ಬೆಂಗಳೂರು; ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ನಟ ದರ್ಶನ್ ಅವರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದರು. ಇಂದು ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್ ಹಾಗೂ ವಕೀಲರು ಭೇಟಿ ಮಾಡಿ ಮಾತುಕತೆ ನಡೆಸಿದ್ರು. ದರ್ಶನ್ ಪತ್ನಿ ಹಾಗೂ ಮಗ ಬಂದಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಪೊಲೀಸರು ಸೆಲ್ ನಿಂದ ದರ್ಶನ್ ಅವರನ್ನು ಸಂದರ್ಶಕರ ಕೊಠಡಿಗೆ ಕರೆ ತಂದ್ರು. ದರ್ಶನ್ ಅವರು ಮೊನ್ನೆ ಬಳ್ಳಾರಿ ಜೈಲಿಗೆ ಪರಪ್ಪನ ಅಗ್ರಹಾರ ಜೈಲಿನಿಂದ ಹೋಗುವಾಗ ಕಪ್ಪು ಟೀ ಶರ್ಟ್ , ಬ್ಲೂ ಜೀನ್ಸ್ ಧರಿಸಿದ್ದರು. ಇಂದು ಕೂಡ ಅದೇ ಉಡುಪನ್ನು ಧರಿಸಿದ್ದರು. ಪೊಲೀಸರೊಂದಿಗೆ ನೇರವಾಗಿ ಸಂದರ್ಶಕರ ಕೊಠಡಿಗೆ ಬಂದ ಡಿ ಬಾಸ್ ಸುಮಾರು ಅರ್ಧ ಗಂಟೆಗಳ ಕಾಲ ಸಂದರ್ಶಕರ ಕೊಠಡಿಯಲ್ಲಿ ಮಾತನಾಡಿದ್ದಾರೆ.
ಜೈಲಿಗೆ ಭೇಟಿ ನೀಡುವ ವೇಳೆ ವಿಜಯಲಕ್ಷ್ಮೀ ದರ್ಶನ್ ಅವರು ಮೂರು ಬ್ಯಾಗ್ ಗಳಲ್ಲಿ ಬಟ್ಟೆ, ಬಿಸ್ಕೀಟ್, ಡ್ರೈಪ್ರೂಟ್ಸ್, ಗಳನ್ನು ತಂದಿದ್ದರು. ಪೊಲೀಸರು ಎಲ್ಲಾ ಬ್ಯಾಗ್ ಗಳನ್ನು ಪರಿಶೀಲಿಸಿ ಒಳಗಡೆ ಹೋಗದಕ್ಕೆ ಬಿಟ್ಟಿದ್ದಾರೆ. ಇನ್ನು ಸಂದರ್ಶಕರ ಕೊಠಡಿಯಲ್ಲಿ ಪತ್ನಿಯನ್ನು ನೋಡುತ್ತಲೇ ದರ್ಶನ್ ಭಾವುಕರಾಗಿದ್ದಾರೆ. ಮಗನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಇನ್ನು ವಕೀಲರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಅರ್ಧಗಂಟೆ ಮಾತನಾಡಿದ ಬಳಿಕ ದರ್ಶನ್ ಪತ್ನಿ ತಂದ ವಸ್ತುಗಳನ್ನು ತೆಗೆದುಕೊಂಡು ತನ್ನ ಸೆಲ್ ಕಡೆ ತೆರಳಿದ್ದಾರೆ.
ಇನ್ನು ವಿಜಯಲಕ್ಷ್ಮೀ ಅವರು ಜೈಲು ಬಳಿ ಬರುತ್ತಲೇ ಅವರನ್ನು ನೋಡೋದಕ್ಕೆ ಕಾರು ಬಳಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು ಎನ್ನಲಾಗಿದೆ. ತೀರಾ ಭಾವುಕರಾದಂತೆ ವಿಜಯಲಕ್ಷ್ಮೀ ದರ್ಶನ್ ಕಂಡು ಬಂದರು.
ಬಳ್ಳಾರಿ ಜೈಲು ಸೇರಿದ್ರೂ ದರ್ಶನ್ ಗೆ ತಪ್ಪುತ್ತಿಲ್ಲ ಸಂಕಷ್ಟ; ಡಿ ಬಾಸ್ ವಿಚಾರಣೆಗೆ 24 ಗಂಟೆಗಳ ಅನುಮತಿ ಕೇಳಿದ ಪೊಲೀಸರು
ಬಳ್ಳಾರಿ : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲು ಸೇರಿದರೂ ನಟ ದರ್ಶನ್ ಗೆ ಸಮಸ್ಯೆಗಳು ಮಾತ್ರ ಬೆನ್ನು ಬಿಡದೇ ಕಾಡುತ್ತಿದೆ.ಬಳ್ಳಾರಿ ಜೈಲಿನಲ್ಲಿ ಈಗಗಾಲೇ ಎರಡು ರಾತ್ರಿ ಕಳೆದಿರುವ ನಟ ದರ್ಶನ್ ರಾತ್ರಿ ಇಡೀ ನಿದ್ದೆಯಿಲ್ಲದೇ ಪರದಾಡಿದ್ದಾರೆ, ನಿರಂತರವಾಗಿ ಕಚ್ಚುತ್ತಿರುವ ಸೊಳ್ಳೆಯಿಂದಾಗಿ ಡಿ ಬಾಸ್ ರಾತ್ರಿಯಿಡಿ ಜಾಗರಣೆ ಮಾಡುವಂತಾಗಿದೆ. ಇದರ ಮಧ್ಯೆ ದರ್ಶನ್ ಅವರಿಗೆ ಪದೇ ಪದೇ ಸಂಕಷ್ಟಗಳು ಎದುರಾಗುತ್ತಲೇ ಇದೆ.
ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರಿಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರುಎ ಎಫ್ ಐಆರ್ ಗಳು ದಾಖಲಾಗಿದ್ದು ಆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ನಟ ದರ್ಶನ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.ಅದಕ್ಕಾಗಿ ಬೆಂಗಳೂರಿನಿಂದ ಪೊಲೀಸರು ಬಳ್ಳಾರಿ ಜೈಲಿಗೆ ಆಗಮಿಸಲಿದ್ದಾರೆ. ದರ್ಶನ್ ಅವರ ವಿಚಾರಣೆಗಾಗಿ ಈಗಾಗಲೇ ಪೊಲೀಸರು 24 ಗಂಟೆಗಳ ಅನುಮತಿ ಕೇಳಿದ್ದಾರೆ ಎನ್ನಲಾಗಿದೆ. ನಾಳೆ ಬಳ್ಳಾರಿಗೆ ಬಂದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ನಟ ಡಿ ಬಾಸ್ ದರ್ಶನ್ ಅವರನ್ನು ವಿಚಾರಣೆ ನಡೆಸಿದ ಬಳಿಕ ರೌಡಿ ಶೀಟರ್ ನಾಗನನ್ನು ವಿಚಾರಣೆ ನಡೆಸಲು ಪೊಲೀಸರು ಪ್ಲ್ಯಾನ್ ಮಾಡ್ಕೊಂಡಿದ್ದಾರೆ ಎನ್ನಲಾಗಿದೆ.