ಮನೆ Latest News ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಬಣ ಒತ್ತಾಯ ಹಿನ್ನೆಲೆ: ಡಿಸಿಎಂ ಡಿಕೆಶಿ ಭೇಟಿ ಮಾಡಿದ ಹೆಚ್.ವಿಶ್ವನಾಥ್

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಬಣ ಒತ್ತಾಯ ಹಿನ್ನೆಲೆ: ಡಿಸಿಎಂ ಡಿಕೆಶಿ ಭೇಟಿ ಮಾಡಿದ ಹೆಚ್.ವಿಶ್ವನಾಥ್

0

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಸಿದ್ದರಾಮಯ್ಯ ಬಣ ಒತ್ತಾಯ ಮಾಡುತ್ತಿರುವ ಬೆನ್ನಲ್ಲೇ  ಡಿಸಿಎಂ ಡಿಕೆಶಿ ಅವರನ್ನು ಹೆಚ್.ವಿಶ್ವನಾಥ್  ಭೇಟಿ ಮಾಡಿದ್ದಾರೆ.

ಇನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಹೆಚ್.ವಿಶ್ವನಾಥ್ ಅನಾವಶ್ಯಕವಾಗಿ ಸಿಎಂ ಹಬ್ಬಿಸುತ್ತಿರುವ ಗೋಜಲು ಇದು. ಕಾಂಗ್ರೆಸ್ ಪಕ್ಷದ ನೇಮ್ ಅಂಡ್ ಫೇಮ್ ಹಾಳು ಮಾಡುತ್ತಿದ್ದಾರೆ. ಇವರೇನು ಕಾಂಗ್ರೆಸ್ ಕಟ್ಟಿದವರಲ್ಲವಲ್ಲ, ಅವರಿಗೇನ್ ಆಗಬೇಕು. ಅವರದ್ದು ಮುಗಿಯಿತಲ್ಲ, ಇದು ಅನಾವಶ್ಯಕ ಎಂದಿದ್ದಾರೆ.

ಮಂತ್ರಿಗಳನ್ನ ಯಾರು ಕೇಳ್ತಾವ್ರೆ, ಐದು ವರ್ಷ ಮೂರು ವರ್ಷ ಯಾರು ಕೇಳ್ತಾವ್ರೆ. ಸುಮ್ನೆ ಇವ್ರಿವ್ರೆ ಐದು ವರ್ಷ ಅವ್ರೆ ಅಂತಾರೆ. ಇದೆಲ್ಲಾ ಬಾಲಿಶತನ, ನ್ಯೂಸ್‌ಸೆನ್ಸ್. 136 ಸ್ಥಾನ ಬರಲು ಡಿ.ಕೆ.ಶಿವಕುಮಾರ್ ಕೊಡುಗೆ ಇದೆ.ಎಲ್ಲಾದಕ್ಕೂ ಡಿ ಕೆ ಶಿವಕುಮಾರ್ ಅವರದ್ದು ಖರ್ಚಾಗಿಲ್ವ.. ಎಲೆಕ್ಷನ್ ಸಂದರ್ಭದಲ್ಲೇ ಆಗಿರುವ ಮಾತುಕತೆ ಇದು. ಡಿ.ಕೆ.ಶಿವಕುಮಾರ್ ಸಿಎಂ ಆಗೋದನ್ನ ಯಾರು ತಪ್ಪಿಸಲು ಆಗಲ್ಲ ಅಂತಾ ಡಿಕೆಶಿ ಪರ‌ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ಓಪನ್ ಆಗಿಯೇ ಬ್ಯಾಟ್ ಬೀಸಿದ್ದಾರೆ.

ಮುಡಾ ಆಸ್ತಿ ಇಡಿ ಮುಟ್ಟು ಗೋಲಿನ ಬಗ್ಗೆ ಸಿಎಂ ಹೇಳಿಕೆ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಹೆಚ್ ವಿಶ್ವನಾಥ್ ಹೌದೌದು ಅವರದ್ದು ಸಿಕ್ಕರೆ ರಾಜಕೀಯ ಪ್ರೇರಿತ. ಅವರನ್ನ ಬೇಷ್ ಎಂದ್ರೆ ಯಸ್. ಸಿಎಂ ಮುಡಾ ಕೇಸ್‌ನಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ. ಮೈಸೂರು ಜನ ಮನೆ ಕಟ್ಟಲು ಒಂದು ಸೈಟ್ ಕೊಡಪ್ಪ ಅಂದ್ರೆ ಅವರ ಮನೆಯವ್ರದ್ದೇ ಬರೆಸಿಕೊಳ್ಳೋದಾ..? ಸಿದ್ದರಾಮಯ್ಯ ಕಾಲದಲ್ಲಿ ಮೈಸೂರು ವಿಜಯನಗರ ಸಾಮ್ರಾಜ್ಯ ಆಗಿದೆ. 1200 ರೂಗೆ 50×80 ಒಂದು ಸೈಟು. ಯಾರ ಕಾಲದಲ್ಲಿ ಇತ್ತು, ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನ ಬೆಳ್ಳಿ ಮಾರಿದಂತೆ ಸೈಟು ಮಾರಿದ್ದಾರೆ.ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ವಿರುದ್ದ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.