ಮನೆ Latest News ಕೆಪಿಸಿಸಿ ಅಧ್ಯಕ್ಷ, ಸಿಎಂ ಸಿದ್ದರಾಮಯ್ಯ ಕುರ್ಚಿ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ : ವಿಧಾನಸೌಧದಲ್ಲಿ ಪರಿಷತ್ ಟಿ.ಎ....

ಕೆಪಿಸಿಸಿ ಅಧ್ಯಕ್ಷ, ಸಿಎಂ ಸಿದ್ದರಾಮಯ್ಯ ಕುರ್ಚಿ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ : ವಿಧಾನಸೌಧದಲ್ಲಿ ಪರಿಷತ್ ಟಿ.ಎ. ಶರವಣ ಹೇಳಿಕೆ

0

ಬೆಂಗಳೂರು;  ಕೆಪಿಸಿಸಿ ಅಧ್ಯಕ್ಷ,  ಸಿಎಂ ಸಿದ್ದರಾಮಯ್ಯ ಕುರ್ಚಿ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ವಿಧಾನಸೌಧದಲ್ಲಿ ಪರಿಷತ್ ಟಿ.ಎ. ಶರವಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಎಂಎಲ್ಸಿಗಳಾದ ರವಿಕುಮಾರ್ ಹಾಗೂ ಟಿ.ಎ. ಶರವಣ ಜಂಟಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಲೂಟಿಕೋರರು, ದರೋಡೆಕೋರರಿಗೆ ಸ್ವರ್ಗ ಆಗಿದೆ. ಗೃಹ ಇಲಾಖೆ ಸತ್ತುಹೋಗಿದ್ಯಾ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ ಎಂದರು. ಬೀದರ್, ಮಂಗಳೂರು, ಮೈಸೂರಿನ ಘಟನೆಗಳನ್ನ ನೋಡಿದ್ದೇವೆ. ಮಂಗಳೂರಿನಲೃ ಕೋಟೆಕಾರಿನಲ್ಲಿ ಸಹಕಾರಿ ಬ್ಯಾಂಕ್ ಲೂಟಿ ಆಗಿದೆ. ಕಳೆದ ಐದು ದಿನಗಳಲ್ಲಿ‌ 8.5 ಕೆ.ಜಿ ಚಿನ್ನ ನಗರ್ತಪೇಟೆಯಲ್ಲಿ ಕಳ್ಳತನ ಆಗಿದೆ. ಹಾಲ್ ಮಾರ್ಕ್‌ಸೆಂಟರ್ ಗೆ ತೆಗೆದುಕೊಂಡು ಹೋಗಿ ಕೊಟ್ಟಾಗ ನನ್ನ ಸಾಯಿ ಗೋಲ್ಡ್ ಪ್ಯಾಲೇಸ್ ಚಿನ್ನ ಕಳ್ಳತನವಾಗಿದೆ ಎಂದರು.

ಗೃಹ ಸಚಿವ ಪರಮೇಶ್ವರ್  ಮನೆ ಬಿಟ್ಟು ಹೊರಗೆ ಬಂದು ಕೆಲಸ ಮಾಡ್ತಿಲ್ಲ. ಕೆಪಿಸಿಸಿ ಅಧ್ಯಕ್ಷ, ಸಿಎಂ ಕುರ್ಚಿಗಾಗಿ ಬ್ಯುಸಿಯಾಗಿದ್ದಾರೆ. ವಿಪಕ್ಷಗಳು ರಾಜಕಾರಣ ಮಾಡ್ತಿವೆ ಅಂತ ಕಾಂಗ್ರೆಸ್ ಆರೋಪ ಮಾಡುತ್ತಿದೆ. ಸರ್ಕಾರ ಮತ್ತು ಗೃಹ ಇಲಾಖೆ ವೈಫಲ್ಯವೇ ಅಪರಾಧ ಜಾಸ್ತಿಯಾಗಲು ಕಾರಣ. ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ.  ಬೇರೆ ರೀತಿ ಸಮಾಜಘಾತುಕ ಶಕ್ತಿಗಳಿಗೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ಸೇಫ್ ಸಿಟಿ ಬದಲಿಗೆ ರಾಜ್ಯ ಕ್ರೈಂ ಸಿಟಿ ಆಗಿದೆ. ಕಾನೂನು ವ್ಯವಸ್ಥೆಯನ್ನ ಬಿಗಿ ಮಾಡಬೇಕು. ಬೇರೆ ರಾಜ್ಯಗಳಿಂದ ಹೂಡಿಕೆ ಮಾಡಲು ಸಾಕಷ್ಟು ಜನ ಬರ್ತಾರೆ. ಹೂಡಿಕೆದಾರರಿಗೆ ಇಲ್ಲಿ ಸುರಕ್ಷತೆ ಆತಂಕ ಕಾಡುತ್ತಿದೆ. ಬೆಂಗಳೂರು, ಮಂಗಳೂರಿಗೆ ಹೋಗಲು‌ ಹೆದರಿಕೆ ಆಗ್ತಿದೆ ಅಂತ ಹೂಡಿಕೆದಾರರು ಹೇಳುತ್ತಿದ್ದಾರೆ. ಕ್ರೈಂ ಕಡಿಮೆ ಮಾಡುವ ಕೆಲಸ ಸರ್ಕಾರ ಮಾಡಬೇಕು. ಸುರಕ್ಷತೆ ಹೆಚ್ಚು ಮಾಡುವ  ಕೆಲಸ ಸರ್ಕಾರದಿಂದ ಆಗ್ಬೇಕು ಎಂದು ಒತ್ತಾಯಿಸಿದ್ದಾರೆ.