ಬೆಂಗಳೂರು: ವಚನ ದರ್ಶನ ಎನ್ನುವ ಅಪಸವ್ಯ ಹಾಗೂ ಅಧ್ವಾನ ಪುಸ್ತಕವನ್ನು ಎಂ ಬಿ ಪಾಟೀಲ್, ಬಸವರಾಜ ಹೊರಟ್ಟಿ, ವಿವಿಧ ಮಠಾಧೀಶರು, ಗೊರೂ ಚನ್ನಬಸಪ್ಪ, ಎಸ್ ಎ ಜಾಮದಾರ್, ಜಾಗತಿಕ ಲಿಂಗಾಯತ ಮಹಾಸಭಾ ಪದಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಲಿಂಗಾಯತ ಹಿಂದೂ ಧರ್ಮದ ಒಂದು ಭಾಗ ಎಂದು ಪ್ರಚಾರ ಮಾಡಲಾಗುತ್ತಿದ್ದ ವಿರುದ್ದ ಪುಸ್ತಕ ಬಿಡುಗಡೆ ಮಾಡಲಾಗಿದೆ.
ಬಳಿಕ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಲಿಂಗಾಯತರು ಒಗ್ಗಟ್ಟಾಗಬೇಕಿದೆ, ಒಗ್ಗಟ್ಟಾಗಿದ್ದೇವೆ. ಹಿಂದೆ ೨೨೪ ಶಾಸಕರ ಪೈಕಿ ೧೦೦ ಕ್ಕೂ ಹೆಚ್ಚು ಶಾಸಕರು ಇರುತ್ತಿದ್ದರು. ಒಳಪಂಗಡಗಳನ್ನು ಬಿಟ್ಟು ನಾವೆಲ್ಲ ಒಂದಾಗಬೇಕು. ಕುರುಬರು, ಮುಸ್ಲಿಂ ರು ಯಾವತ್ತೂ ಒಳಪಂಗಡದ ಬಗ್ಗೆ ಮಾತಾಡುವುದಿಲ್ಲ. ನಮಗೆ ಈಗ ಬುದ್ದಿ ಬಂದ ನಂತರ ಒಳಪಂಗಡ ಬಿಡುತ್ತಿದ್ದೇವೆ. ಬಸವಣ್ಣನಿಗೆ ಜಾತಿ ಇಲ್ಲ, ಜಾತ್ಯಾತೀತ. ಮುಂದೆ ಶ್ರೇಷ್ಠ ಕೆಲಸ ಮಾಡಿ ರಾಜ್ಯವನ್ನು ಆಳುವಂತ ದಿನಗಳು ದೂರವಿಲ್ಲ. ಅನೇಕ ವರ್ಷಗಳಿಂದ ನಮಗೆ ಅನ್ಯಾಯ ಆಗುತ್ತ ಬಂದಿದೆ. ಸರ್ವೇಷನ್ ಪ್ರಕಾರ ಅರ್ಹರಿಗೂ ಅವಕಾಶ ಸಿಗುತ್ತಿಲ್ಲ ಎಂದರು.
ಜಾತಿ ಜನಗಣತಿ ಮಾಡುವ ಉದ್ದೇಶ ಗೊತ್ತಿದೆಯಾ?. ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶ ಇದರ ಹಿಂದಿದೆ.೬೦-೬೫% ಮೀಸಲಾತಿ ಪ್ರಮಾಣ ತರುವ ಉದ್ದೇಶ ಜಾತಿ ಜನಗಣತಿಯ ಹಿಂದಿದೆ. ನಮಗೂ ಇದರ ಬಗ್ಗೆ ಗೊತ್ತಿದೆ.ಮೀಸಲಾತಿ ಪ್ರಮಾಣ ಮಾಡುವುದು ಸರ್ಕಾರ. ಲಿಂಗಾಯತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಸಮಸ್ಯೆ ಆಗುತ್ತಿದೆ.ಇದನ್ನು ನಾವು ಅಧಿಕಾರಕ್ಕೆ ಬಂದಾಗ ಸರಿ ಮಾಡೋಣ. ಏನು ಮಾಡಬೇಕೋ ಅದನ್ನು ಮಾಡೋಣ ಎಂದರು.
ಸಚಿವ ಎಂ ಬಿ ಪಾಟೀಲ್ ಮಾತಾನಾಡಿ ವಚನ ದರ್ಶನ ಅಂತ ಪುಸ್ತಕವನ್ನು ಬಿಡುಗಡೆ ಮಾಡಿದರು. ಅದರ ಹಿಂದೆ ಒಳ್ಳೆಯ ಉದ್ದೇಶ ಇದ್ದರೆ ಸಮಸ್ಯೆ ಇರುತ್ತಿರಲಿಲ್ಲ.ನಮ್ಮದು ಜಾತಿರಹಿತ ವ್ಯವಸ್ಥೆಗಾಗಿ ಇರುವುದು.ವಚನಗಳನ್ನು ಪ್ರಸಾರ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ ಇದರ ಹಿಂದೆ ಒಂದು ದುರುದ್ದೇಶ ಇಟ್ಟುಕೊಂಡು ಅರ್ಥಕ್ಕೆ ಅನರ್ಥ ಕಲ್ಪಿಸಲಾಗುತ್ತಿದೆ. ಬೇರೇನೋ ಅಜೆಂಡಾ ಇಟ್ಟುಕೊಂಡು ಅಪಪ್ರಚಾರ ಮಾಡಲಾಗುತ್ತಿದೆ. ನಮ್ಮದೇ ಲೇಖಕರಿಂದ ಪುಸ್ತಕ ಬರೆಸಿ ಬೇರೆಯವರ ಬಳಿ ಬಿಡುಗಡೆ ಮಾಡಲಾಗುತ್ತಿದೆ. ಬಸವಧರ್ಮ ಶರಣ ಧರ್ಮ ಯಾಕೆ ಹುಟ್ಟಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬ್ರಾಹ್ಮಣ ಸಮುದಾಯದ ಕಂದಾಚಾರ ಅನಿಷ್ಟ ಪದ್ದತಿಗಳನ್ನು ನೋಡಿ ಬಸವಣ್ಣ ಹೊರಗೆ ಬಂದರು. ಸಮಾಜದಲ್ಲಿ ಅಸಮಾನತೆ ಹೋಗಬೇಕು ಮೂಢನಂಬಿಕೆ ಚತುರ್ವರ್ಣ ಹೋಗಬೇಕು ಎಂದು ಬಸವ ಧರ್ಮ ಕಟ್ಟಿದರು. ನಮ್ಮ ಅಸ್ಮಿತೆ ನಮ್ಮ ಮೂಲಕ್ಕೆ ಕೆಲವರು ಕೈ ಹಾಕ್ತಿದ್ದಾರೆ ಕೈ ಹಾಕಬೇಡಿ. ನಿಮ್ಮ ಸಿದ್ದಾಂತ ನೀವು ಪಾಲಿಸಿ ನಮ್ಮ ಶ್ರೇಷ್ಟ ಅಸ್ಮಿತೆಗೆ ಕೈ ಹಾಕಬೇಡಿ.ವಚನ ದರ್ಶನ ಎಂಬ ಪುಸ್ತಕದ ಹೆಸರಲ್ಲಿ ವಚನಗಳನ್ನು ತಿದ್ದಲಾಗಿದೆ ಎಂದರು.
ಮೀಸಲಾತಿ ಸಲುವಾಗಿ ನಾವು ಉಪಜಾತಿ ಬರೆಸುತ್ತಿದ್ದೇವೆ. ಲಿಂಗಾಯತ ಹೋರಾಟ ಪ್ರಾರಂಭ ಮಾಡಿದಾಗ ನಮಗೆ ಮೀಸಲಾತಿ ಉದ್ದೇಶವೇ ಇತ್ತು. ಆಗಿನ ಸರ್ಕಾರ ಇದ್ದಾಗ ಸಮಯ ಕಡಿಮೆ ಇತ್ತು.ಆಗ ತಪ್ಪು ತಡೆಗಳು ಎಲ್ಲ ಕಡೆಯಿಂದಲೂ ಆಗಿದೆ. ಒಕ್ಕಲಿಗ ಜಾತಿಯಲ್ಲೂ ನೂರೆಂಟು ಉಪ ಜಾತಿಗಳಿವೆ. ಆದರೆ ಅವರೆಲ್ಲರೂ ಒಂದೇ ಜಾತಿಯ ಅಡಿಯಲ್ಲಿ ಮೀಸಲಾತಿ ಪಡೆಯುತ್ತಾರೆ. ನಾವು ಎಲ್ಲ ಉಪ ಪಂಗಡಗಳು ಒಂದೇ ಹೆಡ್ಡಿಂಗ್ ನ ಅಡಿ ಬರಬೇಕಿದೆ. ಜಾತಿ ಗಣತಿ ಬೈಯುತ್ತೇವೆ.ಜಾತಿ ಗಣತಿ ಹೋದಾಗ ಗಾಣಿಗ, ಬಣಜಿಗ, ಕೂಡು ಒಕ್ಕಲಿಗ ಅಂತ ಬರೆಸಿದ್ದೇವೆ. ಆದರೆ ಯಾರೂ ವೀರಶೈವ ಲಿಂಗಾಯತ ಅಂತ ಬರೆಸಿಲ್ಲ.ಇದಕ್ಕಾಗಿ ೨ ಕೋಟಿ ಯಿಂದ ನಾವು ೬೫ ಲಕ್ಷಕ್ಕೆ ಇಳಿದು ಬಂದಿದ್ದೇವೆ. ಮತ್ತೆ ಜನಗಣತಿ ಆದ್ರೂ ಇದೆ ಸಮಸ್ಯೆ ಆಗುತ್ತದೆ. ಹೀಗಾಗಿ ನಾವೆಲ್ಲ ಲಿಂಗಾಯತರು ಒಂದೇ ಮೀಸಲಾತಿ ಅಡಿ ಬರಬೇಕು. ಮತ್ತೊಮ್ಮೆ ಜಾತಿ ಜನಗಣತಿ ಆದ್ರೂ ಕೂಡ ಮತ್ತಷ್ಟು ಸಂಖ್ಯೆ ಕಡಿಮೆ ಬರೆಸುತ್ತಾರೆ ಎಂದರು.