ಮನೆ Latest News ನಿಯಮಗಳಿಗೆ ಅನುಸಾರ ಹೊಸ ವರ್ಷದ ಆಚರಣೆ ಮಾಡಿ: ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

ನಿಯಮಗಳಿಗೆ ಅನುಸಾರ ಹೊಸ ವರ್ಷದ ಆಚರಣೆ ಮಾಡಿ: ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ನಿಯಮಗಳಿಗೆ ಅನುಸಾರ ಹೊಸ ವರ್ಷದ ಆಚರಣೆ ಮಾಡಿ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.ಹೊಸ ವರ್ಷಾಚರಣೆಯ ಸಿದ್ಧತೆ, ಸೆಕ್ಯೂರಿಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಇದನ್ನು ಎಚ್ಚರಿಕೆ ಅಂತನಾದ್ರೂ ತಿಳಿದುಕೊಳ್ಳಿ, ಮನವಿ ಅಂತನಾದ್ರೂ ತಿಳಿದುಕೊಳ್ಳಿ.ಆದ್ರೆ ನಿಯಮಗಳಿಗೆ ಅನುಸಾರ ಹೊಸವರ್ಷದ ಆಚರಣೆ ಮಾಡಿ.ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದೇವೆ.ಇದು ಕೇವಲ ಸರ್ಕಾರದ ಕಾರ್ಯಕ್ರಮ ಗಳಿಗೆ‌ಮಾತ್ರ  ಅನ್ವಯ ಆಗುತ್ತದೆ.

ಖಾಸಗಿ ಕಾರ್ಯಕ್ರಮಗಳನ್ನು ನಿಯಮಗಳಿಗೆ ಅನುಸಾರ ಮಾಡಿಕೊಳ್ಳಿ. ಹೋಟೆಲ್ ರೆಸಾರ್ಟ್ ನವರು ಸರ್ಕಾರದ ನಿಯಮಗಳಿಗೆ ಅನುಸಾರ ಹೊಸ ವರ್ಷದ ಆಚರಣೆ ಮಾಡಿ. ನಾವು ಬ್ಯುಸಿನೆಸ್ ಮಾಡುವವರಿಗೂ ಅಡ್ಡಿ ಪಡಿಸಲು ಆಗಲ್ಲ.ಬೆಂಗಳೂರಿನಾದ್ಯಂತ ಹತ್ತು ಸಾವಿರ ಸಿ ಸಿ ಕ್ಯಾಮೆರಾ ಅಳವಡಿಸಲಾಗಿದೆ.ಎಚ್ಚರಿಕೆಯಿಂದ ಹೊಸ ವರ್ಷದ ಆಚರಣೆ ಮಾಡಿ.ನಮ್ಮ ದೇಶದ ಮಾಜಿ ಪ್ರಧಾನಿ ಅವರು ತಿರಿಕೊಂಡಿದ್ದರು, ಅದಕ್ಕಾಗಿ ಶೋಕಾಚರಣೆ ಘೋಷಿಸಲಾಗಿತ್ತು ಎಂದಿದ್ದಾರೆ.

ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮ ಏಳು ದಿನ ಮಾಡಿದ್ದೀವಿ. ಆದ್ರೆ ಖಾಸಗಿ ಕಾರ್ಯಕ್ರಮ ನಾವು ಆಡ್ಡಿ ಆಗಿಲ್ಲ. ಅವರು ಆಚರಣೆ ಮಾಡೋದಾದ್ರೆ ಮಾಡಲಿ. ನಮೃತೆ ಶಿಸ್ತಿನಿಂದ ಆಚರಣೆ ಮಾಡಲಿ. ಲಾ ಆ್ಯಂಡ್ ಆರ್ಡರ್ ಮುಖ್ಯ. ನಮ್ಮ ಕರ್ನಾಟಕದಲ್ಲಿ ಡಿಸೇನ್ಸಿ ಇರಬೇಕು. ತಾವು ಗಮನದಲ್ಲಿಟ್ಟುಕೊಂಡಿರಬೇಕು.೧೦ ಸಾವಿರಕ್ಕೂ ಹೆಚ್ಚೂ ಕ್ಯಾಮರಾ ಗಳು ಬೆಂಗಳೂರಲ್ಲಿ ಅಳವಡಿಸಿದ್ದಾರೆ. ನಿಮ್ಮ ಆ್ಯಕ್ಟಿವಿಟಿಸ್ ಎಲ್ಲಾ ನೋಡುತ್ತೇವೆ, ಗಮನಿಸುತ್ತೇವೆ. ಇದು ವಾರ್ನ್ ಅಂತನೂ ಅಥವಾ ಮನವಿ ಆದರೂ ತಿಳ್ಕೊಳ್ಳಿ.ಇಡೀ ರಾಜ್ಯದಲ್ಲಿ ಗಾಂಭೀರ್ಯ, ಗೌರವ ಕಾಪಾಡಿಕೊಂಡು ಹೋಗಬೇಕು.ವ್ಯಾಪಾರ ವಹಿವಾಟು ಮಾಡೋರಿಗೆ ಬಿಬಿಎಂಪಿ ತಿಳಿಸುತ್ತಾರೆ ಎಂದಿದ್ದಾರೆ.