ಬೆಂಗಳೂರು; ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡುತ್ತಿರುವ ಕೇಸ್ ಅನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕೇಸ್ ಗೆ ಸಂಬಂಧಪಟ್ಟಂತೆ 7 ಜನ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಅಲ್ಲದೇ ಇದೇ ವೇಳೆ ಮಾತನಾಡಿದ ಅವರು ದರ್ಶನ್ ಹಾಗೂ ಇತರರನ್ನು ತಕ್ಷಣವೇ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಫೋಟೋ ವೈರಲ್ ಪ್ರಕರಣ; 7 ಜನ ಅಧಿಕಾರಿಗಳನ್ನು ಅಮಾನತುಗೊಳಿಸಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಆದೇಶ
ಬೆಂಗಳೂರು; ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ರಿಲ್ಯಾಕ್ಸ್ ಮೂಡನಲ್ಲಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಾಧಿಕಾರಿ ಸೇರಿ ಒಟ್ಟು 7 ಜನರನ್ನು ಅಮಾನತು ಮಾಡಲಾಗಿದೆ ಎಂದು ಅಮಾನತುಗೊಳಿಸಿ ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ನನಗೆ ಫೋಟೋ ಬಗ್ಗೆ ನಿನ್ನೆ ಸಂಜೆ ಸುಮಾರು ನಾಲ್ಕೂವರೆ ಗಂಟೆಗೆ ಸುದ್ದಿ ಬಂತು.ದರ್ಶನ್ ಮತ್ತು ನಾಲ್ಕು ಜನ ಟೀ ಕುಡಿದುಕೊಂಡು ಆರಾಮಾಗಿರುವ ಫೋಟೋ ಬಂತು.ಕೂಡಲೇ ಬಂಧೀಖಾನೆ ಡಿಜಿಗೆ ಕರೆ ಮಾಡಿ ಸಂಬಂಧ ಪಟ್ಟ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದೆ. ತಡರಾತ್ರಿ 1 ಗಂಟೆವರೆಗೆ ತನಿಖೆ ಆಗಿದೆ. ಫೋಟೋ ವೈರಲ್ ಆದ ಬೆನ್ನಲ್ಲೇ ಏಳು ಜನ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ.ಜೈಲರ್ ಶರಣಬಸವ ಅಮೀನಗಡ, ಪ್ರಭು ಎಸ್ ಕಂದೇವಾಲ್,ತಿಪ್ಪೇಸ್ವಾಮಿ,ಶ್ರೀಕಾಂತ್,ವೆಂಕಪ್ಪ ಕೊರ್ತಿ,ಸಂಪತ್ ಕುಮಾರ್ ಕಡಪಟ್ಟಿ,ಬಸಪ್ಪ ತೇಲಿ ಈ ಏಳು ಜನರನ್ನು ಅಮಾನತು ಮಾಡಲಾಗಿದೆ.
ಇನ್ನು ಈ ಘಟನೆ ಹೇಗೆ ನಡೆದಿದೆ ಎಂದು ವರದಿ ಕೇಳಿದ್ದೇನೆ.ಬಂಧೀಖಾನೆ ಡಿಜಿ ಕೂಡ ಸ್ಥಳಕ್ಕೆ ಹೋಗಿದ್ದಾರೆ.ಏಳು ಜನ ಅಮಾನತು ಆದವರು ಭಾಗಿಯಾಗಿದ್ದಾರೆ. ಅವಕಾಶ ಮಾಡಿಕೊಟ್ಟವರ ವಿರುದ್ಧ ಮುಂದಿನ ಕ್ರಮ ತೆಗೆದುಕೊಳ್ತೀವಿ ಎಂದಿದ್ದಾರೆ. ಅಲ್ಲದೇ ಜೈಲ್ ಸೂಪರಿಡೆಂಟ್ ರನ್ನು ಕೂಡ ವರ್ಗಾವಣೆ ಮಾಡ್ತೇವೆ. ಅವರ ವಿರುದ್ದ ಕೂಡ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.
ಜೈಲಿನಲ್ಲಿ ಜಾಮರ್ ಹಾಕಿದೀವಿ ಸಿಸಿಟಿವಿ ಹಾಕಿದೀವಿ.ಆದರೂ ಇಂಥ ಘಟನೆ ನಡೆದರೆ ಪೊಲೀಸ್ ಅಧಿಕಾರಿ ಕಠಿಣ ಕ್ರಮ ತೆಗೆದುಕೊಳ್ಳಬೇಕು.ಜೈಲ್ ಸೂಪರಿಡೆಂಡ್ ಭಾಗಿಯಾಗಿದ್ರೆ ಅವರ ಮೇಲೂ ಕೂಡ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.ಅವರ ವಿರುದ್ಧ ಕೂಡ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.ನೀವು ಪ್ರಶ್ನೆ ಮಾಡಿದ ವೇಳೆ ಚಿಕನ್ ಬಿರಿಯಾನಿ ಕೊಟ್ಟಿರಲಿಲ್ಲ.ಈ ಘಟನೆ ಸಮರ್ಥನೆ ಮಾಡಿಕೊಳ್ತಿಲ್ಲ.ಯಾರ ಮೊಬೈಲ್ ನಲ್ಲಿ ಫೋಟೋ ಇದೆ, ಹೇಗೆ ಮೊಬೈಲ್ ಒಳಗೆ ಹೋಯ್ತು ಎಲ್ಲವೂ ತನಿಖೆ ಆಗುತ್ತಿದೆ.ಎಲ್ಲರೂ ಕೂಡ ದರ್ಶನ್ ಭೇಟಿಗೆ ಹೋಗ್ತಾ ಇಲ್ಲ.ತನಿಖೆಯಲ್ಲಿ ಯಾರೆಲ್ಲ ದರ್ಶನ್ ಭೇಟಿ ಮಾಡ್ತಿದ್ದಾರೆ ಅದೂ ಕೂಡ ಹೊರಗೆ ಬರುತ್ತದೆ ಎಂದಿದ್ದಾರೆ.
ಜೈಲಿನಲ್ಲಿ 24 ಗಂಟೆ ಮಾನಿಟರಿಂಗ್ ನಡೆಯುತ್ತಿರುತ್ತದೆ.ಸಿಸಿಟಿವಿಯಲ್ಲಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಹೋಗ್ತಾ ಇರುತ್ತದೆ.ಅದನ್ನು ಹೊರತುಪಡಿಸಿ ಕೂಡ ಈ ಘಟನೆ ನಡೆದಿದೆ.ಯಾರ ಒತ್ತಡವೂ ಕೂಡ ನಮ್ಮ ಮೇಲೆ ಇಲ್ಲ.ಯಾರೂ ಕೂಡ ನನ್ನ ಲೆವೆಲ್ ಗೆ ಮುಟ್ಟುವುದಕ್ಕೆ ಆಗುವುದಿಲ್ಲ.ಯಾರ ಒತ್ತಡಕ್ಕೂ ಕೂಡ ಮಣಿಯುವುದಿಲ್ಲ.ಇರುವ ಲ್ಯಾಪ್ಸಸ್ ಸರಿ ಮಾಡುತ್ತೇವೆ.ಮುಂದೆ ಈ ರೀತಿ ಆಗದ ಹಾಗೆ ನೋಡಿಕೊಳ್ತೇವೆ ಎಂದು ಅವರು ಹೇಳಿದ್ದಾರೆ.
ಇಂತಹ ಘಟನೆ ಆದಾಗ ಹಿರಿಯ ಅಧಿಕಾರಿಗಳು ಅದನ್ನು ನೋಡಲೇಬೇಕು.ಮಾನಿಟರಿಂಗ್ ನಲ್ಲಿ ಲ್ಯಾಪ್ಸ್ ಆದಾಗ ಇಂಥ ಘಟನೆ ನಡೆಯುತ್ತಿದೆ.ಹಿರಿಯ ಅಧಿಕಾರಿಗಳು ಹೊಣೆಗಾರರಾಗಿದ್ದರೆ ಅವರನ್ನೂ ಕೂಡ ಅಮಾನತು ಮಾಡ್ತೇವೆ.ಮೊನ್ನೆ ಸಿಸಿಬಿ ರೇಡ್ ಮಾಡಿದಾಗ ಏನೂ ಸಿಗಲಿಲ್ಲ ಅಂತ ಹೇಳಿದ್ದಾರೆ.ಅದನ್ನೂ ಕೂಡ ತನಿಖೆ ಮಾಡ್ತೇವೆ.ರೇಡ್ ಆಗುವ ಮೂರು ದಿನ ಮುಂಚೆ ಸಿಸಿಟಿವಿ ಚೆಕ್ ಮಾಡ್ತಿದ್ದೇವೆ.ಮಾಹಿತಿ ಸೋರಿಕೆ ಆಗಿತ್ತಾ ಎಂಬ ಬಗ್ಗೆಯೂ ವೆರಿಫೈ ಮಾಡ್ತಿದ್ದೇವೆ.ಈ ಕೇಸ್ ಅನ್ನು ಯಾವುದೇ ಕಾರಣಕ್ಕೂ ಲೂಸ್ ಮಾಡುವುದಿಲ್ಲ.ಯಾರ ಒತ್ತಡಕ್ಕೂ ಕೂಡ ಮಣಿಯುವುದಿಲ್ಲ.ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದೇನೆ.ನಾನು ಕೋಪ ಮಾಡಿಕೊಳ್ಳುತ್ತಿಲ್ಲ, ನಾವು ಹೇಳುವುದನ್ನು ಕೇಳಿ.ಯಾರೂ ಕೂಡ ಅನುಮಾನ ಪಡುವುದು ಬೇಕಿಲ್ಲ.ಕಾನೂನು ಪ್ರಕಾರ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ತೀವಿ.ದರ್ಶನ್ ಮೇಲೆ ಈ ವಿಚಾರಕ್ಕೆ ಪ್ರತ್ಯೇಕ ಕೇಸ್ ಮಾಡಬೇಕಾ ನೋಡ್ತೀನಿ.ಆತಿಥ್ಯ ಸಿಗದೇ ಇರುವ ಕಡೆ ದರ್ಶನ್ ಕಳಿಸಬೇಕಾ ನೋಡೋಣ ಎಂದು ಅವರು ಹೇಳಿದ್ದಾರೆ.