ಬೆಂಗಳೂರು; ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿ ಗೋಷ್ಠಿ ನಡೆಸಿದ್ರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು.
ಜೆಪಿ ನಗರದ ನಿವಾಸದಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದೆ. ಇಡಿ ರಾಜ್ಯದ ಜನತೆಗೆ ಚುನಾವಣಾ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿತ್ತು.ಆ ಪ್ರಣಾಳಿಕೆ ಅಧಿಕಾರಕ್ಕೆ ಬಂದಾಗ ಕೆಲವೊಂದು ಅಂಶಗಳನ್ನ ಇಟ್ಟಿದ್ರು.ಅದರಲ್ಲೂ ಐದು ಗ್ಯಾರಂಟಿ ಗಳ ಕೋಡೋದರ ಬಗ್ಗೆ ಹೇಳಿದ್ರು.ಅದರೆ ಅಧಿಕಾರಕ್ಕೆ ಬಂದ ಎರಡು ವರ್ಷಗಳಿಂದ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯುವ ನಿಧಿ ಸೇರಿ ಹಲವು ಯೋಜನೆಗಳ ಬಗ್ಗೆ ಮಾತು ಕೊಟ್ಟಿದ್ರು. ೨೦೦೦ ಸಾವಿರ ಕೋಟಿ ಗೃಹ ಲಕ್ಷ್ಮಿಗೆ ಯೋಜನೆಗೆ ಮಹಿಳೆಯ ಸಬಲೀಕರಣ ಮಾಡ್ತೀವಿ ಅಂತ ಹೇಳಿದ್ರು. ಕಾಂಗ್ರೆಸ್ ರಾಹುಲ್ ಗಾಂಧಿ,ಪ್ರಿಯಾಂಕ್ ಗಾಂಧಿಗೆ ಘೋಷಣೆ ಮಾಡಿದ್ರು. ಪ್ರತಿ ತಿಂಗಳು ಹಣವನ್ನು ಪ್ರತಿ ತಿಂಗಳು ಹಾಕ್ತೀವಿ ಕಟಾ ಕಟಾ ಅಂತ ಹಾಕ್ತೀವಿ ಅಂತ ರಾಹುಲ್ ಹೇಳಿದ್ರು.ಅದ್ರೆ ಈಗ ರಾಜ್ಯದ ಹೆಣ್ಣು ಮಕ್ಕಳು ಕಟಾ ಕಟಾ ಅಂತ ಕಟ್ ಮಾಡಿ ಹಾಕ್ತಾ ಇದ್ದಾರೆ ಅಂತ ಗೊಂದಲಕ್ಕೆ ಸಿಲುಕಿದ್ದಾರೆ ಎಂದ್ರು.
ಮೂರು ಉಪಚುನಾವಣೆ ವೇಳೆ ಗೃಹ ಲಕ್ಷ್ಮಿ ಹಣ ಬಿಡುಗಡೆ ಮಾಡಿದ್ರು. ಲೋಕಸಭಾ ಚುನಾವಣೆ ಸಂದರ್ಭಗಳಲ್ಲಿ ಫಲಾನುಭವಿಗಳ ಸಭೆ ಕರೆದು ನೇರವಾಗಿ ನಮ್ಮ ಡಿಸಿಎಂ ಸಹೋದರ ಬೆಂ.ಗ್ರಾಮಾಂತರದ ಅಭ್ಯರ್ಥಿ,ರಾಮನಗರದಲ್ಲಿ ಕಾಂಗ್ರೆಸ್ ಮತ ಹಾಕಿಲ್ಲ ಅಂದರೆ ಗ್ಯಾರಂಟಿ ಹಣ ನಿಲ್ಲುತ್ತೆ ಅಂತ ಬೆದರಿಕೆ ಹಾಕಿದ್ರು. ರಾಜ್ಯದ ಜನತೆ ೧೯ ಸಂಸದರನ್ನ ಜನ ಆಶೀರ್ವಾದ ಮಾಡಿದ್ದಾರೆ. ನರೇಂದ್ರ ಮೋದಿ ಅವರ ಕಿಸಾನ್ ಯೋಚನೆ ಡಿಡಿಟಿ ಮೂಲಕ ನೇರವಾಗಿ ರೈತರಿಗೆ ಹಣ ತಲುಪುತ್ತಿದೆ. ಅದರಿಂದ ರಾಜ್ಯ ಸರ್ಕಾರ ಕಮಿಷನ್ ತಪ್ಪಿರಬೇಕು. ಮೋದಿಯವರು ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಇವರಿಗೆ ಕಮಿಷನ್ ಬರ್ತಾ ಇಲ್ಲ.ಪ್ರಣಾಳಿಕೆ ಘೋಷಣೆ ಮಾಡುವ ಮುನ್ನಾ ಇವರಿಗೆ ಅರಿವು ಇರಲಿಲ್ಲ. ನರೇಂದ್ರ ಮೋದಿ ಅವರು ಕೇಂದ್ರದ ಹಣ ನೇರವಾಗಿ ತಲುಪುತ್ತಿದೆ. ನಿಮ್ಮ ಹಣ ತಲುಪುತ್ತಿಲ್ಲ. ಗೃಹ ಲಕ್ಷ್ಮಿ ಹಣ ತಲುಪುತ್ತಿಲ್ಲ ಅಂತ ಹೆಣ್ಣು ಮಕ್ಕಳು ಹೇಳ್ತಾ ಇದ್ದಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತರ ನೀಡಬೇಕು. ನುಡಿದಂತೆ ನಡೆಯುತ್ತೇವೆ ಅಂತ ಹೇಳ್ತೀರಾ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಉತ್ತರ ನೀಡಿ. ನಾನು ಕ್ಯಾಲೆಂಡರ್ ತೆಗೆದುಕೊಂಡ ಬರ್ತೀನಿ. ಯಾವತ್ತು ನೀವು ಹಣ ಬಿಡುಗಡೆ ಮಾಡ್ತೀರಾ ಒಂದು ದಿನ ನಿಗದಿ ಪಡಿಸಿ.ಇತ್ತೀಚೆಗೆ ಉದಯಗಿರಿ ಘಟನೆ ಪೂರ್ವ ನಿಯೋಜಿತ ಕಾರ್ಯಕ್ರಮ. ಎಲ್ಲ ಸಮುದಾಯ ತಪ್ಪು ಮಾಡಿದ ಸಂದರ್ಬದಲ್ಲಿ ಪಾರದರ್ಶಕವಾದ ಆಡಳಿತ ಕೋಡೋದು ಸರ್ಕಾರ ಜವಾಬ್ದಾರಿ. ಪೊಲೀಸರಿಗೆ ರಕ್ಷಣೆ ಕೋರೋದು ಸರ್ಕಾರ ಕೆಲಸ ಎಂದರು.
ಭದ್ರಾವತಿ ಅಧಿಕಾರಿಗಳಿಗೆ ಶಾಸಕರ ಮಗ ಬೆದರಿಕೆ ಹಾಕಿದ್ದಾರೆ. ಪೊಲೀಸ್ ವರ್ಗಾವಣೆ ದಂಧೆ ನಡೆಯುತ್ತಿದೆ. ಆಡಿಯೋ ಸಿಕ್ಕಿದೆ,ಎಫ್ಎಸ್ಎಲ್ ವರದಿ ಮಾಡಿಸಿದ್ರಾ ಮುಚ್ಚಿಹಾಕಿದ್ರಿ. ಸದನದ ಅತ್ಯಂತ ಪ್ರಬಾವಿ ಮಂತ್ರಿ ಅವರು. ಅವರ ಪ್ರಕರಣದಲ್ಲಿ ಎಂಎಲ್ಸಿ ಅವರನ್ನ ರಾತ್ರಿಯಲ್ಲೆ ಎಲ್ಲೆಲ್ಲಿ ಸುತ್ತಾಡಿಸಿದ್ರಿ. ಪಾರದರ್ಶಕ ವಾಗಿ ತನಿಖೆ ಅಂತ ಏನ್ ಏನ್ ಮಾಡಿದ್ರಿ. ಭದ್ರಾವತಿ ಪ್ರಕರಣದಲ್ಲಿ ಯಾಕೆ ತೋರಿಸಿಲ್ಲ. ಮೊನ್ನೆ ಮಡಿಕೇರಿಯಲ್ಲಿ ಕಾಂಗ್ರೆಸ್ ಶಾಸಕ ಆಪ್ತ ಎಂದು ಬೆದರಿಕೆ ಹಾಕಿದ್ದಾನೆ. ಅದರಲ್ಲಿ ಏನು ಮಾಡಿದ್ರಿ. ಗೃಹ ಸಚಿವರು ಅಸಹಾಯಕರಾಗಿದ್ದಾರೆ ಎಂದು ನಿಖಿಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.