ಬೆಂಗಳೂರು; ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ರು.
ಈ ವೇಳೆ ಮಾತನಾಡಿದ ಅವರು ಕಳೆದ ತಿಂಗಳು ರಾಜ್ಯದ ಸಿಎಂ ಹಾಗೂ ಆರ್ಥಿಕ ಸಚಿವರು ೧೬ ನೆ ಬಜೆಟ್ ಮಂಡನೆ ಮಾಡಿದ್ರು. ಕೆಪಿಟಿಟಿ ಆಕ್ಟ್ ನ ಪ್ರಕಾರ ಸಾಮಾಜಿಕವಾಗಿ ಎಲ್ಲಾ ಸಮಾಜಗಳನ್ನು ದಕ್ಷತೆ ಪಾರದರ್ಶಕತೆಯಿಂದ ಗುರುತಿಸುವ ಕೆಲಸ ಆಗಬೇಕಿದೆ. ಬಜೆಟ್ ಮಂಡನೆ ಬಳಿಕ ಗುತ್ತಿಗೆಯಲ್ಲಿ ೪% ಏಕ ಸಮುದಾಯದ ಒಲೈಕೆಗೆ ಕೊಟ್ಟಿದ್ದಾರೆ. ಯಾವುದೇ ಮೀಸಲಾತಿ ಸಮಾನತೆಯಿಂದ ಎಲ್ಲಾ ವರ್ಗದವರಿಗೂ ನ್ಯಾಯ ಒದಗಿಸಬೇಕು ಎಂದ್ರು.
ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ಮೀಸಲಾತಿ ಕೊಟ್ಟಿದ್ದೇವೆ ಎಂದಿದ್ದಾರೆ ಸಿಎಂ. ೨ ಬಿ ಅಲ್ಲಿ ಬರೋದು ಮುಸಲ್ಮಾನರು ಇದ್ರಲ್ಲಿ ಕ್ರಿಚ್ಚಿಯನರ, ಬುದ್ದರು, ಜೈನರ ಸಮುದಾಯ ಬರೊಲ್ಲ. ಪೆನ್ ಪೇಪರ್ ಕೊಟ್ಟು ಆಶೀರ್ವಾದ ಮಾಡಿ ಅಂತ ಚುನಾವಣೆ ಸಮಯದಲ್ಲಿ ಇಡೀ ರಾಜ್ಯದಲ್ಲಿ ಓಡಾಡಿದ್ರು ಸಿದ್ದರಾಮಯ್ಯ. ೧೩೪ ಶಾಸಕರನ್ನ ಹೊಂದಿರುವ ಕಾಂಗ್ರೆಸ್ ಪಕ್ಷ ಮೀಸಲಾತಿಯಲ್ಲಿ ತಾರತಮ್ಯ ಮಾಡಿದ್ರೆ. ಉಳಿದ ಸಮುದಾಯಗಳು ನಿಮ್ಮ ಜೊತೆ ನಿಲ್ಲಲಿಲ್ಲವೆ. ನಿಮ್ಮಲ್ಲಿರುವ ಅಜೆಂಡ ಹೇಳಿ. ೩ ಎ , ೩ ಬಿ ವರ್ಗದವರು ಏನ್ ಮಾಡಿದ್ದಾರೆ.ಆ ವರ್ಗಕ್ಕೆ ಮೀಸಲಾತಿ ಕೊಟ್ಟಿರೋದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ೪% ಮೀಸಲಾತಿ ೨ ಬಿ ಕೆಟಗರಿಗೆ ಕೊಟ್ಟಿದ್ದಿರಲ್ಲಾ. ಆರ್ಥಿಕವಾಗಿ ಕೆಳಸ್ತರದಲ್ಲಿರುವ ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು ಎಂದ್ರು.
ನಿಮ್ಮ ನಾಯಕರು ಸಂವಿಧಾನದ ರಕ್ಷಣೆ ಮಾಡ್ತಿವಿ ಅಂತಾರೆ. ಸಂವಿಧಾನದ ಪುಸ್ತಕವನ್ನ ಕೈಯಲ್ಲಿ ಇಡಿದು ಗಂಟೆ ಅಲ್ಲಾಡಿಸಿದಾಗೆ ಅಲ್ಲಾಡುಸ್ತಾರಲ್ಲಾ. ೪% ಮೀಸಲಾತಿ ಸಮುದಾಯಕ್ಕೆ ಕೊಡಬೇಡಿ ಎಂದು ವಿರೋಧ ಮಾಡ್ತಿಲ್ಲ. ೩ ಎ , ೩ ಬಿ ಏನ್ ಮಾಡಿದ್ರು ಅವರನ್ನ ಸೇರಿಸಬೇಕಿತ್ತು ಎಂದ್ರು. ಎಲ್ಲಾ ಶಾಸಕರು ಪರಿಷತ್ ಸದಸ್ಯರು ಸೇರಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಸೇರಿ ಬೆಲೆ ಏರಿಕೆ ವಿರುದ್ದ ಸುದ್ದಿಗೋಷ್ಟಿ ಕರೆಯುತ್ತೇವೆ. ಜನರ ಮೇಲೆ ರಾಜ್ಯ ಸರ್ಕಾರ ಒತ್ತಡ ಏರಿ ಸಂಕಷ್ಟಕ್ಕೆ ಈಡು ಮಾಡಿದೆ.ಬೆಲೆ ಏರಿಕೆ ಖಂಡಿಸಿ ದೊಡ್ಡ ಮಟ್ಟದ ಹೋರಾಟ ಮಾಡ್ತಿವಿ ಎಂದ್ರು.
ಬಿಜೆಪಿ ಪ್ರತಿಭಟನೆ ಗೆ ಜೆಡಿಎಸ್ ಬೆಂಬಲ ಇದ್ಯಾ ಎಂಬ ವಿಚಾರದ ಬಗ್ಗೆ ಮಾತನಾಡಿ ನಾಳೆ ಫ್ರೀಡಂ ಪಾರ್ಕ್ ನಲ್ಲಿ ಆಹೋರಾತ್ರಿ ಪ್ರತಿಭಟನೆ ಮಾಡ್ತಿದ್ದಾರೆ. ಮಿತ್ರ ಪಕ್ಷವಾಗಿ ಸದನದ ಒಳಗೆ ಹೊರಗೆ ಸರ್ಕಾರವನ್ನ ಎಚ್ಚರಿಸುವ ಜವಾಬ್ದಾರಿ ಇದೆ. ಬೆಲೆ ಏರಿಕೆ ಬಗ್ಗೆ ಸುದ್ದಿಗೋಷ್ಟಿ ಕರೆದು ನಮ್ಮ ಹೋರಾಟದ ಬಗ್ಗೆ ತಿಳಿಸ್ತಿವಿ. ಸಮನ್ವಯದ ಕೊರತೆ ಇದ್ಯಾ ಎಂಬ ವಿಚಾರದ ಬಗ್ಗೆ ಮಾತನಾಡಿ ಲೋಕಸಭಾ ಚುನಾವಣೆಯಿಂದ ನಾವು ಮೈತ್ರಿ ಆಗಿದ್ವಿ. ಸಮನ್ವಯ ಕಾಪಾಡುವುದಕ್ಕೆ ಕಮಿಟಿಗಳಾಗಬೇಕು. ಕಮಿಟಿ ಮಾಡುವ ಕೆಲಸ ಮಾಡ್ತಿವಿ. ನಮ್ಮಲ್ಲಿ ಯಾವುದೇ ರೀತಿ ಗೊಂದಲ ಇಲ್ಲ. ಇನ್ನು ಆ ಬಾಂಡಿಂಗ್ ಹೆಚ್ಚಾಗಿ ಬೆಳೆಯಬೇಕು .ಗ್ರೇಟರ್ ಬೆಂಗಳೂರು ಬಿಲ್ ವಿಚಾರಕ್ಕೆ ರಾಜ್ಯಪಾಲರಿಗೆ ಮನವಿ ಕೊಡಬೇಕಾದ್ರೆ ಸುರೇಶ್ ಬಾಬು ಇದ್ರು. ೧೮ ಶಾಸಕರಲ್ಲಿ ಬಹುತೇಕ ನಿರಂತರವಾಗಿ ಕುಮಾರಸ್ವಾಮಿ ಅವರ ಸಂಪರ್ಕದಲ್ಲಿದ್ದಾರೆ. ಸದನದ ನಡೆಯುವ ಮುನ್ನಾ ಕುಮಾರಸ್ವಾಮಿ ಜೊತೆ ಎಲ್ಲಾ ಶಾಸಕರು ಸಭೆ ಮಾಡಿದ್ರು ಎಂದು ತಿಳಿಸಿದ್ರು.
ಹನಿಟ್ರ್ಯಾಪ್ ಪ್ರಕರಣವನ್ನ ಜನರ ಮುಂದೆ ಇಡುವ ಜವಾಬ್ದಾರಿ ಸರ್ಕಾರಕ್ಕೆ ಇರುತ್ತೆ. ಸಿಎಂ ಗೃಹ ಸಚಿವರು ಎಲ್ಲರು ಚಿಂತನೆ ಮಾಡಬೇಕು. ಸಚಿವರು ಹೇಳಿರೋದು ಗಂಭೀರವಾದ ವಿಚಾರ. ಸಚಿವರು ಸದನದಲ್ಲಿ ೨೨೪ ಶಾಸಕರಿಗೂ ಹೇಳಿದ್ದಾಗೆ ಆಯ್ತಲ್ಲಾ ಎಂದಿದ್ದಾರೆ.