ಬೆಂಗಳೂರು: ಲೋಕಸಭೆಯಲ್ಲಿ ವಕ್ಫ್ ಬಿಲ್ ಅಂಗಿಕಾರವಾಗಿದ್ದಕ್ಕೆ ಮೋದಿ, ಅಮಿತ್ ಶಾಗೆ ಯತ್ನಾಳ್ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಧನ್ಯವಾದ ಹೇಳೋಕೆ ಇಷ್ಟಪಡ್ತೀನಿ. ಯಾವುದೇ ಆಸ್ತಿಯನ್ನ ಇನ್ಮುಂದೆ ವಕ್ಫ್ ಆಸ್ತಿ ಎಂದು ಬೇಕಾಬಿಟ್ಟಿಯಾಗಿ ಘೋಷಣೆ ಮಾಡೋದಕ್ಕೆ ಬರೋದಿಲ್ಲ. ಟ್ರಿಬ್ಯೂನಲ್ ನಲ್ಲಿ ವಿಧಾನಸೌಧ ನಮ್ದೇ ಪಾರ್ಲಿಮೆಂಟ್ ನಮ್ದೇ ಎಂದು ಘೋಷಣೆ ಮಾಡಿಕೊಳ್ಳುತ್ತಿದ್ದರು. ವಕ್ಫ್ ಕಾಯಿದೆ ಬರೋದಕ್ಕೆ ಹೋರಾಟ ಮಾಡಿದ್ದು ವಿಜಯೇಂದ್ರ ಚೇಲಾ ಗಳನ್ನ ಹೊರತುಪಡಿಸಿದ ಬಿಜೆಪಿ ಕಾರ್ಯಕರ್ತರು.ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಎನ್ ಆರ್ ಸಂತೋಷ, ಬಿಪಿ ಹರೀಶ್, ಸಿದ್ದೇಶ್ವರ್ ಅನೇಕರ ಶ್ರಮದ ಫಲ ಇದು ಎಂದಿದ್ದಾರೆ.
ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಡಿಯೂರಪ್ಪ ತನ್ನ ಮಗನ ರಕ್ಷಣೆಗೋಸ್ಕರ ಈ ಪ್ರತಿಭಟನೆಯಲ್ಲಿ ಭಾಗಿ ಯಾಗುತ್ತಿದ್ದಾರೆ ಅಷ್ಟೇ. ತಾನು ಸಾಯೋದಕ್ಕಿಂತ ಮುಂಚೆ ವಿಜಯೇಂದ್ರ ರನ್ನ ಮುಖ್ಯಮಂತ್ರಿಯಾಗಿ ನೋಡಬೇಕು .ಇನ್ನಷ್ಟು ಲೂಟಿ ಮಾಡಬೇಕು ಅನ್ನೋದು ಆಸೆ ಯಡಿಯೂರಪ್ಪನವರದ್ದು. ಈಗಾಗಲೇ ಮಾರಿಷ್ ದುಬೈನಲ್ಲಿ ಇವರ ಆಸ್ತಿ ಇದೆ. ಇನ್ನೂ ಜಗ್ಗತ್ತಿನ ಎಲ್ಲಾಕಡೆ ಆಸ್ತಿ ಮಾಡಬೇಕು ಅನ್ನೋದು ಆಸೆ ಇವರದ್ದು. ಇದಕ್ಕೋಸ್ಕರ ಇಷ್ಟು ವಯಸ್ಸಾದರು ಮನೆಯಲ್ಲಿ ಕೂರದೆ ಹೊರಗಡೆ ಬಂದು ಹೋರಾಟಕ್ಕೆ ಇಳಿದಿದ್ದಾರೆ. ಅಷ್ಟೇ ಹೊರತು ಬಡವರ ಪರವಾಗ್ಲಿ ರೈತರ ಪರವಾಗ್ಲಿ ಅಲ್ಲ. ಯಾಕಂದ್ರೆ ಅಮಿತ್ ಶಾರನ್ನ ಬ್ಲ್ಯಾಕ್ ಮೇಲ್ ಮಾಡಿ ಯತ್ನಾಳ್ ರನ್ನ ಹೊರಗಡೆ ಹಾಕಲಿಲ್ಲ ಅಂದ್ರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಹೆದರಿಸಿ ಮಗನ ಖುರ್ಚಿ ಗಟ್ಟಿ ಮಾಡು ಪ್ರಯತ್ನ ಯಡಿಯೂರಪ್ಪನವರದ್ದು. ಸುಮ್ಮನೆ ಲಿಂಗಾಯತರು ವೀರಶೈವ ಅಂತ ಹೇಳಿಕೊಂಡು ನಾಲ್ಕು ಮಠಾಧೀಶರನ್ನ ಹಿಡಿದುಕೊಂಡು ತಮ್ಮ ಪರವಾಗಿ ಹೇಳಿಕೆಗಳನ್ನ ಕೊಡಿಸಿಕೊಂಡಿರೋರು ಯಡಿಯೂರಪ್ಪ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಆಹೋರಾತ್ರಿ ಹೋರಾಟದಿಂದ ಏನು ಲಾಭ. ಇದು ಹೋರಾಟವೋ ಅಥವಾ ಅಂತಿಮ ಯಾತ್ರೆಯೋ. ಫ್ರೀಪ್ರೀಡಂ ಪಾರ್ಕ್ ನಲ್ಲಿ ಯಾವ ವೈಭವದಿಂದ ಮಲಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಯತ್ನಾಳ್ ಹೊಸ ಕಟ್ಟುವ ವಿಚಾರದ ಬಗ್ಗೆ ಮಾತನಾಡಿದ ಅವರು ಯಡಿಯೂರಪ್ಪ ವಿಜಯೇಂದ್ರ ಅವರತಹ ಕೆಟ್ಟ ಕುಟುಂಬ ತೆಗೆದರೆ ಮಾತ್ರ ಬಿಜೆಪಿಗೆ ಭವಿಷ್ಯ ಇದೆ. ಅದ್ರ ಸಲುವಾಗಿ ನಮ್ಮ ಹೋರಾಟ.ಇವರದ್ದೇ ದೊಡ್ಡ ದೊಡ್ಡ ಭ್ರಷ್ಟಾಚಾರ ಇದೆ. ಇವರದ್ದೇ ಕರೋನಾ ಹಗರಣದಲ್ಲಿ ಹೆಸರಿದೆ, ಡಿನೋಟಿಫೀಕ್ಷನಲ್ಲಿ ಹೆಸರಿದೆ.ಇವರಿಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಡಲು ಯಾವ ನೈತಿಕತೆ ಇದೆ. ಡಿ ಕೆ ಶಿವಕುಮಾರ್ ಹೇಳಿದ್ದಾರೆ ಅಲ್ವಾ ನಮ್ಮ ಭಿಕ್ಷೆಯಿಂದ ಅವರು ಎಂಎಲ್ ಎ ಆಗಿದ್ದು . ಯತ್ನಾಳ್ ರಾಜೀನಾಮೆ ಕೊಡ್ಲಿ ಎಂದು ವಿಜಯೇಂದ್ರ ಚೇಲಾಗಳು ಹೇಳ್ತಾರೆ ಆದ್ರೆ ಮೊದಲು ರಾಜಿನಾಮೆ ಕೊಡಬೇಕಾಗಿರೋದು ವಿಜಯೇಂದ್ರ. ದಮ್ ಇದ್ರೆ ನೀನು ಮಾತನಾಡು ನಾಲ್ಕು ಚೇಲಾಗಳನ್ನ ಹಿಂದೆ ಇಟ್ಟುಕೊಂಡು ಹಂದಿಗಳಂತೆ ಅವರ ಬಳಿ ಮಾತನಾಡಿಸೋದಲ್ಲ ಎಂದಿದ್ದಾರೆ.