ಮನೆ ಪ್ರಸ್ತುತ ವಿದ್ಯಮಾನ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಮಾಜಿ ಎಂಎಲ್ಸಿ ಸಿ ಪಿ ಯೋಗೇಶ್ವರ್

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ ಮಾಜಿ ಎಂಎಲ್ಸಿ ಸಿ ಪಿ ಯೋಗೇಶ್ವರ್

0

ಬೆಂಗಳೂರು: ನಿನ್ನೆ ಮೊನ್ನೆ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಿ ಪಿ ಯೋಗೇಶ್ವರ್  ಬಿಜೆಪಿಗೆ ಶಾಕ್ ಕೊಟ್ಟಿದ್ದಾರೆ. ಆದರೆ ನಿನ್ನೆ ಬೆಳಗ್ಗೆ ಅದಕ್ಕಿಂತ ದೊಡ್ಡ ಶಾಕ್ ಕೊಟ್ಟಿದ್ದಾರೆ. ನಿನ್ನೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಯೋಗೇಶ್ವರ್ ರಾಜೀನಾಮೆ ನೀಡಿದ್ದಾರೆ.ಅದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೇ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಸೇರಿದ್ರು. ಇನ್ನು ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಮಾತನಾಡಿ ಅವರು ನಾನು ಕೆಪಿಸಿಸಿ ಸದಸ್ಯತ್ವ ಪಡೆದಿದ್ದೇನೆ.ನಾನು ೩೨ ವರ್ಷಗಳಿಂದ ಕಾರ್ಯಕರ್ತನಾಗೆ ಕೆಲಸ ಮಾಡಿದ್ದೇನೆ. ಮಧ್ಯ ಕೆಲವು ಕಾರಣಾಂತರದಿಂದ ಪಕ್ಷ ಬಿಟ್ಟಿದ್ದೆ. ಜೆಡಿಎಸ್ ಪ್ರಾದೇಶಿಕ ಪಕ್ಷ . ಎನ್ ಡಿ ಎ ಜೊತೆ ಅವರು ಅವರ ವಿಚಾರದಲ್ಲಿ ಹೋರಾಟ ಮಾಡ್ತಾರೆ.ನಾವು ನಮ್ಮ ವಿಚಾರದಲ್ಲಿ ಹೋರಾಟ ಮಾಡ್ತೀವಿ. ಯಾರೆ ಅಭ್ಯರ್ಥಿಯಾದ್ರು ಕೆಲಸ ಮಾಡ್ತೀವಿ. ನಾನು ಬಿಜೆಪಿಯಿಂದ ಟಿಕೆಟ್ ಕೇಳಿದ್ದು. ಬೇರೆ ಬೆರೆ ಕಾರಣಗಳಿಂದ ಸಿಗಲಿಲ್ಲ.ಜನ್ಮ ಕೊಟ್ಟಂತಹ ತಾಲ್ಲೂಕು. ಸ್ಪರ್ಧೆ ಮಾಡಬೇಕಂತ ಪ್ರಯತ್ನ ಪಟ್ಟೆ. ತಾಂತ್ರಿಕ ಕಾರಣದಿಂದ ಟಿಕೆಟ್ ಸಿಗಲಿಲ್ಲ.ಒಳ್ಳೆ ಕೆಲಸ ಮಾಡಬೇಕೆಂದು ಕಾಂಗ್ರೆಸ್ ಬಂದೆ.ಯಾವುದೇ ಷರತ್ತು ಹಾಕಿಲ್ಲ.ನಾನು ಜೆಡಿಎಸ್ ೩೦ ವರ್ಷದಿಂದ ಎದುರಾಳಿಯಾಗಿದ್ದು. ಅದರ ಪಕ್ಷದಿಂದ ನಿಲ್ಲಲು ಮನಸಾಕ್ಷಿ ಒಪ್ಪಲಿಲ್ಲ.ಬಿಜೆಪಿಯಿಂದ ಅವಕಾಶ ಕೇಳಿದ್ದೆ ಕೊಡಲಿಲ್ಲ.ಯಾರನ್ನೂ ನಾನು ವೈಯಕ್ತಿಕವಾಗಿ ದೂರಲ್ಲ. ತಾಂತ್ರಿಕ ಕಾರಣದಿಂದ ಟಿಕೆಟ್ ಸಿಗಲಿಲ್ಲ ಎಂದಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ಅವರು : ಆಯ್ಕೆ ನನ್ನದು ಸ್ವತಂತ್ರವಾಗಿ ಸ್ಪರ್ಧೆ ಮಾಡಬೇಕು ಅಂತಿದ್ದೆ.ಕಾಂಗ್ರೆಸ್ ನಲ್ಲಿ ಅವಕಾಶ ಸಿಕ್ತು. ವಿಜಯೇಂದ್ರ ಅವರು ನನ್ನ ಪರ ಮಾತಾಡಿದ್ರು. ಜಂಪಿಂಗ್ ಸ್ಟಾರ್ ಅಂತ ನನಗೆ ನಾನೆ ಹೇಳಿಕೊಂಡಿದ್ದೇನೆ. ನನಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದರೆ ಇಲ್ಲಿಗೆ ಯಾಕೆ ಬರ್ತಿದ್ದೆ.ರಾಜಕೀಯ ಸ್ನೇಹಿತರು ಮಾಡಿದ ಟೀಕೆಗೆ ಉತ್ತರ ಕೊಡೊಲ್ಲ.ಗೆದ್ದು ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಸಿ ಪಿ ಯೋಗೇಶ್ವರ್ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ  ಸಿ.ಪಿ. ಯೋಗೇಶ್ವರ್ ರಾಜೀನಾಮೆ

ಬೆಂಗಳೂರು:  ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ಯಾರೋ ಅನ್ನೋ ಬಗ್ಗೆ ತೆರೆಯಲ್ಲಿ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಎನ್ ಡಿ ಎ ಟಿಕೆಟ್ ಆಕಾಂಕ್ಷಿಯಾಗಿದ್ದ  ಬಿಜೆಪಿ ಎಂಎಲ್ ಸಿ ಸಿ ಪಿ ಯೋಗೇಶ್ವರ್  ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಿ ವಿಧಾನ ಪರಿಷತ್ ಸಭಾಪತಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅವರು ವಿಧಾನಪರಿಷತ್ ಸದಸ್ಯತ್ವಕ್ಕೆ ನಾನು ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಸೇವೆ ಪರಿಗಣಿಸಿ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ.ಜೆಡಿಎಸ್​ನಿಂದ ಸ್ಪರ್ಧೆಗೆ ಕಾರ್ಯಕರ್ತರ ಅಪಸ್ವರ, ಗೊಂದಲವಿತ್ತು.ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದೇನೆ.ಹೆಚ್.ಡಿ.ಕುಮಾರಸ್ವಾಮಿ ಮನಸ್ಸು ಮಾಡಿದರೆ ಈಗಲೂ ಅವಕಾಶವಿದೆ ಮುಂದೆ ಏನಾಗುತ್ತೋ ನೋಡೋಣ ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಇನ್ನು  ಸಿ ಪಿ ಯೋಗೇಶ್ವರ್ ಸ್ಪರ್ಧೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರು ಹಲವು ಬಾರಿ ಸ್ವಾಭಿಮಾನದ ವಿಚಾರ ಮೇಲೆತ್ತಿದ್ದಾರೆ.ಹಲವು ಸಂದರ್ಭ ಅವರು‌ ಸ್ವಾಭಿಮಾನದ ಮೇಲೆ ಚುನಾವಣೆ ನಡೆಸಿದ್ದರು. ಅವರ ಭವಿಷ್ಯಕ್ಕಾಗಿ‌ ನಿರ್ಧಾರ ಮಾಡಿದ್ದಾರೆ.ವೈಯುಕ್ತಿಕವಾಗಿ ಯೋಗೇಶ್ವರ್ ಸ್ನೇಹಿತರು. ಪಕ್ಷಕ್ಕೆ ಬರುವ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್  ಮಾತನಾಡಿ ಯೋಗೇಶ್ವರ್ ನಡೆ ಅಚ್ಚರಿ ಮೂಡಿಸಿದೆ.ಅವರು ಯಾವ ದೃಷ್ಟಿಯಿಂದ ಹೋಗುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ.ಯೋಗೇಶ್ವರ್ ಗೆ ಟಿಕೆಟ್ ಕೊಡುವುದೇ ಇಲ್ಲ ಎಂಬ ಸ್ಥಿತಿ ಏನೂ ಇಲ್ಲ.ಇನ್ನೂ ಚರ್ಚೆ ನಡೆಯುತ್ತಿದೆಮೂಲತಃ ಅದು ಜೆಡಿಎಸ್ ಕ್ಷೇತ್ರ. ಹೀಗಾಗಿ ಕುಮಾರಸ್ವಾಮಿ ತೀರ್ಮಾನ ಪ್ರಮುಖ ಆಗುತ್ತದೆ.ನಾನು, ಅಶ್ವಥ್ ನಾರಾಯಣ ಇದನ್ನು ಯೋಗೇಶ್ವರ್ ಗೆ ಮನದಟ್ಟು ಮಾಡಿದ್ದೇವೆ.ಅಶ್ವಥ್ ನಾರಾಯಣಗೆ ಯೋಗೇಶ್ವರ್  ಅವರನ್ನು ಸಂಪರ್ಕ ಮಾಡಲು ಹೇಳಿದ್ದೇನೆ.ಇನ್ನೂ ನಾಲ್ಕು ದಿನ ಸಮಯ ಇದೆ. ತಪ್ಪು ನಿರ್ಧಾರ ತೆಗೆದುಕೊಳ್ಳಲ್ಲ ಎಂಬ ವಿಶ್ವಾಸ ಇದೆ.ನಾನು ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಇಬ್ಬರ ಜೊತೆಯೂ ಮಾತಾಡುತ್ತೇನೆ.ಚಿಹ್ನೆ ಯಾವುದು ಅಂತಾ ಮಾತಾಡೋಣ ಎಂದು ಕುಮಾರಸ್ವಾಮಿ ಮುಕ್ತವಾಗಿ ಮಾತಾಡಿದ್ದಾರೆ. ಇದನ್ನು ಯೋಗೇಶ್ವರ್ ಗಮನಕ್ಕೆ ಕೂಡಾ ತಂದಿದ್ದೇವೆ.ಯೋಗೇಶ್ವರ್ ಆತುರ ಬಿದ್ದರು ಅನ್ನಿಸುತ್ತದೆ.ಎಂಎಲ್ಸಿ ಆಗಿರುವಾಗ ಎಂಎಲ್ ಎ ಯಾಕೆ ಎಂದು ಜನ ಕೇಳಬಹುದು ಎಂಬ ಕಾರಣಕ್ಕೆ ರಾಜೀನಾಮೆ ಕೊಡಲು ಹೋಗಿರಬಹುದು. ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಮುಂದಿನ ಯೋಗೇಶ್ವರ್ ರಾಜಕೀಯ ನಡೆ ಏನಾಗುತ್ತದೆ ಗೊತ್ತಿಲ್ಲ.ಯೋಗೇಶ್ವರ್ ಜೊತೆ ಬಿಜೆಪಿ ಕೇಂದ್ರದ ನಾಯಕರು ಮಾತಾಡುತ್ತಾರೆ.ಅಭ್ಯರ್ಥಿ ಯಾರು ಅಂತಾ ಕುಮಾರಸ್ವಾಮಿಯವರನ್ನು ಬಿಟ್ಟು ನಾವು ತೀರ್ಮಾನ ಮಾಡಲು ಆಗಲ್ಲ.ಈ ಗೊಂದಲದಿಂದ ಮೈತ್ರಿ ಮೇಲೆ ಏನೂ ಪರಿಣಾಮ ಆಗಲ್ಲ. ಯೋಗೇಶ್ವರ್ ಜೊತೆ ಕಾಂಗ್ರೆಸ್ ನವರು ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.ಈ ಬಗ್ಗೆ ನಾನು ಕುಮಾರಸ್ವಾಮಿ ಜೊತೆ ಮಾತಾಡುತ್ತೇನೆ ಎಂದಿದ್ದಾರೆ.