ಬೆಂಗಳೂರು; ದಲಿತರಿಗೆ ಸ್ಮಶಾನ ಭೂಮಿ ಕೊಡಿಸಿ ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಯಾರಿಗೆ ಜಮೀನಿಲ್ಲ ಜಮೀನು ಕೊಡಿಸಿ. ಹಾಸ್ಟೆಲ್ ಗೆ ಸ್ವಂತ ಕಟ್ಟಡ ಮಾಡಿ ಕೊಡಿ. ಸ್ಕೂಲ್ ಕ್ಯಾಂಪಸ್ ಗೆ ೨೫ ಕೋಟಿ ನೀಡಿ. ಸ್ವಯಂ ಉದ್ಯೋಗಕ್ಕೆ ನೇರ ಸಾಲ ಕೊಡಿ. ಏಜ್ಯುಕೇಶನಲ್ಲಿ ಬದಲಾವಣೆ ಮಾಡಿ. ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಿ. ಎಂಜಿನಿಯರ್, ಡಾಕ್ಟರ್ ಆಗೋರಿಕೆ ಶಿಕ್ಷಣ ಕೊಡಿಸಿ.ಲೊಕೋಪಯೋಗಿ ಇಲಾಖೆಯ ಎಸ್ಸಿಪಿ, ಟಿಎಸ್ಪಿ ಹಣ ಸ್ಕೂಲ್ ಗೆ ಉಪಯೋಗಿಸಿ. ಹೊಸ ರೆಸಿಡೆನ್ಶಿಯಲ್ ಶಾಲೆಗಳನ್ನ ಕೊಡಿ ಎಂದು ಆಗ್ರಹಿಸಿದ್ದಾರೆ.
ಕುವೆಂಪು ಜ್ಞಾನ ಭಾರತಿ ಅಂತ ಹೆಸರಿಟ್ರು. ಬೆಂಗಳೂರು ವಿವಿಗೆ ಹೆಸರಿಟ್ಟಿದ್ದರು. ಅದನ್ನ ತೆಗೆದು ಮನಮೋಹನ್ ಸಿಂಗ್ ಅಂತ ಹೆಸರಿಟ್ರು. ನಿನ್ನೆ ಬಜೆಟ್ ಕುಬೇರರಿಗೆ ಕೊಪ್ಪರಿಗೆ ಹಾಕಿದೆ, ಬಡವರಿಗೆ ಚಿಪ್ಪು ಕೊಟ್ಟಿದೆ. ೧೩೩೪೪ ಕೋಟಿ ಹಣ ಗ್ಯಾರೆಂಟಿಗೆ ಬಳಸ್ತಿದ್ದಾರೆ. ದಲಿತರ ಕಲ್ಯಾಣ ೭೫೦೦ ಕೋಟಿ ಮಾತ್ರ ಇಟ್ಟಿದ್ದಾರೆ.ಸಿದ್ದರಾಮಯ್ಯ ಎಂಥ ಮಹಾ ಮೋಸಗಾರ.ತೋರಿಸೋದು ೪೨ ಸಾವಿರ ಕೋಟಿ ರೂ..ಕೊಡೋದು ಕೇವಲ ೭,೫೦೦ ಕೋಟಿ ರೂ. ಮಾತ್ರ. ಮುಸಲ್ಮಾನರಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ.ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು ಕೊಡ್ತಿದ್ದಾರೆ. ಹೀಗಾಗಿ ಸಮುದಾಯ ಒಂದಾಗೋದು ಹೇಗೆ ಮುಸ್ಲಿಮರ ಮೇಲೆ ನಿಮಗೆ ಪ್ರೀತಿ ಇದ್ಯಾ.ಅವರನ್ನ ಅಧ್ಯಕ್ಷರನ್ನಾಗಿ ಮಾಡಿ, ಅವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿ.ಸರ್ಕಾರದ ವಿರುದ್ಧ ಸಂಸದ ಗೋವಿಂದ ಕಾರಜೋಳ ಆಕ್ರೋಶ ಹೊರ ಹಾಕಿದ್ದಾರೆ.
ಬಿಜೆಪಿ ಮೂರು ಬಾಗಿಲು ಎಂಬ ವಿಚಾರದ ಬಗ್ಗೆ ಮಾತನಾಡಿ ಎಲ್ಲ ಪಕ್ಷದಲ್ಲಿದ್ದಂತೆ ನಮ್ಮಲ್ಲೂ ಇದೆ. ನಮ್ಮ ಹೈಕಮಾಂಡ್ ಅದನ್ನ ಬಗೆಹರಿಸುತ್ತೆ ಎಂದಿದ್ದಾರೆ.
ಎಸ್ಸಿಪಿ, ಟಿಎಸ್ಪಿ ಹಣ ಬಳಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ
ಬೆಂಗಳೂರು: ಎಸ್ಸಿಪಿ, ಟಿಎಸ್ಪಿ ಹಣ ಬಳಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ
ಎಸ್ಸಿಪಿ, ಟಿಎಸ್ಪಿ ಹಣ ಬಳಕೆಗೆ ಸರ್ಕಾರದ ವಿರುದ್ಧ ಛಲವಾದಿ ಆಕ್ರೋಶ ಹೊರ ಹಾಕಿದ್ದಾರೆ. ದಲಿತ ಮುಖಂಡರ ಸಭೆ ನಡೆಸಿದ್ದೇವೆ. ರಾಜ್ಯಾದ್ಯಂತ ಹೋರಾಟ ಮಾಡ್ತೇವೆ. ೧೦ ತಂಡಗಳಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ತಿಳಿ ಹೇಳ್ತೇವೆ. ಬೆಂಗಳೂರಿನಲ್ಲಿ ೫ ಲಕ್ಷ ಸಮುದಾಯ ಸೇರಿಸ್ತೇವೆ.ಸರ್ಕಾರಕ್ಕೆ ತಕ್ಕೆ ಪಾಠ ಕಲಿಸ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಮುಸ್ಲಿಂರಿಗೆ ಹೆಚ್ಚಿನ ಯೋಜನೆ ಘೋಷಣೆ ವಿಚಾರದ ಬಗ್ಗೆ ಮಾತನಾಡಿದ ಅವರು ನಿನ್ನೆ ನಿಮ್ಮ ಗಮನ ಸೆಳೆಯಲು ಹೊರಟ್ರು. ಅವರನ್ನ ಜೈಲಿಗೆ ಹಾಕಿದ್ರು.ಸಿದ್ದರಾಮಯ್ಯ ದಲಿತ ವಿರೋಧಿ.ಕಾಂಗ್ರೆಸ್ ನಲ್ಲಿರುವ ದಲಿತರಿಗೂ ನ್ಯಾಯ ಕೊಡಿಸೋಕೆ ಆಗಲ್ಲ. ದಲಿತರನ್ನೇ ಅಲ್ಲಿ ಎತ್ತಿ ಕಟ್ತಿದ್ದಾರೆ. ವ್ಹೀಲ್ ಚೇರ್ ನಲ್ಲಿ ಕುಟುಂತ್ತಾ ಹೋಗ್ತಿದ್ದಾರೆಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಿನ್ನೆ ಕಾರ್ಯಕ್ರಮದಲ್ಲಿ ಅದು ಬಂತು.ನಾನು ಆ ರೀತಿ ಹೇಳಬಾರದಿತ್ತು. ಈಗಾಗಲೇ ಅದರ ಬಗ್ಗೆ ಹೇಳಿದ್ದೇನೆ.ನಿನ್ನೆ ಕಾರ್ಯಕ್ರಮದಲ್ಲಿ ಜನ ಹೆಚ್ಚು ಸೇರಿದ್ದರು.ಅವರು ಕೂಗ್ತಿದ್ರು ಆಗ ಈ ಮಾತು ಬಂದಿದೆ.ವೈಯುಕ್ತಿಕವಾಗಿ ನಾನು ಅಪಮಾನ ಮಾಡುವವನಲ್ಲ.ಆ ರೀತಿ ಹೇಳಿದ್ದು ಸರಿಯಲ್ಲ ಅನ್ನಿಸಿದೆ. ಆ ಮಾತು ತಪ್ಪು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಛಲವಾದಿ ನಾರಾಯಣಸ್ವಾಮಿ
ಒಂದೆರಡು ದಿನದಲ್ಲಿ ಮತ್ತೊಮ್ಮೆ ಸಭೆ ಮಾಡ್ತೇವೆ. ತಂಡಗಳನ್ನ ರಚನೆ ಮಾಡ್ತೇವೆ. ಜಿಲ್ಲಾ ಮಟ್ಟದಲ್ಲಿ ಜನರಿಗೆ ತಿಳಿಸುವ ಕೆಲಸ ಮಾಡ್ತೇವೆ.ಜನಾಂದೋಲನಕ್ಕೆ ಪ್ರೇರೇಪಣೆ ಮಾಡ್ತೇವೆ.ಆಡಳಿತ ಪಕ್ಷದಲ್ಲಿರುವ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ.ಒಂದು ದಿನ ತಮಟೆ ಚಳುವಳಿ ಮಾಡ್ತೇವೆ.ಮೊದಲು ೭-ಡಿ ಇತ್ತು, ಅದರಡಿ ಹಣವನ್ನ ಬಳಸಬಹುದಿತ್ತು.ಕಾಂಗ್ರೆಸ್ ನವರೇ ಅದನ್ನ ತೆಗೆದಿದ್ದಾರೆ.೭- ಸಿಯಲ್ಲಿ ಅದನ್ನೇ ಮಾಡ್ತಿದ್ದಾರೆ.ನ್ಯಾಯಾಲಯದ ಮೊರೆಯನ್ನೂ ಹೋಗ್ತೇವೆ. ಸೋಮವಾರದೊಳಗೆ ತೀರ್ಮಾನ ಮಾಡ್ತೇವೆ.ಎಸ್ಸಿಪಿ, ಟಿಎಸ್ ಪಿ ಹಣ ಬಳಕೆ ಆರೋಪ ವಿಚಾರದ ಬಗ್ಗೆ ಮಾತನಾಡಿ ಕಾಂಗ್ರೆಸ್ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡ್ತೀವಿ. ಒಂದು ದಿನದ ತಮಟೆ ಚಳುವಳಿ ಆಯೋಜನೆ ಮಾಡುತ್ತೇವೆ.ತಮಟೆ ಬಡಿಯುವ ಮೂಲಕ ಗಮನ ಸೆಳೆಯುತ್ತೇವೆ ಎಂದಿದ್ದಾರೆ.
ಒಳ ಮೀಸಲಾತಿ ಜಾರಿ ವಿಚಾರದ ಬಗ್ಗೆ ಮಾತನಾಡಿದ ಅವರು ತೆಲಂಗಾಣ ಸರ್ಕಾರ ಮೀಸಲಾತಿ ಕೊಡ್ತಿದೆ.ಆದರೆ ಈ ಸರ್ಕಾರ ಒಳ ಮೀಸಲಾತಿ ತರ್ತಿಲ್ಲ.ನಿನ್ನೆ ನಮ್ಮ ಕಷ್ಟ ಕೇಳಿ ಅಂತ ವಿಧಾನಸೌಧಕ್ಕೆ ಬಂದ್ರು.ಅವರನ್ನ ನೀವು ಜೈಲಿಗೆ ಕಳಿಸಿದ್ದೀರ. ಪಾಕ್ ಜಿಂದಾಬಾದ್ ಘೋಷಣೆ ಕೂಗಿದವರನ್ನ ಸಾಕ್ತೀರ. ತಮ್ಮ ಮನೆಯಲ್ಲೇ ಸಾಕ್ತೀರ, ಅವರಿಗೆ ರಕ್ಷಣೆ ಕೊಡ್ತೀರ.ತಮ್ಮ ಕಷ್ಟ ಕೇಳಿಕೊಂಡವರನ್ನ ಜೈಲಿಗೆ ಹಾಕ್ತೀರ. ಕೂಡಲೇ ಅವರನ್ನ ಬಿಡುಗಡೆ ಮಾಡಬೇಕು.ಇಲ್ಲವೇ ದಲಿತ ಸಮುದಾಯ ಬೀದಿಗಿಳಿಯಿದೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಬಣ ರಾಜಕಾರಣ ವಿಚಾರದ ಬಗ್ಗೆ ಮಾತನಾಡಿ ಎಲ್ಲದಕ್ಕೂ ಸದ್ಯದಲ್ಲೇ ತೆರೆ ಬೀಳಲಿದೆ. ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ ಅದನ್ನ ಹೈಕಮಾಂಡ್ ತೀರ್ಮಾನ ಮಾಡಲಿದೆ.ಸಬಲೀಕರಣ ಎಂದರೆ ತಿಂಗಳು ತಿಂಗಳು ಹಣ ಹಾಕೋದಲ್ಲ. ದೇವೇಗೌಡರು ಮಹಿಳೆಯರಿಗೆ 33% ಮೀಸಲಾತಿ ಮಾಡಿದ್ದು ಸಬಲೀಕರಣ ಎಂದಿದ್ದಾರೆ