ಮನೆ Latest News ಕಲಬುರಗಿ ಜಿಲ್ಲಾ ಕೋರ್ಟ್ ಆದೇಶದ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ ಕಚೇರಿಯ ಸಲಕರಣೆಗಳು ಜಪ್ತಿ

ಕಲಬುರಗಿ ಜಿಲ್ಲಾ ಕೋರ್ಟ್ ಆದೇಶದ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆಯ ಕಚೇರಿಯ ಸಲಕರಣೆಗಳು ಜಪ್ತಿ

0

ಬೆಂಗಳೂರು; ಕಲಬುರಗಿ ಜಿಲ್ಲಾ ಕೋರ್ಟ್ ಆದೇಶದ ಹಿನ್ನೆಲೆ  ವಿಕಾಸಸೌಧದ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಕಚೇರಿಯ ಸಲಕರಣೆಗಳು ಜಪ್ತಿ ಮಾಡಾಲಾಗಿದೆ. 13 ಚೆಯರ್, 4 ಕಂಪ್ಯೂಟರ್ , 4 ಜೆರಾಕ್ಸ್ ಮಷಿನ್ ಜಪ್ತಿ ಮಾಡಲಾಗಿದೆ.

ನೀರಾವರಿ ಇಲಾಖೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊತನಹಿಪ್ಪರಗಾ ಗ್ರಾಮದ ಜಮೀನು ಭೂಸ್ವಾದೀನ ಪಡಿಸಿಕೊಂಡಿತ್ತು. ನೀರಾವರಿ ಇಲಾಖೆ   ಹೊಸ ಕೆರೆ ನಿರ್ಮಾಣಕ್ಕಾಗಿ ಜಮೀನು ಸ್ವಾಧೀನ ಪಡಿಸಿಕೊಂಡಿತ್ತು. 8 ವರ್ಷದ ಹಿಂದೆ ರೈತರಿಗೆ ಅಲ್ಪ ಪರಿಹಾರ ನೀಡಿ ನೀರಾವರಿ ಇಲಾಖೆ ಸುಮ್ಮನಾಗಿತ್ತು. ನೂರಾರು ರೈತರು ಪರಿಹಾರಕ್ಕಾಗಿ ಪಟ್ಟು ಹಿಡಿದಿದ್ದರು. ಈಗ ರೈತ ಸಿದ್ದಪ್ಪ ಬಸಪ್ಪ ಪೂಜಾರಿ ಸಮ್ಮುಖದಲ್ಲಿ ಕೋರ್ಟ್ ಅದೇಶ ಅನ್ವಯ ಜಪ್ತಿ ಮಾಡಲಾಗಿದೆ. ನೀರಾವರಿ ಇಲಾಖೆಯ ಕಾರ್ಯದರ್ಶಿ ಕಚೇರಿ ಯಲ್ಲಿ ಸಾಮಾನುಗಳನ್ನು ಜಪ್ತಿ ಮಾಡಲಾಗಿದೆ.

ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಕಚೇರಿ ಜಪ್ತಿ ಮಾಡಲಾಗಿದೆ. ಭೂ ಸ್ವಾಧೀನದ ಪರಿಹಾರ ನೀಡದ ಹಿನ್ನೆಲೆಯಲ್ಲಿ ಕಚೇರಿ ಸೀಜ್ ಆಗಿದೆ. ಜಪ್ತಿ ವಾರೆಂಟ್ ಪಡೆದು ಕಚೇರಿಯ ಉಪಕರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಲಾಗಿದೆ. ಕಲಬುರಗಿ ಜಿಲ್ಲಾ ನ್ಯಾಯಾಲಯ, ಕೊಪ್ಪಳ ಜಿಲ್ಲಾ ನ್ಯಾಯಾಲಯ, ವಿಜಯಪುರ ಜಿಲ್ಲಾ ನ್ಯಾಯಾಲಯ, ಬೀದರ್ ಜಿಲ್ಲಾ ನ್ಯಾಯಾಲಯದಿಂದ ಆದೇಶ ಹೊರ ಬಿದ್ದ ಹಿನ್ನೆಲೆ ಜಪ್ತಿ ಕಾರ್ಯ ನಡೆದಿದೆ.

ಎಲ್ಲಾ ನ್ಯಾಯಾಲಗಳ ಆದೇಶ ಇದ್ದರೂ ಸಣ್ಣ ನೀರಾವರಿ ಇಲಾಖೆ ಪರಿಹಾರ ನೀಡಿಲ್ಲ. ಎನ್.ಎಸ್ ಬೋಸರಾಜು ಸಚಿವರಾಗಿರುವ ಸಣ್ಣ ನೀರಾವರಿ ಇಲಾಖೆ ಪರಿಹಾರ ಕೊಟ್ಟಿಲ್ಲ. ಕಂಪ್ಯೂಟರ್, ಟಿವಿ, ಚೇರ್ ಪ್ರಿಂಡರ್, ಜೆರಾಕ್ಸ್ ಮಷಿನ್ ಸೇರಿ ಹಲವು ಉಪಕರಣ‌ ಜಪ್ತಿ ಮಾಡಲಾಗಿದೆ. ಸುಮಾರು 400 ಕೋಟಿ  ಸ್ವಾಧೀನ ಪರಿಹಾರ ಭಾಕಿ ಉಳಿಸಿಕೊಂಡಿದೆ. 2013 ರಿಂದಲೂ ಸಣ್ಣ ನೀರಾವರಿ ಇಲಾಖೆ ಭೂ ಸ್ವಾಧೀನ ಪರಿಹಾರ ಬಾಕಿ ಉಳಿಸಿಕೊಂಡಿದೆ. ಇಲಾಖೆಯಲ್ಲಿ ಹಣ ಇಲ್ಲ ಎಂದು ಸಚಿವರು, ಕಾರ್ಯದರ್ಶಿ ಸಬೂಬು ಹೇಳ್ತಿದ್ದಾರೆ. ಇದೀಗ ಸಣ್ಣ ನೀರಾವರಿ ಕಾರ್ಯದರ್ಶಿ ರಾಘವನ್ ಕಚೇರಿಯ ಉಪಕರಣಗಳ ಜಪ್ತಿಯಾಗಿದೆ. ಕೋರ್ಟ್ ಆದೇಶ ಹಿಡಿದು ಕಚೇರಿ ಜಪ್ತಿ ಮಾಡಲಾಗಿದೆ. ಸರ್ಕಾರ ಸುಮಾರು 400 ಕೋಟಿಯಷ್ಟು ಪರಿಹಾರ ನೀಡದೆ ಬಾಕಿ ಉಳಿಸಿಕೊಂಡಿದೆ.

ಇನ್ನು ಈ ಬಗ್ಗೆ ಮಾತನಾಡಿದ  ವಕೀಲ್ ಸಂಜೀವ್ ಕುಮಾರ್  ಸಣ್ಣ ನೀರಾವರಿ ಇಲಾಖೆಯ ಕಚೇರಿಯ ಸಲಕರಣೆಗಳನ್ನ ಜಪ್ತಿಮಾಡಿದ್ದೇವೆ. ಕಲಬುರಗಿ ಜಿಲ್ಲಾ ಕೋರ್ಟ್ ಆದೇಶದ ಪ್ರಕಾರ ಜಪ್ತಿ ಆಗಿದೆ. 13 ಚೆಯರ್, 4 ಕಂಪ್ಯೂಟರ್ , 4 ಜೆರಾಕ್ಸ್ ಮಷಿನ್ ಜಪ್ತಿಯಾಗಿದೆ. ಅಧಿಕಾರಿಗಳು ಪರಿಹಾರ ನೀಡಿರಲಿಲ್ಲ. ಪರಿಹಾರಕ್ಕೆ ವಾರಂಟ್ , ನೋಟಿಸ್ ಜಾರಿ ಮಾಡಲಾಗಿತ್ತು.ಆದ್ರೂ ಇದಕ್ಕೆಲ್ಲಾ ಅಧಿಕಾರಿಗಳು ಸ್ಪಂದಿಸಿರಲಿಲ್ಲ . ರೈತರಿಗೆ ಅಲ್ಪ ಪರಿಹಾರ ನೀಡಿ ಇಲಾಖೆ ಸುಮ್ಮನ್ನಾಗಿತ್ತು ಎಂದಿದ್ದಾರೆ.