ಬೆಂಗಳೂರು: ಯೋಗೇಶ್ವರ್ ಕಾಂಗ್ರೆಸ್ ಹೋದ್ರು, ಮತ್ತೆ ಮತ್ತೆ ಅದರ ಬಗ್ಗೆ ಚರ್ಚೆ ಅನಗತ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಬಿಜೆಪಿ ನೆಲೆಯಲ್ಲಿ ನಾವು ಅವರ ಪರವಾಗಿ ದೆಹಲಿಗೆ ಹೋದ್ವಿ .ಆದರೆ ವರು ಸಂಬಂಧ ಕಡಿದುಕೊಂಡಿದ್ದಾರೆ.ಪಕ್ಷದ ಒಳಗೆ ನಾವು ಅವರಪರವಾಗಿ ರಾಜಕಾರಣ ಮಾಡಿದ್ವಿ.ಆದರೆ ಅವರೇ ಈಗ ಪಕ್ಷದದಿಂದ ಹೊರ ನಡೆದಿದ್ದಾರೆ.ನಮ್ಮ ಅವರ ಸೋದರಿಕೆಯೂ ಇಲ್ಲ ಸಂಬಂದವೂ ಇಲ್ಲನಾವು ಎನ್ ಡಿ ಎ ಯಿಂದ ಏನು ರಾಕಾರಣ ಮಾಡಬೇಕೋ ಅದನ್ನ ಮಾಡ್ತಿವಿ ಎಂದಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ವೀಕ್ ಇದೆ ಎಂಬುದನ್ನ ಡಿಕೆ ಶಿವಕುಮಾರ್ ಒಪ್ಪಿಕೊಂಡಂಗಾಯ್ತು.ಇಲ್ಲಿಯ ವರೆಗೆ ನಾನೇ ಅಭ್ಯರ್ಥಿ ಅಂತಾ ಡಿ ಕೆ ಹೇಳ್ತಾ ಇದ್ರು.ಈಗ ಯೋಗೀಶ್ವರ್ ಅವರನ್ನ ಕರೆದುಕೊಂಡಿದ್ದಾರೆ. ಅಲ್ಲಿಗೆ ಅವರೇ ಒಪ್ಪಿಕೊಂಡಂಗಾಯ್ತು ಎಂದಿದ್ದಾರೆ.
ಅಂತಿಮವಾಗಿ ಯೋಗೇಶ್ವರ್ ಅವರು ರಾಜಕೀಯ ನಿರ್ಧಾರ ತಗೊಂಡಿದ್ದಾರೆ. .ಅವರಿಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ನಾವು, ಹೆಚ್ ಡಿಕೆ ಅವರು ಇವತ್ತು ಚರ್ಚೆ ಮಾಡ್ತೇವೆ.ಜೆಡಿಎಸ್ ನವರು ಯಾರನ್ನೇ ಅಭ್ಯರ್ಥಿ ಮಾಡಿದರೂ ನಾವು ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ, ಯಶಸ್ಸಾಗುತ್ತೇವೆ. ಯೋಗೇಶ್ವರ್ ಹೋಗಿದ್ದಾರೆ ಅಂತ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರಲ್ಲ.ನಮ್ಮ ಗುರಿ ಹಳೇ ಮೈಸೂರು ಭಾಗದಲ್ಲಿ ನಮ್ಮ ಪಕ್ಷ ಸಂಘಟನೆಗೆ ಶಕ್ತಿ ತುಂಬಬೇಕು, ಆ ಕೆಲಸ ನಾವು ಮಾಡ್ತೇವೆ ಎಂದಿದ್ದಾರೆ.
ನಾವು ಹಳೇ ಮೈಸೂರು ಭಾಗದಲ್ಲಿ ಯೋಗೇಶ್ವರ್ ಮೇಲೆ ಅವಲಂಬಿತರಾಗಿರಲಿಲ್ಲ.ಕಾರ್ಯಕರ್ತರ ಪಡೆ ನಮಗೆ ಅಲ್ಲಿದೆ, ಅದನ್ನು ಗಟ್ಟಿಗೊಳಿಸುತ್ತೇವೆ.ಈಗ ಯೋಗೇಶ್ವರ್ ಸಾಕಷ್ಟು ವಿಚಾರ ಹೇಳಬಹುದು, ಹೇಳಲಿ.ಅವರು ಕಾಂಗ್ರೆಸ್ ಗೆ ಹೋದ ಹಿನ್ನೆಲೆಯಲ್ಲಿ ನಷ್ಟನಾ ಲಾಭನಾ ಅಂತ ಕಾಲವೇ ತೀರ್ಮಾನ ಮಾಡುತ್ತೆ.ಅವರು ಬಿಟ್ಟಿದ್ದಾರೆ ಅಂದ ಮಾತ್ರಕ್ಕೆ ನಮ್ಮ ಸಂಘಟನೆ ಕುಂಠಿತವಾಗಿಲ್ಲ.ಯೋಗೇಶ್ವರ್ ಕಾಂಗ್ರೆಸ್ ಹೋದ್ರು, ಮತ್ತೆ ಮತ್ತೆ ಅದರ ಬಗ್ಗೆ ಚರ್ಚೆ ಅನಗತ್ಯ.ಅವರಿಗೆ ಬಿಜೆಪಿಯವ್ರು ಸಹಕಾರ ಕೊಟ್ರು ಕೊಡಲಿಲ್ಲ ಅನ್ನುವ ವಿಚಾರ ಬಗ್ಗೆ ನಾನು ಮಾತಾಡಲ್ಲ.ಇವತ್ತು ಅಥವಾ ನಾಳೆ ಬೆಳಗ್ಗೆವರೆಗೆ ಎನ್ಡಿಎ ಅಭ್ಯರ್ಥಿ ಯಾರಾಗಬೇಕು ಅಂತ ತೀರ್ಮಾನ ಮಾಡ್ತೇವೆ.ಚನ್ನಪಟ್ಟಣದಲ್ಲಿ ಅಭ್ಯರ್ಥಿ ಜೆಡಿಎಸ್ ನವರೇ ಆಯ್ಕೆ ಮಾಡಬೇಕೆಂದು ಮೊದಲ ದಿನದಿಂದಲೂ ನಾವು ಹೇಳುತ್ತಾ ಬಂದಿದ್ದೇವೆ.ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.