ಮನೆ Latest News ಸಚಿವ ಪ್ರಿಯಾಂಕ್ ಖರ್ಗೆ ಪಿಎ ಕಿರುಕುಳದಿಂದ ಆತ್ಮಹತ್ಯೆ ಆಗಿದೆ: ಬೆಂಗಳೂರಿನಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ...

ಸಚಿವ ಪ್ರಿಯಾಂಕ್ ಖರ್ಗೆ ಪಿಎ ಕಿರುಕುಳದಿಂದ ಆತ್ಮಹತ್ಯೆ ಆಗಿದೆ: ಬೆಂಗಳೂರಿನಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಹೇಳಿಕೆ

0

ಬೆಂಗಳೂರು; ಸಚಿವ ಪ್ರಿಯಾಂಕ್ ಖರ್ಗೆ ಪಿಎ ಕಿರುಕುಳದಿಂದ ಆತ್ಮಹತ್ಯೆ ಆಗಿದೆ ಎಂದು ಬೆಂಗಳೂರಿನಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ಕೇಂದ್ರ ಸಚಿವ ಕುಮಾರಸ್ವಾಮಿ 60% ಕಮಿಷನ್ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲಾ ಇಲಾಖೆಯಲ್ಲಿ ಬರೀ ಭ್ರಷ್ಟಾಚಾರ ಆರೋಪ ಇದೆ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 100% ಭ್ರಷ್ಟಾಚಾರ ಆಗಿದೆ. ಅದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ಅದು ಹೊರಗೆ ಬರುತ್ತಿರಲಿಲ್ಲ. ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡ. ಸಚಿನ್ ಪಾಂಚಾಲ್ ಆತ್ಮಹತ್ಯೆ ಆಯಿತು. ಸಚಿವ ಪ್ರಿಯಾಂಕ್ ಖರ್ಗೆ ಪಿಎ ಕಿರುಕುಳದಿಂದ ಆತ್ಮಹತ್ಯೆ ಆಗಿದೆ ಎಂದಿದ್ದಾರೆ.

ವೈನ್ ಮರ್ಚೆಂಟ್ಸ್ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ  ಭ್ರಷ್ಟಾಚಾರ ಮಾಡುತ್ತಿದ್ದಾರೆ. ಸಿಕ್ಕಿದರೆ 100% ಮಾಡುತ್ತಾರೆ, ಅದಕ್ಕೂ ಹೆಚ್ಚಾಗಿ ಮಾಡುತ್ತಾರೆ. ನಾವು ಬಂದಿರುವುದೇ ಲೂಟಿ ಮಾಡಲು ಅಂತಾರೆ. ಒಟ್ಟು ಸಮಾಜವನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಛಿದ್ರ ಮಾಡಿದ್ದಾರೆ. ಜಾತಿ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ದಾಖಲೆ‌ ಮೇಲೆ ದಾಖಲೆ ನೀಡಿದ್ದೇವೆ. ದಾಖಲೆ ಕೊಟ್ಟರೆ ಸಿಬಿಐ ತನಿಖೆ ಬೇಡ ಅಂತಾರೆ. ನಾಗೇಂದ್ರ ಮೇಲೆ ಎಫ್ ಐಆರ್ ಆಗಿದೆ. ತನಿಖೆ ಸೂಕ್ತ ರೀತಿಯಲ್ಲಿ ನಡೆಯುತ್ತಿದ್ಯಾ?. ಹಿಟ್ ಅಂಡ್ ರನ್ ಮಾಡಿ ಹೋಗುತ್ತಿದ್ದಾರೆ. ಮೂಡಾ ವಿಚಾರದಲ್ಲಿ, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬೆಂಗಳೂರಿನಲ್ಲಿ ಸ್ಕ್ವೇರ್ ಫೀಟ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬಹಳ ಸ್ಪಷ್ಟವಾಗಿ ಭ್ರಷ್ಟಾಚಾರ ಎದ್ದು ಕಾಣುತ್ತಿದೆ. ನಮ್ಮ ಮೇಲೆ 40%, ಪೇ ಸಿಎಂ ಅಂತೆಲ್ಲಾ ಸುಮ್ಮನೆ ಆರೋಪ ಮಾಡಿದರು. ಇವರು ಎಲ್ಲಾ ಬಿಟ್ಟು ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಜನ ಕೊಟ್ಟಿರುವ ಬಹುಮತ ತಲೆಗೆ ಏರಿದೆ. ಭ್ರಷ್ಟಾಚಾರ ಮಾಡಲು ಲೈಸೆನ್ಸ್ ತೆಗೆದುಕೊಂಡಿದ್ದಾರೆ.ನಾವಿರುವುದೇ ಭ್ರಷ್ಟಾಚಾರ ಮಾಡಲು ಅಂತ ಲೈಸೆನ್ಸ್ ತೆಗೆದುಕೊಂಡಿದ್ದಾರೆ. ಯಾರಾದ್ರೂ ಒಬ್ಬ ಪ್ರಾಮಾಣಿಕ ಸಚಿವ ಇದ್ದಾನಾ ತೋರಿಸಿ ಎಂದು ಸವಾಲು ಹಾಕಿದ್ದಾರೆ. ಒಂದು ಕಡೆ ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ. ಭ್ರಷ್ಟಾಚಾರ ಮಾಡುವುದಕ್ಕೂ ಜಾತಿ ಹೆಸರು . ಜಾತಿ ಹೆಸರಲ್ಲಿ ಅನುಕಂಪ ಪಡೆಯುವುದು, ಭ್ರಷ್ಟಾಚಾರ ಮಾಡುವುದು. ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಆರೋಪ ಮಾಡಿಲ್ಲ. ಎಲ್ಲಾ ಇಲಾಖೆಗಳಲ್ಲೂ ವ್ಯವಸ್ಥಿತವಾಗಿ ಕಮಿಷನ್ ನಡೆಯುತ್ತಿದೆ, ಇದರಲ್ಲಿ ಸುಳ್ಳೇನೂ ಇಲ್ಲ. ಇವರು ಭಂಡ ಬಿದ್ದಿದ್ದಾರೆ, ಭಂಡರ ವಿರುದ್ಧ ಏನು ಹೋರಾಟ ಮಾಡುತ್ತೀರಿ ಹೇಳಿ? ಎಂದು ಕೇಳಿದ್ದಾರೆ.

ಚೀನಾದಲ್ಲಿ ಹೆಚ್ ಎಂಪಿವಿ ವೈರಸ್ ಪತ್ತೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದನ್ನು ನಾವು ಹೇಳಲು ಆಗಲ್ಲ. ವೈರಾಲಜಿ ಡಿಪಾರ್ಟ್‌ಮೆಂಟ್ ಹೇಳಬೇಕು. ಸಂಬಂಧಿಸಿದ ಇಲಾಖೆಗಳು ಹೇಳಿಕೆ ಕೊಡಬೇಕು. ನಾನು ಹೇಳುವುದು ತಪ್ಪಾಗುತ್ತದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ಎಲ್ಲದರಲ್ಲೂ ದುಡ್ಡು ಹೊಡೆಯುತ್ತಿದ್ದಾರೆ. ದುಡ್ಡು ಹೊಡೆಯುತ್ತೀರಿ,  ಒಳ್ಳೆಯ ಆಡಳಿತ ಕೊಡಿ ಅಂದ್ರೆ ಅದೂ ಕೊಡುತ್ತಿಲ್ಲ. ಒಳ್ಳೆಯ ಟ್ರೀಟ್ ಮೆಂಟ್ ಆದರೂ ಕೊಡ್ರಪ್ಪಾ.ಈ ಸರ್ಕಾರ, ಈ ಆಡಳಿತ, ಈ ವ್ಯವಸ್ಥೆ ಇದ್ದರೆ ಭಗವಂತನೇ ಜನರನ್ನು ಕಾಪಾಡಬೇಕು ಎಂದಿದ್ದಾರೆ.