ಮನೆ Latest News ಸಿಎಂ ಸಿದ್ದರಾಮಯ್ಯ ಭೇಟಿಯಾದ‌ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ

ಸಿಎಂ ಸಿದ್ದರಾಮಯ್ಯ ಭೇಟಿಯಾದ‌ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ

0

ಬೆಂಗಳೂರು;  ಸಿಎಂ ಸಿದ್ದರಾಮಯ್ಯ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.: ಹನಿಟ್ರ್ಯಾಪ್ ಚರ್ಚೆ ಬೆನ್ನಲ್ಲೇ ಸಿಎಂ ಅವರನ್ನು ಭೇಟಿಯಾಗಿರೋದು ಕುತೂಹಲ ಮೂಡಿಸಿದ.

ಭೇಟಿ ವೇಳೆ  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು. ಸಿಎಂ ಸಿದ್ದರಾಮಯ್ಯ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಶೀಘ್ರ ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದರುಯ ಈ ವೇಳೆ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಆರೋಗ್ಯ ವಿಚಾರಿಸಿ ಸೌಜನ್ಯಕ್ಕಾಗಿ ಸಹಜವಾಗಿ ಭೇಟಿಯಾಗಿದ್ದೆ. ಅವರ ಯೋಗಕ್ಷೇಮ‌ ಕೇಳೊದು ನಮ್ಮ ಕರ್ತವ್ಯ. ಆ ದೃಷ್ಟಿಯಿಂದ ಭೇಟಿ ಮಾಡಿದ್ದೆ. ಸರ್ಕಾರಕ್ಕೆ ಎರಡು ತುಂಬುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು  ಅದು ಇಲ್ಲಿ ಮಾತಾಡೊಲ್ಲ, ದೆಹಲಿಯಲ್ಲಿ ಮಾತಾಡ್ತೀನಿ. ಬಾಕಿ ಎಲ್ಲ ದೆಹಲಿಯಲ್ಲೇ ಆಗುತ್ತೆ ಇಲ್ಲಿ ಏನು ಆಗೊಲ್ಲ ಎಂದ್ರು.

ಹನಿಟ್ರ್ಯಾಪ್ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅದೆಲ್ಲ ಇಲ್ಲಿ ಕೇಳಿ, ನನ್ನ ಕೇಳುದ್ರೆ ಅದೇನು ದೆಹಲಿಯಲ್ಲಿ ಆಗಿದ್ಯಾ? ಎಂದ್ರು. ಕ್ಷೇತ್ರ ಪುನರ್ ವಿಂಗಡಣೆಗೆ ಚೆನ್ನೈ ನಲ್ಲಿ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ಮೀಟಿಂಗ್ ಆಗಿದೆ, ಸೌತ್ ಇಂಡಿಯಾಗೆ ಅನ್ಯಾಯ ಆಗಿದೆ. ಇದನ್ನು ಸರಿಪಡಿಸಬೇಕು ಎಂಬ ಬೇಡಿಕೆ ಇದೆ. ನಮ್ಮ ಬೇಡಿಕೆ ಕೂಡ ಇದೆ. ಈಗಿರುವ ಸೀಟ್ ಎಷ್ಟಿದೆ, ಅಷ್ಟೇ ಇರಬೇಕು. ಪ್ರಾದೇಶಿಕ ಪಕ್ಷಗಳು ಮೀಟಿಂಗ್ ಮಾಡಿವೆ. ಈಗಿರುವ ಸೀಟ್ ಗಳ ಬದಲಾವಣೆ ಆಗಬಾರದು ಎಂದರು.

ಹನಿಟ್ರ್ಯಾಪ್ ನಂತಹ ವಿಚಾರ ನಮ್ಮಂತ ರಾಜಕಾರಣಿಗಳಿಗೆ ಮುಜುಗರ: ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಬೆಂಗಳೂರು; ಹನಿಟ್ರ್ಯಾಪ್ ನಂತಹ ವಿಚಾರ ನಮ್ಮಂತ ರಾಜಕಾರಣಿಗಳಿಗೆ ಮುಜುಗರ ಎಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇಂದು ಸಿಎಂ ಹಾಗೂ ಎಐಸಿಸಿ ಅಧ್ಯಕ್ಷ ಭೇಟಿ ಬಗ್ಗೆ ಮಾತನಾಡಿದ ಅವರು ಭೇಟಿಯಾದಾಗ ರಾಜಕೀಯ ವಿಚಾರ ಚರ್ಚೆ ಸಾಮಾನ್ಯ. ಹಲವು ರಾಜಕೀಯ ವಿಚಾರಗಳು ಚರ್ಚೆ ಆಗಿರುತ್ತೆ. ಹನಿಟ್ರ್ಯಾಪ್ ನಂತಹ ವಿಚಾರ ನಮ್ಮಂತ ರಾಜಕಾರಣಿಗಳಿಗೆ ಮುಜುಗರ ಎಂದು ಬೇಸರ ಹೊರ ಹಾಕಿದ್ದಾರೆ.

222 ಶಾಸಕರ ಹನಿಟ್ರ್ಯಾಪ್ ಆಗಿದೆ ಎಂಬ ಮಾಜಿ ಶಾಸಕ ಮಂಜುನಾಥ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದು ಮುಜಗರದ ವಿಚಾರ.ಇಂತಹ ಬಾಲಿಷ ಹೇಳಿಕೆ ಕೊಡಬಾರದು. ಹೊರಟ್ಟಿ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿದ ಅವರು ಸದನದಲ್ಲಿ ಅವರ ಮುಖದ ಮೇಲೆ ಬೇಸರ ಕಂಡೆ. ಸದನದಲ್ಲಿ ಅವರ ಮಾತು ಕೇಳಿಲ್ಲ. ಬಾವಿಗಿಳಿದು ಹೋರಾಟ ಮಾಡುತ್ತಿದ್ರು.ಈ ರೀತಿ ಮಾಡಿದ್ರೆ ಎಲ್ಲರಿಗೂ ಬೇಸರ ಆಗುತ್ತೆ ಎಂದ್ರು.

ಸಿಎಂ ಭೇಟಿಗೆ ಬರ್ತೀನಿ ಅಂತ ಅಧ್ಯಕ್ಷರು ಹೇಳಿದ್ರು. ಅವರಿಗೆ ಹುಷಾರಿಲ್ಲ ಅಂತಾ ಇವರೇ ಭೇಟಿ ಮಾಡಿದ್ರು. ಹನಿಟ್ರ್ಯಾಪ್ ಕೇಸ್ ಬಗ್ಗೆ ಚರ್ಚೆ ಆಗಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ರಾಷ್ಟ್ರದ್ದು, ರಾಜ್ಯದ್ದು ಚರ್ಚೆಯಾಗಿದೆ. ಅವರಿಬ್ಬರೂ ಪ್ರತ್ಯೇಕವಾಗಿ ಮಾತನಾಡಿದ್ರು. ಏನು ಆನ್ನೋದು ಗೊತ್ತಿಲ್ಲ. ಸಿಎಂ ಹಾಗೂ ಖರ್ಗೆಯವರು ಪ್ರತ್ಯೇಕವಾಗಿ ಚರ್ಚೆ ಮಾಡಿದ್ದಾರೆ.ಇದೊಂದು ಸೌಜನ್ಯದ ಭೇಟಿಯಾಗಿತ್ತು ಎಂದಿದ್ದಾರೆ.

ಸಚಿವ ರಾಜಣ್ಣ ಆರೋಪ ಸರ್ಕಾರಕ್ಕೆ ಮುಜುಗರ ಆಯ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಖಂಡಿತವಾಗಿ, ಇಂತಹ ವಿಚಾರಗಳು ರಾಜಕಾರಣಿ ಮೇಲೆ ಇರುವ ಕ್ರೆಡಿಬಲಿಟಿಯನ್ನ ಜನರು ಅನುಮಾನ ಪಡ್ತಾರೆ. ಪಬ್ಲಿಕ್ ನಲ್ಲಿ ಯಾವ ರೀತಿ ವರ್ತನೆ ಇರಬೇಕು ಅಂತ ಜನರು ನಿರೀಕ್ಷೆ ಇರುತ್ತೆ. ಹನಿಟ್ರ್ಯಾಪ್ ಹಾಗೂ ಅನೈತಿಕ  ವಿಚಾರಗಳು ನಡೆದಿದೆ ಅಂದ್ರೆ ಜನ ಯಾರು ನಂಬ್ತಾರೆ. ಆದ್ರೆ ಬಿಜೆಪಿಯವರು ಆಸಕ್ತಿ ತೋರಿಸ್ತಿದ್ದಾರೆ. ಇವತ್ತಿಲ್ಲಾ ನಾಳೆ ತನಿಖೆಯಾಗಿ ಹೊರಗೆ ಬರುತ್ತೆ.ಬಿಜೆಪಿಯವರು ಯಾರಿಗೆ ನ್ಯಾಯ ಕೊಡಿಸೋದಕ್ಕೆ ಹೋಗ್ತಿದ್ದಾರೆ ಗೊತ್ತಿಲ್ಲ. ಹಾಸನ ಪ್ರಕರಣದಲ್ಲಿ ಸಂಸತ್ತು ಹಾಗೂ ಸದನದ್ದು ಗೌರವ ಕಡಿಮೆ ಆಗಿಲ್ವಾ? ಎಂದಿದ್ದಾರೆ.

ರೇವಣ್ಣ ಕುಟುಂಬಕ್ಕೂ ಟೀಕಿಸುವಂತ ಕೆಲಸ ಆಗಿದೆ ಎಂಬ ಸಚಿವ ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದಕ್ಕೆ ಹೇಳ್ತಿರೋದು ತನಿಖೆಯಾಗಲಿ ಅಂತ. ಬಿಜೆಪಿಯವರು ಸದನದ ಗೌರವದ ಬಗ್ಗೆ ಮಾತಾಡ್ತರಲ್ಲಾ. ಜೆಡಿಎಸ್ ನವರು ಈ ರೀತಿ ಮಾಡಿದಾಗ ಸದನದ ಗೌರವ ಹೋಗಿಲ್ವಾ?. ಮಾಜಿ ಸಿಎಂ ಪೋಕ್ಸೋ ಕೇಸ್ ಬಂದಾಗ ರಾಜ್ಯದ ಗೌರವ ಹೋಗಿಲ್ವಾ? ಅವಾಗ ನಮಗೆ ಅವಮಾನ ಆಗಿಲ್ವ? . ಅದರ ಬಗ್ಗೆ ಬಿಜೆಪಿ ಯಾಕೆ ಮಾತಾಡೊಲ್ಲ?. ಈಗ ಹನಿಟ್ರ್ಯಾಪ್ ವಿಚಾರದಲ್ಲಿ ಸಿಎಂ ಗೃಹ ಸಚಿವರು ಸ್ಪಷ್ಟವಾದ ನಿಲುವನ್ನ ಕೊಟ್ಟಿದ್ದಾರೆ.ಆನ್ ದ ಫ್ಲೋರ್ ಆಫ್ ದಿ ಹೌಸ್ ನಲ್ಲೆ ಹೇಳಿದ್ದಾರೆ. ದೂರು ಕೊಟ್ಟರೆ ಯಾರೆ ಇದ್ರು ತನಿಖೆ ಮಾಡ್ತಿವಿ ಅಂತ ಎಂದ್ರು.

ನಿಮ್ಮದೇ ಸಚಿವರೆ ಬಿಜೆಪಿಯವರಿಗೆ  ಚೀಟಿ ಕೊಟ್ಟು ಮಾತಾನಾಡಿ ಅಂತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ ಇದೆಲ್ಲ ಅವಶ್ಯಕತೆ ಇರಲಿಲ್ಲ.ಬಜೆಟ್ ಬಗ್ಗೆ ಚರ್ಚೆ ಜನರು ನಿರೀಕ್ಷೆ ಮಾಡಿದ್ರು .೪ ಲಕ್ಷ ಕೋಟಿ ಬಜೆಟ್ ನಲ್ಲಿ ನಮ್ಮ ಜಿಲ್ಲೆ ತಾಲ್ಲೂಕಿಗೆ ಸಮಾಜಕ್ಕೆ ಏನ್ ಸಿಕ್ಕಿದೆ ಅಂತ ಜನರಿಗೆ ನೀರಿಕ್ಷೆ ಇರುತ್ತೆ. ಉದ್ದೇಶ ಪೂರ್ವಕವಾಗಿ ಬಿಜೆಪಿಯವರು ಈ ವಿಷಯ ತಂದ್ರು.ಚೀಟಿಯಲ್ಲಿ ಅದೆ ಇತ್ತು ಅಂತ ಏನ್ ಗ್ಯಾರಂಟಿ ಇತ್ತು?. ಯಾರು ಯಾರಿಗೆ ಭೇಟಿ ಆಗ್ತಾರೆ, ಯಾರು ಯಾರಿಗೆ ಚೀಟಿ ಕೊಡ್ತಾರೆ ಅದೆಲ್ಲಾ ಹೈಕಮಾಂಡ್ ನೋಡಕೆ ಅಗುತ್ತಾ?. ೨೨೨ ಶಾಸಕರ ಹನಿಟ್ರ್ಯಾಪ್ ಆಗಿದೆ ಎಂಬ ಜೆಡಿಎಸ್ ಮಾಜಿ ಶಾಸಕ ಮಂಜುನಾಥ್ ಹೇಳಿಕೆ ಬಗ್ಗೆ ಮತಾನಾಡಿದ ಅವರು ಅದರಲ್ಲಿ ನಾನು ಇದ್ದಿನಿ ಆಗಿದ್ರೆ. ಇತರ ಹೇಳಿಕೆ ಹೇಳಿದ್ರೆ ಜನ ಯಾರು ನಂಬುತ್ತಾರೆ?ಯುವ ಪೀಳಿಗೆಗೆ ಕೇಳಿದ್ರೆ ಡಾಕ್ಟರ್, ಇಂಜಿನಿಯರಿಂಗ್ ಆಗಬೇಕು ಅಂತಾರೆ. ರಾಜಕಾರಣಿ ಆಗಬೇಕಂತ ಯಾರು ಹೇಳೊಲ್ಲಾ ಈತರ ಹೇಳಿಕೆಯಿಂದ  ಎಂದು ಆಕ್ರೋಶ ಹೊರ ಹಾಕಿದ್ರು.

ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ ವಿಚಾರದ ಬಗ್ಗೆ ಮಾತನಾಡಿ ಸಿಬ್ಬಂದಿ ಇಲ್ಲ ಅಂತಿದ್ದಾರೆ ಸಿಬಿಐನವರು. ನಿಮ್ಮವರೆ ಯಾರಾದ್ರು ಸಿಬ್ಬಂದಿ ಇದ್ರೆ ಹೇಳಿ. ರಾಜಣ್ಣ ಗುರುವಾರ ದೂರು ಕೊಡ್ತಾರೆ .ಉನ್ನತ ಮಟ್ಟದ ತನಿಖೆ ಆಗುತ್ತೆ ಅಂತ ಸ್ಪಷ್ಟವಾಗಿ ಗೃಹ ಸಚಿವರು ಹೇಳಿದ್ದಾರೆ. ಈ ಹಿಂದೆ ರಜನೀಶ್ ಗೋಯಲ್  ಪತ್ರ ಬರೆದಿದ್ದಾರೆ ಸಿಬಿಐನಲ್ಲಿ ಸಿಬ್ಬಂದಿ ಇಲ್ಲ ಅಂತ.ಇನ್ನು ೬೦-೭೦ ಕೇಸ್ ಪೆಂಡಿಂಗ್ ಇದೆ. ಬಿಜೆಪಿಯವರು ಬಾವಿಗೆ ಇಳಿದು ಹೋರಾಟ ಮಾಡುದ್ರು, ಪ್ರೀಪ್ಲಾನ್ಡ್  ಆಗಿ ಮಾಡಿದ್ರು. ಮಾರ್ಷಲ್ ಗಳು ಎತ್ತಿಹಾಕೊಂಡು ಹೋಗಬೇಕಾದ್ರೆ ಅವರು ನಗ್ತಿದ್ರು. ಪ್ರೀಪ್ಲಾನ್ಡ್ ವಿತ್ ಕಾಂಗ್ರೆಸ್ ಮಿನಿಸ್ಟರ್ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಚೀಟಿ ಯಾರು, ಯಾರಿಗೆ ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ನಿಮ್ಮತ್ರ ಇದ್ರೆ ಕೊಡಿ, ಇದೆಲ್ಲ ಸರ್ಕಾರಕ್ಕೆ ಮುಜುಗರ.೨೨೨ ಶಾಸಕರು ಇದ್ದಾರೆ ಅಂತ ಹೇಳೊದು ಮುಜುಗರ ಎಂದ್ರು.

ನಾನೇನು ಶ್ರೀರಾಮಚಂದ್ರ ಅಲ್ಲಾ ಎಂಬ ರಾಜಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಅವರು ಖಾಸಗಿ ಜೀವನ ಯಾವ ರೀತು ಇರುತ್ತೆ ಅನ್ನೋದು ಗೊತ್ತಿಲ್ಲ. ಪರಿಷತ್ ಸಭಾಪತಿ ಹೊರಟ್ಟಿ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸದನದಲ್ಲಿ ಅವರ ಮುಖದ ಮೇಲೆ‌ ಬೇಸರ ನೋಡಿದ್ದೆನೆ.ಸದನದಲ್ಲಿ ಅವರ ಮಾತು ಕೇಳಿಲ್ಲ.ಬಾವಿಗಿಳಿದು ಹೋರಾಟ ಮಾಡ್ತಿದ್ರು.ಈ ರೀತಿ ಮಾಡಿದ್ರೆ ಬೇಸರ ಆಗುತ್ತೆ ಎಂದ್ರು.