ಬೆಂಗಳೂರು; ಶಿರಾದಲ್ಲಿ ಏರ್ ಪೋರ್ಟ್ ಗೆ ಸತೀಶ್ ಜಾರಕಿಹೊಳಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಯಚಂದ್ರ ಪತ್ರಕ್ಕೆ ಸತೀಶ್ ಜಾರಕಿಹೊಳಿ ಬೆಂಬಲ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಶಿರಾದಲ್ಲಿ ಸರ್ಕಾರದ ಜಾಗವಿದೆ. ನಾವೆಲ್ಲ ದೂರದ ಜಿಲ್ಲೆಗಳಿಂದ ಬರುವವರು. ಈಗ ಮೂರೇ ಸ್ಥಳ ನಿಗದಿ ಮಾಡಿದ್ದಾರೆ.ಈಗ ಎಲ್ಲ ಶಾಸಕರು ಪತ್ರ ಕೊಟ್ಟ ಮೇಲೆ ಈಗಲೂ ಪ್ರಸ್ತಾವನೆ ಕಳಿಸಲಿ. ಶಿರಾ ತಾಲೂಕಿಗೂ ಎಕ್ಸಪರ್ಟ್ ಕಮಿಟಿ ಭೇಟಿ ಕೊಡಬಹುದು . ಬೆಂಗಳೂರನ್ನೂ ಕೂಡ ನಾವು ಕಾಪಾಡಿಕೊಳ್ಳಬೇಕು. ಈಗಲೇ ಬೆಂಗಳೂರಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ಮತ್ತೆ ಇಲ್ಲಿಯೇ ಏರ್ ಫೋರ್ಟ್ ಆದರೆ ಮತ್ತಷ್ಟು ಸಮಸ್ಯೆ. ಇಂಟರ್ನ್ಯಾಷನಲ್ ಏರ್ಪೋರ್ಟ್ ಗೆ ಕೇವಲ ಬೆಂಗಳೂರವರು ಮಾತ್ರ ಬರಲ್ಲ .ಉತ್ತರ ಕರ್ನಾಟಕದ ಭಾಗದ ಹೆಚ್ಚಿನ ಜನರಿಗೆ ಅನುಕೂಲ ಆಗುತ್ತದೆ ಶಿರಾದಲ್ಲಿ ಮಾಡಿದರೆ ನೆಲಮಂಗಲ ಅಥವಾ ತುಮಕೂರಲ್ಲಿ ಆದ್ರೂ ಓಕೆ ಎಂದಿದ್ದಾರೆ.
ಆರು ತಿಂಗಳ ಹಿಂದೆಯೇ ನಾನು ಲೆಟರ್ ಬರೆದಿದ್ದೆ. ಈಗ ಇವ್ರು ಲೆಟರ್ ಬರೆದಿರಬಹುದು. ಹುಬ್ಬಳ್ಳಿ, ಬೆಳಗಾಂ, ಶಿವಮೊಗ್ಗ ಎಲ್ಲದಕ್ಕೂ ಹತ್ತಿರ ಆಗುತ್ತೆ. ಸಿಟಿ ಬಳಿ ಆದ್ರೆ ಟ್ರಾಫಿಕ್ ಹೆಚ್ಚಾಗುತ್ತೆ. ಶಿರಾ ಬಳಿ ಸರ್ಕಾರಿ ಲ್ಯಾಂಡ್ ಇದೆ ಅಲ್ಲಿ ಆಗಲಿ . ಸಿಎಂಗೆ ಆರು ತಿಂಗಳ ಹಿಂದೆಯೇ ನಾನು ಲೆಟರ್ ಬರೆದಿದ್ದೆ. ಅವ್ರು ಮೂರು ಸ್ಥಳ ವೀಕ್ಷಣೆ ಮಾಡಿದ್ದಾರೆ. ಅದರಲ್ಲಿ ಶಿರಾ ಇಲ್ಲ.ಅಂತಿಮವಾಗಿ ಎಲ್ಲಿ ಮಾಡಬೇಕು ಅಂತಾ ಎಎಐ ತೀರ್ಮಾನ ಮಾಡ್ತಾರೆ. ಶಿರಾದಲ್ಲಿ ಆಗಲಿ ಅಂತಾ ಡಿಮ್ಯಾಂಡ್ ಇದೆ. ಜಯಚಂದ್ರ ಅವ್ರು ಕೂಡ ಡಿಮ್ಯಾಂಡ್ ಇದೆ. ಬೆಂಗಳೂರಿನ ಮಹತ್ವನ್ನೂ ಕಾಯ್ದುಕೊಳ್ಳಬೇಕಾಗುತ್ತೆ. ಇಲ್ಲಿ ಏರ್ ಪೋರ್ಟ್ ಆದ್ರೆ ಮತ್ತೆ ಬೆಂಗಳೂರಿಗೆ ಸಮಸ್ಯೆ ಆಗುತ್ತೆ. ಬೆಂಗಳೂರಿಗರು ಮಾತ್ರ ವಿಮಾನದಲ್ಲಿ ಹೋಗಲ್ವಲ್ಲಾ. ಅಲ್ಲಿ ತಪ್ಪಿಸಬೇಕು ಅಂತಾ ನಾವೇನೂ ಕೇಳ್ತಿಲ್ಲ.ಶಿರಾ ಅಥವಾ ತುಮಕೂರು ಮಧ್ಯೆ ಆದ್ರೂ ಪರವಾಗಿಲ್ಲ ಎಂದಿದ್ದಾರೆ.
ಕೇಂದ್ರ ವಿಮಾನಯಾನ ಮಂತ್ರಿಗಳನ್ನೂ ಭೇಟಿ ಮಾಡಿ ಬಂದಿದ್ದೇನೆ.ಇದೇ ಕಾರಣಕ್ಕೆ ಕೇಂದ್ರ ಮಂತ್ರಿಗಳನ್ನ ಭೇಟಿ ಮಾಡಿದ್ದು. ಅಲ್ಲಿ ಮಾಡೋದು ಬಿಡೋದು ಎಎಐಗೆ ಬಿಟ್ಟಿದ್ದು. ಬೆಂಗಳೂರನ್ನ ಟ್ರಾಫಿಕ್ ಮುಕ್ತ ಮಾಡಬೇಕು ನಮ್ಮ ಉದ್ದೇಶ ಇಷ್ಟೇ. ಪರಮೇಶ್ವರ್, ಜಯಚಂದ್ರ ಎಲ್ಲಾ ಸಿಎಂ ಜೊತೆ ಮಾತಾಡಿದ್ದಾರೆ ಎಂದ್ರು. ಶಿರಾದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಒತ್ತಾಯ ವಿಚಾರದ ಬಗ್ಗೆ ಮಾತನಾಡಿ ರಾದಲ್ಲಿ ವಿಮಾನ ನಿಲ್ದಾಣ ಆಗಬೇಕೆಂದು ಪತ್ರ ಬರೆದಿದ್ದೆ. ನಾನೂ ಕೂಡ ಸಿಎಂ ಸಿದ್ದರಾಮಯ್ಯ ಅವ್ರಿಗೆ ಪತ್ರ ಬರೆದಿದ್ದೆ. ಆರು ತಿಂಗಳ ಹಿಂದೆಯೇ ಪತ್ರ ಬರೆದು ಒತ್ತಾಯಿಸಿದ್ದೆ. ದೆಹಲಿ ಭೇಟಿ ವೇಳೆ ಕೇಂದ್ರ ವಿಮಾನ ಸಚಿವರ ಜೊತೆಯೂ ಚರ್ಚಿಸಿದ್ದೆವು. ಆಗಲೂ ಶಿರಾದಲ್ಲಿ ವಿಮಾನ ನಿಲ್ದಾಣ ಮಾಡಬೇಕೆಂದು ಮನವಿ ಮಾಡಿದ್ದೆವು. ಅವರೂ ಕೂಡ ಸಕಾರಾತ್ಮಕವಾಗಿ ನಮ್ಮ ಮನವಿಗೆ ಸ್ಪಂದಿಸಿದ್ದರು. ಈಗ ಮೂರು ಕಡೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಇಲ್ಲವೇ ಶಿರಾ ಎಲ್ಲಿಯಾದರೂ ಮಾಡಲಿ. ಇದಕ್ಕೆ ನಮ್ಮ ಸಹಮತ ಇದೆ. ಆದರೆ ಆ ಭಾಗದಲ್ಲಿ ಮಾಡಿದರೆ ಏನೂ ಉಪಯೋಗ ಇಲ್ಲ ಎಂದು ತಿಳಿಸಿದ್ರು.
ಈಗಾಗಲೇ ಬೆಂಗಳೂರು ಸಂಚಾರ ದಟ್ಟಣೆಯಿಂದ ನಲುಗಿದೆ. ಇನ್ನು ಎರಡನೇ ವಿಮಾನ ನಿಲ್ದಾಣ ದಕ್ಷಿಣ ಭಾಗದಲ್ಲಿ ಮಾಡಿದರೆ ಮತ್ತಷ್ಟು ಟ್ರಾಫಿಕ್ ಜಾಮ್ ಆಗಲಿದೆ. ಶಿರಾದಲ್ಲಿ ವಿಮಾನ ನಿಲ್ದಾಣಕ್ಕೆ ಸಾಕಷ್ಟು ಸ್ಥಳಾವಕಾಶ ಇದೆ. ಆ ಭಾಗದಲ್ಲಿ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೂ ಅನುಕೂಲ ಆಗಲಿದೆ ಎಂದ ಅವರು ಬೆಂಗಳೂರು ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.