ಮನೆ Latest News ಮಧು ಬಂಗಾರಪ್ಪ ಏನು ತಿನ್ನುತ್ತಾ ಕೂತಿದ್ದಾರೆ ?; ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಗರಂ

ಮಧು ಬಂಗಾರಪ್ಪ ಏನು ತಿನ್ನುತ್ತಾ ಕೂತಿದ್ದಾರೆ ?; ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಗರಂ

0

ಬೆಂಗಳೂರು; ಭದ್ರಾವತಿ ಶಾಸಕರ ಪುತ್ರ ಮಹಿಳಾ ಅಧಿಕಾರಿಗೆ ನಿಂದಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಭದ್ರಾವತಿ ಶಾಸಕರ ಪುತ್ರ ಮಹಿಳಾ ಅಧಿಕಾರಿಗೆ ನಿಂದಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು  ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ?.ಹಿಂದೆ ಯಾವುದೋ ವಿಚಾರಕ್ಕೆ ಹಾಲಪ್ಪ ಸಗಣಿ ತಿಂತಾ ಇದ್ದಾರಾ ಎಂದು ಕೇಳಿದ್ದರು.ಈಗ ಉಸ್ತುವಾರಿ ಸಚಿವರು ಏನು ತಿನ್ನುತ್ತಾ ಇದ್ದಾರೆ?. ಅಧಿಕಾರಿಗೆ ಸಾಂತ್ವನ ಹೇಳಿದ್ರಾ?.ಅಧಿಕಾರಿಗೆ ಫೋನ್ ಕೊಟ್ಟ ರಮೇಶ ಎನ್ನುವವನನ್ನು ಬಂಧಿಸಿದ್ರಾ?. ಬಸವನನ್ನು ಬಂಧಿಸಿದ್ರಾ?. ಸಂಬಂಧ ಇಲ್ಲದ ಯಾರೋ ಮೂವರನ್ನ ಬಂಧಿಸಿದರು.ಮಾಧ್ಯಮದ ಮುಂದೆ ಜನರ ಮುಂದೆ ಮಾತಾಡುತ್ತೀರಲ್ಲ?.ಈಗ ನಿಮ್ಮ ತಾಕತ್ತನ್ನು ತೋರಿಸಿ.ಏನು ತಿನ್ನುತ್ತಾ ಕೂತಿದ್ದೀರಾ ?.ಸಿಎಂ ಈ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಿವಮೊಗ್ಗ ಸುಸಂಸ್ಕೃತರ ಜಿಲ್ಲೆ. ಆದರೆ ರಿಪಬ್ಲಿಕ್ ಶುರುವಾಗಿದೆ.ಯಾರಿಗೋ ರೋಪ್‌ ಹಾಕುವುದಲ್ಲ.ಈ ಪ್ರಕರಣದಲ್ಲಿ ತಾಕತ್ ತೋರಿಸಿ.ಮಧು ಬಂಗಾರಪ್ಪ ಏನು ತಿನ್ನುತ್ತಾ ಕೂತಿದ್ದಾರೆ ?.60 ವರ್ಷದ ಸಮಸ್ಯೆ ಶರಾವತಿ ಮುಳುಗಡೆ ವಿಚಾರದ ಬಗ್ಗೆ ಸಮಸ್ಯೆ ಪರಿಹರಿಸದೇ ಹಾಲಪ್ಪ ಸಗಣಿ ತಿನ್ನುತ್ತಾ ಕೂತಿದ್ದಾರಾ ಎಂದು ಕೇಳಿದ್ದರು. ಅವರ ತಂದೆಯ ಕಾಲದಿಂದಲೂ ಇರುವ ಸಮಸ್ಯೆ ಅದು.ಈಗ ಮಧು ಬಂಗಾರಪ್ಪ ಏನು ತಿನ್ನುತ್ತಾ ಕೂತಿದ್ದಾರೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಶಾಸಕರ ಪುತ್ರ ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ.ಎಲ್ಲವೂ ಕಾಣುತ್ತಿದೆ, ಯಾರು ಬೈದರು, ಏನು ಬೈದರು, ಯಾರು ಬೈಸಿಕೊಂಡವರು ಅಂತ ಎಲ್ಲವೂ ಗೋಚರ.ಆದರೂ ಮಹಿಳಾ ಅಧಿಕಾರಿಗೆ ನಿಂದನೆ‌ ಮಾಡಿದವನನ್ನು ಜಿಲ್ಲೆಯ ಎಸ್‌ಪಿ ಯಾಕೆ ಬಂಧನ‌ ಮಾಡಿಲ್ಲ? .ಬಂಧನಕ್ಕೆ ಎಸ್ಪಿ ಹಿಂಜರಿಯುತ್ತಿದ್ದಾರಾ?ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆಡಳಿತವನ್ನೇ ಮಾಡುತ್ತಿಲ್ಲ.ಮಧು, ದೊಡ್ಡವರ ಮಗ ಅಂತ ಜಿಲ್ಲೆಯಲ್ಲಿ ಭರವಸೆ ಇತ್ತು, ಆ ಭರವಸೆ ಹುಸಿಯಾಗಿದೆ.ಕಾಲು ಕೆರೆದುಕೊಂಡು, ಕೂದಲು ಕೆದರಿಕೊಂಡು ಜಗಳಕ್ಕೆ ಹೋಗುವುವರಂತೆ ಹೋಗುತ್ತೀರಲ್ಲಾ ಮಧು ಅವರೇ?.ಶಾಸಕರ ಪುತ್ರನ ಬಂಧನ ಮಾಡುವ ತಾಕತ್ ಇಲ್ವಾ ನಿಮಗೆ?.ಉಸ್ತುವಾರಿ ಸಚಿವರೇ ಈಗ ನಿಮ್ಮ ತಾಕತ್ ತೋರಿಸಿ.ಈಗ ಸಂಗಮೇಶ್ ಪುತ್ರನ ಯಾಕೆ ಬಂಧಿಸುತ್ತಿಲ್ಲ ಉಸ್ತುವಾರಿ ಸಚಿವರೇ?.ನನಗೆ ಹೇಳಿದ್ರಲ್ಲಾ, ಅದನ್ನೇ ನೀವೂ ತಿಂತಿದ್ದೀರಾ?.ಈಗ ಸಂಗಮೇಶ್ ಪುತ್ರನ ಬಂಧನ ಮಾಡುವ ತಾಕತ್ ತೋರಿಸಿ.ಈಗ ಮಧು ಬಂಗಾರಪ್ಪ ಏನು ತಿನ್ನುತ್ತಿದ್ದಾರೆ? ಸೆಗಣಿಯನ್ನೇ ತಿನ್ನುತ್ತಿದ್ದಾರಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಆ ಮಹಿಳಾ ಅಧಿಕಾರಿಗೆ ಮಧು ಬಂಗಾರಪ್ಪ ಕನಿಷ್ಟ ಒಂದು ಸಾಂತ್ವನ ಹೇಳಿಲ್ಲ.ಮುಖ್ಯಮಂತ್ರಿಗಳೇ ಯಾಕೆ ಶಾಸಕರ ಪುತ್ರನ ಬಂಧಿಸುತ್ತಿಲ್ಲ?.ನಮ್ಮ ಜಿಲ್ಲೆಯ ಎಸ್‌ಪಿ ಯಾಕೆ ಹೀಗಾದರು ಅಂತ ಗೊತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.