ಬೆಂಗಳೂರು; ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅಹ್ಮದ್ ಖಾನ್ ಕರಿಯ ಎಂದು ಕರೆದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿ ಕೆ ಶಿವಕುಮಾರ್ ಕುಮಾರಸ್ವಾಮಿ ಜಮೀರ್ ಅವರದ್ದು ಗಳಸ್ಯ ಕಂಠಸ್ಯ ಎಂದಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಚಡ್ಡಿ ಒಳಗಡೆ ಏನಿದೆ ಅಂತ ಇವರು ಹೇಳ್ತಾರೆ.ಇವರ ಬಗ್ಗೆ ಅವರು ಹೇಳ್ತಾರೆ.ಅವರವರ ವಿಚಾರ. ಕುಮಾರಸ್ವಾಮಿ ಈ ವಿಚಾರ ಮಾತಾಡಿದ್ದಾರೆ. ಕರಿಯಾ ಅಂತ ಹೇಳಿದ್ದ ಅಂತ ಹೇಳೋಕೆ ಹೇಳಿ. ಕಂಪ್ಲೆಂಟ್ ಕೋಡೋಕೆ ಹೇಳಿ. ಡಿಫೆಂಡ್ ಮಾಡಲ್ಲ. ಅವರವರ ವಿಚಾರ , ನಾನು ಇಂಟರ್ ಫೀಯರ್ ಆಗಲ್ಲ.ಬಿಜೆಪಿಯವರು ಟ್ವೀಟ್ ಎಲ್ಲಾ ಮಾಡಿದ್ದಾರೆ.. ಸ್ವಂತ ವಿಚಾರ. ಅವರಿಗೆ ಬಿಟ್ಟಿ ವಿಚಾರ, ಅದು ಪರ್ಸನಲ್ ಇರುತ್ತದೆ. ನಾನು ಕೂಡ ನಮ್ಮ ಹುಡುಗರಿಗೆ ಹೇಳುತ್ತೇನೆ.ಸಾಬ್ ಗೌಡ ಅಂತ ನಾನೇ ಹೇಳುತ್ತೇನೆ. ಪ್ರೀತಿಯಿಂದ ಹೇಳಿರಬಹುದು. ಕುಮಾರಸ್ವಾಮಿ ಮೇಲೆ ಜಮೀರ್ ಗೆ ಪ್ರೀತಿ ಇರಬಹುದು ಎಂದಿದ್ದಾರೆ. ಕುಳ್ಳ ಅಂತ ಕರೆದ ಅಂತ ಜಮೀರ್ ಹೇಳ್ತಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಕರಿಯ ಕುಮಾರಸ್ವಾಮಿ ಎಂದು ಕರೆದ ಜಮೀರ್ ಅಹ್ಮದ್ ಖಾನ್ : ಭಾರೀ ಆಕ್ರೋಶ ಬೆನ್ನಲ್ಲೇ ಸ್ಪಷ್ಟನೆ ಕೊಟ್ಟ ಸಚಿವರು
ರಾಮನಗರ; ಚನ್ನಪಟ್ಟಣ ಉಪ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ವಸತಿ ಸಚಿವ ಜಮೀರ್ ಅಹ್ಮಖಾನ್ ಅವರು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಪ್ರಯೋಗಿಸಿರುವ ಶಬ್ಧವೊಂದು ಆಕ್ರೋಶಕ್ಕೆ ಕಾರಣವಾಗಿದೆ..
ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರನ್ನು ಹೊಗಳುವ ಭರದಲ್ಲಿ ಮಾಜಿ ಸಿಎಂ, ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಜಮೀರ್ ಅಹ್ಮದ್ ಕರಿಯ ಕುಮಾರಸ್ವಾಮಿ ಅಂತಾ ಕರೆದೋರೋದು ಆಕ್ರೋಶ ಕಾರಣವಾಗಿದೆ, ಭಾಷಣ ಮಾಡುವ ಭರದಲ್ಲಿ ಜಮೀರ್ ಯೋಗೇಶ್ವರ್ ನಮ್ಮ ಪಾರ್ಟಿಯಿಂದ ರಾಜಕೀಯ ಪ್ರಾರಂಭ ಮಾಡಿದ್ರು.ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದ್ರು. ಜೆಡಿಎಸ್ ಹೋಗಬೇಕು ಅಂತಿದ್ರೂ ಕರಿಯ ಕುಮಾರಸ್ವಾಮಿ, ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್ ಗೆ ಹೋಗಿಲ್ಲ ಎಂದಿದ್ದಾರೆ.
ಹಿಂದೆ ಹಿಜಾಬ್ ಬೇಡೆ ಪಜಾಬ್ ಬೇಡ ಅಂದಿದ್ದೀಯಾ. ಈಗ ನಿನಗೆ ಮುಸಲ್ಮಾನರ ಓಟ್ ಬೇಕಾ.ಏ ಕುಮಾರಸ್ವಾಮಿ, ನಿನ್ನ ರೇಟ್ ಹೇಳು, ಮುಸಲ್ಮಾನರು ಒಂದೊಂದ್ ಪೈಸೆ ಹಾಕಿ ಇಡೀ ನಿನ್ನ ಕುಟುಂಬವನ್ನೇ ಖರೀದಿ ಮಾಡ್ತಾರೆ ಎಂದಿದ್ದಾರೆ. ಕುಮಾರಸ್ವಾಮಿ ವಿರುದ್ಧ ಜಮೀರ್ ಬಳಸಿದ ಪದಕ್ಕೆ ಆಕ್ರೋಶವಾಗಿದೆ.
ಇದರ ಬೆನ್ನಲ್ಲೇ ಈ ಹಿನ್ನಲೆ ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ತಮ್ಮ ಹೇಳಿಯನ್ನು ಸಮರ್ಥಿಸಿಕೊಂಡಿದ್ದಾರೆ. ಕುಮಾರಸ್ವಾಮಿಯವರನ್ನು ಪ್ರೀತಿಯಿಂದ ನಾನು ಯಾವತ್ತಿಗೂ ಕರಿಯಣ್ಣ ಅಂತಾನೇ ಕರೆಯೋದು. ಅವರು ನನ್ನನ್ನು ಕುಳ್ಳ ಅಂತಾರೆ, ನಾನು ಪ್ರೀತಿಯಿಂದ ಅವರನ್ನು ಕರಿಯಣ್ಣ ಅಂತಾನೇ ಕರೆಯುತ್ತಿದ್ದೆ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಅವರು ನಾನು ಅವರನ್ನು ಹಿಂದಿನಿಂದಲೂ ಕರಿಯಣ್ಣ ಎಂದು ಈವಾಗ ಅದು ಬಾಯಲ್ಲಿ ಹಾಗೇ ಬಂತು, ಅದೇ ರೀತಿಯಲ್ಲಿ ಹೇಳಿದೆ. ನಾನು ಪ್ರೀತಿಯಿಂದ ಕರೆದಿದ್ದೇನೆ ಅಂತ ಹೇಳಿದ್ದಾರೆ. ಆದರೆ ಹಿಂದಿನ ಆ ಪ್ರೀತಿ ಈವಾಗಿಲ್ಲ ಎಂದಿದ್ದಾರೆ. ವಿರೋಧ ಮಾಡಿಕೊಳ್ಳುವವರು ವಿರೋಧ ಮಾಡಿಕೊಳ್ಳಲಿ ಐ ಡೋಂಟ್ ಕೇರೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.