ಮನೆ Latest News ಯತ್ನಾಳ್ ಉಚ್ಛಾಟನೆ ನಮಗೆ ತುಂಬಾ ನೋವು ತಂದಿದೆ: ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿಕೆ

ಯತ್ನಾಳ್ ಉಚ್ಛಾಟನೆ ನಮಗೆ ತುಂಬಾ ನೋವು ತಂದಿದೆ: ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿಕೆ

0

ಬೆಂಗಳೂರು: ಯತ್ನಾಳ್ ಉಚ್ಛಾಟನೆ ನಮಗೆ ತುಂಬಾ ನೋವು ತಂದಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಸಂಸತ್ತಿನಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆ ಅಂಗೀಕಾರದ ಬಗ್ಗೆ ಮಾತನಾಡಿದ ಅವರು ವಕ್ಪ್ ಅನೇಕ ಶತಮಾನಗಳಿಂದ ಬಂದಿರುವ ವ್ಯವಸ್ಥೆ.ಅನೇಕ ರಾಷ್ಟ್ರಗಳು ಇದರ ಕಾನೂನು‌ ಬದಲಾವಣೆ ಮಾಡಿಕೊಂಡಿದ್ದರೂ‌ ಕೂಡಾ ನಮ್ಮ ದೇಶದಲ್ಲಿ ಬದಲಾವಣೆ ಮಾಡದೇ ಇರುವ ಪರಿಸ್ಥಿತಿ ಇತ್ತು. ರಾಜ್ಯದಲ್ಲಿ ಯತ್ನಾಳ್ ಅವರ ನೇತೃತ್ವದಲ್ಲಿ ಹೋರಾಟ ಮಾಡಿದ್ದೆವು. ಹೋರಾಟದ ಮುಂಚೂಣಿಯಲ್ಲಿ ಅನೇಕ ಬಿಜೆಪಿ ಕಾರ್ಯಕರ್ತರು ಕೂಡಾ ಜೊತೆ ಬಂದಿದ್ದರು. ಇಂದು ದೇಶಕ್ಕೆ ಬಹಳ ನಿರಾಳವಾಗಿದೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳು ಇದ್ದ ಸಂದರ್ಭದಲ್ಲಿ ಈಗ ನಮಗೆ ಕೂಡಾ ಶಕ್ತಿ ಬಂದಂತಾಗಿದೆ. ವಕ್ಪ್, ವಾಲ್ಮೀಕಿ ನಿಗಮ, 4% ಮೀಸಲಾತಿ ಸೇರಿ ಅನೇಕ ಹೋರಾಟ ಆಗಿದೆ. ನಮ್ಮನ್ನು ಯತ್ನಾಳ್ ಟೀಮ್ ಅಂತಾನೇ ಕರೆಯುತ್ತಿದ್ದರು. ಇಂದು ಯತ್ನಾಳ್ ಉಚ್ಛಾಟನೆ ನಮಗೆ ತುಂಬಾ ನೋವು ಇದೆ. ಬಿಜೆಪಿ ಸಂಘಟನೆ ನಮ್ಮ‌ ಉದ್ದೇಶ. ಉಳಿದಿರುವ ಮೂರು ವರ್ಷಗಳಲ್ಲಿ ಪಕ್ಷ ಸಂಘಟನೆ ಮಾಡಬೇಕು.ಕಾಂಗ್ರೆಸ್ ವಿರುದ್ಧ ಶುರುವಾಗಿರುವ ವಿರೋಧಿ ಅಲೆಯನ್ನು ನಾವು ಉಪಯೋಗಿಸಿಕೊಳ್ಳಬೇಕು ಎಂದರು.

ಆದಷ್ಟು ಬೇಗ ಯತ್ನಾಳ್ ಅವರನ್ನು ವಾಪಸ್ ಕರೆತರುವ ಬಗ್ಗೆ ನಮ್ಮ ಪಕ್ಷದ ಹಿರಿಯರು ಹೋಗಿ ಮನವರಿಕೆ ಮಾಡಿಕೊಡುತ್ತಾರೆ. ಉತ್ತರ ಕರ್ನಾಟಕ ಭಾಷೆಯ ಬಗ್ಗೆ ಕೆಲವು ತಪ್ಪು ಕಲ್ಪನೆಗಳಾಗಿವೆ. ಅದೆಲ್ಲವನ್ನೂ ನಾವು ಸರಿಪಡಿಸಿಕೊಳ್ಳುವ ಕೆಲಸ ಮಾಡುತ್ತೇವೆ. ಸದನದಲ್ಲಿ ಬಿಜೆಪಿ ಹೋರಾಟ ಸರಿ ಆಗಲಿಲ್ಲ .ಯಾವ ವಿಚಾರ ಬಿಗಿಯಾಗಿ ಹೋರಾಟ ಮಾಡಬೇಕಿತ್ತೋ ಮಾಡಲಿಲ್ಲ. ಸದನದಲ್ಲಿ ಚೀಟಿ ಎಲ್ಲಿಂದ ಬಂತು ಅಂತಾ ತನಿಖೆ ಮಾಡಲು ಹೊರಡುತ್ತಾರೆ. ಇದುವರೆಗೆ ಆಗಿರುವ ಹೋರಾಟಗಳಲ್ಲಿ ತಾರ್ಕಿಕ ಅಂತ್ಯಕ್ಕೆ ತಲುಪಿಸಿದ್ದಾರಾ?. ಬಿಜೆಪಿ ಕಟ್ಟಿದ ಯಡಿಯೂರಪ್ಪ ಇಂದು ತಮ್ಮ ಮಗನನ್ನು ಉಳಿಸಿಕೊಳ್ಳಲು ಪ್ರತಿಭಟನೆಗೆ ಬಂದು ಕೂರಬೇಕಾಯಿತು. ಆ ಪರಿಸ್ಥಿತಿ ತಂದವರು ವಿಜಯೇಂದ್ರ‌.ವರಿಷ್ಠರು, ಸಂಘಟನೆ ಬಳಿ ಸರಿಪಡಿಸಿಕೊಳ್ಳುವ ವಿಚಾರವನ್ನು ತೆಗೆದುಕೊಂಡು ಹೋಗಿ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಮಾಡುತ್ತೇವೆ ಅಂದರೆ ಹೇಗೆ?.ಅದು ಇನ್ನೊಂದು ಹಂತದ ಒಡಕಿಗೆ ಕಾರಣ ಆಗಿದೆ ಹೊರತು ಒಗ್ಗಟ್ಟು ಆಗಿಲ್ಲ. ಶೀಘ್ರದಲ್ಲೇ ವರಿಷ್ಠರಿಂದ ಒಂದು ಸ್ಪಷ್ಟ ಆದೇಶ ಬರುವ ನಿರೀಕ್ಷೆ ಇದೆ ಎಂದರು.

ಮಡಿಕೇರಿಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಅವರು ಬಿಜೆಪಿ ಕಾರ್ಯಕರ್ತ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ದುರ್ದೈವ. ಇಂತಹ ದುರಂತಗಳಿಗೆ ನಾಂದಿ ಹಾಡಲು ಅವಕಾಶ ಮಾಡಿಕೊಡಬೇಡಿ. ಪೊಲೀಸ್ ಇಲಾಖೆ ತನಿಖೆ ಮಾಡುತ್ತದೆ. ಯಾರದೇ ಹೆಸರಿನ ಉಲ್ಲೇಖ ಇದ್ದರೂ ಅದರ ಬಗ್ಗೆ ಮಾತಾಡುವುದು ಸೂಕ್ತವಲ್ಲ. ಎಂದರು.