ಮನೆ Latest News ಸಚಿನ್ ಆತ್ಮಹತ್ಯೆ ಸಂಬಂಧ ಸಿಬಿಐ ತನಿಖೆಗೆ ಬಿಜೆಪಿ ಗಡುವು ನೀಡಿರುವ ವಿಚಾರ: ಪ್ರಿಯಾಂಕ ಖರ್ಗೆ ಅವರನ್ನು...

ಸಚಿನ್ ಆತ್ಮಹತ್ಯೆ ಸಂಬಂಧ ಸಿಬಿಐ ತನಿಖೆಗೆ ಬಿಜೆಪಿ ಗಡುವು ನೀಡಿರುವ ವಿಚಾರ: ಪ್ರಿಯಾಂಕ ಖರ್ಗೆ ಅವರನ್ನು ಸಿಲುಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದ ಡಾ.ಜಿ ಪರಮೇಶ್ವರ್

0

ಬೆಂಗಳೂರು; ಸಚಿನ್ ಆತ್ಮಹತ್ಯೆ ಸಂಬಂಧ ಸಿಬಿಐ ತನಿಖೆಗೆ ಬಿಜೆಪಿ ಗಡುವು ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ: ಪ್ರಿಯಾಂಕ ಖರ್ಗೆ ಅವರನ್ನು ಸಿಲುಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಈಗಾಗಲೇ ಪ್ರಿಯಾಂಕ್ ಖರ್ಗೆ ತಮ್ಮ ಪಾತ್ರ ಇಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಡೆತ್‌ನೋಟ್‌ನಲ್ಲೂ ತಮ್ಮ ಹೆಸರಿಲ್ಲ ಅಂತಾ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ಆದರೂ ಅವರನ್ನು ಸಿಲುಕಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆಧಾರ ರಹಿತ ಆರೋಪ ಮಾಡ್ತಿದೆ. ಯಾವುದಾದರೂ ಆಧಾರ ಇಲ್ಲದೆ ಸುಮ್ಮನೆ ದೂಷಿಸುವುದು ಸರಿಯಲ್ಲ. ಬಿಜೆಪಿ ಈ ಮಟ್ಟಕ್ಕೆ ಇಳಿಯಬಾರದು. ಬಿಜೆಪಿ ಅನಾವಶ್ಯಕ ಪ್ರಿಯಾಂಕ್ ಖರ್ಗೆ ಮೇಲೆ ಆಪಾದನೆ ಮಾಡ್ತಿದೆ ಎಂದಿದ್ದಾರೆ.

ರಾಜು ಕಪನೂರು ಬಂಧನ ಆಗದ ಬಗ್ಗೆ ಮಾತನಾಡಿದ ಅವರು ಅನಾವಶ್ಯಕವಾಗಿ ಆರೋಪ ಮಾಡೋದು ಸರಿಯಲ್ಲ.ಸಿಒಡಿಗೆ ಪ್ರಕರಣ ವಹಿಸಲಾಗಿದೆ, ತನಿಖೆ ವರದಿ ಬರಲಿ. ಹಣದ ವಿಚಾರವನ್ನ ನಾನು ಈಗ ಮಾತನಾಡೋದಿಲ್ಲ.ತ‌ನಿಖೆಯಲ್ಲಿ ಏನು ಬರುತ್ತೋ ನೋಡೋಣ. ಪ್ರಿಯಾಂಕ್ ಖರ್ಗೆ ಬಿಜೆಪಿ, ಜೆಡಿಎಸ್ ತಪ್ಪುಗಳನ್ನು ಹೇಳಿದ್ದಾರೆ. ಇದು ಬಿಜೆಪಿ, ಜೆಡಿಎಸ್ ಗೆ ಹಿಡಿಸಿಲ್ಲ. ಹೀಗಾಗಿ ಅವರನ್ನ ಟಾರ್ಗೆಟ್ ಮಾಡಿ ಮಾತಾಡ್ತಿದ್ದಾರೆ ಎಂದು ಹೇಳಿದರು.

ಸಿ ಟಿ ರಾಜ್ಯಪಾಲರನ್ನು ಭೇಟಿಯಾದ ಬಗ್ಗೆ ಮಾತನಾಡಿದ ಅವರು  ನಾನೂ ಕೂಡಾ ಅದನ್ನು ಗಮನಿಸಿದೆ. ಈಗಾಗಲೇ ನಾವು ಸಿಒಡಿ ತನಿಖೆಗೆ ಕೊಟ್ಟಿದ್ದೇವೆ. ತನಿಖೆಯಲ್ಲಿ ಏನು ಬರುತ್ತೆ ಅಂತ ನೋಡೋಣ. ಪೊಲೀಸರ ತಪ್ಪು ಇದೆಯಾ? ಅವರ ತಪ್ಪಿದೆಯಾ? ಯಾವ ರೀತಿ ವರದಿ ಬರುತ್ತೋ ಅದರ ಅನ್ವಯ ಕ್ರಮ ಕೈಗೊಳ್ಳುತ್ತೇವೆ. ಸಾಮಾನ್ಯವಾಗಿ ಆಪಾದನೆ ಮಾಡ್ತಾರೆ, ಆದರೆ ಸರಿ ತಪ್ಪು ತನಿಖೆಯಲ್ಲಿ ಗೊತ್ತಾಗುತ್ತೆ. ತನಿಖೆ ಆಧರಿಸಿ ಮುಂದಿನ ಕ್ರಮ ಎಂದಿದ್ದಾರೆ.

ದರ್ಶನ್ ಪ್ರಕರಣದಲ್ಲಿ ಮೇಲ್ಮನವಿ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಿನ್ನೆ ಮೇಲ್ಮನವಿ ಸಲ್ಲಿಕೆಗೆ ಸರ್ಕಾರದಿಂದ ಆದೇಶ ಆಗಿದೆ. ಪೊಲೀಸರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಕೆಲಸ‌ ಮಾಡ್ತಾರೆ ಎಂದರು. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ  ಪ್ರಿಯಾಂಕ್ ಖರ್ಗೆ ಭಾಗಿ ಆಗಿದ್ದಾರೆ ಅಂತ ಬಿಜೆಪಿಯವ್ರು ಆರೋಪಿಸ್ತಿದ್ದಾರೆ. ಆದರೆ ಯಾವುದೇ ಆಧಾರ ಇಲ್ಲದೇ ಆರೋಪ ಮಾಡೋದು ಸರಿಯಲ್ಲ ಎಂದರು.