ಮಾಗಡಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಈ ವೇಳೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಹಾಲು ಉತ್ಪಾದಕರಿಗೆ ಲಾಂಭಾಂಶ ಉಳೀತಾ ಇಲ್ಲ.ಹಸುಗಳು ಬೆಲೆ ಜಾಸ್ತಿ ಆಗಿದೆ, ಹಸುಗಳ ಫೀಡ್ ಹಣ ಕೂಡ ಹೆಚ್ಚಳ ಆಗಿದೆ.ಅದಕ್ಕೆ ಹಾಲಿನ ದರ ಬೆಲೆ ರೈತರಿಗೆ ಸಿಗುವ ಹಾಗೆ ಮಾಡಬೇಕು. ಪೆಟ್ರೋಲ್ ಡೀಸಲ್ ರೇಟ್ ತಮಗೆ ಸಿಕ್ಕ ಹಾಗೆ ಏರಿಸುತ್ತಾರೆ. ಬಹಳ ಕಡಿಮೆ ಹಣ ಅಂದ್ರೆ 31 ರೂ ರೈತರಿಗೆ ಕೊಡ್ತೇವೆ. 40 ರೂಪಾಯಿಗೆ ಮಾರುತ್ತೇವೆ, ಇದು ಇಡೀ ದೇಶದಲ್ಲೇ ಅತಿ ಕಡಿಮೆ. ಹಾಲಿನ ದರದ ಬಗ್ಗೆ ಮುಖ್ಯಮಂತ್ರಿಗಳು ಯೋಚಿಸಬೇಕು.ಒಂದು ನೀರಿನ ಬಾಟಲ್ ಗೆ 50 ರೂಪಾಯಿ ಇದೆ. ಆದರೆ ನೀರಿಗೆ ಇರುವ ಬೆಲೆ ಹಾಲಿಗಿಲ್ಲ ಅಂದ್ರೆ ಹೇಗೆ.ಈ ಬಗ್ಗೆ ಮುಖ್ಯಮಂತ್ರಿಗಳು ಬೆಳಕು ಚೆಲ್ಲಬೇಕು. ಸಭೆಯಲ್ಲಿ ಮೂರು ರೂಪಾಯಿ ಹೆಚ್ಚು ಕೊಡೋಣ ಅಂತ ಸಿ ಎಂ ಹೇಳಿದ್ರು.ಆಂಧ್ರದಂತೆ ರೇಟ್ ಕೊಡಿ ಅಂತ ನಾವೇನು ಕೇಳ್ತಾ ಇಲ್ಲ. ಬೆಂಗಳೂರು ನೋಡಿ ಸರಕಾರ ನಡೆಸೋದು ಮುಖ್ಯ ಅಲ್ಲ.ಗ್ರಾಮದವರನ್ನು ನೋಡಿ ಸರಕಾರ ನಡೆಸೋದು ಮುಖ್ಯ.ಹಾಲಿನ ದರ ಐದು ರೂಪಾಯಿ ಆದರು ಹೆಚ್ಚಳ ಮಾಡಬೇಕು ಎಂದು ಮುಖ್ಯಮಂತ್ರಿಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಆಗ್ರಹ ಮಾಡಿದರು.
ಇನ್ನು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಮನವಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಸಭೆ ಕರೆದು ಹಾಲಿನ ದರ ಹೆಚ್ಚು ಮಾಡೋಣ . ಬಿಜೆಪಿಯವರು ಹಾಲಿಗೆ ಬೆಲೆ ಏರಿಸಲಾಗಿದೆ ಎಂದು ಆರೋಪಿಸಿದರು, ರೈತರಿಗೆ ಹಾಲು ಖರೀದಿಸಿ, ಅವರಿಗೆ ಹಣ ನೀಡುವುದು ಬೇಡವೇ? ಹಾಲಿನ ಪ್ರಮಾಣ ಹೆಚ್ಚಿಸಿ, ಅದಕ್ಕೆ ಸಮನಾಗಿ ಬೆಲೆ ಹೆಚ್ಚಿಸಿ ರೈತರಿಗೆ ನೆರವಾಗಿದ್ದು ತಪ್ಪಾ? ಹಾಲಿಗೆ 5.೦೦ ರೂ.ಗಳ ಪ್ರೋತ್ಸಾಹಧನ ಘೋಷಿಸಿದ್ದು ನಮ್ಮ ಸರ್ಕಾರ. ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಏನೂ ಮಾಡದೇ ಕೆಲವರು ತಾವು ರೈತರ ಮಕ್ಕಳು, ಮಣ್ಣಿನ ಮಕ್ಕಳು ಎನ್ನುತ್ತಾರೆ. ನಾವು ಹಾಲಿನದರ ಹೆಚ್ಚು ಮಾಡ್ತೇವೆ.ಆದರೆ ಆ ಹೆಚ್ಚು ಮಾಡಿದ ಹಾಲಿನ ದರ ರೈತರಿಗೆ ಹೋಗ್ಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ರು.