ಬೆಂಗಳೂರು: ವಕ್ಫ್ ನಿಂದ ರೈತರ ಆಸ್ತಿ ಕಬಳಿಕೆ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಎಂಬಿ ಪಾಟೀಲ್, ಕೃಷ್ಣ ಭೈರೇಗೌಡ, ಜಮೀರ್ ಅಹಮದ್ ಖಾನ್ ಸುದ್ದಿಗೋಷ್ಟಿ ನಡೆಸಿದ್ರು.
ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ೧೯೭೩-೭೪ ರಲ್ಲಿ ವಿಜಯಪುರ ಜಿಲ್ಲೆಯಲ್ಲಿ ೧೪,೨೦೧ ಎಕರೆ ವಕ್ಫ್ ಆಸ್ತಿ ಎಂದು ನೋಟಿಫಿಕೇಷನ್ ಆಗಿದೆ.ಇದರ ಪೈಕಿ ವಕ್ಫ್ ಆಸ್ತಿ ಪೊಸೆಷನ್ ನಲ್ಲಿ ಇರುವುದು ಕೇವಲ ೭೦೦ ಎಕರೆ ಮಾತ್ರ.ಉಳಿದ ಆಸ್ತಿಗಳು ಕೆಲವು ಮುಸ್ಲಿಂ ಸಂಸ್ಥೆಗಳ ವಶದಲ್ಲಿವೆ. ಕೆಲವು ಈದ್ಗಾ ಮೈದಾನ ಆಗಿದೆ, ದರ್ಗಾ ಹೆಸರಲ್ಲಿದೆ.೧೩೧೯ ಎಕರೆ ಯಾವುದೇ ವೈಯಕ್ತಿಕ ಅನುಭೋಗದಲ್ಲಿ ಇಲ್ಲ, ಯಾರಿಗೂ ಮಂಜೂರು ಆಗಿಲ್ಲ. ಅಂಥವುಗಳನ್ನು ಇಂಡೀಕರಣ ಮಾಡಬಹುದು ಎಂದು ತೀರ್ಮಾನ ಆಗಿದೆ ಇದರಿಂದ ಯಾರಿಗೂ ಸಮಸ್ಯೆ ಆಗುವುದಿಲ್ಲ. ೧೧,೮೩೫ ಎಕರೆ ಉಳುವವನೇ ಭೂ ಒಡೆಯ ಅಡಿಯಲ್ಲಿ ಮಂಜೂರಾಗಿದೆ. ಬೇರೆ ಬೇರೆ ಯೋಜನೆಗಳಿಗೂ ಭೂಸ್ವಾಧೀನ ಆಗಿದೆ.ಇವು ಯಾವನ್ನೂ ಕೂಡ ನೊಟೀಸ್ ಕೊಟ್ಟಿಲ್ಲ, ಕೊಡುವ ಉದ್ದೇಶವೂ ಇಲ್ಲ. ವಕ್ಫ್ ಸಚಿವರೂ ಕೂಡ ಇದಕ್ಕೆ ಸೂಚನೆ ನೀಡಿಲ್ಲ. ರೈತರಿಗೆ ಮಂಜೂರಾದ ಜಮೀನಿಗೆ ಯಾರಿಗೂ ನೊಟೀಸ್ ನೀಡಿಲ್ಲ. ೧೨೧ ನೊಟೀಸ್ ಹೋಗಿವೆ ನಿಜ. ಇಂಡಿ ತಾಲೂಕಿನ ಕೆಲವು ಕಡೆ ನೊಟೀಸ್ ನೀಡದೇ ಮಾಡಲಾಗಿದೆ. ತಹಶಿಲ್ದಾರರ್ ಕೆಲವು ಕಡೆ ನೊಟೀಸ್ ನೀಡದೇ ಮಾಡಿದ್ದಾರೆ.ಇದನ್ನು ವಾಪಸ್ ಮಾಡುತ್ತೇವೆ.ಜನರಲ್ಲಿ ಉದ್ದೇಶಪೂರ್ವಕವಾಗಿ ಗಲಭೆ ಹುಟ್ಟಿಸಬೇಕು ಎಂದೇ ಹೊರಟಿದ್ದಾರೆ ಎಂದರು.
೧೯೭೭ ರಲ್ಲಿಯೇ ವನವಾಡ ಗ್ರಾಮವನ್ನು ವಕ್ಫ್ ನಿಂದ ತೆಗೆದು ಹಾಕಲಾಗಿದೆ.ವನವಾಡ ಗ್ರಾಮದಲ್ಲಿ ಕೇವಲ ೧೧ ಎಕರೆ ಮಾತ್ರ ಇದೆ. ಆದರೆ ಇಲ್ಲಿಯೂ ಕೂಡ ಯಾರಿಗೂ ನೊಟೀಸ್ ನೀಡಿಲ್ಲ. ವಕ್ಫ್ ರೈತರಿಗೆ ಇರುವ ಸಮಸ್ಯೆಯು ಅಲ್ಲ. ಇದು ಕೇವಲ ಯತ್ನಾಳ್ ಹಾಗೂ ವಿಜಯೇಂದ್ರಗೆ ನಡುವೆ ಇರುವ ಸಮಸ್ಯೆ ಎಂದು ಅವರು ಇದೇ ವೇಳೆ ವ್ಯಂಗ್ಯವಾಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆ; ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ
ಬೆಂಗಳೂರು; ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿವಾದ ಹಿನ್ನೆಲೆ ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆಯಾಗಿದೆ.ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶದ ಹಿನ್ನೆಲೆಯಲ್ಲಿ ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ ಮಾಡಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂಸದ ರಮೇಶ್ ಜಿಗಜಿಣಗಿ ಮತ್ತು ಶಾಸಕ ಯತ್ನಾಳ್ ಸೇರ್ಪಡೆಗೊಳಿಸಿ ತಂಡ ಪುನರ್ ರಚಿಸಿದೆ. ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ತಂಡ ನಾಳೆ ವಿಜಯಪುರ ಜಿಲ್ಲೆಗೆ ತೆರಳಲಿದೆ.ಇಂದು ತಂಡಕ್ಕೆ ಸಂಸದ ಜಿಗಜಿಣಗಿ, ಶಾಸಕ ಯತ್ನಾಳ್ ಮತ್ತು ಮಾಜಿ ಜಿಲ್ಲಾಧ್ಯಕ್ಷ ಎಂ.ಬಿ. ಜಿರಲಿ ಸೇರ್ಪಡೆಯಾಗಿದ್ದಾರೆ.
ಇಂದು ಮಧ್ಯಾಹ್ನ ಬಿಜೆಪಿ ತಂಡವನ್ನು ಬಹಿಷ್ಕರಿಸುವುದಾಗಿ ಯತ್ನಾಳ್ ಹೇಳಿಕೆ ನೀಡಿದ್ದರು.ಯತ್ನಾಳ್ ಆಕ್ರೋಶದ ಬೆನ್ನಲ್ಲೇ ರಾಜ್ಯಾಧ್ಯಕ್ಷರಿಂದ ತಂಡ ಪುನರ್ ರಚನೆಯಾಗಿದೆ.
ನಿನ್ನೆ ಸಂಸದ ಕಾರಜೋಳ ನೇತೃತ್ವದಲ್ಲಿ ಶಾಸಕರಾದ ಹರೀಶ್ ಪೂಂಜ, ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ ಮತ್ತು ರೈತ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರನ್ನೊಳಗೊಂಡ ತಂಡ ರಚಿಸಿದ್ದ ಬಿಜೆಪಿ ಇಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶದ ಹಿನ್ನೆಲೆಯಲ್ಲಿ ಬಿಜೆಪಿ ಪರಿಶೀಲನಾ ತಂಡ ಪುನರ್ ರಚನೆ ಮಾಡಿದೆ.