ಬೆಂಗಳೂರು: ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಫೆಬ್ರವರಿ ತಿಂಗಳ ಟೆಸ್ಟ್ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ರು. ಆಹಾರ, ಔಷಧಿ ಗುಣಮಟ್ಟ ನಮ್ಮ ಜವಾಬ್ದಾರಿ .ಸರ್ಕಾರ ರಚನೆಯಾದ ಬಳಿಕ ಆಹಾರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.
296 ಕುಡಿಯುವ ನೀರಿನ ಬಾಟಲ್ ಮಾದರಿಗಳ ಟೆಸ್ಟ್ ಮಾಡಲಾಗಿದೆ. 72 ಸುರಕ್ಷಿತ ಅಂತಾ ವರದಿ ಬಂದಿದೆ. 95 ಮಾದರಿಗಳು ಅಸುರಕ್ಷಿತ ಎಂದು ವರದಿ ಬಂದಿದೆ. 88 ಮಾದರಿಗಳು ಕಳಪೆ ಗುಣಮಟ್ಟ ಅಂತ ವರದಿಯಾಗಿದೆ. : ಪನ್ನೀರ್ 231 ಮಾದರಿ ಟೆಸ್ಟ್ ಪೈಕಿ, 2 ಮಾದರಿಗಳು ಅಸುರಕ್ಷಿತ, 30 ಮಾದರಿಗಳು ಸುರಕ್ಷಿತ ಎಂದು ವರದಿ ಬಂದಿದೆ ಎಂದು ತಿಳಿಸಿದ್ರು.
198 ಮಾದರಿಯ ಸಿಹಿ ತಿಂಡಿಗಳನ್ನು ಟೆಸ್ಟ್ ಮಾಡಲಾಗಿದೆ. ಈ ಪೈಕಿ 83 ಮಾದರಿ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 2 ಮಾದರಿಗಳು ಅಸುರಕ್ಷಿತ ಎಂದು ವರದಿ ಬಂದಿದೆ. 81 ಮಾದರಿಗಳು ಸುರಕ್ಷಿತ ಎಂದು ವರದಿ ಬಂದಿದೆ. 1872 ಔಷದಿ ಮಾದರಿಗಳು ವಿಶ್ಲೇಷಣೆ ಮಾಡಲಾಗಿದೆ. 2078 ಔಷಧ ಮಳಿಗೆಗಳಲ್ಲಿ ಪರಿವೀಕ್ಷಣೆ ನಡೆಸಲಾಗಿದೆ ಎಂದು ತಿಳಿಸಿದ್ರು. ನಿಯಮ ಉಲ್ಲಂಘನೆ ಮಾಡಿರೋ 215 ಸಂಸ್ಥೆಗಳ ಪರವಾನಗಿ ಅಮಾನತ್ತು ಮಾಡಲಾಗಿದೆ ಎಂದ್ರು.
ತುಪ್ಪದ 49 ಮಾದರಿ ಸಂಗ್ರಹ ಮಾಡಲಾಗಿದ್ದು, 6 ಮಾದರಿ ವಿಶ್ಲೇಷಣಾ ಕಾರ್ಯ ಪೂರ್ಣವಾಗಿದೆ. ಎಲ್ಲಾ ಮಾದರಿ ಅಸುರಕ್ಷಿತ ಅಂತ ವರದಿ ಬಂದಿದೆ. ಇನ್ನು ಖೋವಾ 43 ಮಾದರಿ ಸಂಗ್ರಹ ಮಾಡಿ ಟೆಸ್ಟ್ ಮಾಡಲಾಗಿದೆ. 9 ಮಾದರಿ ವಿಶ್ಲೇಷಣಾ ಕಾರ್ಯ ಮಾಡಲಾಗಿದೆ. 3 ಮಾದರಿ ಕಳಪೆ ಗುಣಮಟ್ಟ, 6 ಮಾದರಿ ಅಸುರಕ್ಷಿತ ಅಂತ ವರದಿ ಬಂದಿದೆ ಎಂದ್ರು.
ಖಾರ ಮಿಕ್ಚರ್ ನ 119 ಮಾದರಿಗಳನ್ನು ಸಂಗ್ರಹಿಸಿ 27 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣವಾಗಿದೆ. 4 ಮಾದರಿಗಳು ಅಸುರಕ್ಷಿತ, 23 ಮಾದರಿಗಳು ಸುರಕ್ಷಿತ ಎಂದು ಗೊತ್ತಾಗಿದೆ. 92 ಐಸ್ಕ್ರೀಂ ಘಟಕಗಳಿಗೆ ನೋಟಿಸ್ ನೀಡಲಾಗಿದೆ. ತಯಾರಿಕ ಘಟಕಗಳಲ್ಲಿ ಲೋಪ ಬಂದ ಹಿನ್ನೆಲೆ ನೋಟಿಸ್ ಕೊಡಾಗಿದೆ. 6 ಐಸ್ ಕ್ರೀಂ ಘಟಕಗಳಿಗೆ 38 ಸಾವಿರ ದಂಡ ಹಾಕಲಾಗಿದೆ. ನಿಯನ ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ವಾಟರ್ ಬಾಟಲ್ ಕಂಪನಿಗಳಿಗೆ ನೋಟಿಸ್ ಕೊಡ್ತೇವೆ.ಲೀಗಲ್ ಸ್ಯಾಂಪಲ್ ತೆಗೆದು ನೋಟಿಸ್ ಕೊಡ್ತೇವೆ. 115 ಕಂಪನಿಗಳಿಗೆ ನೋಟಿಸ್ ಕೊಡ್ತೇವೆ. ನೀರಿನ ಬಾಟಲ್ ಗಳನ್ನ ಚೆಕ್ ಮಾಡಿದಾಗ ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ ಎಂದ್ರು. ಇನ್ನು ಬಿಜೆಪಿ ಜನಾಕ್ರೋಶ ಯಾತ್ರೆ ವಿಚಾರದ ಬಗ್ಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳ ಈಗಾಗಲೇ ಹೇಳಿದ್ದಾರೆ. ಜನಾಕ್ರೋಶ ಯಾತ್ರೆಯಲ್ಲಿ ಕೇಂದ್ರದ್ದು ಸೇರಿಸಿಕೊಳ್ಳಲಿ.ಕೇಂದ್ರ ಸರ್ಕಾರ, ಮೋದಿ ಅವರ ಆಡಳಿತ ಬಗ್ಗೆ ಜನಾಕ್ರೋಶ ಮಾಡಲಿ.ಅದು ಬಿಟ್ಟು ರಾಜ್ಯ ಸರ್ಕಾರ ವಿರುದ್ಧ ಮಾಡಿದ್ರೆ ರಾಜಕೀಯ. ಡಿಸೇಲ್, ಪೆಟ್ರೋಲ್, ಎಲ್ ಪಿಜಿ, ಸೇರಿಸಿಕೊಂಡು ಯಾತ್ರೆ ಮಾಡಲಿ.ಯಾತ್ರೆ ಮಾಡಬೇಕಾ ಬೇಡ್ವಾ ಅಂತ ವಿಜಯೇಂದ್ರ ತೀರ್ಮಾನ ಮಾಡಲಿ ಎಂದ್ರು.