರು; ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಡಾ. ಅಂಬೇಡ್ಕರ್ ಭೇಟಿ ನೀಡಿ ನೂರು ವರ್ಷ ಹಿನ್ನೆಲೆ, ಬೆಂಗಳೂರಿನಿಂದ ನಿಪ್ಪಾಣಿವರೆಗೆ ರಥ ಯಾತ್ರೆ ಮತ್ತು ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಈ ರಥಯಾತ್ರೆಗೆ ಮಾದಾವರದಲ್ಲಿ ಛಲವಾದಿ ನಾರಾಯಣಸ್ವಾಮಿ ಚಾಲನೆ ನೀಡಿದರು.ಮಾಜಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಶಾಸಕರಾದ ಸಿಮೆಂಟ್ ಮಂಜುನಾಥ್, ಸಿ.ಕೆ. ರಾಮಮೂರ್ತಿ, ಧೀರಜ್ ಮುನಿರಾಜು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮತ್ತು ಮಾಜಿ ಸಂಸದ ಎಸ್. ಮಹೇಶ ಉಪಸ್ಥಿತರಿದ್ದರು.
ರ್ಯಾಲಿಗೆ ಚಾಲನೆ ಕೊಟ್ಟು ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಒಂದು ತಿಂಗಳ ಹಿಂದೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸಮ್ಮೇಳನ ಮಾಡಿದರು. ಅಲ್ಲಿ ಜೈ ಬಾಪು,ಜೈ ಭೀಮ್ ಅಂತಾ ಹೇಳಿದ್ದರು. ಅಲ್ಲಿ ಅಂಬೇಡ್ಕರ್ ಅವರ ಫೋಟೋ ಚಿಕ್ಕದಾಗಿ ಹಾಕಿದ್ದರು.ಅವರ ನಾಯಕ ರಾಹುಲ್ ಗಾಂಧಿ ಅವರ ಫೋಟೋ ದೊಡ್ಡದಾಗಿ ಹಾಕಿದ್ದರು.ಶಶಿಕಲಾ ಜೊಲ್ಲೆ ಅವರು ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರು. ಆದರೂ ಕಾಂಗ್ರೆಸ್ ನವರಿಗೆ ಅರಿವಾಗಲಿಲ್ಲ.ಕಾಂಗ್ರೆಸ್ ನವರಿಗೆ ಅಂಬೇಡ್ಕರ್ ಬೇಕಾಗಿಲ್ಲ. ಮೊದಲಿನಿಂದಲೂ ಅಂಬೇಡ್ಕರ್ ಅವರ ವಿರೋಧಿ ಕಾಂಗ್ರೆಸ್. ನೆಹರೂ ಇದ್ದಾಗ ಅಂಬೇಡ್ಕರ್ ಅವರಿಗೆ ಟಿಕೆಟ್ ತಪ್ಪಿಸಿದರು.ಲಾರ್ಡ್ ಮೌಂಟ್ ಬ್ಯಾಟನ್ ಅವರ ಪತ್ನಿಗೆ ನೆಹರೂ ಪತ್ರ ಬರೆದಿದ್ದರು.ಚುನಾವಣೆ ಚೆನ್ನಾಗಿ ಮಾಡಿದ್ದೇವೆ, ಆದರೆ ಸಂತೋಷದ ವಿಷಯ ಅಂದರೆ ಅಂಬೇಡ್ಕರ್ ಅವರನ್ನು ಸೋಲಿಸಿದ್ದೇವೆ ಅಂತಾ ಪತ್ರ ಬರೆಯುತ್ತಾರೆ.ಕಾಂಗ್ರೆಸ್ ಗೆ ಮೀಸಲಾತಿ ಬಗ್ಗೆ ಮಾತಾಡಕು ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಅಂಬೇಡ್ಕರ್ ಅವರ ಮನೆ, ಓಡಾಡಿದ ಜಾಗ, ದೀಕ್ಷಾ ಭೂಮಿ, ಅಂತ್ಯಕ್ರಿಯೆ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದ್ದು ಮೋದಿ. ಮೋದಿ ಅಭಿವೃದ್ಧಿ ಪಡಿಸಿದಂತೆ ರಾಜ್ಯದಲ್ಲಿ ಅಂಬೇಡ್ಕರ್ 10 ಕಡೆ ಓಡಾಡಿದ್ದಾರೆ. ಆ ಸ್ಥಳಗಳ ಅಭಿವೃದ್ಧಿಗೆ ಬೊಮ್ಮಾಯಿ ಸಿಎಂ ಆಗಿದ್ದಾಗ ಒಪ್ಪಿಗೆ ನೀಡಿದ್ದರು.ಆದರೆ ಹಣ ಬಿಡುಗಡೆ ಮಾಡದೇ ಕಾಂಗ್ರೆಸ್ ಅಭಿವೃದ್ಧಿ ಮಾಡುತ್ತಿಲ್ಲ ಎಂದರು.