ಮನೆ ಪ್ರಸ್ತುತ ವಿದ್ಯಮಾನ ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧದ ಡಿ ನೋಟಿಫಿಕೇಶನ್ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡಿರುವುದು ಒಳ್ಳೆಯದಾಗಿದೆ; ಸಚಿವ...

ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧದ ಡಿ ನೋಟಿಫಿಕೇಶನ್ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡಿರುವುದು ಒಳ್ಳೆಯದಾಗಿದೆ; ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

0

ಬೆಂಗಳೂರು: ಯಡಿಯೂರಪ್ಪ, ಕುಮಾರಸ್ವಾಮಿ ವಿರುದ್ಧದ ಡಿ ನೋಟಿಫಿಕೇಶನ್ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡಿರುವುದು ಒಳ್ಳೆಯದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಲೋಕಾಯುಕ್ತ ತನಿಖೆ ಕೈಗೆತ್ತಿಕೊಂಡಿರುವುದು ಒಳ್ಳೆಯದಾಗಿದೆ.ಈ ಪ್ರಕರಣದಲ್ಲಿ ಸ್ಪಷ್ಟವಾದ ಮಾಹಿತಿ ಇದೆ.ಕುಮಾರಸ್ವಾಮಿ ಅವರು ಬಹಳ ಜೋರಾಗಿ ಮಾತನಾಡುತ್ತಾರೆ.ಈಗ ಸತ್ಯಾಸತ್ಯತೆ ಅವರ ಮುಂದೇನೆ ಇದೆ.ಯಾರ ಹೆಸರಿಗೆ ಡಿನೋಟಿಫಿಕೇಶನ್ ಮಾಡಿದ್ದರು.ಯಾರಿಗೆ ಈಗ ಈ ಜಾಗ ಹೋಗಿದೆ, ಜಾಗದ ಜಿಪಿಎ ಯಾರ ಬಳಿ ಇತ್ತು.ಇದನ್ನ ಯಾರು ಪ್ರಾರಂಭ ಮಾಡಿದ್ರು, ಅಂತಿಮವಾಗಿ ಇದನ್ನ ಯಾರು ಮಾಡಿಸಿಕೊಟ್ಟರು .ಈ ಎಲ್ಲಾ ಸತ್ಯಾಸತ್ಯತೆ ಕುಮಾರಸ್ವಾಮಿ ಮುಂದೆಯೇ ಇದೆ.ಇದು ಯಡಿಯೂರಪ್ಪ ಕುಮಾರಸ್ವಾಮಿ ಸೇರಿ ಮಾಡಿರೋದು.ಎಲ್ಲಾ ಫ್ಯಾಕ್ಟ್ ಗಳನ್ನ ದಾಖಲೆಗಳ ಮೂಲಕ ಹೇಳುತ್ತಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕುಮಾರಸ್ವಾಮಿಯವರು ಇದು ನನ್ನ ಸಿಗ್ನೇಚರ್ ಅಲ್ಲ ಅಂತ ಅಷ್ಟೇ ಹೇಳಬಹುದು. ಲೋಕಾಯುಕ್ತವರು ತನಿಖೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಲಿ.ಕುಮಾರಸ್ವಾಮಿ ಅವರು, ತಮ್ಮ ಬಾಮೈದನಿಗೆ ಡಿನೋಟಿಫಿಕೇಶನ್ ಇಂದ ಅನುಕೂಲ ಆಗಿದೆಯಾ ಇಲ್ವಾ ಹೇಳಲಿ.ಕುಮಾರಸ್ವಾಮಿಯವರ ಅತ್ತೆ ಇದರ ಜಿಪಿಎ ಹೋಲ್ಡರ್ ಆಗಿದ್ರ ಇಲ್ವಾ ಹೇಳಲಿ.ಕುಮಾರಸ್ವಾಮಿ ಮಾಡಲು ಪ್ರಯತ್ನ ಮಾಡಿದ್ರು ಯಡಿಯೂರಪ್ಪನವರು ಬಂದು ಇವರಿಗೆ ಮಾಡಿಸಿಕೊಟ್ಟರು. ಕೊನೆಗೆ ಇವರೇ ಅದರ ಫಲಾನುಭವಿ ಅಲ್ಲವೇ..?.ಇದಕ್ಕೇನು ಕುಮಾರಸ್ವಾಮಿ ಉತ್ತರ ಕೊಡಲ್ಲ.ಸಿದ್ದರಾಮಯ್ಯನವರ ಮೇಲೆ ಸತ್ತವರ ಹೆಸರಲ್ಲಿ ಡಿನೋಟಿಫಿಕೇಶನ್ ಮಾಡಿದ್ದಾರೆ ಅಂತಾರೆ.ಸಿದ್ದರಾಮಯ್ಯ ಡಿನೋಟಿಫಿಕೇಶನ್ನೇ ಮಾಡಿಸಿಲ್ಲ.ಈ ಪ್ರಕರಣ ಅವರ ಬಾಮೈದ ಹೆಸರಿನಲ್ಲೇ ಆಗಿರೋದು.ಇದಕ್ಕೆ ಉತ್ತರ ಏನು ಕುಮಾರಸ್ವಾಮಿ ಅವರೇ..? ಎಂದು ಪ್ರಶ್ನೆ ಮಾಡಿದ್ದಾರೆ.

ಕುಮಾರಸ್ವಾಮಿ ಅವರಿಗೆ ಯಾವಾಗ ಸಮಸ್ಯೆ ಆಗುತ್ತೋ ಅವಾಗ ತೀರಚಿ ಹೇಳ್ತಾರೆ.ಕುಮಾರಸ್ವಾಮಿಯವರಿಗೆ ಸ್ಪಷ್ಟ ಉತ್ತರ ಕೊಡಲು ಆಗದೆ ಪಲಾಯನ ಮಾಡುತ್ತಿದ್ದಾರೆ.ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಸರ್ಕಾರದ 100 ಕೋಟಿ ಆಸ್ತಿಯನ್ನು ಕುಮಾರಸ್ವಾಮಿ ಯಡಿಯೂರಪ್ಪ ಲೂಟಿ ಮಾಡಿದ್ದಾರೆ.ಅವರಿಬ್ಬರು ಭಾಗಿಯಾಗಿರೋದು ಸತ್ಯ, ತನಿಖೆಯಿಂದ ಅದು ಹೊರಗೆ ಬರಬಹುದು ಎಂಬುದು ಸತ್ಯ.ಯಡಿಯೂರಪ್ಪ ಅವರನ್ನು ಈಗಾಗಲೇ ವಿಚಾರಣೆ ಮಾಡಿ ಕಳಿಸಿದ್ದಾರೆ.ಕುಮಾರಸ್ವಾಮಿ ಅವರನ್ನು ಕೂಡ ಲೋಕಾಯುಕ್ತರು ವಿಚಾರಣೆಗೆ ಕರೆಸಬೇಕು.ಅವರ ಬಳಿ ಮಾಹಿತಿ ಪಡೆಯಲಿ.ಕಾನೂನು ಪ್ರಕಾರ ಏನು ಕ್ರಮ ಆಗಬೇಕು ಅದು ಆಗಲಿ ಎಂಬುದಷ್ಟೇ ನಮ್ಮ ಅಗ್ರಹ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಇನ್ನು ಅರ್ಕಾವತಿ ಡಿನೋಟಿಫಿಕೇಶನ್ ಕೇಸ್ ಕೆಂಪಣ್ಣ ಆಯೋಗದ ವರದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ರಾಜ್ಯಪಾಲರ ನಡೆ ನೋಡಿದ್ರೆ ಇವರೇ ವಿರೋಧ ಪಕ್ಷ ನಾಯಕರೇ ರೀತಿ ಮಾಡ್ತಿದ್ದಾರೆ.ಆರ್‌ಟಿಐ ಆಕ್ಟಿವಿಸ್ಟ್ ಗಳು ಅರ್ಜಿ ಹಾಕೋದು ಮಾಹಿತಿ ಕೇಳ್ತಾರೆ.ಆ ರೀತಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ.ರಾಜ್ಯಪಾಲರು ತಮಗೆ ಬಂದ ಪ್ರತಿಯೊಂದು ಅರ್ಜಿಗೂ ಸರ್ಕಾರಕ್ಕೆ ಬರೆಯೋದಕ್ಕೆ ಶುರು ಮಾಡಿದ್ದಾರೆ.ಈ ರೀತಿ ರಾಜ್ಯಪಾಲರು ನಡೆದುಕೊಳ್ಳಬಾರದು.ಅದು ಅವರ ಸ್ಥಾನಕ್ಕೆ ಗೌರವ ತರುವುದಲ್ಲ.ಪ್ರಮುಖ ಕೇಸುಗಳ ಮೇಲೆ ಆದ್ಯತೆ ಕೊಡಬೇಕಾಗಿತ್ತು .ತನಿಖೆ ಮಾಡಿ ಪೊಲೀಸ್ ಅಧಿಕಾರಿಗಳ ಪ್ರಾಸಿಕ್ಯೂಶನ್ ಕೇಳಿದಾಗ ಅಂತದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.ಅದನ್ನ ಬಿಟ್ಟು ರಾಜ್ಯದಲ್ಲಿ ಏನೋ ನಡಿತಾ ಇದೆ ಎನ್ನುವ ರೀತಿ ರಾಜ್ಯಪಾಲರು ಪತ್ರ ಬರೀತಾ ಇರುವುದು ಖಂಡನೀಯ.ರಾಜ್ಯಪಾಲರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಅಂತ ನನಗೆ ಆಶ್ಚರ್ಯ ಆಗ್ತಾ ಇದೆ.ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೇವೆ.ಕೇಂದ್ರ ಸರ್ಕಾರ ಈಗ ರಾಜ್ಯಪಾಲರನ್ನು ಉಪಯೋಗಿಸಿಕೊಂಡು ಇಲ್ಲಿ ರಾಜಕೀಯ ಮಾಡಲು ಶುರು ಮಾಡಿದ್ದಾರೆ.ಈ ರೀತಿ ರಾಜ್ಯಪಾಲರು ಪತ್ರ ಬರೆಯುತ್ತಾರಾ..?.ವಿರೋಧ ಪಕ್ಷದ ನಾಯಕರು ಮಾಹಿತಿ ಕೇಳಲಿ ಆದರೆ ರಾಜ್ಯಪಾಲರು ಕೇಳುವುದು ಸರಿಯಲ್ಲ ಎಂದಿದ್ದಾರೆ.