ಮನೆ Blog ಚನ್ನಪಟ್ಟಣ ಎನ್ ಡಿ ಎ ಅಭ್ಯರ್ಥಿ ಗೊಂದಲ ವಿಚಾರ;ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ದಿಢೀರ್ ಸಭೆ

ಚನ್ನಪಟ್ಟಣ ಎನ್ ಡಿ ಎ ಅಭ್ಯರ್ಥಿ ಗೊಂದಲ ವಿಚಾರ;ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ದಿಢೀರ್ ಸಭೆ

0

ಬೆಂಗಳೂರು; ಚನ್ನಪಟ್ಟಣ ಎನ್ ಡಿ ಎ ಅಭ್ಯರ್ಥಿ ಗೊಂದಲ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ದಿಢೀರ್ ಸಭೆ ನಡೆಸಿದ್ರು.

ಕೇಂದ್ರ ಸಚಿವ ಕುಮಾರಸ್ವಾಮಿ , ನಿಖಿಲ್ ಸೇರಿದಂತೆ ಇತರೆ ಜೆಡಿಎಸ್ ಮುಖಂಡರು ಭಾಗಿಯಾಗಿದ್ದರು. ಜೆಡಿಎಸ್ ನಿಂದ ಸ್ಪರ್ಧೆಗೆ ಆಫರ್ ಕೊಟ್ಟರೂ ಸಿ ಪಿ ಯೋಗೇಶ್ವರ್ ಅದನ್ನು ತಿರಸ್ಕರಿಸಿದ್ದಾರೆ.ಹೀಗಾಗಿ ಗೌಡರ ನಿವಾಸದಲ್ಲಿ ದಿಢೀರ್ ಸಭೆ ನಡೆಸಲಾಯಿತು. ಚನ್ನಪಟ್ಟಣ ಉಪಚುನಾವಣೆಯನ್ನು ಕುಮಾರಸ್ವಾಮಿ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.ಇಂದಿನ ಸಭೆಯಲ್ಲಿ ಎನ್ ಡಿ ಎ ಅಭ್ಯರ್ಥಿಯ ಹೆಸರು ಅಂತಿಮವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಸಭೆ ಬಗ್ಗೆ ಮಾತನಾಡಿದ ನಾನು ನಿಲ್ತೇನೆ ಅಂತ ಹೇಳಿಲ್ಲ.ಇದು ಕುಮಾರಣ್ಣ ಅವರ ಸ್ವಕ್ಷೇತ್ರ.ದೆಹಲಿಯ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರಿಗೆ ಯಾವುದೇ ರೀತಿಯ ತೀರ್ಮಾನ ತಗೊಳ್ಳಿ ಅಂತ ಹೇಳಿದ್ದಾರೆ.ಆದರೂ ಮೈತ್ರಿ ಗೆ ಭಂಗವಾಗಬಾರದು ಅಂತ ನಾವಿದೀವಿ.ನಮ್ಮ ತೀರ್ಮಾನ ಏನೇ ಇದ್ರೂ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ತಗೋತೀವಿ.ನಮಗೆ ಸ್ವಾತಂತ್ರ್ಯ ಇದ್ದಾಗಿಯೂ ನಾವು ಅಭ್ಯರ್ಥಿ ಘೋಷಣೆ ಮಾಡಿಲ್ಲ.ಇದಕ್ಕೆ ಕಾರಣ ರಾಷ್ಟ್ರೀಯ ನಾಯಕರಿಗೆ ಗೌರವ ಕೊಡಬೇಕು ಅಂತ.ಒಬ್ಬ ವ್ಯಕ್ತಿಯ ನಡವಳಿಕೆ ನೋಡಿ ನಾವು ಯಾವುದೇ ರೀತಿಯ ಆತುರದ ನಿರ್ಧಾರ ಮಾಡಲ್ಲ.ನಾವು ಯೋಗೀಶ್ವರ್ ವಿಚಾರದಲ್ಲಿ ದೊಡ್ಡ ಔದಾರ್ಯತೆ ತೋರಿದ್ದೇವೆ.ನಮ್ಮ ನಾಯಕರು ಯೋಗೀಶ್ವರ್ ಅವರಿಗೆ ಆಹ್ವಾನ ಕೊಟ್ಟಿದ್ದಾರೆ.ಇನ್ನೇನು ಮಾಡಬೇಕು? ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ  ಸಿ.ಪಿ. ಯೋಗೇಶ್ವರ್ ರಾಜೀನಾಮೆ

ಬೆಂಗಳೂರು:  ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ಯಾರೋ ಅನ್ನೋ ಬಗ್ಗೆ ತೆರೆಯಲ್ಲಿ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ ಎನ್ ಡಿ ಎ ಟಿಕೆಟ್ ಆಕಾಂಕ್ಷಿಯಾಗಿದ್ದ  ಬಿಜೆಪಿ ಎಂಎಲ್ ಸಿ ಸಿ ಪಿ ಯೋಗೇಶ್ವರ್  ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಿ ವಿಧಾನ ಪರಿಷತ್ ಸಭಾಪತಿ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅವರು ವಿಧಾನಪರಿಷತ್ ಸದಸ್ಯತ್ವಕ್ಕೆ ನಾನು ರಾಜೀನಾಮೆ ಕೊಟ್ಟಿದ್ದೇನೆ. ನನ್ನ ಸೇವೆ ಪರಿಗಣಿಸಿ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇನೆ.ಜೆಡಿಎಸ್​ನಿಂದ ಸ್ಪರ್ಧೆಗೆ ಕಾರ್ಯಕರ್ತರ ಅಪಸ್ವರ, ಗೊಂದಲವಿತ್ತು.ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿದ್ದೇನೆ.ಹೆಚ್.ಡಿ.ಕುಮಾರಸ್ವಾಮಿ ಮನಸ್ಸು ಮಾಡಿದರೆ ಈಗಲೂ ಅವಕಾಶವಿದೆ ಮುಂದೆ ಏನಾಗುತ್ತೋ ನೋಡೋಣ ಎಂದು ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಇನ್ನು  ಸಿ ಪಿ ಯೋಗೇಶ್ವರ್ ಸ್ಪರ್ಧೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರು ಹಲವು ಬಾರಿ ಸ್ವಾಭಿಮಾನದ ವಿಚಾರ ಮೇಲೆತ್ತಿದ್ದಾರೆ.ಹಲವು ಸಂದರ್ಭ ಅವರು‌ ಸ್ವಾಭಿಮಾನದ ಮೇಲೆ ಚುನಾವಣೆ ನಡೆಸಿದ್ದರು. ಅವರ ಭವಿಷ್ಯಕ್ಕಾಗಿ‌ ನಿರ್ಧಾರ ಮಾಡಿದ್ದಾರೆ.ವೈಯುಕ್ತಿಕವಾಗಿ ಯೋಗೇಶ್ವರ್ ಸ್ನೇಹಿತರು. ಪಕ್ಷಕ್ಕೆ ಬರುವ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್  ಮಾತನಾಡಿ ಯೋಗೇಶ್ವರ್ ನಡೆ ಅಚ್ಚರಿ ಮೂಡಿಸಿದೆ.ಅವರು ಯಾವ ದೃಷ್ಟಿಯಿಂದ ಹೋಗುತ್ತಿದ್ದಾರೆ ನನಗೆ ಅರ್ಥ ಆಗುತ್ತಿಲ್ಲ.ಯೋಗೇಶ್ವರ್ ಗೆ ಟಿಕೆಟ್ ಕೊಡುವುದೇ ಇಲ್ಲ ಎಂಬ ಸ್ಥಿತಿ ಏನೂ ಇಲ್ಲ.ಇನ್ನೂ ಚರ್ಚೆ ನಡೆಯುತ್ತಿದೆಮೂಲತಃ ಅದು ಜೆಡಿಎಸ್ ಕ್ಷೇತ್ರ. ಹೀಗಾಗಿ ಕುಮಾರಸ್ವಾಮಿ ತೀರ್ಮಾನ ಪ್ರಮುಖ ಆಗುತ್ತದೆ.ನಾನು, ಅಶ್ವಥ್ ನಾರಾಯಣ ಇದನ್ನು ಯೋಗೇಶ್ವರ್ ಗೆ ಮನದಟ್ಟು ಮಾಡಿದ್ದೇವೆ.ಅಶ್ವಥ್ ನಾರಾಯಣಗೆ ಯೋಗೇಶ್ವರ್  ಅವರನ್ನು ಸಂಪರ್ಕ ಮಾಡಲು ಹೇಳಿದ್ದೇನೆ.ಇನ್ನೂ ನಾಲ್ಕು ದಿನ ಸಮಯ ಇದೆ. ತಪ್ಪು ನಿರ್ಧಾರ ತೆಗೆದುಕೊಳ್ಳಲ್ಲ ಎಂಬ ವಿಶ್ವಾಸ ಇದೆ.ನಾನು ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಇಬ್ಬರ ಜೊತೆಯೂ ಮಾತಾಡುತ್ತೇನೆ.ಚಿಹ್ನೆ ಯಾವುದು ಅಂತಾ ಮಾತಾಡೋಣ ಎಂದು ಕುಮಾರಸ್ವಾಮಿ ಮುಕ್ತವಾಗಿ ಮಾತಾಡಿದ್ದಾರೆ. ಇದನ್ನು ಯೋಗೇಶ್ವರ್ ಗಮನಕ್ಕೆ ಕೂಡಾ ತಂದಿದ್ದೇವೆ.ಯೋಗೇಶ್ವರ್ ಆತುರ ಬಿದ್ದರು ಅನ್ನಿಸುತ್ತದೆ.ಎಂಎಲ್ಸಿ ಆಗಿರುವಾಗ ಎಂಎಲ್ ಎ ಯಾಕೆ ಎಂದು ಜನ ಕೇಳಬಹುದು ಎಂಬ ಕಾರಣಕ್ಕೆ ರಾಜೀನಾಮೆ ಕೊಡಲು ಹೋಗಿರಬಹುದು. ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಮುಂದಿನ ಯೋಗೇಶ್ವರ್ ರಾಜಕೀಯ ನಡೆ ಏನಾಗುತ್ತದೆ ಗೊತ್ತಿಲ್ಲ.ಯೋಗೇಶ್ವರ್ ಜೊತೆ ಬಿಜೆಪಿ ಕೇಂದ್ರದ ನಾಯಕರು ಮಾತಾಡುತ್ತಾರೆ.ಅಭ್ಯರ್ಥಿ ಯಾರು ಅಂತಾ ಕುಮಾರಸ್ವಾಮಿಯವರನ್ನು ಬಿಟ್ಟು ನಾವು ತೀರ್ಮಾನ ಮಾಡಲು ಆಗಲ್ಲ.ಈ ಗೊಂದಲದಿಂದ ಮೈತ್ರಿ ಮೇಲೆ ಏನೂ ಪರಿಣಾಮ ಆಗಲ್ಲ. ಯೋಗೇಶ್ವರ್ ಜೊತೆ ಕಾಂಗ್ರೆಸ್ ನವರು ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ.ಈ ಬಗ್ಗೆ ನಾನು ಕುಮಾರಸ್ವಾಮಿ ಜೊತೆ ಮಾತಾಡುತ್ತೇನೆ ಎಂದಿದ್ದಾರೆ.