ಮನೆ Latest News ನವದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಧ ನಿಖಿಲ್ ಕುಮಾರಸ್ವಾಮಿ; ಬಿಬಿಎಂಪಿ ಮತ್ತು ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಬಗ್ಗೆ...

ನವದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಧ ನಿಖಿಲ್ ಕುಮಾರಸ್ವಾಮಿ; ಬಿಬಿಎಂಪಿ ಮತ್ತು ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಚರ್ಚೆ

0

ನವದೆಹಲಿ; ನವದೆಹಲಿಯಲ್ಲಿ  ಜೆಡಿಎಸ್ ಯುವ ರಾಜಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.

ಸಂಸತ್ ಭವನದಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. 12 ಗಂಟೆಗೆ ಅಮಿತ್ ಶಾ ಭೇಟಿಯಾಗಿ ನಿಖಿಲ್ ಕುಮಾರಸ್ವಾಮಿ ಮಾತುಕತೆ ನಡೆಸಿದ್ರು. ಬಿಬಿಎಂಪಿ ಮತ್ತು ಸ್ಥಳೀಯ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಚರ್ಚೆ ಮಾಡಿದ್ರು.  ಎನ್‌ಡಿಎ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಿದ್ರು ಎನ್ನಲಾಗಿದೆ.

ಇನ್ನು ಅಮಿತ್ ಶಾ ಭೇಟಿ ಬಳಿಕ ಮಾತನಾಡಿದ ಅವರು ಅಮಿತ್ ಶಾ ಅವರನ್ನು ಸೌಜನ್ಯಕ್ಕೆ ಭೇಟಿಯಾಗಿದ್ದೇನೆ. ನನ್ನ ಕಡೆಯಿಂದ ಕೆಲವು ವಿಚಾರ ಚರ್ಚೆ ಮಾಡಬೇಕಿತ್ತು ಅದು ಮಾಡಿದ್ದೇವೆ. ಮೈತ್ರಿ ಬಲಿಷ್ಠ ಮಾಡಲು ಚರ್ಚೆ ಮಾಡಿದೆ. ಜಿಲ್ಲಾ ತಾಲೂಕು ಪಂಚಾಯತ್ ಚುನಾವಣೆ ಬರಲಿದೆ. ಇದು ಕಾರ್ಯಕರ್ತರ ಚುನಾವಣೆ. ಇಲ್ಲಿ ಎರಡು ಕಡೆ ಆಕಾಂಕ್ಷಿಗಳಿದ್ದಾರೆ. ಎರಡು ಕಡೆ ಕೂತು ಮಾತುಕತೆ ನಡೆಸಿ ಆರೋಗ್ಯ ಯುತ ನಿರ್ಧಾರ ಮಾಡುವ ಬಗ್ಗೆ ಸಮಾಲೋಚನೆ ಮಾಡಿದೆ ಎಂದಿದ್ದಾರೆ.

ನಾನು ಪಕ್ಷದ ಶಿಸ್ತಿನ ಶಿಪಾಯಿ. ಪಕ್ಷ ಕಟ್ಟಿ ಬೆಳೆಸಿದ ಕಟ್ಟ ಕಡೆಯ ವ್ಯಕ್ತಿಗೂ ರಾಜಕೀಯ ಸಾಮಾಜಿಕ ಶಕ್ತಿ ತುಂಬಬೇಕಿದೆ. ಕಾರ್ಯಕರ್ತರ ಜೊತೆಗೆ ಒಂದಾಗಿ ಹೋಗುವ ಹೊಣೆ ಹೊತ್ತಿದ್ದೇನೆ. ನಾನು ಯಾವುದೇ ಹುದ್ದೇಯ ಮೇಲೆ ಆಕಾಂಕ್ಷಿ ಅಲ್ಲ. ನಮ್ಮಲ್ಲಿ ಹಿರಿಯ ನಾಯಕರಿದ್ದಾರೆ ಅವರ ಜೊತೆಗೆ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಪಕ್ಷ ಇದ್ದರೆ ನಿಖಿಲ್ ಕುಮಾರಸ್ವಾಮಿ. ಪಕ್ಷಕ್ಕೆ ಸಾವಿರಾರು ಕಾರ್ಯಕರ್ತರನ್ನು ಹುಟ್ಟು ಹಾಕುವ ಶಕ್ತಿ ಇದೆ. ಪಕ್ಷದ ಹಿತ ಕಾಪಾಡುವುದು ನನ್ನ ಜವಬ್ದಾರಿ. ಪಕ್ಷದ ಚೌಕಟ್ಟಿನಲ್ಲಿ ಏನೇ ತಿರ್ಮಾನದ ಆದರೂ ನಾನು ಪಾಲಿಸಲು ಬದ್ದ ಎಂದರು.

ಇದೇ ವೇಳೆ ರಾಜ್ಯಾಧ್ಯಕ್ಷ ಜವಾಬ್ದಾರಿ ಹೊರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಜಿ.ಟಿ ದೇವೇಗೌಡರು ಮೈಸೂರು ಭಾಗದ ಬಲಿಷ್ಠ ನಾಯಕರು. ಕಳೆದ ಚುನಾವಣೆಯಲ್ಲಿ ಮನಸ್ಥಾಪ ಬಗೆಹರಿಸಲು ನಾನೇ ಸೇತುವೆ ಆಗಿದ್ದೆ. ಹೆಚ್.ಡಿ ದೇವೇಗೌಡರು ಮಾತನಾಡುವ ಪ್ರಯತ್ನ ಮಾಡಿದ್ರು. ಜಿ.ಟಿಯವರನ್ನು ಬಿಟ್ಟು ಚುನಾವಣೆ ನಡೆಸುವ ಕಲ್ಪನೆ ನಾವು ಮಾಡಿಲ್ಲ.ದೇವೇಗೌಡರ ಕ್ಷೇತ್ರದಲ್ಲೂ ಕೆಲಸ ಆಗಬೇಕಿದೆ ಎಂದರು.

ದೇವೇಗೌಡರ ಬಗ್ಗೆ ಸಿ.ಪಿ ಯೋಗೇಶ್ವರ್ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಶಾಸಕ ಸ್ಥಾನಕ್ಕೆ ಶೋಭೆ ತರುವ ಮಾತು ಆಡಬೇಕು.ನಾನು ಸೋಲನ್ನು ತಲೆ ಬಾಗಿ ಸ್ವೀಕರಿಸಿದ್ದೇನೆ.ದೇವೇಗೌಡರು ನೆಲ,ಜಲದ ವಿಚಾರದಲ್ಲಿ ಹೋರಾಟ ಮಾಡಿದ್ದಾರೆ. ಯುವ ಸಂಸದರು ನಾಚುವಂತೆ ದೇವೇಗೌಡರು ಶಿಸ್ತು ಬದ್ದವಾಗಿ ಕಲಾಪ ಹೋಗುತ್ತಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ರಾಜಕೀಯವಾಗಿ ಮುಂದುವರೆಯುತ್ತಿದ್ದಾರೆ. ಮೋದಿಯವ್ರೇ ಸ್ವತಃ ಫೋನ್ ಮಾಡಿ ರಾಜಕೀಯ ತೊರೆಯದಂತೆ ಹೇಳಿದ್ರು.ರಾಜ್ಯಸಭೆ ತೊರೆಯದಂತೆ ಮೋದಿ ಮನವಿ ಮಾಡಿದ್ರು ಎಂದರು.