ಮನೆ ಪ್ರಸ್ತುತ ವಿದ್ಯಮಾನ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ವಿಚಾರ ; ರಾಜ್ಯ ಬಿಜೆಪಿ...

ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ವಿಚಾರ ; ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಾಯಕರ ಸುದ್ದಿಗೋಷ್ಟಿ

0

 

ಬೆಂಗಳೂರು ; ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ  ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಾಯಕರು ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ನ 15 ತಿಂಗಳ ಆಡಳಿತದಲ್ಲಿ ಕಾಂಗ್ರೆಸ್ ನಡಿಗೆ ಭ್ರಷ್ಟಾಚಾರದ ಕಡೆಗೆ ಎಂದಾಗಿದೆ.ಈ ರೀತಿಯ ಘೋಷಣೆಯನ್ನು ರಾಜ್ಯದ ಜನರು ಮಾತಾಡುತ್ತಿದ್ದಾರೆ.ರಾಜ್ಯದ ಜನರು ಸರ್ಕಾರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟಿದ್ದರು.ಸಿಎಂ ಸಿದ್ದರಾಮಯ್ಯ ಬಹಳ‌ ಕ್ಲೀನ್ ಅಂತಾರೆ.ಆದರೆ ಸಿದ್ದರಾಮಯ್ಯ ಮೇಲೆ 65 ಕೇಸ್ ಗಳು ಫೈಲ್ ಆಗಿದೆ.ಅದನ್ನು ACB ರಚನೆ ಮಾಡಿ ತಮ್ಮ ಮೇಲೆ ಇದ್ದ ಕೇಸ್ ಗಳನ್ನು ಮುಚ್ಚಿ ಹಾಕಿದ್ದಾರೆ.ರಾಜ್ಯಪಾಲರು ಸಿಎಂ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ.ಇದನ್ನು ಕಾಂಗ್ರೆಸ್ ನಾಯಕರು ಸ್ವಾಗತ ಮಾಡಬೇಕಿತ್ತು.ಸಿಎಂ ಸಿದ್ದರಾಮಯ್ಯ ಆರೋಪದಿಂದ ಮುಕ್ತವಾಗಿ ಬರ್ತಿದ್ರು.ನಮಗೆ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ.ಪಲಾಯನ ಮಾಡಿದ್ರು ಓಡಿ ಹೋದ್ರು ಎಂದ್ರು.ನಿವೃತ್ತಿ ಜಡ್ಜ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ರು.ಕಾಂಗ್ರೆಸ್ ಹೈಕಮಾಂಡ್ ಸಹ ಸಿದ್ದರಾಮಮ್ಯ ಬೆಂಬಲಕ್ಕೆ ನಿಂತಿದ್ದಾರೆ  ಎಂದ್ರು.

ಇನ್ನು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ಮಾತನಾಡಿ ಕಪ್ಪು‌ ಚುಕ್ಕೆ ಇಲ್ಲ ಎಂದು ಹೇಳ್ತಾರೆ.ಸದನದಲ್ಲಿ ಮೊಟಕು ಮಾಡಿ ಹೋದರು.ಅಲ್ಲಿಂದ ಅನುಮಾನ ಹುಟ್ಟಿದೆ.ತಪ್ಪಿಲ್ಲ ಎಂದರೆ ರಾಜ್ಯದ ಜನರಿಗೆ ತಿಳಿಸಿ.ಮುಡಾ ವಿಚಾರದಲ್ಲಿ ಸಾಕಷ್ಟು ಅನುಮಾನ ಇದೆ.ಆದ್ದರಿಂದಲೇ ಪ್ರಾಸಿಕ್ಯುಷನ್ ಗೆ ನೀಡಿದ್ದಾರೆ.ಟೆಲಿಪೋನ್ ಕದ್ದಾಲಿಕೆ ಹಗರಣ ಆರೋಪ ಬಂದಾಗ ಹೆಗಡೆ ರಾಜೀನಾಮೆ ನೀಡಿದ್ದರು.ಸರ್ಕಾರ ಅಸ್ತಿರ ಮಾಡಲು ಯಾಕೆ ಹೋಗ್ತೇವೆ.ತಪ್ಪು ಮಾಡಿ ಸಿಕ್ಕಾಕೊಂಡಿದ್ದಾರೆ.ಸರ್ಕಾರದ ಹಣ ಬಳಸಿ ಐಷಾರಾಮಿ ವಾಹನ ಖರೀದಿ ಮಾಡಿದ್ರು.ಇದನ್ನೆಲ್ಲ ನೋಡಿಯೂ ವಿಪಕ್ಷ ಸುಮ್ಮನೆ ಕೂರಬೇಕಾ ಎಂದು ಪ್ರಶ್ನಿಸಿದ್ರು.ಬಂದಿರುವ ಆರೋಪಕ್ಕೆ ಸರಿಯಾದ ಉತ್ತರ ನೀಡಿ.ದಾಖಲೆ‌ಕೊಟ್ಟು ತಪ್ಪಿತಸ್ತ ಅಲ್ಲ ಎಂದಾದರೆ ಮತ್ತೆ ಸಿಎಂ ಆಗಲಿ ಎಂದಿದ್ದಾರೆ.

ಇನ್ನು ವಿಧಾನ ಪರಿಷತ್‌ ಸದಸ್ಯ ಎನ್ ರವಿಕುಮಾರ್ ಮಾತನಾಡಿ ನಿನ್ನೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಸಿದ್ದರಾಮಯ್ಯ ಅವರ ಮೇಲೆ ಬಂದಿರೋ ಆರೋಪಕ್ಕೆ ಅನುಮತಿ ನೀಡಿದ್ದಾರೆ.ರಾಜ್ಯಪಾಲರ ನಿರ್ಣಯವನ್ನ ಬಿಜೆಪಿ ಸ್ವಾಗತಿಸಲಿದೆ.ರಾಜ್ಯಪಾಲರ ಆದೇಶವನ್ನ ಖಂಡಿಸಿ ಕಾಂಗ್ರೆಸ್ ಅನೇಕ ಕಡೆ ಹೋರಾಟ ಮಾಡ್ತಿದೆ.ಈ ಸಂಧರ್ಭದಲ್ಲಿ ಬಿಜೆಪಿ ನಿಲುವು ಹೋರಾಟ.ಇದೇ ಕಾಂಗ್ರೆಸ್ ಸಿಎಂ ರಾಜ್ಯಪಾಲರ ಅಭಿನಂದನೆ ಶ್ಲಾಘನೆ ಮಾಡಿದ್ದಾರೆ.ಗ್ಯಾರಂಟಿ ವಿಚಾರವಾಗಿ ಹೊಗಳಿದ್ದಾರೆ.ನೆರೆಯ ರಾಜ್ಯದ ರಾಜ್ಯಪಾಲರ ತರ ನಡೆದುಕೊಂಡಿಲ್ಲ ಅಂತ ಶ್ಲಾಘನೆ ಮಾಡಿದ್ದಾರೆ.ಮುಡಾ ಹಗರಣ ವಿಚಾರವಾಗಿ ಮೂರು ಜನ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.ಬಿಜೆಪಿ ಮುಡಾ ಹಗರಣ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದಿದ್ದು.ರಾಜ್ಯಪಾಲರು ತನಿಖೆಗೆ ನೀಡಲು ಪ್ರಾಸಿಕ್ಯೂಷನ್ ನೀಡಿದ್ದಾರೆ. ಹಿಂದೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್ ನೀಡಿದ್ರು.ಆಗ ಇದೇ ಸಿದ್ದರಾಮಯ್ಯ ಅವರು ಸ್ವಾಗತ ಮಾಡಿದ್ರು.ಅಂದು ಸ್ವಾಗತ ಮಾಡಿದ ಸಿದ್ದರಾಮಯ್ಯ, ಇವತ್ತು ಯಾಕೆ ವಿರೋಧ ಮಾಡ್ತಿದ್ದಾರೆ.ಈಗ ಸಂವಿಧಾನ ಬದಲಾಯ್ತಾ.? ಎಂದ್ಪ ಪ್ರಶ್ನಿಸಿದ್ದಾರೆ.

ಇದೇ ವೇಳೆ ಬಿಜೆಪಿ ಮುಖ್ಯ ವಕ್ತಾರ ಅಶ್ವಥ್ ನಾರಾಯಣ್ ಮಾತನಾಡಿ ಸಿದ್ದರಾಮಯ್ಯ ಒಂದು ಡಿಫೆನ್ಸ್ ಟೀಮ್ ಮಾಡಿಕೊಂಡಿದ್ದಾರೆ.ಕೃಷ್ಣಾ ಬೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಡಿಫೆನ್ಸ್ ಟೀಮ್ ನವರು.ಇವರು ದಾಖಲೆ‌ ಪರಿಶೀಲನೆ ಮಾಡೋದಿಲ್ಲ.ಕೂಗು ಮಾರಿಗಳ ರೀತಿ ಮಾತಾಡ್ತಾರೆ.ಯಡಿಯೂರಪ್ಪ ಅವರಿಗೆ ನೀಡಿದ ಪ್ರಾಸಿಕ್ಯೂಷನ್ ಬಗ್ಗೆ ಮಾತಾಡ್ತಾರೆ.ಮುಡಾ ಹಗರಣದಲ್ಲಿ ಕಾಂಗ್ರೆಸ್ ನವರು ಹೋಮ್ ವರ್ಕ್ ಮಾಡೋದಿಲ್ಲ.ಕೃಷ್ಣಾ ಬೈರೇಗೌಡ ಪಾಣಿ, ಮ್ಯೂಟೇಷನ್ ಬಗ್ಗೆ ಸರಿಯಾಗಿ ಹೋಮ್ ವರ್ಕ್ ಮಾಡಿಲ್ಲ.ಜಮೀನು ಮೂಲ ಮಾಲೀಕ ಯಾರು.? ಮೈಲಾರಪ್ಪನ ಪಾತ್ರ ಏನು.?ಇದೆಲ್ಲವನ್ನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹೋಗಿ ಅಧ್ಯಯನ ಮಾಡಿ ನಂತರ ಸುದ್ದಿಗೋಷ್ಟಿ ಮಾಡಲಿ ಎಂದಿದ್ದಾರೆ.