ಮನೆ Latest News ದೀನದಲಿತರ ಪರ ಎಂದು ಹೇಳ್ಕೊಂಡು ರಾಜ್ಯ ಸರ್ಕಾರ ಅವರಿಗೆ ಮೋಸ ಮಾಡ್ತಿದೆ; ವಿಧಾನಸೌಧದಲ್ಲಿ ಶಾಸಕ ಮಹೇಶ್...

ದೀನದಲಿತರ ಪರ ಎಂದು ಹೇಳ್ಕೊಂಡು ರಾಜ್ಯ ಸರ್ಕಾರ ಅವರಿಗೆ ಮೋಸ ಮಾಡ್ತಿದೆ; ವಿಧಾನಸೌಧದಲ್ಲಿ ಶಾಸಕ ಮಹೇಶ್ ಟೆಂಕಿನಕಾಯಿ ಹೇಳಿಕೆ

0

ಬೆಂಗಳೂರು; ದೀನದಲಿತರ ಪರ ಎಂದು ಹೇಳ್ಕೊಂಡು ರಾಜ್ಯ ಸರ್ಕಾರ ಅವರಿಗೆ ಮೋಸ ಮಾಡ್ತಿದೆ ಎಂದು ವಿಧಾನಸೌಧದಲ್ಲಿ ಶಾಸಕ ಮಹೇಶ್ ಟೆಂಕಿನಕಾಯಿ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಅಧಿಕಾರ ಇರೋ ರಾಜ್ಯಗಳಲ್ಲಿ ಎಸ್ಇಪಿ ಟಿಎಸ್ಪಿ ಹಣ ದುರ್ಬಳಕೆ ಆಗ್ತಿದೆ ಎಂಬ ಪ್ರಿಯಾಂಕ್ ಖರ್ಗೆ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಪ್ರಿಯಾಂಕ ಖರ್ಗೆಯವರು ಒಂದನ್ನ ಅರ್ಥ ಮಾಡ್ಕೊಬೇಕು. SCP TSP ಹಣ ದುರುಪಯೋಗ ವಿಚಾರದಲ್ಲಿ ಬೇರೆ ರಾಜ್ಯದ ವಿಚಾರವನ್ನ ಎಳೆದ ತರುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಆಗಿರುವ ದುರುಪಯೋಗ ಆಗಿರೋದರ ಬಗ್ಗೆ ಮಾತಾಡಲಿ. ಗ್ಯಾರಂಟಿಯನ್ನ ಮುಂದಾಲೋಚನೆ ಮಾಡದೇ ಘೋಷಣೆ ಮಾಡಿದ್ರು.ಬಜೆಟ್ ಬಳಿಕ ಕ್ಲಿಯರ್ ಪಿಚ್ಚರ್ ಗೊತ್ತಾಗಲಿದೆ. ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಬೇರೆ ಬೇರೆ ರಾಜ್ಯದ ವಿಚಾರ ಪ್ರಸ್ತಾಪ ಮಾಡಬೇಡಿ.ರಾಜ್ಯದಲ್ಲಿ ಏನಾಗಿದೆ ಎನ್ನೋದರ ಬಗ್ಗೆ ಅವರು ಮಾತಾಡಬೇಕು. ದೀನದಲಿತರ ಪರ ಎಂದು ಹೇಳ್ಕೊಂಡು ಅವರಿಗೆ ಮೋಸ ಮಾಡ್ತಿದ್ದಾರೆ. ಅವರನ್ನ ಕೇವಲ ವೋಟ್ ಬ್ಯಾಂಕ್‌ಗೆ ಮಾತ್ರ ಸೀಮಿತ ಮಾಡ್ಕೊಂಡಿದ್ದಾರೆ ಎಂದಿದ್ದಾರೆ.

ಚಲನಚಿತ್ರೋತ್ಸವದಲ್ಲಿ ಕನ್ನಡದ ಕಗ್ಗೊಲೆ ವಿಚಾರದ ಬಗ್ಗೆ ಮಾತನಾಡಿದ ಅವರು ಕನ್ನಡದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತೇವೆ ಅಂತ ಕಾಂಗ್ರೆಸ್ ಹೇಳ್ತಾರೆ.ಆದ್ರೆ ಕನ್ನಡದ ಧ್ವನಿ ಎತ್ತಿದ್ರೆ ಒಳಗೆ ಹಾಕ್ತಾರೆ.ಕೆಪಿಎಸ್ಸಿ ಪರೀಕ್ಷೆಯಲ್ಲಿ ಕನ್ನಡ ವಿಧ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಹೀಗಾಗಿ ಕನ್ನಡದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿರಬೇಕು ಎಂದಿದ್ದಾರೆ.

ಗುತ್ತಿಗೆಯಲ್ಲಿ ಅಲ್ಪಸಂಖ್ಯಾತಿಗೆ ೪% ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ ಮಾನ್ಯತೆ ಕೊಡೋ ಕೆಲಸ ಆಗ್ತಿದೆ .ಕೇವಲ ವೋಟ್ ಬ್ಯಾಂಕ್ ಬೆಳೆಸೋ ಕೆಲಸ ಮಾಡ್ತಿದೆ. ಹುಬ್ಬಳ್ಳಿ ಯಲ್ಲಿ ನಡೆದಿರೋ ಗಲಭೆ ಉದಾಹರಣೆ. ಪೊಲೀಸರ ಮೇಲೆ ಹಲ್ಲೆ ಮಾಡಿದವರ ಮೇಲಿನ ಕೇಸ್ ಮರಳಿ ಪಡೆದಿದ್ದಾರೆ. ಇದನ್ನ ನಾವು ವಿರೋಧಿಸುತ್ತೇವೆ. ತುಷ್ಟೀಕರಣ ನೀತಿ ವಿರೋಧಿಸುತ್ತೇವೆ. ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಡಬಾರದು ಎಂದಿದ್ದಾರೆ.

ವಿದ್ಯುತ್ ಮೀಟರ್ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಇವತ್ತು ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಆರ್ಥಿಕ‌ಮುಗ್ಗಟು ನಲ್ಲಿ ಬಳಲುತ್ತಿದೆ.ಹಾಲಿನ ದರ ಸೇರಿ ಎಲ್ಲ ದರವೂ ಹೆಚ್ಚಾಗ್ತಿದೆ. ಇದೀಗ ವಿದ್ಯುತ್ ಮೀಟರ್ ದರ ವೂ ಏರಿಕೆಯಾಗಿದ್ದು ಸರಿ ಇಲ್ಲ. ನಿಗಮದವರಿಗೆ ಹಣ ನೀಡಿಲ್ಲ. ಗ್ಯಾರಂಟಿ ಸಮಯದಲ್ಲಿ ಸರ್ಕಾರ ಫೇಲ್ ಆಗಿದೆ. ಆರ್ಥಿಕ ಕ್ರೋಡೀಕರಿಸಿಕೊಳ್ಳಲು ಈ ರೀತಿ ದರ ಹೆಚ್ಚಳ ಮಾಡುತ್ತಿದೆ. ಡಿಕೆ ಶಿವಕುಮಾರ್ ಬರೆದಿರೋ ಪತ್ರದ ಕುರಿತು ಯೋಗಿ ಆದಿತ್ಯ ನಾಥ್ ಪ್ರಶಂಸೆ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಬಹಳ ಹೇಳಲ್ಲ.. ಒಳ್ಳೆಯದ ಕೆಲಸ ಮಾಡಿದಾಗ ಹೇಳಬೇಕು. ಕುಂಭಮೇಳ ಚನ್ನಾಗಿ ಮಾಡಿದ್ದಾರೆ, ಆದ್ರೆ ಇಲ್ಲಿ ಏರ್ ಶೋ ಸರಿಯಾಗಿ ಮಾಡಿಲ್ಲ. ಟ್ರಾಫಿಕ್ ಕಂಟ್ರೋಲ್ ಮಾಡೋಕೆ ಬಂದಿಲ್ಲ. ಲಕ್ಷ ಲಕ್ಷ ಜನ ಕೂಡ ಬಂದಿದ್ದರು ಅಷ್ಟೇ.ಇದನ್ನ ಸರ್ಕಾರ ಯಾವ ರೀತಿ ಮಾಡಬೇಕು ಎಂದು ಸರ್ಕಾರ ಯೋಚನೆ ಮಾಡಬೇಕು. ಡಿಕೆ ಅವರು ಕಾಂಗ್ರೆಸ್ ನಾಯಕರಿಗೆ ಹೆದರಿಸೋಕೆ ಮಾಡುತ್ತಿದ್ದಾರೋ ಅಥವಾ ಯಾಕೆ ಮಾಡ್ತಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.