ಮನೆ Latest News ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ;ಇದು ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರ ಎಂದ ಡಿಕೆಶಿ

ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ;ಇದು ಸಿದ್ದರಾಮಯ್ಯ ವಿರುದ್ಧದ ಷಡ್ಯಂತ್ರ ಎಂದ ಡಿಕೆಶಿ

0

ಬೆಂಗಳೂರು; ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ನಾನು ಈಗ ಕಾರ್ಯಕ್ರಮದಿಂದ ಬರ್ತಿದ್ದೀನಿ.ಈಗ ನೀವು ವಿಚಾರ ತಿಳಿಸಿದ್ದೀರಿ.ನಾನು ಜಡ್ಜಮೆಂಟ್ ನೋಡಿಲ್ಲ.ನೀವು ಒಬ್ಬೊಬ್ಬರು ಒಂದು ರೀತಿ ಹೇಳೊದನ್ನ ಕೇಳೊಕೆ ತಯಾರಿಲ್ಲ.ನಮಗೂ ಜವಾಬ್ದಾರಿಗಳಿವೆ.ಒಂದು ನಮ್ಮ‌ ಮುಖ್ಯಮಂತ್ರಿಗಳ ಮೇಲೆ ದೊಡ್ಡ ಷಡ್ಯಂತ್ರ.ನನ್ನ ಮೇಲೆ ಹೇಗೆ ಷಡ್ಯಂತ್ರ ಮಾಡಿ ಕೇಸ್ ಹಾಕಿ ಭಗವಂತನ ಕೃಪೆಯಿಂದ ನಾನು ಹೊರಗಡೆ ಬಂದಿದ್ದೇನೆ.ಆ ಕೇಸ್ ಕೂಡ ವಜಾ ಆಗಿದೆ.ಹಾಗೆ ಇಂದು ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ಮೇಲೆ ದೂರು ಕೊಟ್ಟಿದ್ದಾರೆ.ಅವರು ಕ್ಲೀನಾಗಿ ಬರ್ತಾರೆ ಎಂದಿದ್ದಾರೆ.

ಯಾವ ತನಿಖಗೆ ಆದೇಶ ಮಾಡಲಿ ಏನೇ ಮಾಡಲಿ.ಅವರದ್ದು ಏನು ತಪ್ಪಿಲ್ಲಾ ತಪ್ಪು ಮಾಡಿಲ್ಲ.ನನ್ನ ಪ್ರಕಾರ ಅವರದ್ದು ಯಾವುದೇ ತಪ್ಪಿಲ್ಲ.ಮುಖ್ಯಮಂತ್ರಿಗಳಾಗಿ ಅವರಿಗೆ ಬದ್ಧತೆಯಿದೆ.ಆ ಬದ್ಧತೆ ಜೊತೆಗೆ ನಾವು ಇದ್ದೇವೆ.ಅವರು ಮಾಡಿರುವ ಕೆಲಸ ರಾಜ್ಯಕ್ಕೆ ಕೊಟ್ಟಿರುವ ಕಾರ್ಯಕ್ರಮವನ್ನ ಬಿಜೆಪಿಗೆ ಸಹಿಸಲು ಆಗ್ತಿಲ್ಲ.ಅದಕ್ಕಾಗಿ ಷಡ್ಯಂತ್ರ ನಡೆಯುತ್ತಿದೆ ಇಷ್ಟು ಮಾತ್ರ ಹೇಳ್ತೀನಿ.ಸಿಎಂ ಮುಖಭಂಗವಾಗಿದ್ಯಾ ಎಂಬ ವಿಚಾರಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು ನಾನು‌ ಮೊದಲು ನೋಡಿ ಹೇಳ್ತೀನಿ.ಏನ್ ಸೆಟ್ ಬ್ಯಾಕ್ ಇದೆ.ತನಿಖೆಗೆ ಆದೇಶ ಕೊಟ್ಟಿದ್ದಾರೆ ಅಂತ ನೀವು ಹೇಳ್ತಿದ್ದೀರಾ ಎಂದ್ರು.

ಇನ್ನು ಬಿಜೆಪಿಯಿಂದ ಸಿಎಂ ರಾಜೀನಾಮೆಗೆ ಅಗ್ರಹ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಇಲ್ಲಿ ಯಾವುದೇ ಪ್ರಶ್ನೆ ಇಲ್ಲಾ ಸಿಎಂ ಯಾವುದೇ ತಪ್ಪು ಮಾಡಿಲ್ಲ.ಬಿಜೆಪಿ ಎಲ್ಲಾ ವಿರೋಧ ಪಕ್ಷಗಳ ಮೇಲೆ ಷಡ್ಯಂತ್ರ ಮಾಡ್ತಿದೆ ಎಂದಿದ್ದಾರೆ.

ಸಿಎಂ ಪ್ರಾಸಿಕ್ಯೂಷನ್ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ;  ಆದಿಚುಂಚನಗಿರಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

ಮಂಡ್ಯ;  ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು  ಆದಿಚುಂಚನಗಿರಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ನನ್ನ ಯಾವುದೇ ತೀರ್ಮಾನ ಆಗದೇ ಇದ್ರು ನನ್ನ ಆರೋಪಿ ಮಾಡ್ತಾ ಇದ್ದಾರೆ.ನನ್ನ ಮೇಲಿನ ಆರೋಪ ಎಲ್ಲಾ ಮುಗಿಲಿ.ಅದೇಲ್ಲಾ ಮುಗಿದ ಮೇಲೆ ಮಾತಾಡ್ತೀನಿ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೈಸೂರು ಪಾದಯಾತ್ರೆಗೆ ನಾನು‌ ಹೋಗಿದ್ದೆ. ಪಾದಯಾತ್ರೆಯಲ್ಲಿ ನಾನು ಜನರನ್ನು ಜಾಗೃತರನ್ನಾಗಿ ಮಾಡುವ ಕೆಲಸ ಮಾಡಿದ್ದೇನೆ.ಇವರ ಬಗ್ಗೆ ನಾನೇನು ಮಾತಾಡಿಲ್ಲ.ನಾನು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿಲ್ಲ.ಇರುವ ಪರಿಸ್ಥಿತಿಯನ್ನು ಜನರಿಗೆ ಹೇಳಿದ್ದೇನೆ ಎಂದಿದ್ದಾರೆ.

ದೇಶದ ಕಾನೂನನಲ್ಲಿ ರಕ್ಷಣೆ ಕೊಡಲು ಸಂವಿಧಾನದಲ್ಲಿ ಅವಕಾಶ ಇದೆ.ಕಾನೂನು ಬಾಹಿರ ಚಟುವಟಿಕೆ ಮಾಡಿದ್ರೆ ಏನು ತೀರ್ಪು ಬೇಕು ಅದು ಕೊಡ್ತಾರೆ.ಕಾನೂನಿನ ಒಳಗೆ ಇದ್ದರೆ ಏನು ಬೇಕಾದ್ರು ಆಗಬಹುದು.ನಾನು ಸಿದ್ದರಾಮಯ್ಯ ಅವರಿಗೆ ಏನು ಹೇಳಲ್ಲ.ನನ್ನ ಅಭಿಪ್ರಾಯ ನಾನು ಹೇಳಲ್ಲ.ಕುಮಾರಸ್ವಾಮಿ ಏನೋ ಮಾಡಿದ್ದಾನೆ ಎಂದು ಹೇಳಿದ್ದಾರೆ.ನನ್ನ ನೈತಿಕತೆ ಏನು ಅನ್ನೊದು ಕ್ಲೀಯರ್ ಆಗಬೇಕು.ಗ್ರೇಟ್ ಪಾಲಿಟಿಷಿಯನ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ.ಅದೆಲ್ಲಾ ಕ್ಲಿಯರ್ ಆದ ಬಳಿಕ ಮಾತಾಡ್ತೀನಿ.ಸಿಎಂ ನೈತಿಕ ಹೊಣೆ ಹೊರಲಿಲ್ಲ ಅಂದ್ರೆ ನಾನು‌ ಹೇಳೊಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ನನ್ನ ಇಕ್ಕಟ್ಟಿಗೆ ಸಿಲುಕಿಸಲು ಹೋಗಿದ್ದಾರೆ.ನಾನು ಹೆದರುವವನಲ್ಲ.ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡೋನು ನಾನು.ನಾಲ್ಕೈದು ಮಂದಿ ಬಿಡಾಡಿ ಮಂತ್ರಿಗಳು ನನ್ನ ಮೇಲೆ ಆರೋಪ ಮಾಡಿದ್ದಾರೆ.ನನ್ನ ಮೇಲೆ ಷಡ್ಯಂತ್ರ ನಡೆಯುತ್ತಿರೋ ಬಗ್ಗೆ ಇನ್ನೂ ಅನುಮಾನ ಇದ್ಯಾ.ನಾನು ಇದನ್ನು ಷಡ್ಯಂತ್ರ ಅನ್ನಲ್ಲಾ, ಕುಮಾರಸ್ವಾಮಿ ಕೇಂದ್ರ ಸಚಿವನಾಗಿರೋದನ್ನು‌ ಸಹಿಸುತ್ತಿಲ್ಲ. ಜನರ ಮಧ್ಯ ಕಂದಕ ಸೃಷ್ಟಿ ಮಾಡಲು ಹೀಗೆ ಮಾಡ್ತಾ ಇದ್ದಾರೆ.ಯಾವ ಮಂತ್ರಿ ಬಿಡಾಡಿ