ಮನೆ Latest News ನಟ ಶಿವರಾಜ್ ಕುಮಾರ್ ಅವರ ಆರೋಗ್ಯದ ಬಗ್ಗೆ ಅಪ್ ಡೇಟ್ ಕೊಟ್ಟ ಸಚಿವ ಮಧು ಬಂಗಾರಪ್ಪ

ನಟ ಶಿವರಾಜ್ ಕುಮಾರ್ ಅವರ ಆರೋಗ್ಯದ ಬಗ್ಗೆ ಅಪ್ ಡೇಟ್ ಕೊಟ್ಟ ಸಚಿವ ಮಧು ಬಂಗಾರಪ್ಪ

0

ಬೆಂಗಳೂರು; ನಟ ಶಿವರಾಜ್ ಕುಮಾರ್ ಅವರ ಆರೋಗ್ಯದ ಬಗ್ಗೆ ಸಚಿವ ಮಧು ಬಂಗಾರಪ್ಪ ಅಪ್ ಡೇಟ್ ಕೊಟ್ಟಿದ್ದಾರೆ.  ಶಿವಣ್ಣ ಮತ್ತಷ್ಟು ಎನರ್ಜೆಟಿಕ್ ಆಗಿದ್ದಾರೆ ಜೋಷ್ ನಲ್ಲಿದ್ದಾರೆ. ಶಿವಣ್ಣಾವ್ರು ಅವರ ತಂದೆ ತಾಯಿ ಆಶೀರ್ವಾದ ಫ್ಯಾನ್ಸ್ ಆಶೀರ್ವಾದ ನಿಮ್ಮೆಲ್ಲರ ಕಾಳಜಿ ಮೇಲೆ ಹುಷಾರಾಗಿದ್ದಾರೆ ಎಂದಿದ್ದಾರೆ.

ಅಲ್ಲಿನ ಡಾಕ್ಟರ್ ದೇವರೇ .ಅಂಕಾಲಜಿ ಸರ್ಜರಿ ಮಾಡುವುದರಲ್ಲಿ ಪರಿಣಿತರಾದ ಮುರುಗೇಶ್ ಮನೋಹರ್ ಎಂಬ ವೈದ್ಯರು ಶಿವಣ್ಣನಿಗೆ ಸರ್ಜರಿ ಮಾಡಿದ್ದಾರೆ.ವೈದ್ಯರು ಈಗ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ಮುಕ್ತ ಎಂದು ಹೇಳಿದ್ದಾರೆ . ನಾವು ಅಲ್ಲಿಂದ ಮಾಧ್ಯಮದಲ್ಲಿ ನೋಡುತ್ತಿದ್ದೆವು. ಯಾವುದಾದರೂ ಫೋಟೋ ಕೊಟ್ರೆ ವಿಶ್ಲೇಷಣೆ ಮಾಡುವಾಗ ನಾವೆಲ್ಲ ನೋಡುತ್ತಿದ್ದೆವು. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹಗುರವಾಗಿ ಮಾತನಾಡುತ್ತಿದ್ದರು.  ಅದೆಲ್ಲವನ್ನು ನಿಲ್ಲಿಸಬೇಕು . ಶಿವಣ್ಣ ಅವ್ರೇ ಹೇಳಿದ್ದಾರೆ ಇದು ಬ್ಲಾಡರ್ ರೀ ಕನ್ಸ್ಟ್ರಕ್ಷನ್ .ಅದನ್ನು ಬೇರೆ ಬೇರೆ ಕಿಡ್ನಿ ಫೇಲ್ ಅಂತ ಆದಂತೆ ಇದೆ ಅಂತ ತಪ್ಪಾಗಿ ಅರ್ಥೈಸಬಾರದು . ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಮಾಡುವುದು ಒಳ್ಳೆಯದಲ್ಲ ಫ್ಯಾನ್ಸಿಗೆ ಹರ್ಟ್ ಆಗುತ್ತದೆ ಎಂದಿದ್ದಾರೆ.

ಶಿವಣ್ಣಗೆ ತಲೆಯಲ್ಲಿ ಒಂದು ಸ್ಟಂಟ್ ಇದೆ, ಹಾರ್ಟಲ್ಲಿ ಒಂದು ಸ್ಟಂಟ್ ಇದೆ. ಶಿವಣ್ಣ ಚೆನ್ನಾಗಿ ಇದ್ದಾರೆ, 25 ರಂದು ಬರ್ತಾರೆ. ಹಳೆಯದಕ್ಕಿಂತ ಜಾಸ್ತಿ ಜೋಷಲ್ಲೇ ಬರ್ತಾರೆ. ದಿನವೂ ನಾವು ನಾಲ್ಕೈದು ಕಿಮೀ ನಡೆದುಕೊಂಡು ವಾಕಿಂಗ್ ಮಾಡ್ತಿದ್ವಿ. ವೆರಾಂಡದಲ್ಲಿ ಸ್ಟೆಪ್ಸ್ ಕೌಂಟ್ ಮಾಡ್ತಾರೆ, ಅಲ್ಲಿಯ ಸಿಸ್ಟಂ ಸ್ವಲ್ಪ ಬೇರೆ. ಐದಾರು ಸಾವಿರ ಸ್ಟೆಪ್ಸ್ ಹಾಕ್ತಿದ್ರು. ಹಾಸ್ಪಿಟಲ್ ಎದುರಗಡೆ ಒಂದು ಲೇಕ್ ಇದೆ ಅಲ್ಲಿಯೇ ಒಂದು ಐದಾರು ರೌಂಡ್ ಹಾಕ್ತಿದ್ದರು ಶಿವಣ್ಣ ಎಂದಿದ್ದಾರೆ. ಇನ್ನು ಈಗ ಇನ್ನೂ ಜಾಸ್ತಿ ವಾಕ್ ಮಾಡುತ್ತಿದ್ದಾರೆ. ಚೆನ್ನಾಗಿ ಟ್ರೀಟ್ಮೆಂಟ್ ಸಿಕ್ಕಿದೆ.ಡಾಕ್ಟರ್ ಹೇಳಿದ್ದಾರೆ ಶಿವಣ್ಣ ವೆರಿ ವೆರಿ ಫಿಟ್ ಅಂತಾ. ಒಟ್ಟೂ 6 ಆಪರೇಷನ್ ಏಕಕಾಲಕ್ಕೆ ಮಾಡಿದ್ದಾರೆ. ಅವರ ಇಂಟೆಸ್ಟೈನ್ ನ ಕೆಲವು ಭಾಗ ತೆಗೆದು ಬ್ಲ್ಯಾಡರ್  ರೀ ಕನಸ್ಟ್ರಕ್ಟ್ ಮಾಡ್ತಾರೆ. ಆರು ಆಪರೇಷನ್ ನಿಂದ 180 ಸ್ಟಿಚಸ್ ಒಳಗಿದೆ. ಬಹಳ ಇಂಪಾರ್ಟೆಂಟ್ ಸರ್ಜರಿ ಇದು.ನಮ್ಮ ದೇಶದಲ್ಲೂ ಇದಕ್ಕೆ ಚಿಕಿತ್ಸೆ ಇದೆ ಇಲ್ಲ ಅಂತಲ್ಲ.ತಜ್ಞರು ಇರುತ್ತಾರೆ ಎಂದು ಕರೆದುಕೊಂಡು ಹೋಗಿದ್ದೆವು ಎಂದಿದ್ದಾರೆ.

ಇನ್ನು ಶಿವಣ್ಣ ಅವರ ಸರ್ಜರಿ ಐದೂವರೆ ತಾಸು ಪ್ಲ್ಯಾನ್ ಮಾಡಿದ್ದರು. ಕರೆಕ್ಟ್ ಆಗಿ ನಾಲ್ಕೂ ಮುಕ್ಕಾಲು ಐದು ತಾಸಿಗೆ ಸರ್ಜರಿ ಮುಗಿಸಿದರು. ಏನೂ ಕಾಂಪ್ಲಿಕೇಷನ್ಸ್ ಆಗಿಲ್ಲ, ನಾವು ಸರ್ಜರಿ ಆದ ಮೇಲೆ ನಾಲ್ಕು ತಾಸಿಗೆ ಹೋಗಿ ಮಾತಾಡಿಸಿದೆವು. ಸ್ವಲ್ಪ ಆ ಟೈಮಲ್ಲಿ ಏರುಪೇರು ಇರುತ್ತದೆ. ಮ್ಯಾನ್ಯುವಲಿ ಮಾಡಬೇಕಾ, ರೋಬೋಟಿಕ್ ಮಾಡಬೇಕಾ ಅಂತ ಎರಡು ಚರ್ಚೆ ಮಾಡಿದ್ರು. ರೋಬೋಟಿಕಲ್ ನಲ್ಲಿ ಆದ್ರೆ ಏಳೆಂಟು ಹೋಲ್ ಮಾಡಿ ದೇಹವನ್ನು ಉಲ್ಟಾ ಮಲಗಿಸಿ ಮಾಡ್ತಾರೆ. ಆದ್ರೆ ಮ್ಯಾನ್ಯುವಲ್ ಮಾಡೋದು ಸೂಕ್ತ ಅಂತ ಕೊನೆಗೆ ನಿರ್ಧಾರ ಮಾಡಲಾಯಿತು. ವೈದ್ಯರು ಮೂಲತಃ ಬೇಲೂರಿನವರು, ಹುಟ್ಟಿ ಬೆಳೆದುದ್ದು ಮದ್ರಾಸ್ ನಲ್ಲಿ ಭಾರತದಲ್ಲೂ ಬಂದು ವೈದ್ಯರು ಆಗಾಗ ಸೇವೆ ಮಾಡ್ತಾರಂತೆ. ಮುಂದಿನ ಸಲ ಬಂದಾಗ ಭೇಟಿ ಆಗುವುದಾಗಿ ತಿಳಿಸಿದ್ದಾರೆ. ಶಿವಣ್ಣ ಫೋಟೋ ಜೊತೆಗೆ ವೈದ್ಯರ ಫೋಟೋ ಕೂಡ ಇಲ್ಲಿ ಅಭಿಮಾನಿಗಳು ಪೂಜೆ ಮಾಡಿದರು.ಅದನ್ನು ನೋಡಿ ವೈದ್ಯರು ಪಾಪ ಕಣ್ಣೀರು ಹಾಕಿಕೊಂಡರು ಎಂದಿದ್ದರೆ.

ವೈದ್ಯರು ನಮ್ಮ ಕುಟುಂಬ ಸದಸ್ಯರ ತರಹ ಆದ್ರು. ಅಭಿಮಾನಿಗಳ ಮೆಸೇಜ್ ನೋಡಿದ್ರೆ ನಮಗೂ ಕಣ್ಣೀರು ಬರುತ್ತಿತ್ತು.ವೆರಿ ಕಾಂಪ್ಲಿಕೇಟೆಡ್ ಆಪರೇಷನ್ ಸಣ್ಣ ಆಪರೇಷನ್ ಅಲ್ಲ. ಶಿವಣ್ಣ ಗೆ 63 ವಯಸ್ಸು, ಈಗ ವಾಪಸ್ ಬಂದಮೇಲೆ 36 ರ ತರಹ ಕಾಣಿಸ್ತಾರೆ.ನಾವು ನೀವೆಲ್ಲರಿಗಿಂತ ಚೆನ್ನಾಗಿ ಆಗಿ ಬರುತ್ತಾರೆ. ಅಭಿಮಾನಿ ದೇವರನ್ನೇ ನಂಬಿದವರು ಶಿವಣ್ಣ. ಅಭಿಮಾನಿ ಗಳು ವೈದ್ಯರ ಹಾರೈಕೆಯಿಂದ ಶಿವಣ್ಣ ಚೆನ್ನಾಗಾಗಿದ್ದಾರೆ. ಮಿಯಾಮಿ ಕ್ಯಾನ್ಸರ್ ಹಾಸ್ಪಿಟಲ್ ಬಹಳ ಬ್ಯುಸಿ ಇರುವ ಆಸ್ಪತ್ರೆ. ಅಲ್ಲೆಲ್ಲ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಏನೇನೂ ತೊಂದರೆ ಇಲ್ಲ ಶಿವಣ್ಣಗೆ. ಹೆಂಗೆ ಮುಂಚೆ ಇದ್ರೋ ಅದೇ ರೀತಿ ಶಿವಣ್ಣ ಇದಾರೆ.ಶಿವಣ್ಣ ನನಗೆ ಹೀಗಾಗಿದೆ ಅಂತ ಎಲ್ಲರ ಮುಂದೆಯೂ ಹೇಳಿದರು ಎಂದಿದ್ದಾರೆ.