ಮನೆ ಪ್ರಸ್ತುತ ವಿದ್ಯಮಾನ ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ 3 ದಿನ ‘ಇನ್ವೆಸ್ಟ್ ಕರ್ನಾಟಕ 2025’ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ 3 ದಿನ ‘ಇನ್ವೆಸ್ಟ್ ಕರ್ನಾಟಕ 2025’ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ

0

ಬೆಂಗಳೂರು; ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ 3 ದಿನ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಕಾರ್ಯಕ್ರಮದ ಪೂರ್ವ ತಯಾರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ ಪಾಟೀಲ್ ವೀಕ್ಷಿಸಿದರು

ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಹಿನ್ನೆಲೆ ಕಾರ್ಯಕ್ರಮ ನಡೆಯುವ ಪ್ರಧಾನ ವೇದಿಕೆ, ವಿವಿಧ ವಸ್ತು ಪ್ರದರ್ಶನ ಪ್ರದೇಶಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ ಪಾಟೀಲ್ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.ಇಲಾಖೆಯ ಕಾರ್ಯದರ್ಶಿಗಳಾದ ಗುಂಜನ್ ಕೃಷ್ಣ, ಸೆಲ್ವಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಅಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು,

ಇನ್ನು ಈ ವೇಳೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಪಾಟೀಲ್ ಬಂಡವಾಳ ಸಮಾವೇಶದ ಸಿದ್ದತೆ ವೀಕ್ಷಣೆ ಮಾಡಿದ್ದೇನೆ. ನಾಳೆ ಬೆಳಗ್ಗೆ (ಇಂದು) ಎಲ್ಲವೂ ಸಿದ್ದತೆ ಪೂರ್ಣ ಆಗಲಿದೆ. ಬಂಡವಾಳ ಸಮಾವೇಶಕ್ಕೆ ಸಂಪೂರ್ಣವಾಗಿ ತಯಾರಿ ಆಗಿದೆ‌. ಸವಾಲು ಎದುರಿಸು ನಿಟ್ಟಿನಲ್ಲಿ ಈ ಬಾರಿಯ ಸಮಾವೇಶ ನಡೆಯಲಿದೆ. AI ಈ ಬಾರಿ ಬಿಗ್ ರೋಲ್ ಮಾಡಲಿದೆ. EV ಗ್ರೀನ್ ಹೈಡ್ರೋಜನ್ ಸೇರಿ ಹೊಸ ಹೊಸ ವಲಯ ಆಕರ್ಷಣೆ ಆಗಲಿದೆ. ಈ ಸಮಾವೇಶ ವಿಶೇಷ ಸಮಾವೇಶ.ಪ್ರಗತಿಯ ಮರು ಕಲ್ಪನೆ ಹೆಸರಿನಲ್ಲಿ ಬಂಡವಾಳ ಸಮಾವೇಶ ನಡೆಯುತ್ತಿದೆ. ನಾಳೆ(ಇಂದು) ಸಂಜೆ 4.15 ರಿಂದ 4.30 ರಿಂದ ಉದ್ಘಾಟನೆ ನಡೆಯಲಿದೆ

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ.ವಿಶೇಷ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.12 ರಿಂದ ಸೆಮಿನಾರ್, ವಿಶೇಷ ಸೆಷನ್ ಗಳು ನಡೆಯಲಿವೆ.ದಾವೋಸ್ ಸಮಾವೇಶದ ಹತ್ತಿರಕ್ಕೆ ನಮ್ಮ ಬಂಡವಾಳ ಸಮಾವೇಶ ಬರಲಿದೆ.10 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ಬರ್ತಿದೆ.ಬೇರೆ ದೇಶಕ್ಕೂ ಮಾದರಿಯಾಗಿ ರೋಡ್ ಮ್ಯಾಪ್ ನಾವು ಹಾಕಿಕೊಂಡಿದ್ದೇವೆ ಎಂದು ಅರು ತಿಳಿಸಿದ್ರು.