ಮನೆ Latest News ಕಾಂಗ್ರೆಸ್ ನವರು ಭ್ರಷ್ಟಾಚಾರದಿಂದ ಪಾರಾಗೋಕೆ ಪರಿತಪಿಸುತ್ತಿದ್ದಾರೆ; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ

ಕಾಂಗ್ರೆಸ್ ನವರು ಭ್ರಷ್ಟಾಚಾರದಿಂದ ಪಾರಾಗೋಕೆ ಪರಿತಪಿಸುತ್ತಿದ್ದಾರೆ; ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ

0

ಬೆಳಗಾವಿ; ಭ್ರಷ್ಟಾಚಾರದಿಂದ ಪಾರಾಗೋಕೆ ಪರಿತಪಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಅನ್ವರ್ ಮಾಣಿಪ್ಪಾಡಿ 150 ಕೋಟಿ ಅಮಿಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಸಿಬಿಐಗೆ ಸಿಎಂಗೆ ವಿಶ್ವಾಸ ಬಂದು ಬಿಟ್ಟಿದೆ.ಇದು ಒಳ್ಳೆಯ ಬೆಳವಣಿಗೆ.ಸದನದ ಒಳಗೆ ನನ್ನ ಮೇಲೆ ಆರೋಪ ಮಾಡಿದ್ದರು. ಪ್ರಿಯಾಂಕ್ ಖರ್ಗೆಯವರು ಆರೋಪ ಮಾಡಿದ್ದರು. ಸಿದ್ದರಾಮಯ್ಯ ಬಗ್ಗೆ ಮರುಕ ಬರ್ತಿದೆ.ಅವರ ಬಗ್ಗೆ ಅಯ್ಯೋ ‌ಅನ್ನಿಸುತ್ತಿದೆ ಎಂದಿದ್ದಾರೆ.

ಬಹಳ ಶುದ್ಧ ಹಸ್ತರು, ಪ್ರಾಮಾಣಿಕರು ಅಂತಿದ್ರು. ವಾಲ್ಮೀಕಿ, ಮೂಡಾ,ಎಕ್ಸೈಸ್ ಹಗರಣದಲ್ಲಿ ಸಿಲುಕಿದ್ದಾರೆ.ಅದರಿಂದ ನರಳುತ್ತ ಇದ್ದಾರೆ. ಭ್ರಷ್ಟಾಚಾರದಿಂದ ಪಾರಾಗೋಕೆ ಪರಿತಪಿಸುತ್ತಿದ್ದಾರೆ. 150 ಕೋಟಿ ಅಮಿಷದ ಆರೋಪ ಮಾಡಿದ್ದಾರೆ.ಅದನ್ನ ಮುಖ್ಯಮಂತ್ರಿಗಳು ಬೆಂಬಲಿಸಿದ್ದಾರೆ. ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡ್ತೇನೆ.ಸಿಎಂಗೆ ಸಿಬಿಐ ಮೇಲೆ ವಿಶ್ವಾಸ ಬಂದಿದೆ. ಎಲ್ಲವನ್ನ ನಾನು ಸದನದಲ್ಲಿ ಮಂಡಿಸ್ತೇನೆ ಎಂದಿದ್ದಾರೆ.