ಮನೆ Latest News ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಬಗ್ಗೆ ನನಗ್ಯಾವ ಗೊಂದಲ ಇಲ್ಲ; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ...

ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಬಗ್ಗೆ ನನಗ್ಯಾವ ಗೊಂದಲ ಇಲ್ಲ; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸ್ಪಷ್ಟನೆ..

0

ಬೆಂಗಳೂರು; ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ಬಗ್ಗೆ ನನಗ್ಯಾವ ಗೊಂದಲ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಅಧ್ಯಕ್ಷರ ಮರು ನೇಮಕನೋ, ನೇಮಕಾತಿನೋ, ಅಥವಾ ಆಯ್ಕೆಯೋ ಎಂಬ ಗೊಂದಲದಲ್ಲಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಬೆಂಗಳೂರಿನಲ್ಲಿ ಉತ್ತರಿಸಿದ ಅವರು ಆದರೆ ನಾನಂತೂ ಆ ಗೊಂದಲದಲ್ಲಿ ಇಲ್ಲ. ಇಲ್ಲಿವರೆಗೂ ಕೇವಲ ಹತ್ತು ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಆಗಿದೆ. ಬೇರೆ ರಾಜ್ಯಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ನಮ್ಮ ರಾಜ್ಯದಲ್ಲಿ 23-25 ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಆಗಿದೆ. ಒಂದು ತಡೆ ಕೊಟ್ಟಿದ್ದಾರೆ. ಅದಕ್ಕೆ ಕಾರಣ ಏನೆಂದು ನಿಮಗೆ ಗೊತ್ತಿದೆ. ಉಳಿದ ಬಾಕಿ ಜಿಲ್ಲೆಗಳ ಆಯ್ಕೆ ಪ್ರಕ್ರಿಯೆ ಇನ್ನೂ ಎರಡು ಮೂರು ದಿನಗಳಲ್ಲಿ ಮುಗಿಯುತ್ತದೆ. ಅದರ ಪಟ್ಟಿಯನ್ನು ನಾವು ಹೈಕಮಾಂಡ್ ಗೆ ಕಳುಹಿಸಿಕೊಡುತ್ತೇವೆ ಎಂದಿದ್ದಾರೆ.

ಇನ್ನು ಸಿಎಂ ಕುರ್ಚಿಗೆ ಕಾಂಗ್ರೆಸ್ ಅಲ್ಲಿ ಪೈಪೋಟಿ ಶುರುವಾಗಿದೆ. ಸಿಎಂ ಕುರ್ಚಿ ಗಟ್ಟಿಯಾಗಿದೆ ಅನ್ನೋ ಭ್ರಮೆಯಿಂದ ಹೊರಗೆ ಬನ್ನಿ ಎಂದು ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ. ಒಬ್ಬರು ಸಿದ್ದರಾಮಯ್ಯ ಮುಂದುವರೀತಾರೆ ಅಂತ, ಕೆಲವರು ಸಿಎಂ ಬದಲಾಗ್ತಾರೆ ಅಂತ. ಸಿದ್ದರಾಮಯ್ಯ ಅವರು ಈಗ ಹೈಕಮಾಂಡ್ ಡಿಶೀಷನ್ ಅಂತಿದ್ದಾರೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಮಾತೇ ಅಂತಿಮ ಅಂತಿದ್ರೆ, ಸಿದ್ದರಾಮಯ್ಯ ಬೆಂಬಲಿಗರು ಅವರ ಮಾತೇ ಅಂತಿಮ ಅಂತಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸು ಪರಿಸ್ಥಿತಿ ಸರಿ ಇದೆ ಅಂತಿದ್ದಾರೆ. ಸಿಎಂ ಕುರ್ಚಿ ಗಟ್ಟಿ ಅಂತಿದ್ದಾರೆ. ಆಲ್ ಈಸ್ ವೆಲ್ ಅಂತಿದ್ದಾರೆ.ಇದನ್ನೆಲ್ಲಾ ಜನರ ಮುಂದೆ ಇಡುತ್ತಿದ್ದೇವೆ ಎಂದಿದ್ದಾರೆ.

ಪಕ್ಷದೊಳಗಿನ ಆಂತರಿಕ ಕಲಹ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ಪಕ್ಷದ ಆಂತರಿಕ ವಿಚಾರ ಹೈಕಮಾಂಡ್ ಗಮನಕ್ಕೆ ಬಂದಿದೆ. ಕೇಂದ್ರದ ಶಿಸ್ತು ಸಮಿತಿ ಯಾರಿಗೆ ನೋಟೀಸ್ ನೀಡಬೇಕು ನೀಡಿದೆ. ಅವರು ಯಾರಿಗೆ ಉತ್ತರ ಕೊಡಬೇಕು ಕೊಟ್ಟಿದ್ದಾರೆ. ಹೈಕಮಾಂಡ್ ಮುಂದೆ ನಿರ್ಧಾರ ತೆಗೆದುಕೊಳ್ಳಲಿದೆ. ರೈತರ, ಬಡವರ ಸರ್ಕಾರದ ವಿರುದ್ಧ ನಮ್ಮ‌ ಹೋರಾಟ. ಹೈಕಮಾಂಡ್ ಮುಂದೆ ಎಲ್ಲವನ್ನೂ ಸರಿಪಡಿಸಲಿದ್ದಾರೆ. ಏನು ಮಾಡಬೇಕೋ ಅದನ್ನ ಮಾಡಲಿದ್ದಾರೆ. ದಕ್ಷಿಣದ ಹೆಬ್ಬಾಗಿಲು ಅಂತ ಕರ್ನಾಟಕವನ್ನ ಕರೀತಿದ್ರು. ಮತ್ತೆ ಕರ್ನಾಟಕದ ಹೆಬ್ಬಾಗಿಲು ಕರ್ನಾಟಕದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರ್ತೇವೆ ಎಂದಿದ್ದಾರೆ.ಇನ್ನು ನಾಳೆ ರೆಬೆಲ್ಸ್ ನಾಯಕರ ಸಭೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ರೆಬೆಲ್ಸ್ ಅಂತ ಕರೆಯಬೇಡಿ ಎಂದು ಹೇಳಿದ್ದಾರೆ. ಯಾಕೆ ಹಾಗೆ ಕರೀತೀರಾ.? ಪಕ್ಷ ಸಂಘಟನೆ ಆಗಬೇಕಿದೆ, ಹಾಗಾಗಿ ಸೇರಬಹುದು.ಶಿವರಾಜ್ ಸಿಂಗ್ ಚೌಹಾಣ್ ಆಗಮನ ವಿಚಾರದ ಬಗ್ಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ರಾಜ್ಯಾಧ್ಯಕ್ಷ ಆಯ್ಕೆಯಾಗಿಲ್ಲ ಅಂತ ತಿಳಿದಿದ್ದೀರಿ. ನಾನು ಆ ರೀತಿ ತಿಳಿದಿಲ್ಲ. ಅನೇಕ ರಾಜ್ಯಗಳ ರಾಜ್ಯಾಧ್ಯಕ್ಷ ಚುನಾವಣೆ ಆಗಬೇಕಿದೆ.ನಮ್ಮ ರಾಜ್ಯದ 23 ಜಿಲ…ನಮ್ಮ ರಾಜ್ಯದ 23 ಜಿಲ್ಲಾಧ್ಯಕ್ಷರ ಆಯ್ಕೆ ನಡೆದಿದೆ. ಉಳಿದ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಎರಡು ದಿನದಲ್ಲಿ ನಡೆಯಲಿದೆ.ಆ ಪಟ್ಟಿಯನ್ನ ದೆಹಲಿಗೆ ಕಳಿಸ್ತೇವೆ ಎಂದಿದ್ದಾರೆ.

ಜಾತಿಗಣತಿ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಜಾತಿ ಗಣತಿಯನ್ನ ಮಕ್ಕಳಾಟದ ರೀತಿ ತಿಳಿದಿದ್ದಾರೆ. ಹಾವಾಡಿಗರು ಜಾತ್ರೆಯಲ್ಲಿ ಹಾವು ಬಿಡ್ತೀನಿ ಅಂತ ಪುಂಗಿ ಊದ್ತಿರ್ತಾರೆ.. ಹಾಗೆ ಸಿದ್ದರಾಮಯ್ಯ ಅವರು ಜಾತಿ ಗಣತಿ ಜಾರಿಗೆ ತರ್ತೀನಿ ಅಂತ ಹೇಳ್ತಾನೆ ಇರ್ತಾರೆ. ನನಗೆ ಅವರ ಮೇಲೆ ನಂಬಿಕೆ ಇಲ್ಲ. ಅವರು ನಿಜವಾಗಿ ಬಿಡುಗಡೆ ಮಾಡೋದಾಗಿದ್ರೆ, ಹಿಂದೆಯೇ ಸಿಎಂ ಆಗಿದ್ದಾಗಲೇ ಬಿಡುಗಡೆ ಮಾಡ್ತಿದ್ರು. ಆದ್ರೆ ಅವರಿಗೆ ಆ ಇಚ್ಛಾಶಕ್ತಿ ಕಾಣ್ತಿಲ್ಲ.ಪ್ರತಿ ತಿಂಗಳು ಸಂಬಳದ ರೀತಿ ಕೊಡೋಕೆ ಆಗಲ್ಲ ಎಂದು ಸಚಿವ ಜಾರ್ಜ್ ಹೇಳಿದ್ದಾರೆ. ರಾಜ್ಯದ ಜನ ಏನು ಭಿಕ್ಷುಕರಾ? ನೀವೆ ಕೊಟ್ಟ ಭರವಸೆ. ಈಗ ಗ್ಯಾರಂಟಿಗೆ ಹಣ ಹೊಂದಿಸಲು ಆಗ್ತಿಲ್ಲ ಇವರಿಗೆ ಎಂದಿದ್ದಾರೆ,