ಮನೆ Latest News ಗ್ಯಾರಂಟಿ ಅನುಷ್ಠಾನ ಸಮಿತಿ ಸ್ಥಗಿತಗೊಳಿಸಲು ಆಗ್ರಹಿಸಿ ಬಿಜೆಪಿ ನಾಯಕರ ಪ್ರತಿಭಟನೆ

ಗ್ಯಾರಂಟಿ ಅನುಷ್ಠಾನ ಸಮಿತಿ ಸ್ಥಗಿತಗೊಳಿಸಲು ಆಗ್ರಹಿಸಿ ಬಿಜೆಪಿ ನಾಯಕರ ಪ್ರತಿಭಟನೆ

0

ಬೆಂಗಳೂರು; ಗ್ಯಾರಂಟಿ ಅನುಷ್ಠಾನ ಸಮಿತಿ ಸ್ಥಗಿತಗೊಳಿಸಲು ಆಗ್ರಹಿಸಿ ಬಿಜೆಪಿ ನಾಯಕರು ಕೆಂಗಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್, ಸಿಟಿ ರವಿ, ರವಿಕುಮಾರ್, ಸಿಸಿ ಪಾಟೀಲ್, ವಿಜಯೇಂದ್ರ, ಸುನೀಲ್ ಕುಮಾರ್ ಭಾಗಿಯಾಗಿದ್ದರು.

ಭಿತ್ತಿ ಪತ್ರ ಹಿಡಿದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ರು. ಲೂಟಿ ಕೋರ ಕಾಂಗ್ರೆಸ್ ಸರ್ಜಾರಕ್ಕೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆ ಕೂಗಿದ್ರು. ರಾಜ್ಯದ ಹಣ ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚುವ ಸರ್ಕಾರಕ್ಕೆ ಧಿಕ್ಕಾರ. ಜನ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದ್ರು. ಮುಚ್ಚಿಬಿಡಿ ಮುಚ್ಚಿಬಿಡಿ ಕಾಂಗ್ರೆಸ್ ಕಚೇರಿ ಮುಚ್ಚಿ ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು. ಬಿಜೆಪಿ ಶಾಸಕರು, ಮಾಜಿ ಸಚಿವರು, ಪರಿಷತ್ ಸದಸ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಯಿತು. ಬಿಜೆಪಿ ಮತ್ತು ಜೆಡಿಎಸ್ ಜಂಟಿ ಪ್ರತಿಭಟನೆ  ನಡೆಸಿತು. ಶಾಸಕರು ಮತ್ತು ಪರಿಷತ್ ಸದಸ್ಯರಿಂದ ಪ್ರೊಟೆಸ್ಟ್ ನಡೆಯಿತು. ಭಿತ್ತಿ ಪತ್ರ ಹಿಡಿದು ಘೋಷಣೆ ಕೂಗಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಇವರು ಕಲೆಕ್ಷನ್ ಮಾಸ್ಟರ್ ಗಳು.ಇಂತವರನ್ನ ನೇಮಕ ಮಾಡಿ ಸರ್ಕಾರಿ ಹಣ ಕೊಡುತ್ತಿದ್ದಾರೆ. ಸರ್ಕಾರದ ಹಣ, ಬೇಕಾದ್ರೆ ಹೋಗಿ ಬಿಕ್ಷೆ ಬೇಡಲಿ ಎಂದು ಆಕ್ರೋಶ ಹೊರ ಹಾಕಿದ್ರು. ಎಲ್ಲಾದಕ್ಕೂ ಟ್ಯಾಕ್ಸ್ ಹಾಕುತ್ತಿದ್ದಾರೆ. ಯಾಕೆ ಹಾಕಿದ್ದಾರೆ ಅಂದ್ರೆ ಕಾಂಗ್ರೆಸ್ ಉದ್ಧಾರ ಮಾಡೋದಕ್ಕೆ ಟ್ಯಾಕ್ಸ್ ಹಾಕುತ್ತಿದ್ದಾರೆ. ರಾತ್ರಿ ಕನ್ನ ಹೊಡೀತಿದ್ದಾರೆ. ಹಗಲು ದರೋಡೆ ಮಾಡಿ ಬಡವರ ಹಣ ಲೂಟಿ ಮಾಡುತ್ತಿದ್ದಾರೆ. ಸಂಬಳ ಇಲ್ದೇ ಆಶಾ ಕಾರ್ಯಕರ್ತೆಯರು ಸಂಕಷ್ಟ ಪಡುತ್ತಿದ್ದಾರೆ ಎಂದ್ರು.

ಟ್ಯಾಕ್ಸ್ ಪೇಯರ್ ಹಣ ಲೂಟಿ ಹೊಡೀತಿದ್ದಾರೆ.ಶಾಸಕರು, ಪಿಡಿಓ ಇದ್ದಾರೆ,ಆದ್ರೆ ಈಗ ನೇಮಕ ಆಗಿರೋರು ಏನ್ ಸ್ಪೆಷಲ್. ಇವರೆಲ್ಲಾ ಆಕ್ಸ್ ಫರ್ಡ್ ವಿವಿ ಯಿಂದ ಪದವಿ ಪಡೆದಿದ್ದಾರಾ?. ಈಗಾಗಲೇ ಸರ್ಕಾರ ಪಾಪರ್ ಆಗಿದೆ ಸರ್ಕಾರ. ಡಾಕ್ಟರ್ ಗಳಿಗೆ ಸಂಬಳ ನೀಡೋದಕ್ಕೆ ಆಗ್ತಿಲ್ಲ. ಪೆನ್ಷನ್ ಕೊಡ್ತಿಲ್ಲ, ಆದ್ರೆ ಇವರಿಗರ ಒಂದನೇ ತಾರೀಖು ಸಂಬಳ ಕೊಡ್ತಾರೆ ಎಂದ್ರು.

ಛಲವಾದಿ ನಾರಾಯಣಸ್ವಾಮಿ ಮಾತನಾಡಿ ಮಾನ ಮರ್ಯಾದೆ ಇದ್ರೆ ವಿವಿ ಮುಚ್ಚೋದರ ಬದಲು ಕಾಂಗ್ರೆಸ್ ಮುಚ್ಚಿಬಿಡಿ. ದೇಶಕ್ಕೆ ಕಾಂಗ್ರೆಸ್ ಮುಚ್ಚಿ ದ್ರೆ ಏನೂ ಆಗಲ್ಲ. ಕಾಂಗ್ರೆಸ್ ಇರೋವರೆಗೂ ದೇಶಕ್ಕೆ ಅಭಿವೃದ್ಧಿ ಸಾಧ್ಯವಿಲ್ಲ.ಕಾಂಗ್ರೆಸ್ ಮುಚ್ಚಿಬಿಡಿ, ಎಲ್ಲರೂ ಅರಾಮವಾಗಿ ಇರ್ತಾರೆ. ಸರ್ಕಾರ್ ಖಜಾನೆ ಹಣ ಕೊಡುತ್ತಿದ್ದೀರಾ, ಇದನ್ನ ಇಲ್ಲಿಗೆ ನಿಲ್ಲಿಸಬೇಕು, ಇಲ್ಲದಿದ್ರೆ ಹೋರಾಟ ಮಾಡುತ್ತೇವೆ ಎಂದ್ರು.