ಬೆಂಗಳೂರು; ಕೆ ಎನ್ ರಾಜಣ್ಣ ಕೆಲವೊಂದು ವಿಚಾರಗಳನ್ನು ನನ್ನ ಬಳಿಯೂ ಹೇಳಿದ್ದಾರೆ ಎಂದು ಸದಾಶಿವನಗರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ
ಸಚಿವ ಕೆ.ಎನ್ ರಾಜಣ್ಣ ನನ್ನನ್ನ ಭೇಟಿ ಮಾಡಿದ್ದರು. ಕೆಲವೊಂದು ವಿಚಾರಗಳನ್ನು ನನ್ನ ಬಳಿಯೂ ಹೇಳಿದರು. ನಾನೂ ಕೂಡ ದೂರು ನೀಡಲು ಹೇಳಿದೆ. ಆದರೆ ಎಲ್ಲವನ್ನೂ ನಾನು ನಿಮ್ಮ ಮುಂದೆ ಬಿಚ್ಚಿಡಲು ಆಗೋದಿಲ್ಲ ಎಂದ್ರು.ಇನ್ನು ಎಂಎಲ್ಸಿ ರಾಜೇಂದ್ರ ರಾಜಣ್ಣ ಸಿಎಂ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ನನ್ನನ್ನ ಯಾರ ಬಗ್ಗೆಯೂ ಕೇಳಬೇಡಿ. ನನ್ನ ಇಲಾಖೆಯದ್ದು ಇದ್ರೆ ಕೇಳಿ.ಸಿಎಂ ಅಂದಾಗ ಎಲ್ಲರೂ ಭೇಟಿ ಮಾಡ್ತಾರೆ. ಯಾವುದೇ ಪ್ರಶ್ನೆ ನನ್ನ ಕೇಳಬೇಡಿ. ಗರಂ ಆದ್ರೆ ನಿಮ್ಮ ಬಳಿ ಇಟ್ಟುಕೊಳ್ಳಿ.ಎಲ್ಲಾ ವಿಚಾರ ಬೋಗಸ್, ಸುಮ್ಮನೆ ಸೃಷ್ಟಿ ಮಾಡ್ತಿದ್ದಾರೆ. ಇದೆಲ್ಲಾ ಅನಗತ್ಯ ವಿಚಾರ ಎಂದ್ರು.
ರಾಜೇಂದ್ರ, ರಾಜಣ್ಣ ಹಿಟ್ ಆಂಡ್ ರನ್ ಮಾಡ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಿಎಂ ಅವರನ್ನೇ ಕೇಳಿ, ಅವರೇ ಹೇಳ್ತಾರೆ ಎಂದಿದ್ದಾರೆ. ಡಿಕೆಶಿ, ರಾಜಣ್ಣ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅವರನ್ನ ಕೇಳಿದೆ. ನನ್ನ ಬಳಿ ಏನೂ ಇಲ್ಲ ಅಂತ ಹೇಳಿದ್ದಾರೆ. ನಮ್ಮಿಬ್ಬರ ನಡುವಿನ ಚರ್ಚೆ ಬಿಚ್ಚಿ ಹೇಳಲು ಆಗಲ್ಲ. ಅವರದ್ದೇನೋ ಇದರ ಮೇಲೆ ಹೇಳಿದ್ದಾರೆ. ಏನಾದ್ರೂ ಇದ್ರೆ ಕಂಪ್ಲೆಂಟ್ ಕೊಡಪ್ಪ ಅಂತ ಹೇಳಿದ್ದೇನೆ. ನಿನ್ನೆ ಮಾಧ್ಯಮದಲ್ಲಿ ಏನೋ ಹೇಳಿದ್ದಾರೆ.ಇದರ ಮೇಲೆ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದ್ರು.
ತಮಿಳುನಾಡು ಪ್ರವಾಸದ ಬಗ್ಗೆ ಮಾತನಾಡಿದ ಅವರು ನಿನ್ನೆ ತಾನೇ ಹೋಗಿದ್ದೆ, ಕರ್ನಾಟಕದ ಸ್ವಾಭಿಮಾನದ ಪ್ರಶ್ನೆ. ದಕ್ಷಿಣ ಭಾರತ ಸಿಎಂ ಸಭೆ ನಡೆಯಿತು. ನಮ್ಮ ಸಿಎಂ ಕೆಲ ವಿಚಾರ ಪ್ರಸ್ತಾಪಕ್ಕೆ ಹೇಳಿದ್ರು. ನಮ್ಮ ರಾಜ್ಯದಲ್ಲೂ ಎರಡು ಸೀಟು ಕಡಿಮೆ ಮಾಡುವ ಹುನ್ನಾರ ಇದೆ. ನಮ್ಮ ಸಿಎಂ ಆರೋಗ್ಯ ಸರಿ ಇರಲಿಲ್ಲ. ನಮ್ಮ ಪಕ್ಷದ ಪರ ಪ್ರತಿಪಾದನೆ ಮಾಡಿ ಬಂದಿದ್ದೇವೆ. ಅಣ್ಣ ಮಲೈ ಎಲ್ಲೋ ದೂರದಲ್ಲಿ ಕಪ್ಪು ಬಾವುಟ ಹಾರಿಸಿದ್ರಂತೆ. ನನ್ನ ಮುಂದೆ ಹಾರಿಸಿದ್ರೂ ನನಗೆ ಬೇಜಾರು ಇರಲಿಲ್ಲ.ಅವರ ಅಸ್ಥಿತ್ವ ಉಳಿಸಿಕೊಳ್ಳಬೇಕಲ್ಲ. 55 ಪಕ್ಷ ಒಟ್ಟಿಗೆ ಹೋರಾಡ್ತಿವೆ. ಅವರು ಮಾತ್ರ ಒಬ್ಬರೇ ಹೋರಾಟ ಮಾಡ್ತಿದ್ದಾರೆ ಎಂದ್ರು.
ಹೇಮಾವತಿ ವಿಚಾರದಲ್ಲಿ ಡಿಸಿಎಂ ವಿರುದ್ಧ ಎಂಎಲ್ಸಿ ರಾಜೇಂದ್ರ ಆಕ್ರೋಶದ ಬಗ್ಗೆ ಮಾತನಾಡಿದ ಅವರು ಹೇಮಾವತಿ ವಿಚಾರ ವೈ.ಕೆ ರಾಮಯ್ಯ ಕಾಲದಲ್ಲಿ ಆಗಿತ್ತು. ಕುಮಾರಸ್ವಾಮಿ ಕಾಲದಲ್ಲಿ ಕೂಡ ಆಗಿತ್ತು. ನಾವು ಅದನ್ನ ಪರಿಹರಿಸಿದ್ದೇವೆ ಎಂದ್ರು. ಇಂದು ಮಧ್ಯಾಹ್ನ ಡಿಕೆಶಿ ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ದೆಹಲಿಗೆ ಹೋಗ್ತಿದ್ದೇನೆ. ಇಂದು ಸಂಜೆ ವಾಪಸ್ ಬರ್ತೇನೆ. ಹೈಕಮಾಂಡ್ ಯಾರನ್ನೂ ಭೇಟಿ ಮಾಡೋದಿಲ್ಲ. ಕಾನ್ ಕ್ಲೇವ್ ಒಂದಕ್ಕೆ ಹೋಗ್ತಿದ್ದೇನೆ ಎಂದಿದ್ದಾರೆ.
ರಾಜಣ್ಣ ದೂರು ಕೊಡೋದಾಗಿ ಹೇಳಿದ್ದಾರೆ, ಇನ್ನೂ ಕೊಟ್ಟಿಲ್ಲ ದೂರು ಕೊಟ್ರೆ ತನಿಖೆ ನಡೆಸುತ್ತೇವೆ; ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ
ಬೆಂಗಳೂರು; ರಾಜಣ್ಣ ದೂರು ಕೊಡೋದಾಗಿ ಹೇಳಿದ್ದಾರೆ, ಇನ್ನೂ ಕೊಟ್ಟಿಲ್ಲ ದೂರು ಕೊಟ್ರೆ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು, ಸಿಎಂ ಜೊತೆ ಉನ್ನತ ಮಟ್ಟದ ತನಿಖೆ ಬಗ್ಗೆ ಚರ್ಚೆ ಮಾಡ್ತೇನೆ. ಯಾವ ತನಿಖೆಗೆ ಕೊಡಬೇಕು ಅಂತ ಸಿಎಂ ಜೊತೆ ಚರ್ಚೆ ಮಾಡ್ತೇನೆ. ಈಗಾಗಲೇ ಯಾವ ತನಿಖೆಗೆ ಕೊಡಬೇಕು ಅಂತ ಪ್ರಾಥಮಿಕವಾಗಿ ಅಂದುಕೊಂಡಿದ್ದೇವೆ. ಅದರ ಘೋಷಣೆಗೂ ಮುನ್ನ ಸಿಎಂ ಜೊತೆ ಚರ್ಚೆ ಮಾಡ್ತೇನೆ ಎಂದಿದ್ದಾರೆ.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಇಷ್ಟು ದೊಡ್ಡ ಆರೋಪ ಬಂದಿದೆ. ಗಂಭೀರವಾಗಿ ತಗೊಳ್ಳಲೇಬೇಕಲ್ಲ. ರಾಜಣ್ಣ ದೂರು ಕೊಡೋದು ವಿಳಂಬವಾಗಿದೆ. ಅವರು ದೂರು ಕೊಟ್ಟಿದ್ದಿದ್ರೆ ನಿನ್ನೆನೇ ಯಾವ ಸ್ವರೂಪದ ತನಿಖೆ ಅಂತ ಘೋಷಣೆ ಮಾಡ್ತಿದ್ದೆವು. ಬಿಜೆಪಿಯವರು ಸಿಬಿಐ, ಜಡ್ಜ್ ನೇತೃತ್ವದ ತನಿಖೆ ಕೇಳ್ತಿದ್ದಾರೆ. ಆದರೆ ನಾವು ನಮ್ಮದೇ ರೀತಿಯಲ್ಲಿ ಪರಿಶೀಲಿಸಿ ನಿರ್ಧಾರ ಮಾಡ್ತೇವೆ. ಇಷ್ಟು ದೊಡ್ಡ ಘಟನೆ ನಡೆದಿದೆ, ವಿಧಾನಸೌಧದಲ್ಲಿ ಚರ್ಚೆ ಆಗಿದೆ. ನಡೆಯದಿರೋದೆಲ್ಲ ನಡೆದಿದೆ, ಅಂತದರಲ್ಲಿ ಗಂಭೀರವಾಗಿ ತಗೊಳ್ಳಲಿಲ್ಲ ಅಂದ್ರೆ ಆಗಲ್ಲ. ಗಂಭೀರವಾಗಿ ತಗೊಳ್ಳಲೇಬೇಕು, ತಗೊಂಡಿದ್ದೇವೆ ಎಂದ್ರು.
ಇನ್ನು ಹೈಕಮಾಂಡ್ ಮೇಲೆ ಒತ್ತಡ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸದನದಲ್ಲಿ ಏಕಾಏಕಿ ರಾಜಣ್ಣ ಮಾತಾಡಿದ್ದಕ್ಕೆ ಹೈಕಮಾಂಡ್ ಬೇಸರವಾಗಿದೆಯಾ ಎಂಬ ಪ್ರಶ್ನೆಗೆ, ಇದು ಗೊತ್ತಿಲ್ಲ, ಇದರ ಬಗ್ಗೆ ಅಧ್ಯಕ್ಷರು ನೋಡ್ಕೋತಾರೆ.ರಾಜಣ್ಣ ಅವರ ಮೇಲೆ ದೂರು ಕೊಡದಂತೆ ಒತ್ತಡ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ ಇದರ ಬಗ್ಗೆ ನನ್ನ ಜೊತೆ ಯಾರೂ ಮಾತಾಡಿಲ್ಲ, ಹೈಕಮಾಂಡ್ ನವರು ಮಾತಾಡಿಲ್ಲ ಎಂದಿದ್ದಾರೆ. 48 ಜನರ ಹನಿಟ್ರ್ಯಾಪ್ ಪ್ರಕರಣಗಳ ತನಿಖೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಎಷ್ಟು ಸಂಖ್ಯೆ ಅಂತ ಊಹೆ ಮಾಡಲು ಆಗಲ್ಲ. ಇಂತಹ ಕೇಸ್ ಗಳಲ್ಲಿ ಊಹೆ ಮಾಡಿ ತನಿಖೆಗೆ ಕೊಡೋಕ್ಕಾಗಲ್ಲ ಎಂದಿದ್ದಾರೆ.