ಮನೆ Latest News ನಟ ದರ್ಶನ್ ಗೆ ಬಳ್ಳಾರಿ ಜೈಲು ಸೇಫಲ್ಲ ಎಂದ ಮಾಜಿ ಕಳ್ಳ ಶಿಂಗ್ಲಿ ಬಸ್ಯಾ

ನಟ ದರ್ಶನ್ ಗೆ ಬಳ್ಳಾರಿ ಜೈಲು ಸೇಫಲ್ಲ ಎಂದ ಮಾಜಿ ಕಳ್ಳ ಶಿಂಗ್ಲಿ ಬಸ್ಯಾ

0

ಬಳ್ಳಾರಿ; ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡ್ಬೇಕು ಅಂತಾ ನೂರಾರು ಅಭಿಮಾನಿಗಳು ಬಳ್ಳಾರಿ ಜೈಲಿನ ಬಳಿ ಇನ್ನೂ ಕೂಡ ಬರುತ್ತಲೇ ಇದ್ದಾರೆ. ಮೊನ್ನೆ ಮಹಿಳೆಯೊಬ್ಬಳು ಬಂದು ನಾನು ದರ್ಶನ್ ಅವರನ್ನು ಮದುವೆಯಾಗ್ತೇನೆ ಅಂತಾ ಹೇಳಿದ್ದಳು. ಇದೀಗ ಮಾಜಿ ಕಳ್ಳ ಶಿಂಗ್ಲಿ ಬಸ್ಯಾ ಬಳ್ಳಾರಿ ಜೈಲು ಬಳಿ ಬಂದಿದ್ದಾನೆ.

ದರ್ಶನ್ ಭೇಟಿಗಾಗಿ ಬಳ್ಳಾರಿ ಜೈಲು ಬಳಿ ಬಂದ ಮಾಜಿ ಕಳ್ಳ ಶಿಂಗ್ಲಿ ಬಸ್ಯಾ ಈ ಹಿಂದೆ ಸುಮಾರು ಕೇಸ್ ಗಳಲ್ಲಿ ನಾನು ಬಳ್ಳಾರಿ ಜೈಲಿಗೆ ಬಂದಿದ್ದೇನೆ. ವಿಚಾರಣಾಧೀನ ಕೈದಿಯಾಗಿ ನಾನು ಬಳ್ಳಾರಿ ಜೈಲಿಗೆ ಹಲವು ಬಾರಿ ಬಂದಿದ್ದೇನೆ. ಬೇರೆ ಬೇರೆ ಜೈಲುಗಳಲ್ಲಿ ಕೈದಿಗಳಿಗೆ ಸಮಸ್ಯೆ ಬಂದಾಗ ನಾನು ರಾಜ್ಯದಾದ್ಯಂತ ಹೋರಾಟ ಮಾಡುತ್ತಾ ಬಂದಿದ್ದೇನೆ. ನನ್ನ ಮೇಲಿದ್ದ ಸುಮಾರು 262 ಕೇಸ್ ಗಳಲ್ಲಿ ನಾನೇ ವಾದ ಮಾಡಿ ಅವುಗಳನ್ನು ಗೆದ್ದಿದ್ದೇನೆ. ನನಗೆ ಸೆಕ್ಷನ್ ಗಳ ಬಗ್ಗೆ ಸಾಕಷ್ಟು ಅನುಭವವಿದೆ.ಆರೋಪಿ ದರ್ಶನ್ ಮೇಲೆ  164,204, 376,378 ಸೇರಿದಂತೆ ಹಲವು ಸೆಕ್ಷನ್ ಗಳ ಮೂಲಕ ಕೇಸ್ ದಾಖಲಿಸಲಾಗಿದೆ ಎಂದಿದ್ದಾನೆ.

ಇನ್ನು ದರ್ಶನ್ ಗೆ ಬಳ್ಳಾರಿ ಜೈಲ್ ಸೇಫ್ ಅಲ್ಲ ಅಂತಾ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ ಅಂತಾ ಶಿಂಗ್ಲಿ ಬಸ್ಯಾ ಹೇಳಿದ್ದಾನೆ.ಕೊಲೆ ಆರೋಪಿ ದರ್ಶನ್ ಗೆ ಸಾಕಷ್ಟು ಅನಾನುಕೂಲಕರವಾದ ವಾತವರಣ ಸೃಷ್ಠಿ ಮಾಡುತ್ತಿದ್ದಾರೆ. ಆದರೆ ಅವರು ಒಂದು ಕ್ಷಣದ ಕೋಪದಿಂದ ಇಂದು ಸಾವು ಸಂಭವಿಸಿದೆ. ಹಾಗಂಥ  ದರ್ಶನ್ ಅವರನ್ನು ಭಯೋತ್ಪಾದಕನಂತೆ ಬಿಂಬಿಸೋದು ಸರಿಯಲ್ಲ ಎಂದಿದ್ದಾನೆ.

ಇನ್ನು ನಾನು ಜೈಲಿನ ಮಗ , ಆದ್ದರಿಂದ ನನಗೆ ದರ್ಶನ್ ರನ್ನು ಭೇಟಿ ಮಾಡಲು ಅವಕಾಶವಿದೆ.ಅದ್ದರಿಂದ ನನಗೆ ಅವಕಾಶ ನೀಡುತ್ತಾರೆ ಎಂಬ ಭರವಸೆಯಿದೆ ಎಂದು ಶಿಂಗ್ಲಿ ಬಸ್ಯಾ ಹೇಳಿದ್ದಾನೆ. ಅಲ್ಲದೇ ಬಳ್ಳಾರಿ ಜೈಲು ಕೊಲೆ ಆರೋಪಿ ದರ್ಶನ್ ಗೆ ಸೇಫ್ ಅಲ್ಲ ಅಂತಾ ಎಚ್ಚರಿಸಿದ್ದಾನೆ.

ಈಡೇರಿತು ದರ್ಶನ್ ಬಹು ದಿನಗಳ ಬೇಡಿಕೆ: ಡಿ ಬಾಸ್ ಸೆಲ್ ಗೆ ಬಂತು ಟಿವಿ

ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜನಂತಿದ್ದ ನಟ ದರ್ಶನ್ ಗೆ ಬಳ್ಳಾರ ಜೈಲನ ಅಕ್ಷರಶಃ ನರಕವಾಗಿದೆ. ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳೋಕೆಲ ಪರದಾಡುತ್ತಿದ್ದಾರೆ. ಜೈಲು ಸೇರಿದಾಗಿನಿಂದ ಡಿ ಬಾಸ್ ಹಿಂಸೆ ಅನುಭವಿಸುತ್ತಿದ್ದಾರೆ. ಇನ್ನು ದರ್ಶನ್ ಜೈಲು ಅಧಿಕಾರಿಗಳ ಬಳಿ ಆರಂಭದಲ್ಲೇ ಬೇಡಿಕೆ ಇಟ್ಟಿದ್ದರು. ತನ್ನ ಸೆಲ್ ಗೆ ಹೇವಿ ಭದ್ರತಾ ಇರೋ ಕಾರಣ ಹೊರ ಜಗತ್ತಿನಲ್ಲಿ ದರ್ಶನ  ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಐದು ದಿನಗಳ ಹಿಂದೆ ಸೆಲ್ ಸೇರುತ್ತಿದ್ದಂತೆ ಸೆಲ್ ನಲ್ಲಿ ಟಿವಿ ಹಾಕುವಂತೆ ಬೇಡಿಕೆ ಇಟ್ಟಿದ್ದರು ದರ್ಶನ್. ಇದೀಗ ಆ ಬೇಡಿಕೆ ಈಡೇರಿದೆ.

ಸರ್ಜಿಕಲ್ ಚೇರ್, ಪೋನ್ ಕಾಲ್ ಬಳಿಕ ಟಿವಿ ವ್ಯವಸ್ಥೆ ದರ್ಶನ್ ನೀಡಲಾಗಿದೆ.ಜಾರ್ಜ್ಶೀಟ್  ಸಲ್ಲಿಕೆ ಸೇರಿದಂತೆ ಹೊರ ಜಗತ್ತಿನ ವಿಷಯ ತಿಳಿದುಕೊಳ್ಳವ ಕುತೂಹಲ ಹಿನ್ನೆಲೆ.ಗಳವಾರ ಟಿವಿ‌ ನೀಡಬೇಕೆಂದು ಮನವಿ ಮಾಡಿದ್ದಾರೆ ದರ್ಶನ್.ಜೈಲು ನಿಯಮದ ಪ್ರಕಾರ ಟಿವಿ ನೀಡಬಹುದು.. .ದರೆ ಟಿವಿ ರಿಪೇರಿ ಇದ್ದ ಹಿನ್ನೆಲೆ ಈವರೆಗೂ ನೀಡಿರಲಿಲ್ಲ..ಇದು ದರ್ಶನ್ ಗೆ ಟಿವಿ ಲಭ್ಯ..ಹೈಯರ್ ಕಂಪನಿ, 32 ಇಂಚಿನ ಟಿವಿ ದರ್ಶನ್ ಇರುವ ಸೆಲ್‌ನಲ್ಲಿ ಹಾಕಲಾಗಿದೆ.

ಇದರ ಮಧ್ಯೆ ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ದರ್ಶನ್‌ಗೆ ತಣ್ಣೀರು ಸ್ನಾನವೇ ಗತಿ. ಎಂಬಂತಾಗಿದೆ.ನಿತ್ಯ ತಣ್ಣೀರು ಸ್ನಾನ ಮಾಡುತ್ತಿದ್ದಾರೆ ದರ್ಶನ್.ಸಿನೀರಿನ ಅವಕಾಶ ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿ ಇಲ್ಲ..9 ದಿನಗಳಿಂದ ಜೈಲ್‌ನಲ್ಲಿ ತಣ್ಣೀರು ಸ್ನಾನ..ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಜೈಲಿನ ವಾಸ್ತವತೆ ಬದಲಾಗಿದೆ.