ಬೆಂಗಳೂರು; ರಾಜ್ಯ ಹನಿಟ್ರಾಪ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಹೀಗಿರುವಾಗೇ ಸಹಕಾರ ಸಚಿವ ಕೆ ಎನ್ ರಾಜಣ್ಣ ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾಗಿದ್ದಾರೆ. ಟಿ ಬೇಗೂರು ಬಳಿಯ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಇಬ್ಬರು ಭೇಟಿಯಾಗಿದ್ದಾರೆ.
ಇನ್ನು ಗೃಹ ಸಚಿವರಿಗೆ ದೂರು ನೀಡಲು ಕೆ ಎನ್ ರಾಜಣ್ಣ ಆಗಮಿಸಿದ್ದರು ಎನ್ನಲಾಗಿದೆ. ಗೃಹ ಸಚಿವ ಪರಮೇಶ್ವರ್ ಭೇಟಿ ಬಳಿಕ ಮಾತನಾಡಿದ ಸಹಕಾರ ಸಚಿವ ರಾಜಣ್ಣ ನಾನು ದೂರು ಕೊಡಲು ತಯಾರಾಗಿ ಬಂದಿದ್ದೆ. ಅವರು ಆಫೀಸ್ ಕೆಲಸದಲ್ಲಿ ಬ್ಯುಸಿ ಇದ್ದಾರೆ.4:30ಕ್ಕೆ ಸದಾಶಿವನಗರಕ್ಕೆ ಮನೆಗೆ ಬರಲು ತಿಳಿಸಿದ್ದಾರೆ.ಅಲ್ಲಿಗೆ ಹೋಗಿ ದೂರು ಕೊಡ್ತೇನೆ, ದೂರಿನ ಪ್ರತಿಯನ್ನು ನಿಮಗೆ ಕೊಡುತ್ತೇನೆ.ದಾಖಲೆಗಳು ಅಂದ್ರ.. ನಂದು ತಪ್ಪಿದೆ ಅನ್ಸುತ್ತೆ. ನಮ್ಮ ಮನೆಗಳಲ್ಲಿ ಸಿಸಿಟಿವಿ ಹಾಕಿರುತ್ತೇವೆ ಎಂಬ ಕಾರಣಕ್ಕೆ ಆ ರೀತಿ ಹೇಳಿದೆ. ಆದರೆ ಸರ್ಕಾರಿ ನಿವಾಸಕ್ಕೆ ಸಿಸಿಟಿವಿ ಹಾಕಿಲ್ಲ, ಯಾಕೆ ಹಾಕಿಲ್ಲ ಅಂತ ಗೊತ್ತಿಲ್ಲ. ಸರ್ಕಾರದಿಂದಲೇ ಆ ರೀತಿ ನಿರ್ದೇಶನ ಇದೆಯಂತೆ ಎಂದರು.
ಅದು ನನ್ನ ಕಡೆಯಿಂದ ತಪ್ಪಾಗಿ ಹೇಳಿರುವ ಪದ.ಇಲಾಖೆಯಲ್ಲಿ ಅವರದ್ದೇ ಮಾಹಿತಿಯನ್ನು ಈಗಾಗಲೇ ತರಿಸಿಕೊಂಡಿದ್ದಾರೆ. ನಾನು ದೂರು ಕೊಟ್ಟ ಮೇಲೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡ್ತಾರೆ. ನಾನು ಕೊಡುವ ದೂರ ಅರ್ಜಿಯನ್ನು ಗಮನದಲ್ಲಿಟ್ಟುಕೊಂಡು ಎಸ್ಐಟಿ ಮಾಡ್ತಾರೋ ಎಡಿಜಿಪಿ ಲೆವೆಲ್ ಅಧಿಕಾರಿಂದ ತನಿಖೆ ಮಾಡುತ್ತಾರೆ ಎಂದರು. ಗೃಹ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳಿಗೆ ಸೇರಿದ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜೇಂದ್ರ ಏನು ದೂರು ಕೊಡ್ತಾನೋ ಗೊತ್ತಿಲ್ಲ . ನನ್ನ ಕಡೆಯಿಂದ ಏನು ಮಾಹಿತಿ ಇದೆಯೋ ಅದನ್ನು ಕೊಡುತ್ತೇನೆ. ಸಿಸಿಟಿವಿ ಆಧಾರದ ಮೇಲೆ ದಾಖಲೆ ಇದೆ ಅಂತ ಹೇಳಿದ್ದೆ. ಸಿಸಿ ಕ್ಯಾಮೆರಾ ಹಾಕಿಲ್ಲ ಅಂತ ಆಮೇಲೆ ಗೊತ್ತಾಯ್ತು. ಯಾವ ಸಚಿವರ ಮನೆಗೂ ಹಾಕಿಲ್ಲಂತೆ.ನಮ್ಮ ಮನೆ ಹತ್ರ ಸಾಕಷ್ಟು ಜನ ಬರ್ತಾರೆ.ಅವರ ಮುಖ ನೋಡಿ ಮಾತನಾಡಿಸುವುದೇ ಕಷ್ಟ. ಅವರ ವಿಡಿಯೋ ಮಾಡೋದು ಅದೆಲ್ಲ ನಮಗೆ ಗೊತ್ತಾಗಲ್ಲ ಎಂದ್ರು.
ಕುತಂತ್ರ ಮಾಡೋದಾದ್ರೆ ಮೊದಲೇ ಪ್ಲಾನ್ ಇಟ್ಕೊಂಡು ಮಾಡಬೇಕು. ಏನೆಲ್ಲ ನಡೆದಿದೆ ಎಂಬುದನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ.ನನ್ನ ಮೇಲೆ ಯಾವುದೇ ಒತ್ತಡ ಇಲ್ಲ ನನಗೆ ಯಾರು ಒತ್ತಡ ಮಾಡುವ ಪ್ರಯತ್ನ ಮಾಡಲ್ಲ.ನಾನು ಯಾರು ಹೇಳಿದರು ಕೇಳುವವನಲ್ಲ ಅಂತ ನಿಮಗೂ ಗೊತ್ತು. ಹೈಕಮಾಂಡ್ ಎಲ್ಲಾ ಮೂಲಗಳಿಂದ ಮಾಹಿತಿ ತರಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳನ್ನ ಎಸಿಸಿ ಅಧ್ಯಕ್ಷರು ಭೇಟಿಯಾಗಿದ್ದರು ಅಲ್ಲಿಯೂ ಚರ್ಚೆಯಾಗಿದೆ ಎಂಬ ಮಾಹಿತಿ ಇದೆ. ಹೈಕಮಾಂಡ್ ಗೆ ಭೇಟಿಗೆ ಇನ್ನೂ ಹೋಗೋರು ಇದ್ದಾರೆ. ನು 10ನೇ ತಾರೀಕಿನ ನಂತರ ಹೋಗ್ತೇನೆ. ನಾನು ಯಾರ ವಿರುದ್ಧ ಹೇಳಬೇಕು ಅಂದರೆ ನನ್ನ ಬಳಿ ಪುರಾವೆ ಇರಬೇಕು. ಏನೇ ಪುರಾವೆ ಮಾಹಿತಿ ಬರಬೇಕು ಅಂದರೆ ತನಿಖೆ ಆಗಬೇಕು.ಒಂದೆರಡು ದಿನದಲ್ಲಿ ನಾನು ದೂರು ಕೊಟ್ಟ ಮೇಲೆ ಯಾವ ರೀತಿ ತನಿಖೆಗೆ ಕ್ರಮ ತೆಗೆದುಕೊಳ್ಳುತ್ತಾರೆ ನೋಡಬೇಕು. ನಮ್ಮ ಮಾಹಿತಿ ಹೇಗೆ ತೆಗೆದುಕೊಳ್ಳುತ್ತಾರೆ ಅದನ್ನು ಕೊಡುತ್ತೇನೆ. ಹನಿ ಟ್ರ್ಯಾಪ್ ವಿಚಾರದಲ್ಲಿ ನನ್ನ ಬೇಡಿಕೆ ಅಂದ್ರೆ ಈ ರೀತಿ ಯಾರೆಲ್ಲ ಮಾಡ್ತಾರೆ ಅದು ನಿಲ್ಲಬೇಕು. ಹಿಂದೆ ಯಾರ್ಯಾರ ಮೇಲೆ ಮಾಡಿದ್ದಾರೋ. ಇಂದು ಈಗ ನನ್ನ ಮೇಲೆ ಪ್ರಯತ್ನ ಮಾಡಿದ್ದಾರೆ .ಮುಂದೆ ಇನ್ಯಾರ ಮೇಲೆ ಮಾಡ್ತಾರೋ ಗೊತ್ತಿಲ್ಲ. ಇಂಥಾ ದುಸ್ಸಾಹಸಕ್ಕೆ ಕೈ ಹಾಕೋ ಕೆಲಸ ಯಾರು ಮಾಡಬಾರದು. ಆ ರೀತಿಯಾದ ವಾತಾವರಣ ಬರಬೇಕು . 10ನೇ ತಾರೀಕಿನ ನಂತರ ಹೈಕಮಾಂಡ್ ಮೇಲಿನ ಭೇಟಿಯಾಗುತ್ತೇನೆ . ಡಿಕೆಶಿ ಹೇಳಿಕೆಗೆ ಅವರವರ ಅನುಭವವನ್ನು ಹೇಳುತ್ತಾರೆ . ನನಗೆ ಆ ರೀತಿಯಾದ ಅನುಭವ ಆಗಿಲ್ಲ ಎಂದು ರಾಜಣ್ಣ ಹೇಳಿದ್ದಾರೆ.