ಮನೆ Latest News ಗೆಳೆಯನನ್ನು ನೆನೆದು ಕಿಚ್ಚನ ಮುಂದೆ ಧನ್ ರಾಜ್ ಭಾವುಕ: ಆತ ನನ್ನ ಜೀವ ಎಂದ ಧನು

ಗೆಳೆಯನನ್ನು ನೆನೆದು ಕಿಚ್ಚನ ಮುಂದೆ ಧನ್ ರಾಜ್ ಭಾವುಕ: ಆತ ನನ್ನ ಜೀವ ಎಂದ ಧನು

0

ಮುಂದೊಂದು ದಿನ ಬಿಗ್ ಬಾಸ್ ಕನ್ನಡದ ಇತಿಹಾಸವನ್ನು ಮೆಲುಕು ಹಾಕಿದಾಗ ಅದರಲ್ಲಿ ಇಬ್ಬರು ವ್ಯಕ್ತಿಗಳ ಹೆಸರು ಇದ್ದೇ ಇರುತ್ತೆ. ಅದು ಧನ್ ರಾಜ್ ಆಚಾರ್ ಹಾಗೂ ಹನುಮಂತ ಲಮಾಣಿ. ಧನ್ ರಾಜ್ ಹಾಗೂ ಹನುಮಂತ ಲಮಾಣಿ ಅವರು ಆಟದ ಜೊತೆ ಜೊತೆಗೆ ತಮ್ಮ ಪ್ರಾಮಾಣಿಕತೆ, ಮುಗ್ಧತೆ ಹಾಗೂ ಪರಿಶುದ್ಧ ಸ್ನೇಹದ ಮೂಲಕ ಗಮನ ಸೆಳೆದವರು. ಆಟಕ್ಕೂ ಹಾಗೂ ಸ್ನೇಹಕ್ಕೂ ಸಂಬಂಧವಿಲ್ಲ . ಆಟಾನೇ ಬೇರೆ ಸ್ನೇಹಾನೇ ಬೇರೆ ಎಂದು ಅರ್ಥೈಸಿಕೊಂಡು ಅದ್ಭುತವಾಗಿ ಬಿಗ್ ಬಾಸ್ ವೇದಿಕೆಯನ್ನು ಬಳಸಿಕೊಂಡವರು.

ನಿನ್ನೆ  ಬಿಗ್ ಬಾಸ್ ಫಿನಾಲೆಗೆ ಇನ್ನು ಒಂದು ವಾರ ಇದೆ ಅನ್ನುವಾಗ ಧನ್ ರಾಜ್ ಆಚಾರ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ನಿಜಕ್ಕೂ ಇದು ಅಭಿಮಾನಿಗಳಿಗೆ ಬೇಸರದ ಸಂಗತಿ.ಆದರೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರ ಬಳಿ ಧನ್ ರಾಜ್ ತನ್ನ ದೋಸ್ತ ಬಗ್ಗೆ ಮಾತನಾಡುತ್ತಿದ್ದರೆ ಅವರಲ್ಲಿ ಎಷ್ಟು ಹೆಮ್ಮೆ ಇತ್ತು ಅನ್ನೋದನ್ನು ಅವರ ಭಾವನೆಗಳೇ ಸಾರಿ ಹೇಳುತ್ತಿದ್ದವು. ಹನುಮಂತು ನನ್ನ ಪಾಲಿಗೆ ಒಂದು ಶಕ್ತಿ. ಆತ ಹನುಮಂತ ದೇವರಂತೆ ನನ್ನ ಜೊತೆ ಬಿಗ್ ಬಾಸ್ ಮನೆಯಲ್ಲಿ ನಿಂತಿದ್ದ. ಮುಂದೆಯೂ ಇರುತ್ತಾನೆ. ಆತ ನನ್ನ ಜೀವ ಅನ್ನೋ ಮಾತನ್ನು ಹೇಳುತ್ತಾರೆ. ಅಲ್ಲೇ ಗೊತ್ತಾಗುತ್ತೆ ಅವರಿಬ್ಬರದ್ದು ಎಂತ ನಿಷ್ಕಲ್ಮಶ ಸ್ನೇಹ ಅನ್ನೋದು. ಇನ್ನು  ಬಿಗ್ ಬಾಸ್ ಮನೆಯ ಉಳಿದ ಸ್ಪರ್ಧಿಗಳಾದ ತ್ರಿವಿಕ್ರಂ, ರಜತ್ ಇವೆರಲ್ಲಾ ಅವ ಮುಗ್ಧತೆ ನಂತೆ ನಟಿಸುತ್ತಿದ್ದಾನೆ. ನೀನು ನಂಬಬೇಡ ಎಂದು ಅನೇಕ ಬಾರಿ ಹೇಳಿದ್ದಾರೆ.ಆದರೆ ನನಗೆ ಯಾವತ್ತೂ ಆ ರೀತಿ ಅನ್ನಿಸಲಿಲ್ಲ ಎಂದು ಧನ್ ರಾಜ್ ಹೇಳಿದ್ದಾರೆ. ಆತ ನನ್ನ ಜೀವ ಸಾರ್. ಆತ ಪ್ರಾಮಾಣಿಕ ವ್ಯಕ್ತಿ. ನನ್ನ ನೋವು ನಲಿವು ಎಲ್ಲವನ್ನು ಆತನ ಜೊತೆ ಹಂಚಿಕೊಂಡಿದ್ದೇನೆ. ಬಿಗ್ ಬಾಸ್ ಮನೆಯಲ್ಲಿ ನಾವು ಅಕ್ಷರಶಃ ಜೀವಿಸಿವಿದ್ದೇವೆ ಎಂದಿದ್ದಾರೆ. ಇಲ್ಲೇ ಗೊತ್ತಾಗುತ್ತೆ ಅವರಿಬ್ಬರದ್ದು ಅದೆಂತಹ ಸ್ನೇಹ ಅನ್ನೋದು.

ಅದೆಲ್ಲದಕ್ಕಿಂತ ಮೊದಲು ಧನ್ ರಾಜ್ ಅವರು ಎಲಿಮಿನೇಟ್ ಆಗಿದ್ದಾರೆ ಅನ್ನೋದು ಗೊತ್ತಾಗುತ್ತಿದ್ದಂತೆ ಹನುಮಂತ ಅವರು ಮುಖ ಇದ್ದಕ್ಕಿದ್ದಂತೆ ಡಲ್ ಆಗುತ್ತೆ. ಧನ್ ರಾಜ್ ಅವರನ್ನು ಬಿಟ್ಟು ಎಲ್ಲರೂ ಫ್ರೀಜ್ ನಲ್ಲಿ ಇದ್ದಿದ್ದರಿಂದ ಯಾರಿಗೂ ಅವರನ್ನು ಬೀಳ್ಕೊಡುವ ಅವಕಾಶ  ಸಿಗಲಿಲ್ಲ. ಧನ್ ರಾಜ್ ಹೋಗುತ್ತಿದ್ದಂತೆ ಮೋಕ್ಷಿತಾ ಹೊರಡು ಪಡಿಸಿ ಉಳಿದೆಲ್ಲಾ ಸ್ಪರ್ಧಿಗಳು ತುಂಬಾ ಭಾವುಕರಾಗ್ತಾರೆ. ಅಲ್ಲದೇ ಬರುತ್ತಾ  ದೋಸ್ತ ನೀನು ನನ್ನ ಪ್ರಾಣ ಕಣೋ ಅನ್ನೋ ಮಾತನ್ನು ಧನ್ ರಾಜ್ ಹನುಮಂತು ಗೆ ಹೇಳುತ್ತಾರೆ. ಕೊನೆಗೂ ಎಲ್ಲರಿಗೂ ಶುಭ ಹಾರೈಸಿ ಧನ್ ರಾಜ್ ಆಚಾರ್ ಅವರು ಮನೆಯಿಂದ ಹೊರ ಬಂದು ಸುದೀಪ್ ಅವರಿದ್ದ ವೇದಿಕೆಗೆ ಬರ್ತಾರೆ. ಅಲ್ಲಿ ಬರುತ್ತಿದ್ದಂತೆ ಸದ್ಯ ಮನೆಯಲ್ಲಿ ನೀವು ಬಂದ್ಮೇಲೆ ಏನಾಗಿದೆ ನೋಡೋಣ ಅಂತಾ ಮನೆಯ ಒಳಗೆ ಏನಾಗ್ತಿದೆ ಅನ್ನೋದನ್ನು ಇಬ್ಬರು ನೋಡ್ತಾರೆ. ಆಗ ಹನುಮಂತು ಹಾಗೂ ಭವ್ಯ ಇಬ್ಬರೂ ಕೂಡ ಅಳುತ್ತಿದ್ದರು. ಅದರಲ್ಲೂ ಸ್ನೇಹಿತ ಇಲ್ಲದೇ ಹನುಮಂತು ಸಂಪೂರ್ಣವಾಗಿ ಡಲ್ ಆಗಿ ಹೋದ್ರು. ಹೋಗೋ ಕ್ಷಣದಲ್ಲೂ ನನಗೆ ಆತನ ಜೊತೆ ಮಾತನಾಡಲು ಆಗಲಿಲ್ಲ ಅನ್ನೋ ಬೇಸರ ಹನುಮಂತು ಅವರಲ್ಲಿತ್ತು. ಅಲ್ಲದೇ ಧನ್ ರಾಜ್ ಹನುಮಂತು ಅವರನ್ನು ನೋಡಿ ಭಾವುಕರಾಗ್ತಾರೆ.

ಹನುಮಂತು ಹಾಗೂ ಧನ್ ರಾಜ್ ಅವರ ಸ್ನೇಹ ನಿಜಕ್ಕೂ ಕಪಟವಿಲ್ಲದ್ದೂ. ಅವಿಬ್ಬರು ಆಟದ ವಿಚಾರದಲ್ಲಿ ಯಾವತ್ತೂ ಸ್ನೇಹವನ್ನು ಎಳೆದು ತಂದವರಲ್ಲ. ಬಿಗ್ ಬಾಸ್ ಮನೆಗೆ ಬಂದಾಗಿನಿಂದ ಇದುವೆರಗೂ ಹನುಮಂತು ಧನ್ ರಾಜ್ ಹೋಗುವಾಗ ಭಾವುಕರಾದಷ್ಟು ಯಾವತ್ತೂ ಆಗಿಲ್ಲ. ಧನ್ ರಾಜ್ ಹನುಮಂತ ಬಿಗ್ ಬಾಸ್ ಮನೆಯಲ್ಲಿ ನೆಲದಲ್ಲಿ ಜೊತೆಯಾಗಿ ಮಲಗುತ್ತಿದ್ದರು. ಧನ್ ರಾಜ್ ಹೊರ ಬಂದ ದಿನ ರಾತ್ರಿ ಹನುಮಂತು ಸ್ನೇಹಿತನನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ. ನಿದ್ದೆ ಬಾರದೇ ರಾತ್ರಿ ಕಳೆದಿದ್ದಾರೆ. ಸದಾ ಡೋರ್ ಬಳಿ ಕೂತು ಇಬ್ಬರು ಶಾಲಾ ಮಕ್ಕಳಂತೆ ಕಾಮಿಡಿ ಮಾಡಿ ನಗುತ್ತಿದ್ದನ್ನು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಬಿಗ್ ಬಾಸ್ ವೀಕ್ಷಕರು ಮಾಡಿಕೊಳ್ಳುತ್ತಾರೆ. ಕೊನೆಗೂ ಹನುಮಂತು ವಿನ್ನರ್ ಆದ್ರೆ ಧನ್ ರಾಜ್ ರನ್ನರ್ ಅಪ್ ಆಗ್ಬೇಕು ಅನ್ನೋ ಅವರ ಅಭಿಮಾನಿಗಳ ಕನಸು ನನಸಾಗಿಯೇ ಉಳಿದಿದ್ದು ಬೇಸರ ಮೂಡಿಸಿದೆ.