ಬಂಧುಗಳೇ ನಮಸ್ಕಾರ. ನಮ್ಮ ದೇಶದ ದುರಂತ ಏನ್ ಗೊತ್ತಾ, ಇಲ್ಲಿ ಅತ್ಯಾಚಾರಿಗಳನ್ನ ಬೆಂಬಲಿಸುವವರಿದ್ದಾರೆ. ಭ್ರಷ್ಟರನ್ನ ಪ್ರೋತ್ಸಾಹಿಸುವವರಿದ್ದಾರೆ. ಕಳ್ಳ ಖದೀಮರಿಗೆ ಹಾರ ಹಾಕಿ ಜೈಕಾರ ಕೂಗುವವರಿದ್ದಾರೆ. ಹೀಗಾಗಿ ನಮ್ಮಲ್ಲಿ ಅತ್ಯಾಚಾರಿಗಳ ಸಂಖ್ಯೆ, ಭ್ರಷ್ಟರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೊಂದು ಸದ್ಯದ ಉದಾಹರಣೆ, ಪ್ರಜ್ವಲ್ ರೇವಣ್ಣ, ಆತ ಮಾಡಿದ ನೀಚ ಕೃತ್ಯ ಊಹೆಗೂ ನಿಲುಕದ್ದು, ಸ್ವತಃ ಆತನ ಕುಟುಂಬವೇ ಆತನಿಂದ ಅಂತರ ಕಾಯ್ದುಕೊಳ್ತಿದೆ. ಆದ್ರೆ ಒಂದಷ್ಟು ಮಂದಿ ಈ ಕ್ಷಣಕ್ಕೂ ಆತನ ಬೆಂಬಲಕ್ಕೆ ನಿಂತಿದ್ದಾರೆ. ಆತ ಮಾಡಿದ್ದು ಮಹಾ ತಪ್ಪಲ್ಲ ಅಂತಾ ವಾದಿಸುವವರಿದ್ದಾರೆ. ಹೀಗೆ ಅತ್ಯಾಚಾರಿಗಳನ್ನ ಬೆಂಬಲಿಸ್ತಾ ಹೋದ್ರೆ, ಇಂತಹವರ ಸಂಖ್ಯೆ ಹೆಚ್ಚುತ್ತೇ ಹೊರತು ಕಡಿಮೆ ಆಗಲ್ಲ. ಇವತ್ತು ಯಾರದ್ದೋ ಮನೆ ಹೆಣ್ಣಮಗಳ ಮೇಲೆ ಕಣ್ಣುಹಾಕಿದ ಪ್ರಜ್ವಲ್ ಅಂತಹ ಕಾಮುಕರು ನಾಳೆ, ನಿಮ್ಮ ಮನೆ ಬುಡಕ್ಕೂ ಬರ್ತಾರೆ. ಇವತ್ತು ಈ ಕಾಮಕ್ರಿಮಿಯಿಂದಾಗಿ ಅದೆಷ್ಟೋ ಹೆಣ್ಣುಮಕ್ಕಳು, ಕತ್ತಲೆ ಕೋಣೆಯಲ್ಲಿ ಪ್ರತಿ ದಿನ ಕಣ್ಣೀರಿಡ್ತಿದ್ದಾರೆ. ಈ ನೀಚನಿಂದಾಗಿ ಅವ್ರ ಬದುಕೇ ಸರ್ವನಾಶವಾಗಿದೆ.