ಮನೆ Latest News ಕೋರ್ಟ್ ಬರೋಬ್ಬರಿ 6 ತಿಂಗಳ ಬಳಿಕ ಪರಸ್ಪರ ಭೇಟಿಯಾದ ನಟ ದರ್ಶನ್ – ಪವಿತ್ರಾ...

ಕೋರ್ಟ್ ಬರೋಬ್ಬರಿ 6 ತಿಂಗಳ ಬಳಿಕ ಪರಸ್ಪರ ಭೇಟಿಯಾದ ನಟ ದರ್ಶನ್ – ಪವಿತ್ರಾ ಗೌಡ; ದಚ್ಚು ಆರೋಗ್ಯ ವಿಚಾರಿಸಿದ ಪವಿ

0

 

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಬರೋಬ್ಬರಿ 6 ತಿಂಗಳ ದರ್ಶನ್ ಹಾಗೂ ಪವಿತ್ರ ಗೌಡ ಪರಸ್ಪರ ಭೇಟಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ 17 ಆರೋಪಿಗಳು ಜಾಮೀನು ಪಡೆದಿದ್ದು ಇಂದು 17 ಆರೋಪಿಗಳು ಕೂಡ ಬೆಂಗಳೂರಿನ ಸೆಷನ್ಸ್ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಪವಿತ್ರ ಗೌಡ ಅವರು ಜೈಲಿನಿಂದ ಹೊರ ಬಂದ ಬಳಿಕ ಇದೇ ಮೊದಲ ಬಾರಿಗೆ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ.

ಕೋರ್ಟ್ ಹಾಲ್ ನಲ್ಲಿ ದಚ್ಚು-ಪವಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.  ಇನ್ನು ದರ್ಶನ್ ಅಭಿಮಾನಿಗಳು ಡಿ ಬಾಸ್ ಇನ್ನು ಮುಂದೆ ಪವಿತ್ರ ಗೌಡ ಜೊತೆ ಮಾಡಲ್ಲ. ಅವರಿಬ್ಬರ ಸಂಬಂಧ ಮುರಿದು ಬಿದ್ದಿದೆ ಎಂದು ತಿಳಿದುಕೊಂಡಿದ್ದರು. ಆದರೆ ಇದೀಗ ಅರು ಮತ್ತೆ ಪರಸ್ಪರ ಮಾತನಾಡಿಕೊಂಡಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ವಿಜಯಲಕ್ಷ್ಮೀ ದರ್ಶನ್ ಗಾಗಿ ಮಾಡಿದ ಕಾನೂನು ಹೋರಾಟ ಎಲ್ಲವೂ ವ್ಯರ್ಥವಾಯ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಕೋರ್ಟ್ ಗೆ ಹಾಜರಾದ ವೇಳೆ ನಟ ದರ್ಶನ್ ಅವರು ಐದು ದಿನಗಳ ಕಾಲ ಮೈಸೂರಿಗೆ ತೆರಳೋದಕ್ಕೆ ಕೋರ್ಟ್ ಗೆ  ಮನವಿ ಮಾಡಿದ್ದರು. ಅದರಂತೆ ಕೋರ್ಚ್ ಅನುಮತಿ ನೀಡಿದೆ. ಇಂದು ಬೆಂಗಳೂರಿನ ಸಿಸಿಹೆಚ್ 57ನೇ ಕೋರ್ಟ್ ನಲ್ಲಿ  ಮೈಸೂರಿಗೆ ತೆರಳೋದಕ್ಕೆ ಅವಕಾಶ ನೀಡುವಂತೆ ನಟ ದರ್ಶನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಅನುಮತಿ ಕೊಟ್ಟಿದ್ದಾರೆ.  ಮೈಸೂರಿನ ದೇವಸ್ಥಾನಗಳಿಗೆ ತೆರಳಲು ಡಿ ಬಾಸ್ ಗೆ  ಕೋರ್ಟ್‌ ಅನುಮತಿ ನೀಡಿದೆ. ಜನವರಿ.12 ರಿಂದ 5 ದಿನಗಳ ಕಾಲ ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ತ ಕೊಟ್ಟಿದೆ.

ಇತ್ತ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರು ಕೂಡ ತಮ್ಮ  ರಾಜರಾಜೇಶ್ವರಿ ನಗರದಲ್ಲಿರುವಂತ ರೆಡ್ ಕಾರ್ಪೆಂಟ್ ಶೋರೂಂಗೆ ಮುಂಬೈ, ದೆಹಲಿಗೆ ವಸ್ತುಗಳನ್ನು ಖರೀದಿಸಲು ತೆರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೂ ಕೂಡ ಕೋರ್ಟ್ ಅನುಮತಿ ಕೊಟ್ಟಿದೆ ಎನ್ನಲಾಗಿದೆ.   ದರ್ಶನ್ ಅವರ ಕೋರ್ಟ್ ಗೆ ಆಗಮಿಸುವ ವೇಳೆ ನಟ ಧನ್ವೀರ್ ಅವರು ಕೂಡ ಅವರಿಗೆ ಸಾಥ್ ನೀಡಿದ್ರು.